ಶಂಭುಲಿಂಗ ಎಂಬ ಪೊಲಿಟಿಕಲ್‌ ದೇವರು


Team Udayavani, Jun 10, 2017, 12:32 PM IST

57.jpg

 ಬೀದರದ ಸುಕ್ಷೇತ್ರ ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ಮತ್ತೆ ಪ್ರಜ್ವಲಿಸುತ್ತಿದ್ದಾನೆ. 
ಚುನಾವಣೆ ಸಮೀಪಿಸುತ್ತಿದೆ. ವರವ ಕೊಡು ಎಂದು ದೇವರನ್ನು ಪ್ರಾರ್ಥಿಸುವ ಮಂದಿ ಹೆಚ್ಚಾಗುತ್ತಿದ್ದಾರೆ. ಜಿಲ್ಲೆಯ ಸುಕ್ಷೇತ್ರ ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಹರಕೆ ಹೊತ್ತರೆ ರಾಜಕಾರಣಿಗಳ ಇಷ್ಟಾರ್ಥ ಸಿದ್ಧಿಸುತ್ತೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಭೇಟಿ ಇತ್ತಾಗ ಶುರುವಾಯ್ತು ಪಂಕ್ತಿ ದರ್ಶನ. 

ಎರಡನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷೆ ಹಿಡಿದಿರುವ ಡಾ. ಜಿ. ಪರಮೇಶ್ವರ್‌ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಮಾಡಿದ್ದು ನಂಬಿಕೆ ಮತ್ತೂಮ್ಮೆ ಎಲ್ಲರಿಗೂ ಜ್ಞಾಪಿಸಿದಂತೆ ಆಗಿದೆ. 

ಚುನಾವಣೆ ಬಿರುಸುಕೊಂಡಾಗ ಮತ್ತು ರಾಜಕಾರಣದಲ್ಲಿ ಸಂಕಷ್ಟ ಬಂದಾಗಲೆಲ್ಲ ರಾಜಕೀಯ ನಾಯಕರುಗಳಿಗೆ ಮೊದಲು ನೆನಪಾಗುವುದೇ ಈ ರೇಕುಳಗಿ ದೇವಸ್ಥಾನ.  ನೀವು ಪ್ರಧಾನಿ, ಮುಖ್ಯಮಂತ್ರಿ ಅಥವಾ ಮಂತ್ರಿ ಆಗ್ಬೇಕಂದ್ರೆ ಬೀದರಗೆ ಬರಲೇಬೇಕು ಎಂಬ ಮಾತು ಸತ್ಯವಾಗಿದೆ.  ಗೆದ್ದ ಮೇಲೆ ಬೀದರ ಅನ್ನು ಜ್ಞಾಪಿಸಿಕೊಳ್ಳುತ್ತಾರೋ ಇಲ್ಲೋ, ಆದರೆ ಗೆಲ್ಲಲ್ಲು ಬೀದರ್‌, ಈ ದೇವಸ್ಥಾನವಂತೂ ಬೇಕೇ ಬೇಕು ಅನ್ನೋದು ಖರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತಂತೆ ಚರ್ಚೆಗಳು ಆರಂಭವಾದಾಗಲೇ  ಡಾ. ಪರಮೇಶ್ವರ ತಿಂಗಳಲ್ಲೇ ಎರಡು ಬಾರಿ ಈ ಸನ್ನಿಧಿಗೆ ಭೇಟಿ ನೀಡಿದ್ದರು. ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಗಾಗಿ ಪ್ರಾರ್ಥಿಸಲು ಬಂದಿದ್ದೇನೆ ಅಂತ ಮಾತಿಗೆ ಬಣ್ಣ ಬಳಿದರೂ, ಮತ್ತೂಂದು ಅವಧಿಯ ಕೆಪಿಸಿಸಿ ಗಾಧಿಗಾಗಿ ಹರಕೆ, ವಿಶೇಷ ಪೂಜೆ ಎಂಬುದು ಸುಳ್ಳಲ್ಲ. 

