ಯಂತ್ರದ ಹುಲಿಯ ಗರ್ಜನೆ

ಟಿಪ್ಪು ಸುಲ್ತಾನ ಮಾಡಿಸಿದ್ದ ಆಟಿಕೆ

Team Udayavani, May 30, 2019, 6:00 AM IST

LEAD-TIGER-(5)

ಇಂಗ್ಲೆಂಡಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ವಸ್ತು ಸಂಗ್ರಹಾಲಯ ನೋಡಲು ಹೋದರೆ ಇಂದಿಗೂ ಹೆಚ್ಚು ಸಂಖ್ಯೆಯ ಜನರ ಗಮನ ಸೆಳೆಯುವುದು ಅಲ್ಲಿರುವ “ಯಂತ್ರದ ಹುಲಿ’. “ಮೈಸೂರಿನ ಹುಲಿ’ ಎನಿಸಿಕೊಂಡ ಟಿಪ್ಪು ಸುಲ್ತಾನನ ಬೇಸಗೆಯ ವಿರಾಮದ ಮನೆಯಿಂದ ಅದನ್ನು ಲಂಡನ್ನಿಗೆ ಸಾಗಿಸಿದ್ದರು. 68 ಇಂಚು ಉದ್ದ, 28 ಇಂಚು ಎತ್ತರವಿರುವ ಈ ಮರದ ವಿಗ್ರಹಕ್ಕೆ ಹಳದಿ ವರ್ಣವನ್ನು ಬಳಿಯಲಾಗಿದೆ. ನೆಲದ ಮೇಲೆ ಬಿದ್ದಿರುವ ಒಬ್ಬ ಆಂಗ್ಲ ಯೋಧನ ಗಂಟಲಿಗೆ ಬಾಯಿ ಹಾಕಿ ಹಲ್ಲುಗಳನ್ನು ಊರುತ್ತಿರುವ ಭಂಗಿಯಲ್ಲಿದೆ ಈ ಯಂತ್ರ.

ಗರ್ಜಿಸುತ್ತಿದ್ದ ಹುಲಿ
ಯಂತ್ರದ ಹುಲಿಗೆ ಒಂದು ಕೀಲಿ ಇದೆ. ಈಗ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ ಕೀಲಿಯನ್ನು ತಿರುಗಿಸಿದಾಗ ಹುಲಿ ಭೀಕರವಾಗಿ ಗರ್ಜಿಸುತ್ತಿತ್ತು. ನೆಲಕ್ಕುರುಳಿದ ಬ್ರಿಟಿಷ್‌ ಸೈನಿಕನ ಗಂಟಲಿಗೆ ಬಾಯಿ ಹಾಕುತ್ತಿತ್ತು. ಆಗ ಅಸಹಾಯಕ ಯೋಧ ನೋವಿನಿಂದ ನರಳುವ ದನಿ ಕೇಳಿಸುತ್ತಿತ್ತು.

ಸದ್ದು ಬರುತ್ತಿದ್ದು ಹೇಗೆ?
ಈ ಯಂತ್ರದ ಹುಲಿಯ ಕೀಲಿ ಕೈ ತಿರುಗಿಸಿ ತಿರುಗಿಸಿ ಟಿಪ್ಪು ತನ್ನ ವೈರಿ ಪಡೆಯ ಯೋಧ ಅನುಭವಿಸುವ ಸಂಕಟದ ದನಿಯನ್ನು ಕೇಳುತ್ತಾ ಖುಷಿಪಡುತ್ತಿದ್ದನಂತೆ. ಹುಲಿಯ ಬೆನ್ನಿನ ಬಳಿಯಿರುವ 4 ತಿರುಪು ಮೊಳೆಗಳನ್ನು ತೆಗೆದರೆ ಅಲ್ಲಿರುವ ಮರದ ಜೋಡಣೆಯನ್ನು ಕಳಚಬಹುದು. ಒಳಗೆ ಕಂಚು ಬಳಸಿ ತಯಾರಾಗಿರುವ ಪೈಪ್‌ ಅರ್ಗನ್‌ ವಾದ್ಯ ಇದೆ. ಯೋಧನ ಕೊರಳಿಗೆ ಹುಲಿ ಬಾಯಿ ಹಚ್ಚಿದಾಗ ಅವನ ಕೈ ಹದಿನೆಂಟು ಅಳವಡಿಕೆಗಳಿರುವ ಆನೆ ದಂತದಲ್ಲಿ ಮಾಡಿದ ಕೀ ಬೋರ್ಡನ್ನು ತಡವುತ್ತದೆ. ಆಗ ಪೈಪ್‌ ಆರ್ಗನ್‌ ಒಳಗೆ ಗಾಳಿ ತುಂಬಿ ಯೋಧನ ಆರ್ತನಾದ ಮತ್ತು ಹುಲಿಯ ಗರ್ಜನೆಯ ಸದ್ದು ಕೇಳಿಬರುವ ಹಾಗೆ ಸ್ವಯಂಚಾಲಿತ ವ್ಯವಸ್ಥೆ ಮಾಡಲಾಗಿತ್ತು.

