ಬುಗುಟ ಬಾತು 


Team Udayavani, Apr 15, 2017, 12:13 PM IST

6.jpg

ಚುಂಚಿನ ಬುಡದಲ್ಲಿ ಚಿಕ್ಕ ಉಬ್ಬುಗಂಡು ಬಾತುಗಿದೆ. ಅದರಿಂದ ಇದಕ್ಕೆಗುಮ್ಮಟ ಕೊಕ್ಕಿನ ಬಾತು ಎಂಬ ಹೆಸರು ಅನ್ವರ್ಥಕವಾಗಿ ಬಂದಿದೆ.Comb Duck (Skrkidiormnismelanotos) R Duck +  70 ಸೆಂಮೀ. ಇರುವ ಬಾತುಕೋಳಿ. ಸಾಕು ಬಾತನ್ನು ಹೋಲುತ್ತದೆ. ಇದು ಭಾರತದ ಅದರಲ್ಲೂ ಕರ್ನಾಟಕದ ಹಕ್ಕಿ. ಇದನ್ನು ಶಲ್‌ಡಕ್‌ ಎಂದು ತಪ್ಪಾಗಿ ತಿಳಿದಿದ್ದರು. ಅದರ ಸೂಕ್ಷ್ಮಅಧ್ಯಯನದ ನಂತರ ಇದು ತಡೋರ್ನಿನಾ ಅಥವಾ ಅನಟನಿಯಾ ಉಪ ಜಾತಿಗೆ ಸೇರಿದ್ದೆಂದು ಇದರ ಲಕ್ಷಣದಿಂದ ತಿಳಿದು ಬಂದಿದೆ.

ಮಿರ ಮಿರ ಮಿನುಗುವ ಹೊಳಪಿರುವ ಬಣ್ಣ ಇದಕ್ಕಿದೆ. ತಿಳಿ ನೀಲಿ ಮತ್ತು ಹಸಿರು ಹೊಳಪಿರುವ ಗರಿ ಇದ್ದು, ಹೊಟ್ಟೆ ಭಾಗ ಬಿಳಿ ಬಣ್ಣದಿಂದ ಕೂಡಿದೆ. ತಲೆ, ಕುತ್ತಿಗೆ ಸುತ್ತ ಬಿಳಿಬಣ್ಣವಿದೆ. ಅದರ ಮೇಲೆ ಚಿಕ್ಕಕಪ್ಪು ಚುಕ್ಕೆ ಇದೆ. ತಲೆ ಅಂದರೆ ನೇಪ್‌ ಭಾಗದಲ್ಲಿ ತಿಳಿಕಂದು ಇರುವುದು ಸೂಕ್ಷ್ಮಮವಾಗಿ ನೋಡಿದರೆ ತಿಳಿಯುವುದು. ಹೆಣ್ಣಿಗೆ ಚುಂಚಿನ ಬುಡದಲ್ಲಿ ಗುಮ್ಮಟ ಅಥವಾ ಉಬ್ಬಿದ ಭಾಗ ಇಲ್ಲ. ಉಳಿದ ಬಣ್ಣ ರೆಕ್ಕೆಗಂಡಿನಂತೆ ಇದೆ. ಗಂಡಿಗೆ ಈ ಗುಮ್ಮಟದಿಂದ ಏನು ಪ್ರಯೋಜನ, ಇದು ಕೇವಲ ಸೌಂದರ್ಯಕ್ಕಾಗಿಯೋ ಅಥವಾ ಇದರಿಂದ ಏನಾದರೂ ಪ್ರಯೋಜನ ಇದೆಯೋ ಎಂಬುದು ಸಂಶೋಧನೆಯಿಂದ ತಿಳಿಯಬೇಕಾಗಿದೆ.  ಈ ಗುಮ್ಮುಟ ಮರಿಮಾಡುವ ಸಮಯದಲ್ಲಿ ದೊಡ್ಡದಾಗುವುದು ವಿಶೇಷ. ಇದರ ದೇಹದಲ್ಲಿ ಮರಿ ಮಾಡುವ ಸಮಯದಲ್ಲಿ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ.  ಕನ್ನಡದಲ್ಲಿ ಸರಳೆ ಹಕ್ಕಿ ಅಂದರೆ ಬಾತು ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ ಇದನ್ನು ನಾಕ್ಟ ಎಂದು ಕರೆಯುತ್ತಾರೆ. ಇದರಚುಂಚಿನ ಮೇಲಿರುವ ಉಬ್ಬಿನಿಂದ ಸುಲಭವಾಗಿ ಗುರುತಿಸಬಹುದು. 

