ಮಂಕಿ ಸೀನ ಮನ್‌ಕೀ ಬಾತ್‌

ಡಾಲಿ ಕೈಲಿ ಸೂರಿ ಪಾಪ್‌ ಕಾರ್ನ್

Team Udayavani, Feb 21, 2020, 6:04 AM IST

chitra-24

ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ, ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ . ಡಾಲಿ ಬಳಿಕ ಅದೇ ರೀತಿಯ ಪಾತ್ರ ಬರುತ್ತಿಲ್ಲ. ಪಾತ್ರದಲ್ಲಿನ ಅಟಿಟ್ಯೂಡ್‌ ಸ್ಪೆಷಲ್‌ ಆಗಿರುತ್ತೆ. ನನಗೆ ಪಾತ್ರ ಸ್ಟ್ರಾಂಗ್‌ ಆಗಿ ನಿಲ್ಲಬೇಕಷ್ಟೇ. “ಬಡವ ರಾಸ್ಕಲ್‌’ ಕೂಡ ರೌಡಿಸಂ ಅಲ್ಲ. ಅದೊಂದು ಹೊಸ ಬಗೆಯ ಕಥೆಯ ಚಿತ್ರ. ಇನ್ನೂ ಎರಡು ಸಿನಿಮಾಗಳಿವೆ. ಅವೂ ಕೂಡ ಹೊಸದಾಗಿವೆ…

“ಡಾಲಿ…’
-ಸದ್ಯಕ್ಕೆ ಕನ್ನಡ­ದಲ್ಲಿ ತುಂಬಾ ಸೌಂಡು ಮಾಡುತ್ತಿರುವ ಹೆಸರಿದು. ಹೌದು. “ಟಗರು’ ಮೂಲಕ “ಡಾಲಿ’ ಎನಿಸಿಕೊಂಡ ನಟ ಧನಂಜಯ್‌, ಈಗ ಫ‌ುಲ್‌ ಬಿಝಿ. ಅಷ್ಟೇ ಅಲ್ಲ, ಲವ್ವರ್‌ ಬಾಯ್‌ ಆಗಿದ್ದ ಅವರು, ಸ್ಟೈಲಿಶ್‌ ವಿಲನ್‌ ಮೂಲಕ ಎಲ್ಲರ ಮನಗೆದ್ದಿದ್ದಾರೆ. “ಡಾಲಿ’ ಹೀಗಿದ್ದರೆ ಚೆನ್ನ, ಇಂಥ ಪಾತ್ರಕ್ಕೇ ಅವರು ಸರಿ ಎನ್ನುವಷ್ಟರ ಮಟ್ಟಿಗೆ ಧನಂಜಯ್‌ ಅವರನ್ನು ರಗಡ್‌ ಲುಕ್‌ನಲ್ಲಿ ನೋಡೋಕೆ ಇಷ್ಟಪಡುವ ಮಂದಿಯ ಸಂಖ್ಯೆ ದುಪ್ಪಟ್ಟಾಗಿದೆ. ಆ ಕಾರಣಕ್ಕೇ, ಧನಂಜಯ್‌ ಅಂಥದ್ದೇ ಪಾತ್ರಗಳ ಹಿಂದೆ ಹೊರಟಿದ್ದಾರೆ ಕೂಡ. ಅದು ಅವರನ್ನು ಅಷ್ಟೇ ಪ್ರೀತಿಯಿಂದ ಅಪ್ಪಿಕೊಂಡಿದೆ ಅನ್ನೋದು ಅಷ್ಟೇ ಸತ್ಯ. ಈಗ ಎಲ್ಲೆಡೆ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಜಪ. ಈ ಚಿತ್ರದ ನಿರೀಕ್ಷೆ , ಕುತೂಹಲಕ್ಕೆ ಕಾರಣ, “ಟಗರು’ ಬಳಿಕ ಸೂರಿ ಧನಂಜಯ್‌ಗೆ ಮಾಡಿದ ಚಿತ್ರವಿದು.

