
ರಾಜನಿಗೆ ಕೈಕಾಲು ಮೊಳೆತ ಊರು
ಪುರದ ಪುಣ್ಯಂ- ಮಳೂರು
Team Udayavani, Dec 7, 2019, 4:00 AM IST

ಚನ್ನಪಟ್ಟಣಕ್ಕೆ ಅಂಟಿಕೊಂಡಂತೆ ಇರುವ ಊರು ಇದು. ಹಿಂದೆ ಇಲ್ಲಿ ಸಾರಂಗಧರ ಎಂಬ ಒಬ್ಬ ರಾಜನಿದ್ದ. ಒಮ್ಮೆ ಅವನ ಮೇಲೆ ಶತ್ರುಗಳ ದಾಳಿ ನಡೆದು, ಅವನ ಕೈಕಾಲುಗಳನ್ನು ಕತ್ತರಿಸಿ, ನಿರ್ಮಲ ಎಂಬ ನದಿಗೆ ಎಸೆದರಂತೆ. ಅಪಾರ ನೋವು, ಪ್ರಾಣ ಹೋಗುವಂಥ ಆ ಸ್ಥಿತಿಯಲ್ಲೂ ಸಾರಂಗಧರ ಭಗವನ್ನಾಮ ಜಪಿಸುತ್ತಾ, ಇಲ್ಲಿನ ಅಪ್ರಮೇಯ ಸ್ವಾಮಿ ದೇವಾಲಯವನ್ನು ಹರಸಾಹಸ ಪಟ್ಟು ತಲುಪಿದನಂತೆ. ಸ್ವಾಮಿಯ ದರುಶನವಾದ ಕೂಡಲೇ ಅವನಿಗೆ ಕೈಕಾಲುಗಳು ಮೊಳೆತು, ಮೊದಲಿನ ರೂಪ ಬಂದಿತು ಎನ್ನುವುದು ಪೌರಾಣಿಕ ನಂಬಿಕೆ. “ಮುಳೈತ್ತೂರು’ ಎನ್ನುವ ಮೂಲ ಹೆಸರಿನಿಂದ ಈಗ “ಮಳೂರು’ ಆಗಿದೆ ಎನ್ನಲಾಗುತ್ತದೆ. ಇಲ್ಲಿರುವ ಅಪ್ರಮೇಯ ಸ್ವಾಮಿಗೆ ಶ್ರೀರಾಮನು, ಹೋಮ- ಹವನಾದಿಗಳನ್ನು ಮಾಡಿ, ಪೂಜಿಸಿದ್ದ ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.