ಇದು ಆಹಾರಕ್ಕಾಗಿ ಕೆರೆ ಅಥವಾ ನೀರಿನ ಹೊಂಡದಿಂದ ಇನ್ನೊಂದು ಕೆರೆಗೆ ಹೋಗುತ್ತಿರುತ್ತವೆ. ಚುಂಚಿನ ಬುಡದಲ್ಲಿರುವ ಬುಗುಟದಿಂದ ಗಂಡೋ – ಹೆಣ್ಣೋ ಎನ್ನುವುದನ್ನು ಗುರುತಿಸಬಹದು. ಇದು ನೀರಿನ ಮಧ್ಯದಲ್ಲಿಯೇ ಹೆಚ್ಚು ಸಮಯ ಕಳೆಯುತ್ತದೆ. ನೀರಿನ ಮೇಲೆ ತೇಲುವ  ಸಸ್ಯ, ಅದರ ಚಿಗುರು, ದೇಟು, ಚಿಕ್ಕ ಬೀಜಗಳನ್ನು ಇದು ತಿನ್ನುತ್ತದೆ. 

ನೀರಿನ ಮೇಲೆ ತೇಲುವ ಹಸಿರು ಪಾಚಿ ಸಹ ತಿನ್ನುವುದು. ಹೀಗೆ ನೀರಿನ ಶುದ್ದೀಕರಣದಲ್ಲೂ ಇದರ ಪಾತ್ರ ಹಿರಿದು. ನೀರಿನಲ್ಲಿರುವ ಅನೇಕ ಚಿಕ್ಕ ಕ್ರಿಮಿಗಳನ್ನು ಇದು ತಿನ್ನುವುದರಿಂದ ನೀರಿನಿಂದ ಬರುವ ಕಾಯಿಲೆ ನಿಯಂತ್ರಿಸಿ ಬಹು ಉಪಕಾರ ಮಾಡುತ್ತದೆ.

    ಜೋಡಿಯಾಗಿ ಅಥವಾ ಚಿಕ್ಕ ಗುಂಪಿನಲ್ಲಿ ಸರೋವರ, ಕೆಸರಿನಗದ್ದೆ, ಕಾಲುವೆ ಸಮೀಪ ಮೇಯುತ್ತವೆ. 56 ರಿಂದ 76 ಸೆಂ.ಮೀ ದೊಡ್ಡ ಬಾತು ಅನೇಕ ಕಡೆ ಸಿಕ್ಕಿದೆ. ಇದರರೆಕ್ಕೆ ಅಗಲ 116 ರಿಂದ 145 ಸೆಂಮೀ ನಷ್ಟು ದೊಡ್ಡದಿದೆ. 1.03 ಕೆ.ಜಿ ಯಿಂದ ಸುಮಾರು 2.9 ಕೆಜಿ 
ಭಾರ ಇರುತ್ತದೆ. ಚಿಕ್ಕ ಮರಿ ತಿಳಿ ಕಂದು ಬಣ್ಣದಿಂದ ಕೂಡಿದ್ದು , ಕುತ್ತಿಗೆತಲೆ ಸಹ ತಿಳಿ ಕಂದು ಬಣ್ಣದಿಂದಿರುತ್ತದೆ. ಪ್ರೌಢಾವಸ್ಥೆಗೆ ಬಂದಂತೆ ತಲೆಕುತ್ತಿಗೆಯಲ್ಲಿರುವ ಚುಕ್ಕೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ರೆಕ್ಕೆಗಳಲ್ಲಿ ಹೊಳೆವ ನೀಲಿ, ಹಸಿರು ಬಣ್ಣ  ತಳೆಯುತ್ತದೆ. ಗಂಡು ಹಕ್ಕಿ ಹೆಣ್ಣಿಗಿಂತ ಹೆಚ್ಚು ದಟ್ಟ ಬಣ್ಣದಿಂದ ಕೂಡಿರುತ್ತದೆ. ಜುಲೈ -ಸೆಪ್ಟೆಂಬರ್‌ ಮರಿಮಾಡುವ ಸಮಯ. ನೀರಿನ ಸಮೀಪದ ಮರದ ಡೊಂಗರಗಳಲ್ಲಿ ಗೂಡು ಮಾಡುತ್ತದೆ. ಒಂದೇಗೂಡಿನಲ್ಲಿ ಅನೇಕ ಹೆಣ್ಣು ಹಕ್ಕಿ ಮೊಟ್ಟಇಡುತ್ತದೆ. ಇದರ ಪ್ರಣಯದಲ್ಲಿ ಗೆದ್ದದ್ದು ವರಿಸುತ್ತದೆ. ಸೋತಗಂಡು ಮರದತುದಿಯಲ್ಲಿ ಕುಳಿತು ತನ್ನ ಗೆಳತಿಗಾಗಿ ಕಾಯುತ್ತದೆ. ಇಂತಹ ಸೂಕ್ಷ್ಮ ವಿಷಯದ
ಅಧ್ಯಯನ ನಡೆಯಬೇಕಿದೆ. ಒಂದೇ ಗೂಡಿನಲ್ಲಿ ಬೇರೆ ಬೇರೆ ಹೆಣ್ಣು ಮೊಟ್ಟೆ ಇಡುವುದರಿಂದ ಎಲ್ಲ ಹೆಣ್ಣು ಬಂದು ಕಾವು ಕೊಡುವುದೋ? ಅಥವಾ ಒಂದೇ ಹೆಣ್ಣುಕಾವುಕೊಟ್ಟು ಮರಿ ಮಾಡುವುದೋ? ಎಂಬುದೂ ತಿಳಿಯಬೇಕಿದೆ. 

