ಹಳೇ ಬ್ಯಾಟು ಹಳೇ ಚೆಂಡು


Team Udayavani, Feb 22, 2020, 6:00 AM IST

haale

ಟೀಕೆಗಳಿಗೆ ಶತಕದ ಉತ್ತರ ಕೊಟ್ಟರು!
ಕರ್ನಾಟಕದ ಶ್ರೇಷ್ಠ ಕ್ರಿಕೆಟ್‌ ಆಟಗಾರರು ಎಂದು ಪಟ್ಟಿ ಮಾಡಲು ಹೊರಟರೆ ಮರೆಯದೇ ಸೇರಿಸಬೇಕಾದ ಹೆಸರು ಕಿರ್ಮಾನಿ ಅವರದ್ದು. ಸೈಯದ್‌ ಸ್ತಫಾ ಹುಸೇನ್‌ ಕಿರ್ಮಾನಿ ಎಂಬುದು ಅವರ ಪೂರ್ಣ ಹೆಸರು. ಭಾರತ ಕಂಡ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂಬುದು ಕಿರ್ಮಾನಿಯ ಹೆಗ್ಗಳಿಕೆ. ಈ ಹಿಂದೆ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆಗೇನಿದ್ದರೂ ಐದು ದಿನಗಳ ಟೆಸ್ಟ್‌ ಪಂದ್ಯದ ರಾಜದರ್ಬಾರು.

ಒಂದು ದಿನದ ಆಟ ಎಂದುಕೊಂಡರೆ, ಪೂರ್ತಿ 85-90 ಓವರ್‌ಗಳನ್ನೂ ಆಡಲೇಬೇಕಿತ್ತು. ಒಂದು ವೇಳೆ, ಕಡೆಯ 10-20 ಓವರ್‌ ಬಾಕಿಯಿದ್ದಾಗ, ಯಾರಾದರೂ ಪ್ರಮುಖ ಆಟಗಾರ ಔಟ್‌ ಆದರೆ, ಉಳಿದ ಓವರ್‌ಗಳನ್ನು ಆಡುವಂಥ ಸಾಮಾನ್ಯ ಆಟಗಾರನನ್ನು “ರಾತ್ರಿ ಕಾವಲುಗಾರ’ ಅಥವಾ “ನೈಟ್‌ವಾಚ್‌ಮನ್‌’ ಆಗಿ ಆಡುವ ಅಂತಹದೊಂದು ಅವಕಾಶ ಸಿಗುತ್ತಿತ್ತು. ಕಿರ್ಮಾನಿಗೂ 1979ರಲ್ಲಿ ಸಿಕ್ಕಿತ್ತು. ಎದುರಾಳಿಗಳಾಗಿದ್ದ ಆಸ್ಟ್ರೇಲಿಯನ್ನರು, ಕಿರ್ಮಾನಿಯನ್ನು ವೆರಿ ಪುವರ್‌ ಬ್ಯಾಟ್ಸ್‌ಮನ್‌ ಎಂದೇ ಆಗ ಭಾವಿಸಿದ್ದರು. ಆದರೆ ಈಗ ಅದ್ಭುತ ಒಪ್ಪಲು ಕ್ರೀಡಾ ಲೋಕ ಸಿದ್ಧವಿರಲಿಲ್ಲ.

ಹಾಗೆಂದೇ ಕೆಲವರು ಇದೊಂದು ಅಷ್ಟೇ ಎಂದು ಕೊಂಕು ನುಡಿದರು. ಈ ಟೀಕೆಗೆ ಉತ್ತರ ಕೊಡುವಂಥ ಅವಕಾಶವೊಂದು 5 ವರ್ಷಗಳ ನಂತರ ಕಿರ್ಮಾನಿಗೆ ಸಿಕ್ಕಿತು. ಆಗ ಇಂಗ್ಲೆಂಡ್‌ ವಿರುದ್ಧ ಮುಂಬೈಯಲ್ಲಿ ನಡೆದ ಟೆಸ್ಟ್‌ನಲ್ಲಿ ಕಿರ್ಮಾನಿಯನ್ನು ಮತ್ತೂಮ್ಮೆ ನೈಟ್‌ವಾಚ್‌ಮನ್‌ ಆಗಿ ಆಡಲು ಕಳಿಸಲಾಯಿತು. ಟೀಕಿಸಿದವರಿಗೆಲ್ಲ ಉತ್ತರ ಕೊಡಲೇಬೇಕು ಎಂಬಂತೆ ನೆಲಕಚ್ಚಿ ನಿಂತು ಆಡಿ ಮತ್ತೂಮ್ಮೆ ಸೆಂಚುರಿ ಹೊಡೆದರು. ವಿಕೆಟ್‌ ಕೀಪರ್‌ಗಳು ಒಬ್ಬ, ನೈಟ್‌ವಾಚ್‌ಮನ್‌ ಎಂದು ಆಡಲು ಬಂದು, ಎರಡು ಬಾರಿಯೂ ಶತಕ ಹೊಡೆದಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ.