ಹಾಳಾಗಿದ್ದು ಹೇಗೆ?
ಈಸ್ಟ್‌ ಇಂಡಿಯಾ ಕಂಪೆನಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಟಿಪ್ಪುವಿನ ಹುಲಿ 1808ರ ಬಳಿಕ ಪ್ರದರ್ಶಿತವಾಗುತ್ತಿತ್ತು. 1880ರಲ್ಲಿ ಅದನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಸಂಗ್ರಹಾಲಯಕ್ಕೆ ವರ್ಗಾಯಿಸಲಾಯಿತು. ದ್ವಿತೀಯ ಮಹಾಯುದ್ಧದ ಕಾಲದವರೆಗೂ ಯಂತ್ರ ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ವಸ್ತು ಸಂಗ್ರಹಾಲಯದ ಛಾವಣಿ ಕುಸಿದಾಗ ಯಂತ್ರದ ಹುಲಿ ಹಲವು ತುಂಡುಗಳಾಗಿತ್ತು. ಆವತ್ತಿನಿಂದ ಹುಲಿ ಮತ್ತು ಆಂಗ್ಲ ಸೈನಿಕ ತಮ್ಮ ದನಿಯನ್ನು ಕಳೆದುಕೊಂಡುಬಿಟ್ಟಿದ್ದರು.
ಯಂತ್ರದ ಹುಲಿ ತಮ್ಮ ವಿರುದ್ಧದ ಕ್ರೌರ್ಯದ ಪ್ರತೀಕವಾಗಿದ್ದರೂ ಆಂಗ್ಲರು ಯಂತ್ರವನ್ನು ಇಂದಿಗೂ ಜೋಪಾನವಾಗಿಟ್ಟಿದ್ದಾರೆ. ಅಮೆರಿಕ, ಯುರೋಪು ಮೊದಲಾದ ಹಲವು ದೇಶಗಳ ವಿಶೇಷ ಉತ್ಸವಗಳಲ್ಲಿ ಅದರ ಪ್ರದರ್ಶನವೂ ನಡೆದಿದೆ. ಈ ಹುಲಿಯ ಚಿತ್ರವಿರುವ ಅಂಚೆಚೀಟಿಗಳು, ಗೊಂಬೆಗಳು ಸೇರಿದಂತೆ ಹಲವಾರು ಸಾಮಗ್ರಿ ತಯಾರಾಗಿ ಇಂದಿಗೂ ಮಾರಾಟಗೊಳ್ಳುತ್ತಲೇ ಇವೆ.

ಹುಲಿ ಲಂಡನ್ನಿಗೆ ಹೋದ ಕತೆ
ಈ ಯಂತ್ರವನ್ನು ತಯಾರಿಸಿ ಕೊಟ್ಟವರು ಫ್ರಾನ್ಸಿನ ನಿವೃತ್ತ ಸೇನಾ ತಂತ್ರಜ್ಞರು, ಕುಶಲಕರ್ಮಿಗಳು ಹಾಗೂ ಬಡಗಿಗಳು. ಹುಲಿಯನ್ನು ಮರದಿಂದ ತಯಾರಿಸಲು ಮೈಸೂರು ಕಲೆಯ ಶೈಲಿಯನ್ನು ಬಳಸಲಾಗಿದೆ. 1799ರ ಮೇ 4ರಂದು ಈಸ್ಟ್‌ ಇಂಡಿಯಾ ಕಂಪೆನಿಯ ಸೈನಿಕರು ಟಿಪ್ಪುವಿನ ಅರಮನೆಗೆ ನುಗ್ಗಿದರು. ಅವರೊಂದಿಗೆ ನಡೆದ ಘರ್ಷಣೆಯು ಟಿಪ್ಪುವಿನ ಸಾವಿನೊಡನೆ ಅಂತ್ಯವಾಯಿತು. ಟಿಪ್ಪುವಿಗೆ ಸೇರಿದ ಹಲವಾರು ವಸ್ತು ವಿಶೇಷಗಳ ಜೊತೆಗೆ ಸಂಗೀತ, ನೃತ್ಯಗಳ ಕೊಠಡಿಯಲ್ಲಿದ್ದ ಈ ಯಂತ್ರದಹುಲಿ ಕೂಡ ವೈರಿಗಳ ವಶವಾಯಿತು. 1800ರಲ್ಲಿ ಅದನ್ನು ಇಂಗ್ಲೆಂಡಿಗೆ ಸಾಗಿಸಲಾಯಿತು. ಈಸ್ಟ್‌ ಇಂಡಿಯಾ ಕಂಪನಿಯ ಗವರ್ನರ್‌ ಜನರಲ್‌ “ಈ ಯಂತ್ರದ ಹುಲಿ ಟಿಪ್ಪುವಿನ ಅಹಂಕಾರ ಮತ್ತು ಆಂಗ್ಲ ವಿರೋಧಿ ಕ್ರೌರ್ಯದ ಪ್ರತಿರೂಪ’ ಎಂದು ಹೇಳಿದ.

-ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.