ಎಲ್ಲೆಲ್ಲಿ ನೋಡಿದರೂ ನೀನೇ


Team Udayavani, Nov 30, 2019, 6:07 AM IST

yellelli

ಮಹಾಭಾರತದ ಒಂದು ಪ್ರಸಂಗ. ಅನೌಪಚಾರಿಕ ಸಭೆ. ಶ್ರೀಕೃಷ್ಣ, ಭೀಷ್ಮಾದಿಗಳು, ಕೌರವ- ಪಾಂಡವರು, ಬಂಧುಗಳು ಹಾಗೂ ಅನ್ಯ ಪ್ರಮುಖರು ಅಲ್ಲಿದ್ದರು. ಶ್ರೀಕೃಷ್ಣನು, ಧರ್ಮರಾಜ ಮತ್ತು ದುರ್ಯೋಧನರಿಗೆ ಚಿಕ್ಕ ಸ್ಪರ್ಧೆಯನ್ನು ಮುಂದಿಡುತ್ತಾನೆ. ಪರಸ್ಪರ ಅವಕಾಶವೇ (ಖಾಲಿ ಜಾಗ) ಉಳಿಯದಂತೆ ಯಾವುದಾದರೂ ಒಂದು ವಸ್ತುವಿನಿಂದ ಇಡೀ ಭವನವನ್ನು ತುಂಬಬೇಕು ಎಂಬುದು ಸ್ಪರ್ಧೆಯ ನಿಯಮ.

ದುರ್ಯೋಧನನಿಗೆ ಅತೀವ ಉತ್ಸಾಹ. ರಾಜಸ ಸ್ವಭಾವದವನಾದ ಆತನಿಗೆ ಇದೇ ತನ್ನ ಶ್ರೀಮಂತಿಕೆಯನ್ನು ಎತ್ತಿ ತೋರಿಸಲು ಸದಾವಕಾಶ ಅಂತನ್ನಿಸುತ್ತದೆ. ತನ್ನ ಬಳಿಯಿರುವ ಸಮಸ್ತ ಐಶ್ವರ್ಯವನ್ನೂ ತಂದು ತುಂಬಿಸುತ್ತಾನೆ. ಎರಡು ವಸ್ತುಗಳ ಮಧ್ಯೆ ಸ್ವಲ್ಪವೂ ಅವಕಾಶ ಉಳಿಯಬಾರದು ಎನ್ನುವುದು ಸ್ಪರ್ಧೆಯ ನಿಯಮವಾಗಿತ್ತು. ಎಷ್ಟು ತುಂಬಿದರೂ ಎರಡು ವಸ್ತುಗಳ ನಡುವೆ ಬಿರುಕು ಚಿಕ್ಕದೋ, ದೊಡ್ಡದೋ ಇದ್ದೇ ಇರುತ್ತಿತ್ತು. ಸ್ಪರ್ಧೆಯಲ್ಲಿ ದುರ್ಯೋಧನ ಸೋತ.

ಅಲ್ಲಿಯವರೆಗೂ ಶಾಂತಮಾನಸನಾಗಿ ಕುಳಿತಿದ್ದ ಧರ್ಮರಾಜನು ಎದ್ದು ನಿಂತನು. ಒಳಗೆ ಹೋಗಿ ಮೌನವಾಗಿ ಯಾವ ಆಡಂಬರವೂ ಇಲ್ಲದೆ, ಶ್ರೀಕೃಷ್ಣನ ಮಧುರವಾದ ಸ್ಮರಣೆಯೊಡನೆ, ಸೌಮ್ಯವಾದ ಹೆಜ್ಜೆಯೊಂದಿಗೆ ದೀಪವೊಂದನ್ನು ಆ ಭವನದೊಳಗೆ ತಂದು ಹಚ್ಚಿಟ್ಟನು. ಮರುಕ್ಷಣದಲ್ಲಿ ಇಡೀ ಭವನವನ್ನು ಒಂದು ಬಿಂದುವಿನಷ್ಟು ಜಾಗವನ್ನೂ ಬಿಡದೆ ಬೆಳಕು ವ್ಯಾಪಿಸಿತು. ಯಾವೆರಡು ವಸ್ತುಗಳ ನಡುವೆಯೂ ಬೆಳಕೊಂದೇ ಕಾಣುತ್ತಿತ್ತು. ಎತ್ತ ನೋಡಿದರೂ ಬೆಳಕೇ ಬೆಳಕು.

ನಮ್ಮ ಜೀವನಮೂಲದಲ್ಲಿ ಪರಂಜ್ಯೋತಿಯೊಂದು ಬೆಳಗುತ್ತಿದೆಯಂತೆ. ಸಮಸ್ತ ಪಿಂಡಾಂಡ- ಬ್ರಹ್ಮಾಂಡಕ್ಕೂ ಇದೇ ಮೂಲ. “ಅವನು ಕೋಟಿಕೋಟಿ ಪ್ರಕಾಶವಪ್ಪಾ. ಆದರೂ ಬೆಳದಿಂಗಳಂತೆ ತಂಪಾಗಿದಾನೆ. ಅವನ ತೆಕ್ಕೆಯಲ್ಲಿ ಸಿಕ್ಕಿ ಆನಂದ ತುಂದಿಲರಾಗುತ್ತೇವಪ್ಪಾ’ ಎಂದು ಶ್ರೀರಂಗ ಮಹಾಗುರುಗಳು, ಆ ಮೂಲ ಬೆಳಕಿನ ದರ್ಶನದ ಅನುಭವವನ್ನು ವರ್ಣಿಸುತ್ತಿದ್ದರು. ಅಂಥ ಪರಂಜ್ಯೋತಿಯ ಅವತಾರವಾದ ಶ್ರೀಕೃಷ್ಣ ಪರಮಾತ್ಮನೇ ಉಪಸ್ಥಿತನಾಗಿದ್ದ ಸಭೆ. ಅವನನ್ನು ಪ್ರತಿನಿಧಿಸುವ ದೀಪವೊಂದನ್ನು ಬೆಳಗಿಸಿದ ಧರ್ಮರಾಜ. ವಿಶ್ವವನ್ನೆಲ್ಲಾ ಒಳಗೂ- ಹೊರಗೂ ತುಂಬಿಕೊಂಡಿರುವ ಶಕ್ತಿಯೇ ಅದು.
(ಪಾಕ್ಷಿಕ ಅಂಕಣ)

* ತಾರೋಡಿ ಸುರೇಶ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.