
ಸೌತೇಕಾಯಿಗೆ ಮನಸೋತು ಬಯಲಲಿ ಕುಳಿತು…
ಪುರದ ಪುಣ್ಯಂ ಸೌತಡ್ಕ
Team Udayavani, Sep 14, 2019, 5:25 AM IST

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಮೀಪವಿರುವ ಪ್ರಸಿದ್ಧ ಪುಣ್ಯಕ್ಷೇತ್ರ. ಒಮ್ಮೆ ದನ ಕಾಯುವ ಹುಡುಗರಿಗೆ, ಸಹಸ್ರಾರು ವರ್ಷಗಳ ಹಿಂದಿನ ಗಣಪತಿ ದೇಗುಲದ ಮೂರ್ತಿಯು ಸಿಕ್ಕಿತು. ಆ ಹುಡುಗರು ವಿಗ್ರಹವನ್ನು ಮಣ್ಣಿಂದ ತೆಗೆದು, ಅದನ್ನು ಹೊತ್ತುಕೊಂಡು, ದಾರಿಯುದ್ದಕ್ಕೂ ಗಣಪನನ್ನು ಹೊಗಳುತ್ತಾ, ಒಂದು ಮರದ ಬುಡದಲ್ಲಿ ಇಟ್ಟರಂತೆ. ಅಲ್ಲಿಯೇ ಸಿಕ್ಕ ಕಲ್ಲುಗಳಿಂದ ಅದಕ್ಕೆ ಕಟ್ಟೆಯನ್ನು ನಿರ್ಮಿಸಿ, ತಾವು ಸೇವಿಸಲು ತಂದಿದ್ದ ಸೌತೇಕಾಯಿಯ ಮಿಡಿಗಳನ್ನು ನೈವೇದ್ಯಕ್ಕೆ ಇಟ್ಟರಂತೆ. ಕ್ರಮೇಣ ಈ ಗಣಪನಿಗೆ ಸೌತೇಕಾಯಿ ಸಮರ್ಪಿಸಿ, ಪೂಜಿಸುವುದು ವಾಡಿಕೆ ಆಯಿತು. ಅಂದಿನಿಂದ ಈ ಕ್ಷೇತ್ರಕ್ಕೆ “ಸೌತಡ್ಕ’ (“ಅಡ್ಕ’ ಎಂದರೆ, “ಬಯಲು’) ಎಂಬ ಹೆಸರು ಬಂತು. ಈಗಲೂ ಇಲ್ಲಿನ ಗಣಪ, ಬಯಲು ನಿವಾಸಿ.
– ಚಂದನ್ ಸುಬ್ರಹ್ಮಣ್ಯ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.