ಗೋರಿಕೆ ಪೀಚೆ ಕ್ಯಾಹೈ ?


Team Udayavani, Oct 14, 2017, 2:38 PM IST

gori.jpg

“ಹೋಗು. ಎಲ್ಲಾ ಬಿಟ್ಟು ಹೋಗು. ನಮ್ಮನ್ನು ಮರೆಯಬೇಡ. ನಾಳೆ ನಾವೆಲ್ಲರೂ ನಿನ್ನವರಾಗುತ್ತೇವೆ’ ಎಂದು ತನ್ನ 13 ದಿನದ ಹಸುಳೆಯ ಬಗ್ಗೆ ತಂದೆ ಕೆತ್ತಿಸಿರುವ ಚರಮಗೀತೆಯ ಗೋರಿ, ಅದರ ಪಕ್ಕದಲ್ಲಿಯೇ ಆ ಮಗುವಿನ ತಾಯಿಯ ಗೋರಿ, ಅಲ್ಲೇ ಸಮೀಪದಲ್ಲಿ ನದಿಯ ದುರಂತದಲ್ಲಿ ಸಾವಿಗೀಡಾದ ಇಬ್ಬರು ಗೆಳೆಯರ ಒಂದೇ ಗೋರಿ,  ಪಕ್ಕದಲ್ಲಿ  ಕಾಲರಾ ಬೇನೆಗೆ ತುತ್ತಾದ ಯುವತಿಯೋರ್ವಳ ಗೋರಿ. 

ಹೀಗೆ ಒಂದಲ್ಲಾ.. ಎರಡಲ್ಲಾ 64 ಗೋರಿಗಳ ಸಮೂಹದಲ್ಲಿರುವ ಗೋರಿಗಳ ಕಥೆ-ವ್ಯಥೆಗಳ ಸ್ಥಳವೊಂದು ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿದೆ.  ಅಲ್ಲಿ ಕಾಲಿಟ್ಟರೆ ಅದ್ಯಾವುದೋ ಅರಿಯದ ನೋವು, ವಿಷಾಧ  ಜೊತೆಯಾಗುತ್ತದೆ. ಅಂದಹಾಗೆ, ಇಲ್ಲಿ ಸಮಾಧಿಯಾದವರು ನಮ್ಮವರಲ್ಲ.  ನಮ್ಮನ್ನಾಳಲು ಬಂದು ಇಲ್ಲಿಯ ಮಣ್ಣಲ್ಲಿ ಮಣ್ಣಾದ ಬ್ರಿಟೀಷ್‌ ಅಧಿಕಾರಿಗಳ, ಮತ್ತವರ ಪರಿವಾರದವರ ಗೋರಿಗಳಿರುವು.

ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ  ತಮ್ಮ ಸೈನ್ಯವನ್ನು ಕೇಂದ್ರೀಕರಿಸಲು 1820ರ ಸುಮಾರಿಗೆ ಕಲಾದಗಿಯನ್ನು ಆಯ್ಕೆಮಾಡಿಕೊಂಡರು ಬ್ರಿಟೀಷರು. ಆನಂತರ 1864 ರಿಂದ 1884 ರವರೆಗೆ ಇದನ್ನೇ  ಜಿಲ್ಲಾ  ಕೇಂದ್ರವನ್ನಾಗಿ  ಮಾಡಿದರು. ಆ ದಿನಗಳಲ್ಲಿ  ಇಲ್ಲಿ  ನೆಲೆ ಊರಿದ ಸೈನ್ಯಾಧಿಕಾರಿಗಳ, ಮತ್ತವರ ಪರಿವಾರದವರ ಗೋರಿಗಳ ಸಮೂಹಗಳು ಕಲಾದಗಿಯಲ್ಲಿವೆ. ಅವುಗಳ ಎದುರಿಗೆ ನಿಂತರೆ ಒಂದೊಂದು ಗೋರಿಯಲ್ಲೂ ನಾನಾ ಕಥೆಗಳಿವೆ. ನೆನಪುಗಳಿವೆ. 

