ಹಳದಿ ಮೂತಿ ಮರಕುಟುಕ 


Team Udayavani, Dec 9, 2017, 12:50 PM IST

5-a.jpg

 ಹಳದಿ ಮೂತಿ ಮರಕುಟುಕ ಹದಿನೆಂಟು ಸೆಂ.ಮೀ ದೊಡ್ಡದಿದ್ದು, ಪಿಕಳಾರದಷ್ಟು ಗಾತ್ರ ಇರುವ ಕೆಂಪು ಹಳದಿ, ಬಿಳಿ ಮಿಶ್ರ ಬಣ್ಣದ ಹಕ್ಕಿ ಇದು.Yellow Fronted pied woodpecker(Dendrocoposmahrattensis ) R  BulBul ಕಪ್ಪು ಬೆನ್ನು ಮತ್ತು ರೆಕ್ಕೆಯ ಮೇಲೆ ಅಡ್ಡಾದಿಡ್ಡಿ ಬಿಳಿ ಚುಕ್ಕೆ ಇದೆ. ಪುಕ್ಕದ ಅಡಿ, ಹೊಟ್ಟೆ ನೆತ್ತಿಯಲ್ಲಿ ಚಿತ್ತಳೆ ಕೆಂಪು ಬಣ್ಣದ ಗರಿಗಳಿವೆ. ಸ್ವಲ್ಪ ಮೇಲ್ಮುಕ ಡೊಂಕಾಗಿರುವ ಇದರ ಬಾಲ ಮರ ಹತ್ತುವಾಗ 3ನೇ ಕಾಲಿನಂತೆ ಉಪಯೋಗಿಸುತ್ತದೆ.  ಇತರ ಮರಕುಟುಕಗಳಿಗಿರುವಂತೆ ಬಲವಾದಕೊಕ್ಕಿದೆ ಇದಕ್ಕೆ. 

  ಕುಟು, ಕುಟು ಎಂದು ಮರಕುಟ್ಟಿ, ಅದರಲ್ಲಿ ರಂಧ್ರ ಕೊರೆಯಲು ಮತ್ತು ಹಾಗೆ ಕುಟ್ಟಿದಾಗ ಬರುವ ಮರದ ಹುಳುಗಳನ್ನು ಕಬಳಿಸಲು ಸಹಾಯಕಾರಿಯಾಗಿದೆ. ಇದರ ಉದ್ದ ಸಪೂರಾದ ನಾಲಿಗೆಯಲ್ಲಿ ಮುಳ್ಳಿನಂತಿದೆ.  ರಂಧ್ರದಲ್ಲಿ ಸೇರಿಸಿ ಈ ನಾಲಿಗೆಯಿಂದ  ಹುಳಗಳನ್ನು ಎಳೆದು ತಿನ್ನುತ್ತದೆ. ಉಳಿದ ಮರಕುಟುಕಗಳ ಚುಂಚು ತುದಿಯಲ್ಲಿ ಸ್ವಲ್ಪ ಮೊಂಡಾಗಿದೆ. ಆದರೆಇದರ ಚುಂಚು ತುದಿ ಚೂಪಾಗಿದೆ. ಇತರ ಮರಕುಟುಕಗಳ ಚುಂಚಿಗೆ ಹೋಲಿಸಿದರೆ ಇದರ ಚುಂಚು ಸ್ವಲ್ಪ ಚಿಕ್ಕದೇ.  ಎದೆ, ಕುತ್ತಿಗೆ ಭಾಗದಲ್ಲಿ ತಿಳಿ ಬಿಳಿಬಣ್ಣದ ಮೇಲೆ ತಿಳಿ ಕಂದುಬಣ್ಣದ ಮಚ್ಚೆ ಇದೆ. ಮುಂದೆಲೆ ಮತ್ತು ಮುಖ, ಹೊಟ್ಟೆ ಭಾಗದಲ್ಲಿ ತಿಳಿ ಹಳದಿ ಬಣ್ಣ ಸಹ ಇದೆ. ಚಿಕ್ಕದಾದರೂ ಬಣ್ಣ ಬಣ್ಣಗಳಿಂದ ಕೂಡಿದ ಸುಂದರ ಮರಕುಟುಕ ಇದು. ಒಂಟಿಯಾಗಿ ಅಥವಾ ಜೋಡಿಗಳಲ್ಲಿ  ಕಡಿಮೆ ಮರಗಳಿರುವ ಭಾಗದಲ್ಲಿ ಇರುತ್ತವೆ. ಒಣಗಿದ ಮರಗಳನ್ನು ಏರುತ್ತಾ , ಕೆಲವೊಮ್ಮೆ ಸುತ್ತುತ್ತಾ ,ಜಾರಿದಂತೆ ಕೆಳಗೆ ಜಾರುತ್ತಾ ತೋಗಟೆಯನ್ನು ತನ್ನಚುಂಚುನಿಂದ ಹಿಗ್ಗಿಸಿ ಅದರ ಅಡಿ ಇರುವ ಹುಳ, ಇರುವೆಗೆದ್ದಲು ಮೊಟ್ಟೆ, ತಿನ್ನುತ್ತದೆ. ಹಳ್ಳಿಯ ಪಕ್ಕ ಇರುವ ಉದುರೆಲೆ ಕಾಡು ಇದರ ವಾಸ.  ಸ್ವಲ್ಪದೂರ ಹಾರುತ್ತಾ ಮತ್ತೆ ಸ್ವಲ್ಪದೂರ ತೇಲುತ್ತಾ , ರೆಕ್ಕೆ ಬಡಿಯುತ್ತಾ ಸ್ವಲ್ಪ ಕೀರಲು ದನಿಯಲ್ಲಿ ಕೂಗುತ್ತಾ ಹಾರುತ್ತದೆ.      