 ಪ್ರಣಬ್‌ ಮುಖರ್ಜಿ ಅವರ ಸೋದರ ಸಂಬಂಧಿ ಶಾಂತಾ ಮುಖರ್ಜಿ ಅವರಿಗೆ ಶಂಭುಲಿಂಗೇಶ್ವರ ಮಹಿಮೆ ಗೊತ್ತಿದೆ. ಅವರ ಸಲಹೆಯಂತೆ 2000ರಲ್ಲಿ ರೇಕುಳಗಿ ಮೊದಲ ಬಾರಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ನಂತರ ಪ್ರಧಾನಿ ಆಕಾಂಕ್ಷಿ$ಯಾಗಿದ್ದ ಪ್ರಣಬ್‌ 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಪೂಜೆ ಸಲ್ಲಿಸಿದ್ದರು. “ದೇಶದ ಪ್ರಮುಖ ಹುದ್ದೆಗಳನ್ನು ಅಲಂಕರಿಸುವಿರಿ’ ಎಂಬ ಆಶೀರ್ವಾದ ಪಡೆದು ಮತ್ತೆ ದೇಗುಲಕ್ಕೆ ಬಂದು ಹರಕೆ ತೀರಿಸುವುದಾಗಿ ಬೇಡಿಕೊಂಡಿದ್ದರಂತೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಅವರ ಸೊಸೆ ಚಿತ್ರಲೇಖಾ ಮತ್ತು ಮೊಮ್ಮಗ ಅರ್ಜುನ ರೇಕುಳಗಿ ದೇಗುಲದಲ್ಲಿ ಕಾಣಿಸಿಕೊಂಡಿದ್ದರು. 

 ಶಂಭುಲಿಂಗೇಶ್ವರ ಕೃಪೆಗಾಗಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದಾಗ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಸುಕ್ಷೇತ್ರದ ದರ್ಶನ ಪಡೆದಿದ್ದು ಉಂಟು. ಉದ್ಯಮಿ ಅನಿಲ್‌ ಅಂಬಾನಿ, ಎಸ್‌.ಎಂ ಕೃಷ್ಣ, ಧರಂಸಿಂಗ್‌, ಮಾಜಿ ಸಚಿವ ಎ.ಕೆ ಆಂಟನಿ, ಸಂಸದ ಎಚ್‌. ವಿಶ್ವನಾಥ ಶಾಸಕರಾದ ರೇವಣ್ಣ, ಕರುಣಾಕರರೆಡ್ಡಿ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಹೈ-ಕ ಭಾಗದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಶಂಭುಲಿಂಗೇಶ್ವರ ಮಂದಿರಕ್ಕೆ ಭೇಟಿ ನೀಡಿದವರಿಗೆಲ್ಲ ಜಯ ನಿಶ್ಚಿತ ಎಂಬ ಪರಿಪಾಠ ಇದೆ ಎನ್ನುತ್ತಾರೆ ಮುಖ್ಯ ಅರ್ಚಕ ಎನ್‌.ವಿ ರೆಡ್ಡಿ ಗುರೂಜಿ. 

ಹರಕೆ ಹೊತ್ತಿದ್ದರು ಪರಂ

ಡಾ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿ ಎರಡನೇ ಅವಧಿಗೂ ಮುಂದುವರೆಯುವ ಆಸಕ್ತಿ ಹೊಂದಿದ್ದರು. ಅದಕ್ಕಾಗಿ ರೇಕುಳಗಿ ಶ್ರೀ ಶಂಭುಲಿಂಗೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದರು. ದೇವರ ಕೃಪೆ ಅವರ ಮೇಲೆ ಮತ್ತೂಮ್ಮೆ ತೋರಿದ್ದು, ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಮೇಲೆ ಅವರು ಅಪಾರ ನಂಬಿಕೆ, ಭಕ್ತಿಯನ್ನು ಹೊಂದಿದ್ದಾರೆ.
“ವಿಐಪಿ ದೇವಸ್ಥಾನ

ಹೈ-ಕ ಭಾಗದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಶಂಭುಲಿಂಗೇಶ್ವರ ಮಂದಿರಕ್ಕೆ ಭೇಟಿ ನೀಡಿದವರಿಗೆಲ್ಲ ಜಯ ನಿಶ್ಚಿತ ಎಂಬ ಪರಿಪಾಠ ಇದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದವರ ಪಟ್ಟಿ ಬೆಳೆಯುತ್ತ ಹೋಗುತ್ತದೆ ಎನ್ನುತ್ತಾರೆ ಮುಖ್ಯ ಅರ್ಚಕ ಎನ್‌.ವಿ ರೆಡ್ಡಿ ಗುರೂಜಿ. 

ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.