ಇಲ್ಲಿನ ಅಂಬೇಡ್ಕರ್‌ ಸರ್ಕಲ್‌ ಬಳಿ ಮತ್ತು ಊರ ಬೈಪಾಸ್‌ ರಸ್ತೆಯ ಪಕ್ಕದಲ್ಲಿ ಬ್ರಿಟೀಷರ ಗೋರಿಗಳ ಸಮೂಹವಿದೆ.  ಸ್ಥಳೀಯರಿಂದ ಫಿರಂಗಿಯರ  ಗೋರಿಗಳು ಎಂದು ಕರೆಸಿಕೊಳ್ಳುವ ಇವುಗಳು ಇಂದು ದಯನೀಯ ಸ್ಥಿತಿಯಲ್ಲಿವೆ. ಅಂಬೇಡ್ಕರ್‌ ಸರ್ಕಲ್‌ ಬಳಿ ಹೋಟೆಲ್‌-ಮನೆಗಳ ಹಿಂಭಾಗದಲ್ಲಿ, ಕೊಳಚೆ  ನೀರು, ಕಸ-ಕಡ್ಡಿ, ಗಿಡ-ಗಂಟೆಗಳಿಂದ ಆವೃತ್ತವಾಗಿರುವ ಗೋರಿಗಳ ಬಳಿ ಹೋಗಲು ಕಷ್ಟಕರ. ಆದರೆ ಹೊರ ರಸ್ತೆಯಲ್ಲಿ ತುಸು ಒಳಭಾಗದಲ್ಲಿರುವ ಗೋರಿಗಳ ಬಳಿ ಸಮೂಹದತ್ತ ಹೋಗಲು ಸಾಧ್ಯವಿದೆ. ಆದರೆ ಅವುಗಳು ಸಹ ಮುಳ್ಳು ಗಿಡಗಳಿಂದ ಭಾಗಶಃ ಮುಚ್ಚಿಹೋಗಿವೆ.

ಹಾಳು ಸ್ಥಿತಿಯಲ್ಲಿರುವ ಭಿನ್ನ ಗೋರಿಗಳು
ಎತ್ತರಕ್ಕೆ ನಿಂತ ಬೃಹತ್‌ ಗೋಡೆಗಳ ನಡುವೆ 64 ಗೋರಿಗಳಿವೆ.  ಒಂದು ಗೋರಿಯಂತೆ ಮತ್ತೂಂದು ಇಲ್ಲದಿರುವುದು ಇವುಗಳ ವಿಶೇಷ. ಪ್ರತಿಗೋರಿಯ  ಮೇಲೆಯೂ  ಸತ್ತ ವ್ಯಕ್ತಿಗಳ ವಿವರಣೆಗಳಿವೆ. ಚರಮಗೀತೆಗಳನ್ನೂ ಕೆತ್ತಲಾಗಿದೆ. 1821 ರಿಂದ 1890ರ ವರೆಗಿನ ಕಾಲಾವಧಿಯಲ್ಲಿ ನಿರ್ಮಾಣವಾದ 64 ಗೋರಿಗಳನ್ನು ನಾವಿಲ್ಲಿ ಕಾಣಬಹುದು.

ಇಲ್ಲಿನ ಗೋರಿಗಳನ್ನು ನೋಡುವಾಗ ಮತ್ತು ಅವುಗಳ ಮೇಲೆ ಕೆತ್ತಿರುವ ಫ‌ಲಕಗಳನ್ನು ಓದುವಾಗ  ಮನಸ್ಸು  ಮೂಕವಾಗುತ್ತದೆ.  ಕಾರಣ ಅವು  ಹೇಳುವ ಸಾವಿನ ಕಥೆಗಳು. 1821 ರಲ್ಲಿ ಸಾವನ್ನಪ್ಪಿದ ಮೇರಿ ಆನ್ನೆ ಮತ್ತು ಕ್ಯಾಪ್ಟನ್‌ ಹೆನ್ರಿ ರೈಸ್‌ ರ 13 ತಿಂಗಳ ಮಗು ಪೌಲಿನನ ಗೋರಿಇದೆ.  ಈ ಗೋರಿಯ ಮೇಲೆಯೇ ಪ್ರಾರಂಭದಲ್ಲಿ ಹೇಳಿದ ಮನಕಲುಕುವ ಮರಣ ಶಾಸನವಿರುವುದು. ಇಲ್ಲಿನ ಎತ್ತರದ  ಮತ್ತೂಂದು ಗೋರಿಯಲ್ಲಿ  ಒಬ್ಬರಲ್ಲ.  

