ವಿನಾಯಕ ಚಿತ್ರಕಥಾ


Team Udayavani, Sep 7, 2019, 1:43 PM IST

bhu-3

ಪೌರಾಣಿಕ ಜಗತ್ತಿನ ಅದ್ಭುತಗಳನ್ನು ಒಂದು ಸಾಲಿನಲ್ಲಿ ನಿಲ್ಲಿಸುತ್ತಾ ಹೋದರೆ, ಅಲ್ಲಿನ ಪ್ರಥಮಪಂಕ್ತಿಯಲ್ಲಿ ಗಜಮುಖನೇ ಕಾಣಿಸುತ್ತಾನೆ. ಅದರಲ್ಲೂ ಮಕ್ಕಳಿಗೆ ಗಣಪತಿಯ ರೂಪವೇ ಒಂದು ಕುತೂಹಲದ ಆಕರ್ಷಣೆ. ಮನುಷ್ಯನಂತೆ ಇದ್ದ ದೇವರಿಗೆ, ಆನೆಯ ಮುಖ ಹೇಗೆ ಬಂತು ಎನ್ನುವ ಪ್ರಶ್ನೆ ಎಲ್ಲರ ಬಾಲ್ಯದಲ್ಲೂ ಕಾಡಿದ ಸಹಜ ಸುಂದರ ಪ್ರಶ್ನೆ. ಗಣೇಶನ ಈ ಜನ್ಮವೃತ್ತಾಂತವನ್ನು ತೆರೆದಿಡುವ ಪಾರ್ಕ್‌ ಒಂದು ಜನರನ್ನು ಸೆಳೆಯುತ್ತದೆ. ಹೊನ್ನಾವರದಿಂದ ಇಡಗುಂಜಿಗೆ ಬರುವ ದಾರಿಯಲ್ಲಿ ವಿನಾಯಕ ಪ್ರತಿದಿನ ಬರುವ ಪ್ರವಾಸಿಗರನ್ನು ಸ್ವಾಗತಿಸಿ, ತನ್ನ ಜನ್ಮ ವೃತ್ತಾಂತವನ್ನು ಹೇಳುತ್ತಿದ್ದಾನೆ. ಈ “ವಿನಾಯಕ ವನ’ದಲ್ಲಿರುವ ಪ್ರತಿ ಕಲಾಕೃತಿಗಳೂ, ಜೀವದೃಶ್ಯಗಳಾಗಿ ಕತೆ ಹೇಳುತ್ತವೆ.

ಪಾರ್ವತಿ ಸ್ನಾನಕ್ಕೆ ಹೋಗುವಾಗ ಬಾಗಿಲು ಕಾಯುವ ಗಣಪ; ಅದೇ ಸಮಯಕ್ಕೆ ಆಗಮಿಸಿದ ಶಿವನನ್ನು ತಡೆದ ಬಾಲ ಗಣಪ; ಕೋಪಗೊಂಡ ಶಿವನು ಗಣಪನ ಶಿರವನ್ನು ಕತ್ತರಿಸಿದಾಗ, ಪಾರ್ವತಿಯ ಗೋಳಾಟ; ಆಗ ವ್ಯಕ್ತವಾಗುವ ಪಾರ್ವತಿಯ ಮಾತೃಪ್ರೇಮ… ಇವೆಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇಲ್ಲಿನ ಕಲಾಕೃತಿಗಳಲ್ಲಿ ನಿರೂಪಿಸಲಾಗಿದೆ. ಶಿವನ ಸೂಚನೆಯಂತೆ ಉತ್ತರ ದಿಕ್ಕಿಗೆ ಮಲಗಿದ ವ್ಯಕ್ತಿಯ ತಲೆಯನ್ನು ತರಲು ಹೊರಟವನಿಗೆ ಕಂಡಿದ್ದು ಆನೆ. ಅದರ ತಲೆಯನ್ನು, ಗಣಪನಿಗೆ ಜೋಡಿಸಿ, ಜೀವ ತುಂಬಿದ ರೋಮಾಂಚಕ ಕ್ಷಣ, ಹಾವನ್ನು ಬಿಗಿದು ಕಟ್ಟಿದ ಡೊಳ್ಳು ಹೊಟ್ಟೆಯ ಲಂಬೋದರನ ಬದುಕಿನ ನಾನಾ ಸನ್ನಿವೇಶಗಳು ಇಲ್ಲಿ ಹೃನ್ಮನ ಸೆಳೆಯುವಂತೆ ಕೆತ್ತಲಾಗಿದೆ.

ಇದೆಲ್ಲದರ ಜತೆಗೆ ಪೋಷಕರಿಗೊಂದು ಪಾಠವೂ ಇಲ್ಲಿ ದರ್ಶನವಾಗುತ್ತದೆ. ಯಾವುದೇ ಮಗು “ವಿಶೇಷ’ ರೂಪದಲ್ಲಿ ಜನಿಸಿದರೆ ಅದನ್ನು ಕಡೆಗಣಿಸಬೇಡಿ, ಪ್ರೀತಿಯಿಂದ ನೋಡಿಕೊಳ್ಳಿ. ಅದಕ್ಕೆ ಆತ್ಮವಿಶ್ವಾಸ ತುಂಬಿ. ಅದಕ್ಕೂ ವಿಶೇಷ ಶಕ್ತಿಯಿದೆ. ಅದನ್ನು ಗುರುತಿಸುವ ಕೆಲಸ ಮಾಡಿ… ಎನ್ನುವ ಸಂದೇಶದ ಮೂಲಕ ಈ ಗಣಪನ ದೃಶ್ಯಗಳು ನಮ್ಮ ಮನದಾಳದಲ್ಲಿ ನೆಲೆ ನಿಲ್ಲುತ್ತವೆ.

 

ಚಿತ್ರ-ಲೇಖನ: ಟಿ. ಶಿವಕುಮಾರ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.