ಇದು 7 ರಿಂದ 14 ಬಿಳಿಬಣ್ಣದ ತತ್ತಿ ಇಡುತ್ತದೆ. ಇತರ ಹೆಣ್ಣು ಹಕ್ಕಿ ಒಂದೇಗೂಡಿನಲ್ಲಿ ಇಟ್ಟತತ್ತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ 47-50ಕ್ಕಿಂತ ಹೆಚ್ಚು ತತ್ತಿ ಒಂದೇಗೂಡಿನಲ್ಲಿ 
ಸಿಕ್ಕ ಉದಾಹರಣೆ ಇದೆ. ಇದರ ಕಾಲು ಸೀಸದ ಹೊಳಪಿನಿಂದ ಕೂಡಿದ್ದು ಜಾಲಪಾದ ಹೊಂದಿದೆ. ಇದು ಬೇರು, ನಾರು, ಹುಲ್ಲು , ಹಕ್ಕಿ ಗರಿ ಉಪಯೋಗಿಸಿ ಗೂಡನ್ನು ಮಾಡುತ್ತದೆ. ತನ್ನ ಸಂಗಾತಿಯನ್ನು ಆರಿಸಿಕೊಂಡ ನಂತರ ಅವೆರಡೂ ಸೇರಿಗೂಡು ಕಟ್ಟುವುದೋ    ಅಥವಾ ಗೂಡುಗಂಡುಕಟ್ಟದ ಮೇಲೆ ಅದನ್ನು ತನ್ನ ಸಂಗಾತಿಯಾಗಿ ಹೆಣ್ಣು ಸ್ವೀಕರಿಸುವುದೋ ಎಂಬುದೂ ಸಹ ತಿಳಿದಿಲ್ಲ. 28 ರಿಂದ 30 ದಿನ ಕಾವು ಕೊಡುತ್ತದೆ. ಕಾವುಕೊಡುವಲ್ಲಿ ಹೆಣ್ಣಿನ ಪಾತ್ರ ಹೆಚ್ಚು. 28 ದಿನ ಕಾವುಕೊಟ್ಟ ನಂತರ – ಒಂದು ಅಥವಾ ಎರಡು ದಿನಗಳಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ. ಇದರಗೂಡು 12ಮೀ ಎತ್ತರದಲ್ಲಿರುತ್ತದೆ. 

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.