ನಿರ್ದೇಶಕ ಸೂರಿ ಯಾವಾಗ, ಧನಂಜಯ್‌ಗೆ ಮತ್ತೂಂದು ಚಿತ್ರ ಅನೌನ್ಸ್‌ ಮಾಡಿದರೋ, ಅಂದೇ ಕುತೂಹಲ ಶುರುವಾಗಿತ್ತು. ಅದರಲ್ಲೂ, “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಎಂಬ ಹೆಸರಿಟ್ಟಾಗ, ಧನಂಜಯ್‌ ಅವರ ಸ್ಪೆಷಲ್‌ ಲುಕ್‌ ಹೊರ­ಬಂದಾಗ ಅದು ಇನ್ನಷ್ಟು ಹೆಚ್ಚಿದ್ದು ಸುಳ್ಳಲ್ಲ. ಅಂಥ­­ದ್ದೊಂದು ನಿರೀಕ್ಷೆ ಮತ್ತು ಕುತೂಹಲ ಸ್ವತಃ ಧನಂಜಯ್‌ ಅವರಿಗೂ ಇದೆ. ಆ ಬಗ್ಗೆ ಹೇಳುವ ಅವರು, ” ನಾನು ಕೂಡ ಇನ್ನು ಪೂರ್ಣ ಸಿನಿಮಾ ನೋಡಿಲ್ಲ. ಚಿತ್ರದಲ್ಲಿ ಕೆಲಸ ಮಾಡಿದ್ದು ಹೊಸ ಅನುಭವ. ಒಂದು ವರ್ಷ ಚಿತ್ರಕ್ಕಾಗಿ ದುಡಿದಿದ್ದೇನೆ. ಡಬ್ಬಿಂಗ್‌ ಮಾಡುವಾಗ ನಿಜಕ್ಕೂ ಎಂಜಾಯ್‌ ಮಾಡಿದೆ. ಹಾಗಾಗಿ ಆಡಿಯನ್ಸ್‌ ಕೂಡ ಎಂಜಾಯ್‌ ಮಾಡ್ತಾರೆ ಎಂಬ ನಂಬಿಕೆ ಇದೆ. ಚಿತ್ರ ನಿಜವಾಗಿಯೂ ಕಾಡುತ್ತೆ, ಅಳಿಸುತ್ತೆ, ಹೊರಬಂದವರು ತುಂಬಾ ಡಿಸ್ಕಷನ್‌ ಮಾಡ್ತಾರೆ. ಸಾಕಷ್ಟು ಚರ್ಚೆಗೆ ಕಾರಣವಾಗುತ್ತೆ. ಅದಕ್ಕಾಗಿ ನಾನೂ ಕಾಯುತ್ತಿದ್ದೇನೆ’ ಎನ್ನುವ ಧನಂಜಯ್‌, “ಪುನಃ ಸೂರಿ ಸರ್‌ ಕಾಂಬಿನೇಷನ್‌ ಜೊತೆ ಕೆಲಸ ಮಾಡಿದ್ದೇನೆ. ಖಂಡಿತ ನೋಡುಗರಿಗೆ ನಿರೀಕ್ಷೆ ಸುಳ್ಳಾಗಲ್ಲ. ಪಾತ್ರ ತುಂಬ ಇಂಟೆನ್ಸ್‌ ಆಗಿದೆ. ಕಥೆ ಕೂಡ ಹಾಗೆಯೇ ಇದೆ. ಡಾಲಿ ಪಾತ್ರವನ್ನು ಎಂಜಾಯ್‌ ಮಾಡಿದ್ರಲ್ಲ, ಆ ಪಾತ್ರದ ಇಂಟೆನ್ಸಿಟಿ ಇಲ್ಲಿರುತ್ತೆ. ಆದರೆ, ಪಾತ್ರ ಬೇರೆಯದ್ದೇ ಆಗಿರುತ್ತೆ ಅಷ್ಟೇ’ ಎಂದು ಹೇಳುತ್ತಾರೆ ಧನಂಜಯ್‌.

“ಟಗರು ಚಿತ್ರದಲ್ಲಿ “ಡಾಲಿ’ಯಾಗಿಯೇ ಧನಂಜಯ್‌ ಗುರುತಿಸಿಕೊಂಡರು. ಈ ಸಿನ್ಮಾ ಮೂಲಕ ಹೊಸ ಇಮೇಜ್‌ ಬದಲಾಗಬಹುದಾ? ಈ ಪ್ರಶ್ನೆಗೆ, “ನಾನು ಯಾವತ್ತೂ ಇಮೇಜ್‌ಗೆ ಫಿಕ್ಸ್‌ ಆಗಿಲ್ಲ. “ಡಾಲಿ’ ಪಾತ್ರವೇ ಬೇರೆ. “ಮಂಕಿ ಸೀನ’ ಪಾತ್ರವೇ ಬೇರೆ. ಖಂಡಿತ ಈ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಬರುತ್ತೆ. ಇದು ಇಂಥದ್ದೇ ವರ್ಗಕ್ಕೆ ಮಾಡಿದ ಸಿನಿಮಾ ಅಂತ ಹೇಳುವುದು ಕಷ್ಟ. ಮಾಸ್‌ ಮತ್ತು ಕ್ಲಾಸ್‌ ಆಡಿಯನ್ಸ್‌ಗೂ ಸಲ್ಲುವ ಚಿತ್ರ. ಕ್ರೈಮ್‌ ಥ್ರಿಲ್ಲರ್‌ ಒಳಗೊಂಡ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಪ್ರತಿಯೊಬ್ಬರ ಜೀವನಕ್ಕೆ ಕನೆಕ್ಟ್ ಆಗುವಂಥ ಕಥೆ ಇಲ್ಲಿದೆ. ಸೂರಿ ಸರ್‌ ಹೇಳಿದಂತೆ, ನಡೆಯುವ ವಾಸ್ತವ ಅಂಶಗಳಿಗೆ ಕನ್ನಡಿ ಹಿಡಿದಿದ್ದೇನೆ ಎಂಬ ಮಾತಿಗೆ ಹೋಲುವ ಚಿತ್ರವಿದು. ಇನ್ನು, ಚಿತ್ರದ ಟ್ರೇಲರ್‌ ನೋಡಿದವರಿಗೆ ಮಂಕಿ ಸೀನನ ಪಾತ್ರ ಪಾಪ ಎನಿಸುವಂತಿದೆ ಅನಿಸಬಹುದು. ಆದರೆ, ಅದು ಹೇಗೆ ಅನ್ನೋದನ್ನ ಹೇಳುವುದಕ್ಕಾಗಲ್ಲ. ಅದನ್ನು ನೋಡಿಯೇ ಅನುಭವಿಸಬೇಕು’ ಎಂಬುದು ಧನಂಜಯ್‌ ಮಾತು.