ಹಳದಿ ಮೂತಿ ಮರಕುಟಕದ ಕುಟುಂಬವು ಜಗತ್ತಿನಾದ್ಯಂತ ಸುಮಾರು 200 ಜಾತಿಗಳಿವೆ. ಬಾರ್ಬೆಟ್‌ ಹಕ್ಕಿಗಳೂ ಸಹ ಇದರಂತೆ ಮರಕೊರೆಯುತ್ತವೆ. ಕೊರೆದು ಅದರಲ್ಲಿ ಗೂಡು ಮಾಡುತ್ತವೆ. ಆದರೆ ಇದರ ಚುಂಚಿ ಗಿಂತ ಅದರ ಚುಂಚು ದಪ್ಪ ಮತ್ತು ಕುಳ್ಳಾಗಿವೆ. ಹರಿಯಾಣ, ಕಾವಲ್‌ ಪಕ್ಷಿಧಾಮ ಮತ್ತು ಪಶ್ಚಿಮ ಘಟ್ಟದಲಿ Éಇರುವುದನ್ನು ದಾಖಲಿಸಲಾಗಿದೆ. ಗಂಡು, ಹೆಣ್ಣು ಒಂದೇ ರೀತಿಯಾಗಿ ಕಾಣುತ್ತದೆ. ಆದರೆ ಹೊಟ್ಟೆಯ ಮೇಲೆ ಬಾಲದ ಬುಡದಲ್ಲಿ  ಕೆಂಪು ಬಣ್ಣ ಹೆಣ್ಣಿಗೆಇರುವುದಿಲ್ಲ. ಸಂತಾನೋತ್ಪತ್ತಿ  ಮತ್ತು ಅದರ ಸ್ವಭಾವಗಳ ಕುರಿತುಅಧ್ಯಯನ ನಡೆಯಬೇಕಿದೆ. ಸದಾ ಸುತ್ತಗೆಯಂದೆ ತನ್ನ ಚುಂಚಿನಿಂದ ಮರಕುಟ್ಟುತ್ತಿರುವುದು. 

ಅತಿ ತೆಳ್ಳಗಿನ ಇದರ ಕುತ್ತಿಗೆ, ತಲೆಯ ಎಲುಬುವುಗಳನ್ನು ಕಾಪಾಡಲು ಮತ್ತುಇದರ ಮಿದುಳಿಗೆ ಹಾನಿಯಾಗದಂತೆ ರಕ್ಷಿಸಿಕೊಳ್ಳಲು ಇದು ಯಾವತಂತ್ರ ಬಳಸುತ್ತದೆ, ಮರಕುಟ್ಟುವ ವೇಗ,  ಅದರ ಪ್ರಶರ್‌, ಇದು ಇದರ ಅಂಗಾಂಗದ ಮೇಲೆ , ಇಲ್ಲವೇಕುತ್ತಿಗೆಯಮೇಲೆಯಾವುದೇ ಅಡ್ಡ ಪರಿಣಾಮಇರದಂತೆ ಸುರಕ್ಷತಾಕ್ರಮ ಏನು ಮಾಡುತ್ತದೆ ಈ ಎಲ್ಲಾ ವಿಷಯದ ಕುರಿತು ವೈಜಾnನಿಕ ಅಧ್ಯಯನ ನಡೆಸಬೇಕು.  ಹೆಚ್ಚು ಸತ್ಯ ತಿಳಿಯಲು ಸಹಾಯವಾದೀತು. ಗೂಡು ನಿರ್ಮಿಸಲು ಗಂಡು ಹೆಣ್ಣು ಎರಡೂ ಭಾಗಿಯಾಗುತ್ತದೆ. ಇಂತಹ ಗೂಡಿನಲ್ಲಿ ಉಳಿಯುವಾಗ ವಾತಾವರಣದ ಏರು ಪೇರಿಗೆ ಅನುಗುಣವಾಗಿ ಗೂಡಿನ ಒಳಗೆ ಆಗುವ ಚಳಿ ಇಲ್ಲವೆ ಉಷ್ಣತೆಗೆ ಅದು ಹೇಗೆ ಪರಿಹಾರ ಕಂಡುಕೊಳ್ಳುತ್ತದೆ ಅನ್ನೋದೆ ಕುತೂಹಲ ವಿಚಾರ. 

