![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jun 3, 2017, 1:39 PM IST
ಸುಡು ಬೇಸಿಗೆಯಲ್ಲಿ ಹನಿ ನೀರು ಬೇಕೆಂದರೂ ನೂರಾರು ಅಡಿ ಆಳದಲ್ಲಿ ಕೊಳೆವೆಬಾವಿ ಕೊರೆಯಬೇಕು.ಇಲ್ಲವೇ ಕನಿಷ್ಠ 5-6 ಕಿಮೀ ದೂರದಿಂದ ಪೈಪ್ಲೈನ ಮೂಲಕ ನೀರು ತರುವ ಭಗೀರಥ ಪ್ರಯತ್ನ ಮಾಡಬೇಕು. ಈ ಎರಡು ಸಾಧ್ಯತೆಗಳು ಇಲ್ಲದೇ ಹೋದರೆ ಟ್ಯಾಂಕರ್ನ ನೀರೇ ಗತಿ.
ಹನಿ ನೀರು ಬೇಕೆಂದರೂ ಕೆಳಗಿನ ಪೈಪ್ಲೈನ್ ಮೂಲಕ ಮೇಲಕ್ಕೆ ನೀರು ಎತ್ತಿಸಬೇಕಾದ ಅನಿವಾರ್ಯವಿರುವ ಮುಂಡರಗಿಯ ಕಪ್ಪತ್ತಗುಡ್ಡದ ಗ್ವಾಲಗೇರಿಮಠದಲ್ಲಿ ಈಗ ಸಮೃದ್ಧ ನೀರು. ಗುಡ್ಡದ ಮೇಲೆ ಮಳೆಕೊಯ್ಲು ಮಾಡಿದ್ದರಿಂದ ವರ್ಷಪೂರ್ತಿ ಕುಡಿಯಲು ನೀರು ಸಿಗುತ್ತಿದೆ. ಇದಕ್ಕಾಗಿ ಹೊಂಡವನ್ನು ಕಟ್ಟಲಾಗಿದೆ.
ಮೊದಲು ಎಲ್ಲಿ ಬೇಕೆಂದರೂ ಕಪ್ಪತ್ತಗುಡ್ಡದಲ್ಲಿ ನೀರು ಸಿಗುವ ಝರಿ,ಹಳ್ಳಗಳು,ಹೊಂಡಗಳು ಇದ್ದವು. ಗುಡ್ಡಕ್ಕೆ ಬರುವ ಭಕ್ತರಿಗೆ ನೀರು ಒದಗಿಸಿ ದಾಹವನ್ನು ತಣಿಸುತ್ತಿದ್ದವು. ಆದರೆ ಮಳೆಗಾಲವು ಕಡಿಮೆಯಾಗಿ ಬರಗಾಲದ ಛಾಯೆಯೂ ಹೆಚ್ಚಾದಂತೆ ನೀರಿಗೆ ಪರದಾಡುವ ಸ್ಥಿತಿ ಕಪ್ಪತ್ತಗುಡ್ಡದಲ್ಲಿ ಕಾಣಿಸತೊಡಗಿತು. ನೀರಿನ ಕೊರತೆ ನೀಗಿಸಲು ಗ್ವಾಲಗೇರಿಮಠದ ಸಿದ್ದಲಿಂಗಯ್ಯನವರು ಕಪ್ಪತ್ತಗುಡ್ಡದ ಮೇಲಿಂದ ಹರಿದು ಬರುವ ನೀರನ್ನು ಸಂಗ್ರಸಲು ಕೊರಕಲಿಗೆ ಅಡ್ಡಲಾಗಿ ಗೋಡೆ ಕಟ್ಟಿ ಹೊಂಡವನ್ನು ನಿರ್ಮಿಸಿದರು.
ಮಳೆಗಾಲದಲ್ಲಿ ಕಪ್ಪತ್ತಗುಡ್ಡದ ಮೇಲಿಂದ ಹರಿದು ಬರುವ ನೀರು ಕೊರಕಲಿನಲ್ಲಿ ಹರಿದು ಹೋಗಿ ಕೆಳಗಿನ ಸಣ್ಣ ಹಳ್ಳಕ್ಕೆ ಸೇರುತ್ತಿತ್ತು. ಆದರೆ ಬೇಸಿಗೆ ಕಾಲದಲ್ಲಿ ನೀರು ಬೇಕೆಂದರೆ ಗುಡ್ಡದ ಕೆಳಗಿನ ಕೊಳವೆ ಬಾವಿಯಿಂದ ನೀರು ತರುವ ಅನಿವಾರ್ಯತೆ.
ಈ ಹೊಂಡವು ಇಪ್ಪತ್ತು ಅಡಿ ಆಳದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾದರೆ ವರ್ಷವೆಲ್ಲಾ ನೀರು ಸಿಗುತ್ತದೆ. ಗ್ವಾಲಗೇರಿಮಠದಲ್ಲಿ ಮೂವತ್ತು ಜನ ಸದಸ್ಯರಿರುವ ಕುಟುಂಬವಿದೆ. ಇವರಿಗೆ ವರ್ಷ ಪೂರ್ತಿ ನೀರು ಸಿಗುತ್ತದೆ. ಅಗತ್ಯ ಬಿದ್ದರೆ ಗುಡ್ಡದ ಕೆಳಗೆ ಕೊಳವೆ ಬಾವಿ ಇದೆ. ಇದರಿಂದ ವರ್ಷ ಪೂರ್ತಿ ಯೋಗ್ಯವಾದ, ಶುದ್ದ ನೀರು ಕುಡಿಯಲು ಸಿಗುತ್ತದೆ.ನೀರಿಗಾಗಿ ಸರಕಾರದ ಕಡೆಗೆ ಹೊರಳಿ ನೋಡುವುದು ತಪ್ಪಲಿದೆ.
ಹು.ಬಾ.ವಡ್ಡಟ್ಟಿ.
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.