ಪಾತ್ರ ಸ್ಟ್ರಾಂಗ್‌ ಇರಬೇಕಷ್ಟೇ…
ಯಾವುದೇ ನಟನಿರಲಿ, ಪಾತ್ರಕ್ಕೆ ತಯಾರಿ ಮಾಡಿಕೊಳ್ಳಲೇ ಬೇಕು. ಅದರಲ್ಲೂ ವಿಶೇಷ ಪಾತ್ರ ಸಿಕ್ಕಾಗ ಜಾಸ್ತೀನೇ ಎಫ‌ರ್ಟ್‌ ಹಾಕಬೇಕು. ಮಂಕಿ ಸೀನ ಪಾತ್ರಕ್ಕೆ ಧನಂಜಯ್‌ ಮಾಡಿಕೊಂಡ ತಯಾರಿ ಹೇಗಿತ್ತು? ಈ ಮಾತಿಗೆ ಹೇಳುವ ಅವರು, “ಸೂರಿ ಸರ್‌ ಜೊತೆ ಮಾತಾಡುವಾಗ, ಕಥೆ, ಪಾತ್ರ ಚರ್ಚಿಸುವಾಗಲೇ, ತಲೆಯಲ್ಲಿ ಮತ್ತು ಮನಸ್ಸಲ್ಲಿ ಪಾತ್ರದ ತಯಾರಿ ಓಡುತ್ತಿರುತ್ತೆ. ಒಬ್ಬ ರೈಟರ್‌, ಡೈರೆಕುó ಹೇಗೆ ಸ್ಟೋರಿ ರೀಡ್‌ ಮಾಡ್ತಾರೆ, ಆರ್ಟಿಸ್ಟ್‌ಗೆ ಹೇಗೆಲ್ಲಾ ಫೀಡ್‌ ಮಾಡ್ತಾರೆ ಎಂಬುದರ ಮೇಲೆ ನಟನಿಗೆ ಆ ಪಾತ್ರದ ಗಾತ್ರ, ಕಲ್ಪನೆ ಹುಟ್ಟೋಕೆ ಸಾಧ್ಯ. ಈ ಚಿತ್ರದಲ್ಲೂ ತಯಾರಿ ಇತ್ತು. ಸನ್ನಿವೇಶವೊಂದರಲ್ಲಿ ತಲೆ ಬೋಳಿಸಬೇಕು ಅಂದಾಗ, ನಿಜಕ್ಕೂ ಒಂದು ರೀತಿಯ ಖುಷಿ ಆಯ್ತು. ಯಾಕೆಂದರೆ, ನಮ್ಮನ್ನು ನಾವು ಬೇರೆ ರೀತಿ ನೋಡುವ ಅವಕಾಶವದು. ಅಂತಹ ಚಾನ್ಸ್‌ ಸಿಗೋದು ಒಂದೇ ಸಲ. ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ, ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ ಎನ್ನುತ್ತಾರೆ. ಧನಂಜಯ್‌.