ಜನವರಿಯಿಂದ ಮೇ ಅವಧಿಯಲ್ಲಿ ಇವು ಮೊಟ್ಟೆಇಟ್ಟು ಮರಿ ಮಾಡುತ್ತವೆ. ಕೊರೆದ ಗೂಡು ಸಾಮಾನ್ಯವಾಗಿ 8 ರಿಂದ 10 ಇಂಚು ಆಳ 2ವರೆ ಇಂಚು ವ್ಯಾಸ ಇರುತ್ತದೆ. ಇದರಲ್ಲಿ 2-5 ಬಿಳಿಬಣ್ಣದ ವರ್ತುಲಾಕಾರದ ಮೊಟ್ಟೆ ಇಡುತ್ತದೆ.  11-14 ದಿನ ಕಾವು ಕೊಡುತ್ತವೆ.  ಹೀಗೆ ಅದರ ಪುಟ್ಟ ಮರಿಗಳಿಗೆ ಗುಟುಕು ಕೊಟ್ಟು ತಂದೆತಾಯಿ ಆರೈಕೆ ಮಾಡುತ್ತವೆ. 18 ರಿಂದ 30 ದಿನ ತಂದೆತಾಯಿಯ ಆರೈಕೆಯಲ್ಲಿ ಬೆಳೆದು, ಅನಂತರಗೂಡು ಬಿಟ್ಟು ಸ್ವತಂತ್ರವಾಗಿ ಉಳಿಯುತ್ತವೆ. ಹಿಮಾಲಯದ 1000ಮೀ. ಎತ್ತರದ ಪ್ರದೇಶದಲ್ಲಿ ಮತ್ತು ಭಾರತದ ಉದುರೆಲೆಕಾಡು ಇದರ ವಾಸಸ್ಥಾನ.  ಹಳ್ಳಿ ಸಮೀಪ ಇರುವ ಬಂದಳಕಗಳಿರುವ ಮರ, ಮಾವಿನ ಮರ, ಕೆಲವೊಮ್ಮೆ ಕಾಂಡ್ಲಾ ಗಿಡಗಳು ತುಂಬಿರುವ ನದಿಯಂಚಿನಲ್ಲೂ ಕಾಣಸಿಗುತ್ತದೆ. 

ಚಿಕ್‌. ಚಿಕ್‌, ಚೀಕ್‌ಇಲ್ಲವೇ ಚಿಕ್‌ಚಿಕ್‌ಚೀರ್‌ ಎಂದು ಸ್ವಲ್ಪಕೀರಲು ದನಿಯಲ್ಲಿ ಕೂಗುತ್ತಾ ಹಾರುವುದು ಇದರ ಸ್ವಭಾವ. ಕೆಲವೊಮ್ಮೆ ತಾನು ಹಿಡದಚಿಕ್ಕ ಏಡಿ, ಹುಲ್ಲಿನ ಮಿಡತೆ, ಕಟ್ಟಿರುವೆ, ಗೊದ್ದ, ಇರುವೆ ಎಂದು ಹಳ್ಳಿಗರು ಕರೆಯವದೊಡ್ಡಇರುವೆಗಳನ್ನು ಬೇಟೆಯಾಡಿದ ಸಂಭ್ರಮಕ್ಕೂ ಕೂಗುತ್ತದೆ.

10 ರಿಂದ 15 ಅಡಿ ಎತ್ತರದಲ್ಲಿ ಮರದಟೊಂಗೆಯ ಕೆಳಭಾಗದಲ್ಲಿ ಇದುಗೂಡು ನಿರ್ಮಿಸುವುದು. ಈ ಪುಟ್ಟ ಹಕ್ಕಿಯಲ್ಲಿ ಕುತೂಹಲಕ್ಕೆ ಕಾರಣವಾದ ದನಿ, ಮಿದುಳಿನ ರಚನೆ, ಕಣ್ಣಿನರಕ್ಷಣೆ, ಸದಾಕುಟ್ಟುತ್ತಿದ್ದರೂ ಅದರಕುತ್ತಿಗೆ ಎಲುಬುವುಗಳು ಸವಕಳಿಯಾಗದೇ ಇರುತ್ತವೆ. ಯಾವ ಅಂಶ ಅದಕ್ಕೆಕಾರಣ ಎಂದು ತಿಳಿದರೆ ಮಾನವರ ಮಂಡಿ ಎಲುಬು ಇಲ್ಲವೇ ಮಂಡಿನೋವಿನ ಸಮಸ್ಯೆಗೆ ಪರಿಹಾರ ಸಿಕ್ಕು ಮಾನವರಿಗೂ ಉಪಕಾರವಾದೀತು. ಆದರೆ ಇಂತಹ ಅಧ್ಯಯಯನಕ್ಕೆ ಬೇಕಾದ ಸಲಕರಣೆಗಳಿಲ್ಲ. 

ಪಿ.ವಿ.ಭಟ್‌ ಮೂರೂರು
 

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.