ಆ್ಯಕ್ಷನ್‌ ಗೌಡ

ರೀಮೇಕ್‌ ಅಲ್ಲ, ಸ್ವಮೇಕ್‌

Team Udayavani, Aug 9, 2019, 5:00 AM IST

e-31

‘ನಮಗೆ ಆ್ಯಕ್ಷನ್‌ ಕೂಡಿಬರುವಷ್ಟು ಬೇರೆ ಯಾವುದೂ ಬರೋದಿಲ್ಲ …’

-ಹೀಗೆ ಹೇಳಿ ನಕ್ಕರು ನಿರ್ಮಾಪಕ ರಾಮು. ‘ಕೋಟಿ ರಾಮು’ ಎಂದೇ ಚಿತ್ರರಂಗದಲ್ಲಿ ಕರೆಸಿಕೊಳ್ಳುವ ರಾಮು ಅವರು ಇಲ್ಲಿವರೆಗೆ ತಮ್ಮ ಬ್ಯಾನರ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಔಟ್ ಅಂಡ್‌ ಔಟ್ ಆ್ಯಕ್ಷನ್‌ ಸಿನಿಮಾಗಳಿಂದ ಹಿಡಿದು, ಫ್ಯಾಮಿಲಿ ಡ್ರಾಮಾ, ಲವ್‌ಸ್ಟೋರಿ … ಹೀಗೆ ಬೇರೆ ಬೇರೆ ಜಾನರ್‌ನ ಸಿನಿಮಾಗಳನ್ನು ನೀಡಿದರೂ, ಅವರ ಕೈ ಹಿಡಿದಿರೋದು ಮಾತ್ರ ಆ್ಯಕ್ಷನ್‌ ಸಿನಿಮಾಗಳು. ಅದೇ ಕಾರಣದಿಂದ ನಿರ್ಮಾಪಕ ರಾಮು ಈ ರೀತಿ ಹೇಳಿದ್ದು. ‘ನಮ್ಮ ಬ್ಯಾನರ್‌ನಲ್ಲಿ ಆ್ಯಕ್ಷನ್‌ ಜೊತೆಗೆ ಬೇರೆ ಬೇರೆ ಜಾನರ್‌ನ ಒಳ್ಳೆಯ ಸಿನಿಮಾಗಳನ್ನು ಮಾಡಿದರೂ ಅದು ಅಷ್ಟಾಗಿ ನಮ್ಮ ಕೈ ಹಿಡಿಯಲಿಲ್ಲ. ನಮಗೆ ಆ್ಯಕ್ಷನ್‌ ಸಿನಿಮಾಗಳೇ ಕೂಡಿ ಬರೋದು’ ಎಂದು. ರಾಮು ಅವರು ಹೀಗೆ ಹೇಳಲು ಕಾರಣ, ‘ಅರ್ಜುನ್‌ ಗೌಡ’. ಪ್ರಜ್ವಲ್ ದೇವರಾಜ್‌ ನಾಯಕರಾಗಿರುವ ‘ಅರ್ಜುನ್‌ ಗೌಡ’ ಚಿತ್ರ ರಾಮು ನಿರ್ಮಾಣದಲ್ಲಿ ತಯಾರಾಗುತ್ತಿದೆ. ಇದು ಔಟ್ ಅಂಡ್‌ ಔಟ್ ಆ್ಯಕ್ಷನ್‌ ಸಿನಿಮಾ. ಈ ಚಿತ್ರ ತಮ್ಮ ಕೈ ಹಿಡಿಯುತ್ತದೆ ಎಂಬ ನಂಬಿಕೆ ರಾಮು ಅವರಿಗಿದೆ.

ಈ ಹಿಂದೆ ‘ದೇವ್ರಾಣೆ’, ’90’ ಚಿತ್ರಗಳನ್ನು ನಿರ್ದೇಶಿಸಿರುವ ಲಕ್ಕಿ ಶಂಕರ್‌ ಈ ಚಿತ್ರದ ನಿರ್ದೇಶಕರು. ಈ ಹಿಂದಿನ ತಮ್ಮ ಕಾಮಿಡಿ ಜಾನರ್‌ನಿಂದ ಹೊರಬಂದಿರುವ ಶಂಕರ್‌, ಈ ಬಾರಿ ಆ್ಯಕ್ಷನ್‌ ಮೊರೆ ಹೋಗಿದ್ದಾರೆ. ಪ್ರಜ್ವಲ್ ಅವರು ಈ ಹಿಂದೆ ಕಾಣಿಸಿಕೊಳ್ಳದ ಗೆಟಪ್‌ನಲ್ಲಿ ‘ಅರ್ಜುನ್‌ ಗೌಡ’ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಬಗ್ಗೆ ಮಾತನಾಡುವ ಲಕ್ಕಿ ಶಂಕರ್‌, ‘ಇದು ಹೈವೋಲೆrೕಜ್‌ ಆ್ಯಕ್ಷನ್‌ ಸಿನಿಮಾ. ಹಾಗಂತ ರೆಗ್ಯುಲರ್‌ ಪ್ಯಾಟರ್ನ್ನಲ್ಲಿ ಚಿತ್ರ ಮಾಡಿಲ್ಲ. ಕಥೆಯಿಂದ ಹಿಡಿದು ಆ್ಯಕ್ಷನ್‌ವರೆಗೂ ಬೇರೆ ತರಹ ಇರುತ್ತದೆ. ಚಿತ್ರದ ಒಂದಷ್ಟು ದೃಶ್ಯ ನೋಡಿರುವ ನಿರ್ಮಾಪಕರು ಖುಷಿಯಾಗಿದ್ದಾರೆ. ಪ್ರಜ್ವಲ್ ಅವರು ಈ ಚಿತ್ರದಲ್ಲಿ ಮೂರು ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂಬುದು ಶಂಕರ್‌ ಮಾತು. ‘ಅರ್ಜುನ್‌ ಗೌಡ’ ಅನೌನ್ಸ್‌ ಆದ ಸಮಯದಲ್ಲಿ ಇದು ತೆಲುಗಿನ ‘ಅರ್ಜುನ್‌ ರೆಡ್ಡಿ’ ಚಿತ್ರದ ರೀಮೇಕ್‌ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ಸ್ಪಷ್ಟನೆ ಕೊಡುವ ಶಂಕರ್‌, ‘ಅರ್ಜುನ್‌ ರೆಡ್ಡಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸ್ವಮೇಕ್‌ ಚಿತ್ರ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಕಥೆ ಮಾಡಿದ್ದೇವೆ. ಟೈಟಲ್ನಲ್ಲಿ ಫೋರ್ಸ್‌ ಇರಲಿ ಎಂಬ ಕಾರಣಕ್ಕೆ ‘ಅರ್ಜುನ್‌ ಗೌಡ’ ಎಂದಿಟ್ಟಿದ್ದೇವೆ’ ಎನ್ನುತ್ತಾರೆ.

