ಕಣ್‌ ತೆರೆದು ನೋಡಿ


Team Udayavani, Jun 27, 2019, 5:00 AM IST

3

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ
ಜಗತ್ತಿನೊಳಗೊಂದು ಸುತ್ತು…

ಸ್ಲೋ ಮೋಷನ್ನಿನಲ್ಲಿ ಮಾತ್ರ ಕಾಣುವ ನಾಲಗೆ
ಮಕ್ಕಳು ಮೊಂಡಾಟ ಮಾಡುವಾಗ, ಅಣಕಿಸುವ ಸಲುವಾಗಿ ನಾಲಗೆ ಮುಂದಕ್ಕೆ ಚಾಚಿ ವಿಚಿತ್ರ ಮುಖಭಾವ ಮಾಡುವುದನ್ನು ನೋಡಿರಬಹುದು. ಇದರಿಂದಾಗಿ ನಾಲಗೆ ಹೊರಚಾಚುವುದೆಂದರೆ ಅದು ಅಣಕ ಮಾಡುತ್ತಿರುವುದೆಂದೇ ಭಾವಿಸಲಾಗುತ್ತದೆ. ಆದರೆ ಈ ಒಂದು ಜೀವಿ ನಾಲಗೆ ಹೊರಚಾಚುವುದನ್ನು ಅಣಕ ಎಂದು ತಿಳಿಯುವ ಹಾಗಿಲ್ಲ. ಏಕೆಂದರೆ ಈ ಜೀವಿ ನಾಲಗೆ ಹೊರಕ್ಕೆ ಚಾಚುವುದು ಹೊಟ್ಟೆಪಾಡಿಗಾಗಿ. “ಹೊಟ್ಟೆಪಾಡಿಗಾಗಿ ಏನು ಮಾಡಿದರೂ ಸಹ್ಯ’ ಎನ್ನುವುದು ಆಧುನಿಕ ಜಗತ್ತಿನ ನಾಣ್ಣುಡಿ. ನಾಲಗೆಯನ್ನು ಉದ್ದಕ್ಕೆ ಚಾಚಿ ಹುಳಹುಪ್ಪಟೆ ಹಿಡಿಯುವ ಈ ಜೀವಿ ಗೋಸುಂಬೆ. ನಿಮಗೆಲ್ಲರಿಗೂ ಅದು ತನ್ನ ದೇಹದ ಬಣ್ಣ ಬದಲಿಸುತ್ತದೆ ಎನ್ನುವ ವಿಚಾರ ಗೊತ್ತಿರುತ್ತದೆ. ಆದರೆ ಅದರ ನಾಲಗೆ, ದೇಹದ ಎರಡುಪಟ್ಟು ಉದ್ದವಿರುತ್ತದೆ ಎಂದು ಗೊತ್ತೇ? ನಾಲಗೆ ಬರೀ ಉದ್ದ ಮಾತ್ರವಲ್ಲ ಬಹಳ ಶಕ್ತಿಶಾಲಿಯೂ ಹೌದು. ಅತ್ಯಂತ ಕ್ಷಿಪ್ರಗತಿಯಲ್ಲಿ ನಾಲಗೆ ಹೊರಚಾಚಿ ಆಹಾರವನ್ನು ಬಾಯೊಳಗೆ ಎಳೆದುಕೊಂಡು ಏನೂ ಆಗೇ ಇಲ್ಲವೆನ್ನುವಂತೆ ಗಪ್‌ಚುಪ್ಪಾಗಿ ಕುಳಿತುಬಿಡುತ್ತದೆ ಗೋಸುಂಬೆ. ಅದೆಷ್ಟು ವೇಗವಾಗಿ ನಾಲಗೆಯನ್ನು ಚಾಚುತ್ತದೆಂದರೆ ಬರಿಗಣ್ಣಿಗೆ ಕಾಣಿಸದು. ಸಂಶೋಧಕರು ವಿಡಿಯೋ ರೆಕಾರ್ಡ್‌ ಮಾಡಿ ಆ ದೃಶ್ಯವನ್ನು ಸ್ಲೋ ಮೋಷನ್ನಿನಲ್ಲಿ ನೋಡಬೇಕಾಯಿತು!

