ಕರಿಘಟ್ಟದಲ್ಲಿ ಹಸಿರು ಕ್ರಾಂತಿ 


Team Udayavani, Dec 2, 2017, 3:11 PM IST

199.jpg



 ಬೋಳಾಗಿರುವ ಸ್ಥಳದಲ್ಲಿ ಹಸಿರು ಚಿಮ್ಮುವಂತೆ ಮಾಡಬೇಕೆಂಬ ಉದ್ದೇಶದಿಂದ ರಮೇಶ್‌ ಗಿಡಗಳನ್ನು ನೆಡುತ್ತಿದ್ದಾರೆ. ಆ ಗಿಡಗಳನ್ನು ಜೋಪಾನ ಮಾಡುವ, ಅವುಗಳಿಗೆ ತಪ್ಪದೇ ನೀರುಣಿಸುವ ಕೆಲಸವನ್ನು ಶ್ರದ್ದೇ, ಉತ್ಸಾಹದಿಂದ ಮಾಡುತ್ತಿದ್ದಾರೆ. 

ಶ್ರೀರಂಗಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಕರಿಘಟ್ಟಕ್ಕೆ ಬಸ್ಸು, ಕಾರುಗಳ ಮೂಲಕ ಪ್ರಯಾಣಿಸಬಹುದು.  ಬೆಟ್ಟವನ್ನು ಹತ್ತಲು ಸುಮಾರು  400 ಮೆಟ್ಟಿಲುಗಳಿವೆ. ಬೆಟ್ಟದಲ್ಲಿ  ಸುಂದರವಾದ  ಶ್ರೀನಿವಾಸ ದೇವಾಲಯವಿದೆ. ಇಲ್ಲಿನ ದೇವರ ಮೂರ್ತಿಯನ್ನು ಭೃಗು ಮಹರ್ಷಿಯು ಸ್ಥಾಪಿಸಿದರೆಂಬ ನಂಬಿಕೆಯಿದೆ. ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುತ್ತಿರುವಾಗ ಬೆಟ್ಟದ ಭಾಗವೊಂದು ಇಲ್ಲಿ ಬಿದ್ದ ಕಾರಣದಿಂದಲೇ ಕರಿಘಟ್ಟ ಸೃಷ್ಟಿಯಾಯಿತೆಂಬ ಪ್ರತೀತಿ ಇದೆ.  ಇಲ್ಲಿ ಬಹಳಷ್ಟು ಔಷಧೀಯ ಸಸ್ಯಗಳಿವೆ ಎಂಬ ನಂಬಿಕೆಯೂ ಇದೆ. ಅನತಿ ದೂರದಲ್ಲಿ ಚಾರಣಾಸಕ್ತರಿಗಾಗಿ ಪುಟ್ಟ ಬೆಟ್ಟವೊಂದಿದೆ. ಅದನ್ನು ಏರಿದಾಗ ಕಾಣಸಿಗುವ ಸುತ್ತಮುತ್ತಲಿನ ದೃಶ್ಯಗಳು ಬಲು ಸೊಗಸು. ದೂರದಲ್ಲಿ ಕಾಣಿಸುವ ಕಾವೇರಿ ನದಿಯ ತಟದಿಂದ ಬೀಸಿ ಬರುವ ತಂಗಾಳಿ ಬೆಟ್ಟಹತ್ತಿ ಬಂದ ಆಯಾಸವನ್ನು ಪರಿಹರಿಸುತ್ತದೆ. 

 ಇಂತಿಪ್ಪ ಕರಿಘಟ್ಟದಲ್ಲಿ ಒಂದಷ್ಟು ಗಿಡಗಳು ಕಂಡರೆ ಹತ್ತಿರ ಹೋಗಿ ನೋಡಿ. ಅದರ ಬುಡದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು ಇದ್ದರೆ ಕಿತ್ತೆಸೆಯಬೇಡಿ. ಅದು ಆ ಗಿಡಗಳಿಗೆ ನೀರುಣಿಸಲು ರಮೇಶ್‌ ಮಾಡಿರುವ ಪ್ಲಾನ್‌. 

ಹೌದು, ಕರಿಘಟ್ಟದ  ರಮೇಶ್‌ ಪರಿಸರ ಸಂರಕ್ಷಣೆಗೆ ಮಾಡಿರುವ ಉಪಾಯ ಇದು. ಗುಡ್ಡದ ಬೋಳು ಬೋಳಾದ ಸ್ಥಳದಲ್ಲಿ ಹಸಿರು ಚಿಗುರಿಸುವ ಪ್ರಯತ್ನ ಇದು.  ಅವರು ಸ್ವಯಂಪ್ರೇರಿತರಾಗಿ ವರುಷಕ್ಕೆ ಇನ್ನೂರು ಗಿಡಗಳನ್ನು ನೆಡುತ್ತಿದ್ದಾರೆ. ಬರೀ ನೆಟ್ಟು ಮರೆತು ಹೋಗುವುದಿಲ್ಲ. ಅದನ್ನು ಪೋಷಿಸುವ ಜವಾಬ್ದಾರಿಯನ್ನೂ ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ. ಎಲ್ಲವೂ ಮರವಾಗುವ ಪ್ರಕ್ರಿಯೆಯಲ್ಲಿವೆ. 

