ಸುಂದರ ಜಡೆಯ ಗಣಪ

ಕುಜದೋಷ ನಿವಾರಕ, ಈ ಹೊಳಲ್ಕೆರೆ ಗಜಮುಖ

Team Udayavani, Aug 31, 2019, 5:00 AM IST

JADE-GANAPA2

ಗಣಪನನ್ನು ನೋಡಿದಾಗ, ಆಕರ್ಷಣೆ ಹುಟ್ಟಿಸುವುದು ಆತನ ಸೊಂಡಿಲು. ಇಲ್ಲೊಬ್ಬ ವಿಶೇಷ ಗಣಪನಿದ್ದಾನೆ. ಅವನ ಶಿರದಲ್ಲಿ ಜಡೆಯಿದೆ. ಭಕ್ತಾದಿಗಳಿಗೆ ಈ ಜಡೆಯೇ ಪ್ರಧಾನ ಸೆಳೆತ. ದರ್ಶನಕ್ಕೆ ಬರುವ ಭಕ್ತರು, ಗಜಮುಖನ ಜಡೆಯನ್ನು ಮುಟ್ಟಿ ನಮಸ್ಕರಿಸುವುದು ವಾಡಿಕೆ. ಬೆಣ್ಣೆಯ ನೈವೇದ್ಯ ನೀಡಿ, ಆ ಬೆಣ್ಣೆಯನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರಂತೂ, ಹೆಣ್ಣುಮಕ್ಕಳಿಗೆ ಜಡೆ ಸುಂದರವಾಗಿ ಮೂಡಿಬರುತ್ತದಂತೆ.

ಇದು ಹೊಳಲ್ಕೆರೆಯ ಗಜಮುಖನ ಮಹಿಮೆ. ಚಿತ್ರದುರ್ಗವನ್ನು ಆಳಿದ ಪಾಳೇಗಾರರ ಪೈಕಿ ಕಾಮಗೇತಿ ವಂಶದ ಮದಕರಿ ನಾಯಕನ ಮೈದುನ ಗುತ್ಯಪ್ಪ ನಾಯಕ 1475ರಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ಏಕಶಿಲೆಯಿಂದ 16 ಅಡಿ ಎತ್ತರದ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ಗಣಪನ ಮುಂದೆ ಕೈಮುಗಿದು ನಿಂತರೆ, ಆಸೀನನಾದ ಗಣಪನ ಮೊಳಕಾಲಿನ ಬಳಿಗೂ ನಾವು ನಿಲುಕುವುದಿಲ್ಲ.

ಕುಜದೋಷ ನಿವಾರಕ
ಈ ಬಯಲು ಗಣಪ ವಿಶೇಷವಾಗಿ ಕುಜದೋಷ ನಿವಾರಕ ಎಂಬ ನಂಬಿಕೆಯಿದೆ. ಗಣಪತಿಯ ವಿಗ್ರಹದ ಎಡ ಭಾಗದಲ್ಲಿ ನರಸಿಂಹ ದೇವರ ಮುಖದ ಚಿತ್ರವೂ ಇದೆ. ಜತೆಗೆ ಕುಳಿತ ಭಂಗಿಯಲ್ಲಿರುವ ಗಣೇಶ ಸಾಕ್ಷಾತ್‌ ತಾಯಿ ಪಾರ್ವತಿಯ ತೊಡೆಯ ಮೇಲೆ ಆಸೀನನಾದಂತೆ ಭಾಸವಾಗುತ್ತಾನೆ. ಕುಜದೋಷ ಪರಿಹಾರಕ್ಕಾಗಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಮಳೆ ತರುವ ಗಣಪ
ಹೊಳಲ್ಕೆರೆಯು ಬಯಲುಸೀಮೆಯ ಭಾಗವಾಗಿದ್ದು, ಇಲ್ಲಿ ಸಕಾಲಕ್ಕೆ ಮಳೆ ಆಗುವುದು ಕಡಿಮೆ. ಇಂಥ ಸಂದರ್ಭದಲ್ಲಿ ಸುತ್ತಮುತ್ತಲಿನ ಊರುಗಳ ಭಕ್ತರು, ಈ ಗಣಪನಿಗೆ ನೂರೊಂದು ಬಿಂದಿಗಳ ನೀರಿನಿಂದ ಅಭಿಷೇಕ ಮಾಡಿ, ಮಳೆಗಾಗಿ ಪ್ರಾರ್ಥಿಸುತ್ತಾರೆ. ಹಾಗೆ ಪೂಜಿಸಿದ ಕೆಲವೇ ದಿನಗಳಲ್ಲಿ ಮಳೆಯಾದ ನಿದರ್ಶನಗಳು ಸಾಕಷ್ಟಿವೆ.

ಅಲಂಕಾರಕ್ಕೆ 90 ಕಿಲೋ ಬೆಣ್ಣೆ
ಜಡೆ ಗಣಪನಿಗೆ ಬೆಣ್ಣೆಯ ಅಲಂಕಾರ ಬಹಳ ಶ್ರೇಷ್ಠ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸಿದಾಗ ಗಣಪನಿಗೆ ತಮ್ಮ ಶಕ್ತಾನುಸಾರ ಬೆಣ್ಣೆಯಿಂದ ಅಲಂಕಾರ ಮಾಡಿಸಿ, ನೈವೇದ್ಯ ಸಮರ್ಪಿಸುತ್ತಾರೆ. ಕುಂಕುಮದಿಂದ, ಬೆಳ್ಳಿ ಆಭರಣಗಳಿಂದಲೂ ಗಣಪನನ್ನು ವಿಶೇಷವಾಗಿ ಅಲಂಕರಿಸುವ ಸಂಪ್ರದಾಯ ಇಲ್ಲಿದೆ. ಈ ಬೃಹತ್‌ ಗಣಪನನ್ನು ಬೆಣ್ಣೆಯಿಂದ ಪರಿಪೂರ್ಣವಾಗಿ ಅಲಂಕರಿಸಲು, ಸುಮಾರು 80 ರಿಂದ 90 ಕಿಲೋ ಬೆಣ್ಣೆ ಬೇಕಾಗುತ್ತದೆ. ಆಗ ಈತನ ಅಂದವನ್ನು ನೋಡಲು, ಎರಡು ಕಂಗಳು ಸಾಲದಾಗುತ್ತವೆ.

ದರುಶನಕ್ಕೆ ದಾರಿ…
ಚಿತ್ರದುರ್ಗ- ಶಿವಮೊಗ್ಗ ನಡುವೆ ಹೊಳಲ್ಕೆರೆಯಿದ್ದು, ಶಿವಮೊಗ್ಗದಿಂದ 80, ದಾವಣಗೆರೆಯಿಂದ 60, ಚಿತ್ರದುರ್ಗದಿಂದ 35 ಕಿ.ಮೀ ಅಂತರವಿದೆ. ಚಿಕ್ಕಮಗಳೂರು ಕಡೆಯಿಂದಲೂ ಹೊಸದುರ್ಗ ಮಾರ್ಗವಾಗಿ ಇಲ್ಲಿಗೆ ಬರಬಹುದು.

– ತಿಪ್ಪೇಸ್ವಾಮಿ ನಾಕೀಕೆರೆ

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.