ಇಬ್ಬರೂ ಒಂದೇ ಕಡೆ ಮಣ್ಣಲ್ಲಿ ಮಣ್ಣಾಗಿದ್ದಾರೆ. ಊರದಂಡೆಯಲ್ಲಿ ಹರಿಯುತ್ತಿದ್ದ ಘಟಪ್ರಭೆಯಲ್ಲಿ ನೀರಿನಾಟವಾಡಲು ಹೋದ ಇಬ್ಬರು ಯುವ ಅಧಿಕಾರಿಗಳು ನೀರಿನಲ್ಲಿ ಸಾವನ್ನಪ್ಪುತ್ತಾರೆ. ಅವರಿಬ್ಬರನ್ನೂ ಒಂದೇ ಗೋರಿಯಲ್ಲಿ ಹೂಳಲಾಗಿದೆ. “ನಮ್ಮನ್ನು ಬಹು ದರ್ಪದಿಂದ ಆಳಲು ಬಂದ ಬ್ರಿಟೀಷರು ಕೂಡಾ ಸಾವು ಬಂದಾಗ ಕೇವಲ ಮನುಷ್ಯರು ಎಂಬುದನ್ನು ಇವು ಸೂಚಿಸುತ್ತವೆ.

ಸಾವಿನ ಸಮಾಜವಾದಕ್ಕೆ ಚರ್ಕವರ್ತಿ, ಮಗು, ಹೆಂಡತಿ, ಸೈನಿಕ, ದೊಡ್ಡವ, ಸಣ್ಣವ ಎಂಬ ಫ‌ರಕೆಲ್ಲಿಯದು ” ಎಂದು ಈ ಗೋರಿಗಳ ನಡುವೆ ನಿಂತು ವಿಷಾದದಿಂದ ಹೇಳುತ್ತಾರೆ ಖ್ಯಾತ ಬರಹಗಾರ ಡಾ.ರಹಮತ್‌ ತರೀಕೆರೆ. 1960ರ ವರೆಗೂ ಇದನ್ನು ಕ್ರಿಶ್ಚಿಯನ್ನರು ಸಂರಕ್ಷಿಸಿದ್ದರು,  ಮಾಲಿಯೊಬ್ಬ ಇದನ್ನು ಕಾಯುತ್ತಿದ್ದ. ಇಲ್ಲೆಲ್ಲಾ ಹೂಗಿಡಗಳನ್ನು ಬೆಳೆಸಿದ್ದ ಎಂದು ನೆನಪಿಸಿಕೊಳ್ಳುತ್ತಾರೆ.  ಬ್ರಿಟೀಷರೊಂದಿಗೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ್ದ ಇಲ್ಲಿನ 95 ವರ್ಷದ ರಿಯ ಭೀಮರಾವ್‌ ಕುಲಕರ್ಣಿ. ಆನಂತರ ಏನಾಯಿತೋ, ಇದು ಹಾಳಾಗಲಾರಂಭಿಸಿತು.

ನಿಧಿ ಆಸೆಗಾಗಿ ಗೋರಿಗಳನ್ನು ಅವುಗಳ ಮೇಲಿನ ಫ‌ಲಕವನ್ನು ಕಿತ್ತೆಸೆಯಲಾುತು. ತಮ್ಮ ಪೂರ್ವಜರ ಗೋರಿಗಳನ್ನು ನೋಡಿ ಅವುಗಳಿಗೆ ಗೌರಸಲು ದೇಶದಿಂದ ಅನೇಕರು ಇಲ್ಲಿಗೆ ಬರುತ್ತಿರುತ್ತಾರೆ ಎಂದು ಬರಹಗಾರ  ದ.ರಾ.ಪುರೋತ್‌ ಹೇಳುತ್ತಾರೆ. ಇಲ್ಲಿಗೆ ಬರುವ ಗಣ್ಯರು, ಇತಿಹಾಸಕಾರರು, ಪಾದ್ರಿಗಳು, ಅಧಿಕಾರಿಗಳು ಇದರ ದುಃಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಅದೇಕೋ ಇನ್ನೂ ಕಾರ್ಯಗತವಾಗುತ್ತಿಲ್ಲ.

* ಪ್ರವೀಣರಾಜು ಎಸ್‌.ಸೊನ್ನದ

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.