ಸಿಕ್ಸರ್‌ ಹೊಡೆಸಿಕೊಂಡದ್ದು ಮರೆಯಲಾಗದ ಕ್ಷಣ
ಭಾರತ ಕ್ರಿಕೆಟ್‌ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಲಕ್ಷ್ಮೀಪತಿ ಬಾಲಾಜಿ ಕೂಡ ಒಬ್ಬರು. ಜಾವಗಲ್‌ ಶ್ರೀನಾಥ್‌ ಅವರಷ್ಟೇ ವೇಗದಲ್ಲಿ ಅವರಷ್ಟೇ ನಿಖರವಾಗಿ ಚೆಂಡು ಎಸೆಯಬಲ್ಲ ಬೌಲರ್‌ ಎಂಬ ಹೆಗ್ಗಳಿಕೆ ಬಾಲಾಜಿ ಅವರಿಗಿತ್ತು. ಸಾಮಾನ್ಯವಾಗಿ ಎಂಟು ಅಥವಾ ಒಂಭತ್ತನೇ ವಿಕೆಟ್‌ಗೆ ಆಡಲು ಬರುತ್ತಿದ್ದ ಬಾಲಾಜಿ ಒಂದರ ಹಿಂದೊಂದು ಬೌಂಡರಿ, ಸಿಕ್ಸರ್‌ ಹೊಡೆದು ಕ್ರೀಡಾ ಪ್ರೇಮಿಗಳನ್ನು ರಂಜಿಸುತ್ತಿದ್ದರು.

ಪಾಕಿಸ್ತಾನದಲ್ಲಿ ಇವರ ಆಟವನ್ನು ನೋಡಬೇಕೆಂಬ ಒಂದೇ ಆಸೆ ಯಿಂದ ಕ್ರೀಡಾಂಗಣಕ್ಕೆ ಬರುವ ಜನರಿದ್ದರು. ಅಂದರೆ ಬಾಲಾಜಿಯ ಆಟ ಸೃಷ್ಟಿಸದ ಹವಾ ಎಂಥದಿರಬೇಕೋ ಲೆಕ್ಕ ಹಾಕಿ. ಇಂಥ ಹಿನ್ನೆಲೆಯ ಬಾಲಾಜಿಯನ್ನು ಅದೊಮ್ಮೆ ಸಂದರ್ಶನದಲ್ಲಿ – ನಿಮ್ಮ ಕ್ರೀಡಾ ಜೀವನದ ಮರೆಯಲಾಗದ ಕ್ಷಣ ಯಾವುದು ಎಂದು ಕೇಳಲಾಯಿತು. ಆಗ ಬಾಲಾಜಿ ಹೇಳಿದ ಮಾತಿದು: “ಸಾಮಾನ್ಯವಾಗಿ ಒಂದು ದಿನದ ಪಂದ್ಯಗಳಲ್ಲಿ 8 ಅಥವಾ 9ನೇ ವಿಕೆಟ್‌ಗೆ ಆಡಲು ಬರುವವರು ಬೇಗ ಔಟ್‌ ಆಗುತ್ತಾರೆ. ಅಂಥವರ ವಿಕೆಟ್‌ ಪಡೆಯುವ ಸುಲಭ ಅವಕಾಶ ಬೌಲರ್‌ಗೆ ಇರುತ್ತದೆ.

ಕಡೆಯ ವಿಕೆಟ್‌ಗಳನ್ನು ಬೇಗ ಉರುಳಿಸಿ, ನನ್ನ ತಂಡದ ಗೆಲುವಿಗೆ ಕಾರಣನಾಗಬೇಕು ಎಂಬ ಆಸೆ ಎಲ್ಲ ಬೌಲರ್‌ಗೂ ಇರುತ್ತದೆ. ಅದೊಮ್ಮೆ 8ನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಬ್ರೇಟ್‌ ಲೀ ಆಡಲು ಬಂದಾಗ ಅವರನ್ನು ಔಟ್‌ ಮಾಡುವ ಹುಮ್ಮಸ್ಸು ನನಗೂ ಇತ್ತು. ಅದು ಪಂದ್ಯದ ಕಡೆಯ ಓವರ್‌, ಬ್ರೇಟ್‌ ಲೀ ವಿಕೆಟ್‌ ಬಿದ್ದರೆ ಭಾರತ ಗೆಲ್ಲುತ್ತಿತ್ತು. ಅಂಥ ಲೆಕ್ಕಾಚಾರದಲ್ಲೇ ನಾನೂ ಚೆಂಡೆಸೆದೆ. ಆದರೆ ಬ್ರೇಟ್‌ ಲೀ ಅವನ್ನೂ ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ಆಸ್ಟ್ರೇಲಿಯವನ್ನು ಗೆಲ್ಲಿಸಿಬಿಟ್ಟರು. ನಾನು ಎಂದೂ ಮರೆಯಲಾಗದ ನೋವಿನ ಕ್ಷಣವೆಂದರೆ ಅದೇ’.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.