ಹಿಮಾಲಯದ ಅಮೃತವನ್ನು ಕುಡಿದವರ್ಯಾರು?


Team Udayavani, Apr 26, 2018, 6:00 AM IST

8.jpg

ಪೋಷುವೆಂಬ ಗುರುವಿನ ಆಶ್ರಮದಲ್ಲಿ ಸಾವಿರಾರು ಶಿಷ್ಯರಿದ್ದರು. ಗುರುವು ತನ್ನೆಲ್ಲಾ ಶಿಷ್ಯರ ಮನಸ್ಸನ್ನು ಅರಿತಿದ್ದ. ದೀರ್ಘ‌ ಅಧ್ಯಯನದ ನಂತರ ಪೋಷು ಶಿಷ್ಯರಿಗೆ ಒಂದು ಪರೀಕ್ಷೆಯನ್ನು ಏರ್ಪಡಿಸಿದ. ಈ ಪರೀಕ್ಷೆಯಲ್ಲಿ ಸಫ‌ಲರಾದವರಿಗೆ ಹಿಮಾಲಯದಲ್ಲಿ  ಸನ್ಮಾನವಿದೆ ಎಂದ. ಸರಿ ಎಂದು ಶಿಷ್ಯಂದಿರು ಗುರುವಿನೊಂದಿಗೆ ಹಿಮಾಲಯಕ್ಕೆ ಪಯಣಿಸಿದರು. 

ಹಾದಿ ದುರ್ಗಮವಾಗಿತ್ತು. ಕಾಡು ಪ್ರಾಣಿಗಳು ಎದುರಾಗುತ್ತಿದ್ದವು. ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು ಅವುಗಳನ್ನು ಕೊಲ್ಲುವ ಹಾಗಿಲ್ಲ ಎಂದು ಪೋಷು ಹೇಳಿಬಿಟ್ಟಿದ್ದರು. ಶಿಷ್ಯನೊಬ್ಬ ಬೆಟ್ಟ ಏಕೆ ಹತ್ತಬೇಕೆಂದು ಕೇಳಿದಾಗ ಪೋಷು “ಬೆಟ್ಟದ ತುದಿಯಲ್ಲೊಂದು ಕೊಳವಿದೆ. ಅಲ್ಲಿನ ಕೊಳವೊಂದರಲ್ಲಿ ಅಮೃತವಿದೆ. ಅದನ್ನು ಕುಡಿದೇ ಋಷಿಮುನಿಗಳು ಅಮರತ್ವವನ್ನು ಪಡೆಯುತ್ತಿದ್ದರು’ ಎಂದರು. ಅದನ್ನು ಕೇಳಿ ನಿತ್ರಾಣಗೊಂಡಿದ್ದ ಶಿಷ್ಯಂದಿರಿಗೆ ಮೈಯಲ್ಲಿ ಶಕ್ತಿ ಬಂದಂತಾಯಿತು. ವಿಶ್ರಾಂತಿಯನ್ನು ಕೊನೆಗೊಳಿಸಿ ಮತ್ತೆ ಪರ್ವತವನ್ನು ಏರತೊಡಗಿದರು.

ದಾರಿ ಮಧ್ಯ ಕಾಡು ಎದುರಾದಾಗ ಗುರು “ಇಲ್ಲಿ ಹದಿನೆಂಟು ಹೆಡೆಯ ಸರ್ಪಗಳಿವೆ. ಅದರ ಉಸಿರು ಬಡಿದರೆ ಸಾವು ಖಚಿತ’ ಎಂದ. ಹದಿನೆಂಟು ಹೆಡೆಯ ಹಾವಿನ ವಿಷಯ ಕೇಳುತ್ತಿದ್ದಂತೆ ಅರ್ಧ ಶಿಷ್ಯಂದಿರು ಹೆದರಿ ನಡುಗಿ ಪರ್ವತ ಇಳಿದು ತಮಗೆ ಅಮೃತವೂ ಬೇಡ. ಹಿಮಾಲಯದ ಸನ್ಮಾನವೂ ಬೇಡ, ಜೀವ ಉಳಿದರೆ ಸಾಕೆಂದು ಓಡತೊಡಗಿದರು. 

ಪೋಷು ನಕ್ಕು ಮುನ್ನಡೆದ. ದೈತ್ಯಾಕಾರದ ಮರಗಳು ಎದುರಾದವು. ಪೋಷು “ಅವುಗಳಿಂದ ದೂರವಿರಿ. ಅವು ಮನುಷ್ಯರ ರಕ್ತ ಕುಡಿಯುತ್ತವೆ’ ಎಂದ. ಉಳಿದ ಅರ್ಧ ಶಿಷ್ಯಂದಿರಲ್ಲಿ ಮತ್ತೂಂದಷ್ಟು ಮಂದಿ ಮುಂದುವರಿಯಲು ನಿರಾಕರಿಸಿ ಹಿಂದಕ್ಕೆ ಹೊರಟುಹೋದರು.

