ಉತ್ತಮ ಸಾಧಕ ಯಾರು?


Team Udayavani, Oct 26, 2019, 4:05 AM IST

uttama-sad

ಸ್ವಾಮಿತ್ವ ಸಂಪಾದನೆ ಮತ್ತು ಅದರ ಪರಿಪಾಲನೆ, ಅಷ್ಟು ಸುಲಭದ ಕೆಲಸವಲ್ಲ. ಸ್ವಾಮಿಗಳಿಗೆ ಎರಡು ಕಣ್ಣುಗಳಿದ್ದರೆ, ಸಾವಿರಾರು- ಲಕ್ಷಾಂತರ ಕಣ್ಣುಗಳು ಅವರನ್ನು ನೋಡುತ್ತಿರುತ್ತವೆ. ಗುಣಗಳಿಗಿಂತ ದೋಷಗಳನ್ನೇ ಗ್ರಹಿಸುವವರು ಹೆಚ್ಚು. ಇದನ್ನೆಲ್ಲ ಪರಿಭಾವಿಸಿದ ಸಾಧಕ, ಸಮರ್ಥನೇ ಆಗಿರಬೇಕು. ಒಂದು ಮನೆಗೆ ಸೊಸೆಯಾಗಿ, ಗೃಹಿಣಿಯಾಗಿ ಬರುವ ಕನ್ಯೆಯು ಆರು ಗುಣಗಳಿಂದ ಕೂಡಿರಬೇಕಂತೆ.

ಅಂದರೆ, ಅಂಥವಳು ಕುಲವನ್ನು ಉದ್ಧರಿಸುವಳಂತೆ, ಸತಿಯಾದವಳಲ್ಲಿ ಕಿಂಕರತನ, ಸೂಕ್ಷ್ಮಮತಿ, ಸೌಂದರ್ಯ, ಸಹನಶೀಲತೆ, ಮಾತೃ ವಾತ್ಸಲ್ಯ, ಅನುರಾಗ- ಈ ಗುಣಗಳಿದ್ದಾಗ, ಗಂಡನನ್ನು ಹಾಗೂ ಮನೆಯವರನ್ನು ಗೆಲ್ಲಬಲ್ಲಳು. ಉತ್ತಮ ಗೃಹಿಣಿಯಾಗಿ ಬಾಳಬಲ್ಲಳು. ಗುರುವಿನಲ್ಲಿ ಕರುಣೆ, ಸತ್ಕಲೆ, ಶಾಸ್ತ್ರಪರಿಣತಿ, ಸೌಂದರ್ಯತೆ, ನಿರಾಶೆಗಳೆಂಬ ಐದು ಗುಣಗಳಿರಬೇಕು.

ಜ್ಞಾನ, ಐಶ್ವರ್ಯ, ಯಶಸ್ಸು, ಧರ್ಮ, ವೀರ್ಯ, ತೇಜಸ್ಸುಗಳೆಂಬ 6 ಆಂತರಿಕ ಸದ್ಗುಣ ಸಂಪತ್ತನ್ನು ಸಾಧಿಸಬೇಕು. ಗುರು, ಜಂಗಮನಿಗೆ ಜ್ಞಾನವೇ ಮುಖ್ಯ. ಲೌಕಿಕ ಹಾಗೂ ಅಲೌಕಿಕ- ಎರಡೂ ಜ್ಞಾನವಿರಬೇಕು. ಭೌತಿಕ ಸಂಪತ್ತಲ್ಲದೆ, ಅಧ್ಯಾತ್ಮಿಕ ಐಶ್ವರ್ಯಭರಿತನಾಗಿರಬೇಕು. ಯಾವುದೇ ಕಾರ್ಯದಲ್ಲಿ ಜಯಶಾಲಿ­ಯಾಗುವ ಆತ್ಮಬಲವಿರಬೇಕು. ಧರ್ಮದ ಕರ್ತವ್ಯ ಪಾರಾಯಣ­­­ನಾಗಬೇಕು. ಆತ್ಮಬಲಶಾಲಿಯಾಗಿರಬೇಕು.