ರಮೇಶ್‌ ಇಷ್ಟವಾಗುವುದು ಅವರು ಗಿಡ ನೆಟ್ಟು ಪೋಷಿಸುವ ಕಾರ್ಯವೈಖರಿಯಿಂದ. ಎಲ್ಲಾ  ಗಿಡಗಳಿಗೂ ಖಾಲಿ ಬಾಟಲ್‌ ಗಳನ್ನು ಕಟ್ಟಿ ಹನಿ ನೀರಾವರಿಯ ವ್ಯವಸ್ಥೆ ಮಾಡಿದ್ದಾರೆ. ನೀರನ್ನು ತರುವುದು ಇವರೇ.  ಕಾವೇರಿ ನದಿಯಿಂದ ಹೊತ್ತು ತಂದು ಬಾಟಲ್‌ ಗಳಿಗೆ ತುಂಬಿಸಿ ಗಿಡಗಳಿಗೆ ನೀರುಣಿಸುತ್ತಾರೆ. ಬೆಟ್ಟದ ಬುಡದಲ್ಲಿ ಔಷಧೀಯ ಗುಣಗಳುಳ್ಳ ಮೂಲಿಕಾಸಸ್ಯಗಳನ್ನೂ ನೆಟ್ಟಿದ್ದಾರೆ. ಕೆಲವು ಗಿಡಗಳ ರೆಂಬೆಗಳಿಗೆ ಮಣ್ಣಿನ ತಟ್ಟೆಗಳನ್ನು ಕಟ್ಟಿ ಅವುಗಳಲ್ಲಿ ಸಿರಿಧಾನ್ಯಗಳನ್ನಿಟ್ಟು ಪಕ್ಷಿಗಳಿಗೂ ಆಹಾರವಾಗುವಂತೆ ವ್ಯವಸ್ಥೆ ಮಾಡಿದ್ದಾರೆ.  ಇನ್ನು ಕೆಲವು ಗಿಡಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಬರಹಗಳುಳ್ಳ ಫ‌ಲಕಗಳನ್ನೂ ಜೋಡಿಸಿರುವುದರಿಂದ ಗಿಡ ನೋಡುವವರಿಗೆ ಅದರ ಬಗ್ಗೆ ಮಾಹಿತಿ ಸಿಕ್ಕಂತೆ ಆಗುತ್ತದೆ. ಇವೆಲ್ಲದರ ಜೊತೆಗೆ, ಅಕ್ಕಪಕ್ಕದ ಗ್ರಾಮಗಳಲ್ಲಿ, ಬೆಟ್ಟಕ್ಕೆ ಬೆಂಕಿ  ಬಿದ್ದಾಗ ಆಗುವ ಪರಿಸರ ಹಾನಿಯ ಬಗ್ಗೆ ಅರಿವು ಮೂಡಿಸಲು ಕರಪತ್ರಗಳನ್ನು ಹಂಚುತ್ತಾರೆ.  

ರಮೇಶ್‌ ನಿರುಪಯುಕ್ತವಾದ ಖಾಲಿ ಬಾಟಲಿಗಳಿಗೆ ಪುಟ್ಟ ಪೈಪ್‌ಗ್ಳನ್ನು ಅಳವಡಿಸಿ ಗಿಡಗಳಿಗೆ ಹನಿ ನೀರಾವರಿ ಮಾಡುತ್ತಿರುವ ವಿಶಿಷ್ಟ ಶೈಲಿ ಅನುಕರಣೀಯ. ನೀರಿನ ಮಿತವ್ಯಯದ ಜೊತೆಗೆ  ಪ್ಲಾಸ್ಟಿಸ್‌ ಕಸದ ಮರು ಉಪಯೋಗವೂ ಆಗುತ್ತದೆ. 

ಪ್ರತಿ ಊರಿನಲ್ಲಿಯೂ ಬೆಟ್ಟ ಗುಡ್ಡ ಗಳಿರುತ್ತವೆ. ವೀಕೆಂಡ್‌ ಟ್ರಿಪ್‌ ಹೋಗುವವರು ಇಂಥ ಸಣ್ಣ ಬೆಟ್ಟವೊಂದಕ್ಕೆ ಚಾರಣ, ದೇವಾಲಯದ ಭೇಟಿ ಹಾಗೂ  ಪ್ರಕೃತಿಯ ನಡುವೆ ಶ್ರಮದಾನ ಮಾಡುವ ಮೂಲಕ ವಾರಾಂತ್ಯವನ್ನು ಸಂಪನ್ನವಾಗಿಸಬೇಕೆ ?

 ಅಲ್ಲಿ ಹೋಗಿ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ  ವರ್ಷವಿಡೀ ವನಮಹೋತ್ಸವವಾಗಬಲ್ಲದು ಅನ್ನೋದಕ್ಕೆ ರಮೇಶ್‌ ಪ್ರಯತ್ನವೇ ಉದಾಹರಣೆ. 

 ಹೇಮಮಾಲಾ.ಬಿ.

ಆಸಕ್ತರು ರಮೇಶ್‌ (8123331332) ಅವರನ್ನು ಮುಂಚಿತವಾದ ಸಂಪರ್ಕಿಸಿ, ಅವರ ಮಾರ್ಗದರ್ಶನದಲ್ಲಿ ಸಸಿಗಳ ನೆಡುವಿಕೆ, ಪೋಷಣೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ‘ಶ್ರಮದಾನ’ ಮಾಡಬಹುದು..
 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.