ಇನ್ನೇನು ಬೆಟ್ಟ ಏರಿ ಕೊಳದ ನೀರಿನ ಹತ್ತಿರ ಹೋಗಬೇಕು ಎನ್ನುವಾಗ ಪೋಷು “ಹುಷಾರು ಕೆಳಗೆ ಜ್ವಾಲಾಮುಖೀಗಳಿಂದ ಸಿಡಿದ ಸುಡುವ ಕಲ್ಲುಗಳಿವೆ. ಅವುಗಳ ಮೇಲೆ  ಕಾಲಿಟ್ಟರೆ ಸುಟ್ಟು ಬೂದಿಯಾಗುತ್ತೇವೆ. ಅದಕ್ಕೆ ತುತ್ತಾದರೆ ನಾನು ಜವಾಬ್ದಾರನಲ್ಲ. ಇದು ಬೆಂಕಿಯಂಥ ಪರೀಕ್ಷೆ’ ಎಂದ. ಮತ್ತೂಂದಷ್ಟು ಶಿಷ್ಯಂದಿರು ಊರಿಗೆ ಕಾಲ್ಕಿತ್ತರು. ಪೋಷು ಪರ್ವತದ ತುತ್ತ ತುದಿಯನ್ನೇರಿ ಹಿಂದಕ್ಕೆ ನೋಡಿದಾಗ ಅವನ ಕಣ್ಮುಂದೆ ಒಬ್ಬನೇ ಶಿಷ್ಯನಿದ್ದ. “ಯಾಕಪ್ಪ ನೀನು ಮಾತ್ರ ಉಳಿದುಕೊಂಡೆ? ಯಾಕೆ ಹಿಂದಿರುಗಲಿಲ್ಲ’ ಎಂದು ಕೇಳಿದಾಗ ಆ ಶಿಷ್ಯ ಹೇಳಿದ “ಏನೇ ಸವಾಲುಗಳು ಬಂದರೂ ಕಾಪಾಡಲು ಗುರು ನೀನಿರುವಾಗ ನನಗೇಕೆ ಅಂಜಿಕೆ?’ ಎಂದನು. ಗುರುವಿಗೆ ಹೆಮ್ಮೆಯೆನಿಸಿತು.

ಅಲ್ಲಿದ್ದ ಕೊಳದ ನೀರು ಮಲಿನವಾಗಿತ್ತು. ಕಲ್ಲು ಮಣ್ಣು  ಉದುರಿದ ಎಲೆಗಳಿಂದ ತುಂಬಿ ಹೋಗಿತ್ತು. ಶಿಷ್ಯನಿಗೆ ಅದರಲ್ಲಿದ್ದ ಅಮೃತದಂಥ ನೀರನ್ನು ಕುಡಿಯುವ ಸಂತಸಕ್ಕಿಂತ ಕೊಳದ ದುಃಸ್ಥಿತಿಗೆ ಮರುಕವಾಯಿತು. ಅವನು ಇಳಿದು ಎಲ್ಲವನ್ನು ಸcತ್ಛಗೊಳಿಸತೊಡಗಿದ.

     ಆಗ ಗುರುಗಳು ಒಮ್ಮೆಲೇ “ನೀನು ಪರೀಕ್ಷೆ ಗೆದ್ದುಬಿಟ್ಟೆ ಕಂದಾ… ಇಲ್ಲಿಯವರೆಗೂ ಯಾವ ನರಪಿಳ್ಳೆಯೂ ಇಲ್ಲಿಗೆ ಬಂದಿಲ್ಲ. ನನ್ನ ಗುರುಗಳು ನನಗೆ ಈ ಸರೋವರವನ್ನು ಸಾಧ್ಯವಾದರೆ ಇಳಿದು ಶುಚಿಗೊಳಿಸಿ ಬಾ ಎಂದಿದ್ದರು. ಕೊಳದ ಸ್ವಚ್ಚತೆಗೆಂದೇ  ಪರೀಕ್ಷೆ ನೆಪದಲ್ಲಿ ನಿಮ್ಮನ್ನು ಕರೆತಂದೆ. ಕೊನೆಗೆ ನೀನೊಬ್ಬನೇ ಉಳಿದೆ’ ಎನ್ನುತ್ತಿದ್ದಂತೆ ಕೊಳದಲ್ಲಿ ನೀರು ಭರ ಭರನೇ ತುಂಬಿತು. ಮೋಡಗಳಿಂದ ಮಲ್ಲಿಗೆ ಸುವಾಸನೆ ಬೀರುವ ಮಳೆ ಹನಿಗಳು ಪಟ ಪಟನೆ ಉದರತೊಡಗಿದವು. ಗುರುವಿನ ಪರೀಕ್ಷೆಯಲ್ಲಿ ಸಫ‌ಲನಾದ ಶಿಷ್ಯನೇ ಮಾನಸ. ಅವನ ಭಕ್ತಿಬಾವಕ್ಕೆ ಮೆಚ್ಚಿ ಗುರುಗಳು ಆ ಕೊಳಕ್ಕೆ ಇಟ್ಟ ಹೆಸರೇ “ಮಾನಸ ಸರೋವರ’. 

ಲಲಿತಾ ಕೆ. ಹೊಸಪ್ಯಾಟಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.