ತೇಜಸ್ಸಿನಿಂದಲೇ ಆತ ಪರಿಪೂರ್ಣ. ಸ್ವತಃ ತಾನು ಕರ್ತವ್ಯನಿಷ್ಠನಾದರೆ ತನ್ನನ್ನು ಅವಲೋಕಿ ಸುವ ಶಿಷ್ಯರೂ ಅದನ್ನು ಅನುಸರಿಸುತ್ತಾರೆ. ಸದ್ಗುರುವಿನಲ್ಲಿ ಶಿಷ್ಯರನ್ನು ಉದ್ಧರಿ­ಸುವ ಮಹತ್ವಾಕಾಂಕ್ಷೆ ಇರಬೇಕು. ತಾನು ತ್ಯಾಗಿಯಾಗಿ ಭಕ್ತರಿಗೆ ಲೌಕಿಕ ಹಾಗೂ ಅಲೌಕಿಕ ಸಿರಿಸಂಪತ್ತನ್ನು ದಯಪಾಲಿಸ‌ಬೇಕು.

ಅಯಂ ನಿಜಃ ಪರೋ ವೇತ್ತಿ ಗಣನಾ ಲಘುಚೇತಸಾಮ್‌|
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌||

ಸ್ವಾಮಿಯೆಂದರೆ ಯಜಮಾನ, ಒಡೆಯ, ಪ್ರಭು, ರಾಜ, ಗುರು ಇತ್ಯಾದಿ ಅರ್ಥಗಳಿವೆ. ಸರ್ವತಂತ್ರ ಸ್ವತಂತ್ರನಾಗಿ ಸಮಾಜದ ಯಜಮಾನನಾಗಬೇಕಾದರೆ, ಸ್ವಾಮಿಗಳಾದವರ ಜವಾಬ್ದಾರಿ ಬಹಳವಿದೆ. ಹಾನಗಲ್ಲ ಕುಮಾರಸ್ವಾಮಿಗಳಿಗೆ ವೈರಾಗ್ಯದ ಮಲ್ಲಣಾರ್ಯರು, “ನೀವು ಯಾರು? ನೀವೇ ಸ್ವಾಮಿಗಳೇನು?’ ಎಂದು ಪ್ರಶ್ನಿಸಿದಾಗ, ಪೂಜ್ಯರ ಉತ್ತರ ಮಾರ್ಮಿಕವಾಗಿದೆ. “ಭಕ್ತರು ಸ್ವಾಮಿಗಳೆಂದೇನೋ ಕರೆಯುತ್ತಾರೆ.

ಈ ಜಗತ್ತೆಲ್ಲ ನನ್ನದು, ಜಗತ್ತಿನ ಜನರೆಲ್ಲ ನನ್ನವರೆಂಬ ಭಾವವೇ ಸ್ವಾಮಿತ್ವ’ ಎಂದು ಹೇಳಿದರಂತೆ. ಸಣ್ಣಮನಸ್ಸಿನ ಮನುಷ್ಯನು, “ಇವನು ನನ್ನವನು, ಅವನು ಬೇರೆಯವನು’ ಎಂದು ಭಾವಿಸಿದರೆ, ವಿಶಾಲ ಮನೋಭಾವದ ಮಹಾನುಭಾವರು ಜಗತ್ತೇ ನನ್ನ ಪರಿವಾರವೆಂದು ಭಾವಿಸುತ್ತಾರೆ. ಸ್ವಾಮಿ ಆದವನು ಪೂರ್ವಾಶ್ರಮದ ಅಭಿಮಾನ ತೊರೆದು, ಪ್ರಪಂಚದ ಮಾನವರನ್ನು ಪ್ರೀತಿಯಿಂದ ಕಾಣಬೇಕು. ಅದೇ ಶ್ರೇಷ್ಠ ಸ್ವಾಮಿತ್ವ.

* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.