ಚಿತ್ರದಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್‌ ಅವರಿಗೆ ಒಂದೊಳ್ಳೆಯ ಬ್ಯಾನರ್‌ನಲ್ಲಿ ಮತ್ತೆ ನಟಿಸುತ್ತಿರುವ ಖುಷಿ ಇದೆ. ಈ ಹಿಂದೆ ರಾಮು ಬ್ಯಾನರ್‌ನಲ್ಲಿ ನಟಿಸಿದ ಸಿನಿಮಾ ಹಿಟ್ ಆಗಿದ್ದು, ಈಗ ‘ಅರ್ಜುನ್‌ ಗೌಡ’ ಕೂಡಾ ಅದೇ ಹಾದಿಯಲ್ಲಿ ಸಾಗುತ್ತದೆ ಎಂಬ ವಿಶ್ವಾಸವಿದೆಯಂತೆ. ‘ರಾಮು ಅವರ ಬ್ಯಾನರ್‌ ಎಂದರೆ ಅದು ಹೋಂಬ್ಯಾನರ್‌ ಇದ್ದಂತೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎನ್ನುವ ಪ್ರಜ್ವಲ್ಗೆ ‘ಅರ್ಜುನ್‌ ಗೌಡ’ ಮೇಲೆ ವಿಶ್ವಾಸವಿದೆ. ಇಲ್ಲಿ ಅವರು ರಫ್ ಅಂಡ್‌ ಟಫ್ ಪಾತ್ರ ಮಾಡಿದ್ದಾರಂತೆ. ಪ್ರಿಯಾಂಕಾ ತಿಮ್ಮೇಶ್‌ ಈ ಚಿತ್ರದ ನಾಯಕಿ. ನಿರ್ದೇಶಕರು ಆಡಿಷನ್‌ಗೆ ಕರೆದು ಆಯ್ಕೆ ಮಾಡುವ ವೇಳೆ ಸ್ವಲ್ಪ ದಪ್ಪಗಿದ್ದ ಪ್ರಿಯಾಂಕಾ, ‘ನನಗಿಂತ ಹೈಟಾಗಿರುವ, ಇನ್ನೂ ಸುಂದರವಾಗಿರುವ ಹುಡುಗಿರಿದ್ದಾರೆ. ನನ್ನನ್ನೇ ಯಾಕಾಗಿ ಆಯ್ಕೆ ಮಾಡ್ತಿದ್ದೀರಿ’ ಎಂದು ಕೇಳಿದರಂತೆ. ಅದಕ್ಕೆ ನಿರ್ದೇಶಕರು, ‘ಪಾತ್ರಕ್ಕೆ ನೀವೇ ಚೆನ್ನಾಗಿ ಹೊಂದುತ್ತೀರಿ’ ಎಂದರಂತೆ. ಚಿತ್ರದಲ್ಲಿ ‘ಸ್ಪರ್ಶ’ ರೇಖಾ ಚಾನೆಲ್ವೊಂದರ ಮಾಲೀಕರಾಗಿ ಕಾಣಿಸಿಕೊಂಡಿದ್ದು, ಪ್ರಜ್ವಲ್ ಅವರ ಮಗನ ಪಾತ್ರ ಮಾಡಿದ್ದಾರಂತೆ. ಚಿತ್ರಕ್ಕೆ ಜೈ ಆನಂದ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನವಿದೆ. ಈಗಗಾಲೇ 60ಕ್ಕೂ ಹೆಚ್ಚು ದಿನಗಳ ಚಿತ್ರೀಕರಣವಾಗಿದ್ದು, ಇನ್ನು 15 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Yogi spoke about Sidlingu 2 Movie

Sidlingu 2 Movie: ಕಾಮನ್‌ಮ್ಯಾನ್‌ ದುನಿಯಾದಲ್ಲಿ ಸಿದ್ಲಿಂಗು ಕನಸು

Pruthvi Amber spoke about his Bhuvanam Gaganam movie

Bhuvanam Gaganam: ನಗ್ತಾ ನಗ್ತಾ ಅಳಿಸ್ತೀನಿ…:  ಪೃಥ್ವಿ ನಿರೀಕ್ಷೆ

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Roopesh Shetty starer Adhipatra kannada movie

Roopesh Shetty: ಕರಾವಳಿ ಸೊಗಡಿನ ‘ಅಧಿಪತ್ರ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.