ನೀರು ಕುಡಿಯದೆ ಇರುವ ಪಂದ್ಯ
ಪ್ರಕೃತಿ ಎಷ್ಟು ವಿಶಿಷ್ಟವೆನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕಸಿ ಮಾಡುವ ತಂತ್ರಜ್ಞಾನದ ಕುರಿತು ನೀವು ಕೇಳಿರಬಹುದು. ಸಸ್ಯಜಗತ್ತಿನಲ್ಲಿ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಎರಡು ಮೂರು ತಳಿಯನ್ನು ಸೇರಿಸಿ ಉತ್ತಮ ತಳಿಯ ಗಿಡ, ಬೆಳೆಯನ್ನು ಪ್ರಯೋಗಶಾಲೆಯಲ್ಲಿ ಕೃತಕವಾಗಿ ಪೋಷಿಸಲಾಗುತ್ತದೆ. ಜಾನುವಾರುಗಳ ವಿಷಯದಲ್ಲೂ ಈ ಪ್ರಯೋಗವನ್ನು ಮಾಡುವುದಿದೆ. ಎರಡು ಭಿನ್ನ ತಳಿಯ ಹಸುಗಳ ಕೂಡಿಸಿ ಹೊಸದೊಂದು ತಳಿಯನ್ನು ವಿಜ್ಞಾನಿಗಳು ಹುಟ್ಟುಹಾಕುತ್ತಾರೆ. ಕೆಲ ಪ್ರಾಣಿಗಳನ್ನು ನೋಡಿದಾಗ ಇಂಥದ್ದೇ ಒಂದು ಕಸಿಯ ಪ್ರಯೋಗ ಪ್ರಕೃತಿಯಲ್ಲಿ ನಡೆದಿರುವಂತೆ ತೋರುವುದು ಸುಳ್ಳಲ್ಲ. ಉದಾಹರಣೆಗೆ “ಕಾಂಗರೂ ಇಲಿ’. ಏನಿದು ಎರಡು ಪ್ರಾಣಿಗಳ ಹೆಸರು ಹೇಳುತ್ತಿದ್ದಾರಲ್ಲ ಎಂದುಕೊಳ್ಳದಿರಿ. ಈ ಜೀವಿಯ ಹೆಸರೇ ಕಾಂಗರೂ ಇಲಿ. ಇಲಿಯ ಪ್ರಭೇದಕ್ಕೆ ಸೇರಿದ್ದರೂ ಈ ಜೀವಿ ಇಲಿಗಳ ಹಾಗೆ ನಾಲ್ಕು ಕಾಲುಗಳಲ್ಲಿ ಓಡುವುದಿಲ್ಲ. ಬದಲಾಗಿ ಕಾಂಗರೂಗಳಂತೆ ಹಿಂಗಾಲುಗಳನ್ನು ಬಳಸಿ ನೆಗೆಯುತ್ತವೆ. ಕಾಂಗರೂ ಇಲಿಗಳ ವಾಸಸ್ಥಾನ ಮರುಭೂಮಿ. ಇವು ಹೆಚ್ಚಾಗಿ ಉತ್ತರ ಅಮೆರಿಕ ಪ್ರದೇಶದಲ್ಲಿ ಕಂಡುಬರುತ್ತವೆ. “ಮರುಭೂಮಿಯ ಹಡಗು’ ಎಂದೇ ಹೆಸರಾದ ಒಂಟೆಗಳನ್ನು ಕಾಂಗರೂ ಇಲಿಗಳು ಓಟದಲ್ಲಿ ಸೋಲಿಸುವುದು ಕಷ್ಟ. ಆದರೆ ಈ ಒಂದು ಪಂದ್ಯದಲ್ಲಿ ಸುಲಭವಾಗಿ ಸೋಲಿಸಬಲ್ಲವು. ಅದು ನೀರು ಕುಡಿಯದೇ ಇರುವ ಪಂದ್ಯ! ಒಂಟೆಗಳು ನೀರಿಲ್ಲದೆ ಎಷ್ಟು ದಿನ ಬದುಕಬಲ್ಲವೋ ಅದಕ್ಕಿಂತ ಹೆಚ್ಚು ಕಾಲ ನೀರಿಲ್ಲದೆ ಇರಬಲ್ಲ ಸಾಮರ್ಥ್ಯ ಇವುಗಳದ್ದು ಎಂದಿದ್ದಾರೆ ಸಂಶೋಧಕರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ವಿಶೇಷಣ ಇದಕ್ಕೆ ಹೆಚ್ಚು ಹೊಂದುತ್ತದೆ.

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.