ಡಾಲಿ ಬಳಿಕ ಅದೇ ರೀತಿಯ ಪಾತ್ರ ಬರುತ್ತಿಲ್ಲ. ಪಾತ್ರದಲ್ಲಿನ ಅಟಿಟ್ಯೂಡ್‌ ಸ್ಪೆಷಲ್‌ ಆಗಿರುತ್ತೆ. ನನಗೆ ಪಾತ್ರ ಸ್ಟ್ರಾಂಗ್‌ ಆಗಿ ನಿಲ್ಲಬೇಕಷ್ಟೇ. “ಬಡವ ರಾಸ್ಕಲ್‌’ ಕೂಡ ರೌಡಿಸಂ ಅಲ್ಲ. ಅದೊಂದು ಹೊಸ ಬಗೆಯ ಕಥೆಯ ಚಿತ್ರ. ಇನ್ನೂ ಎರಡು ಸಿನಿಮಾಗಳಿವೆ. ಅವೂ ಕೂಡ ಹೊಸದಾಗಿವೆ’ ಎನ್ನುತ್ತಾರೆ ಧನಂಜಯ್‌.

ಸಾರ್ಥಕ ಜಪ
ಸದ್ಯಕ್ಕೆ ಧನಂಜಯ್‌ ಅವರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ಸೆಟ್ಟೇರುತ್ತಿವೆ ಇದಕ್ಕೆ ಧ್ವನಿಯಾಗುವ ಅವರು, “ನಾನು ಆಯ್ಕೆ ಮಾಡಿಕೊಳ್ಳುವ ಮುನ್ನ ಮನುಷ್ಯರನ್ನು ನೋಡ್ತೀನಿ. ಇಷ್ಟವಾದರೆ ಕೆಲಸ ಮಾಡ್ತೀನಿ. ಅವರೊಂದಿಗೆ 6 ತಿಂಗಳು ಜರ್ನಿ ಮಾಡಲೇಬೇಕು. ಹಾಗಾಗಿ, ಅಂತಹವರ ಜೊತೆ ಕೆಲಸ ಮಾಡೋಕೂ ಖುಷಿ ಎನಿಸಬೇಕು. ಸಿನಿಮಾ ಬರುತ್ತಿವೆ. ಇದಕ್ಕಾಗಿಯೇ ತಾನೇ ಇಷ್ಟು ವರ್ಷ ಜಪ ಮಾಡಿದ್ದು. ಆ ದಿನಗಳನ್ನು ನೆನಪಿಸಿಕೊಂಡಾಗ ಈಗ ಹೆಮ್ಮೆ ಎನಿಸುತ್ತೆ. “ಸಲಗ’ ಕೂಡ ಜೋರು ಸದ್ದು ಮಾಡುವ ಚಿತ್ರ. ಅಲ್ಲಿ ಸ್ಟ್ರಾಂಗ್‌ ಪೊಲೀಸ್‌ ಅಧಿಕಾರಿ. ಪೊಲೀಸ್‌ ಆಫೀಸರ್‌ ಅಂದ್ರೆ, ಹೀಗಿರಬೇಕು ಎನಿಸುವಂತಹ ಪಾತ್ರವದು. ಇನ್ನು, ಜಯರಾಜ್‌ ಬಯೋಪಿಕ್‌ ಇರುವ ಸಿನಿಮಾ ಅನೌನ್ಸ್‌ ಆಗಿದೆ. ಆ ಪಾತ್ರ ಒಪ್ಪೋಕೆ ಕಾರಣ ಏನು, ಯಾಕೆ ಆ ಪಾತ್ರ ಮಾಡ್ತಾ ಇದ್ದೀರಿ ಎಂಬ ಪ್ರಶ್ನೆಗಳು ಟ್ವಿಟ್ಟರ್‌ನಲ್ಲಿ ಬಂದವು. ಅದಕ್ಕೆ ನಾನು ಹೇಳುವುದಿಷ್ಟೇ. ನಾನು ಸಿಸ್ಟಂನಲ್ಲಿ ಇರೋದನ್ನೇ ಮಾಡ್ತಾ ಇರೋದು. ಅಲ್ಲೆಲ್ಲೋ “ಡಾಲಿ’ ಆಗಿ ಒಂದು ವರ್ಗವನ್ನು ಪ್ರತಿನಿಧಿಸಿದೆ.

“ಅಲ್ಲಮ’ನಾಗಿ ಒಂದು ವರ್ಗಕ್ಕೆ ರೀಚ್‌ ಆದೆ. ಇನ್ನೆಲ್ಲೋ “ಎಸಿಪಿ ಸಾಮ್ರಾಟ್‌’ ಆಗಿ ಒಂದು ವರ್ಗವನ್ನು ಪ್ರತಿನಿಧಿಸುತ್ತೇನೆ. ಹಾಗೇ, ಜಯರಾಜ್‌ ಪಾತ್ರದ ಮೂಲಕವೂ ಒಂದು ವರ್ಗವನ್ನು ಪ್ರತಿನಿಧಿಸುತ್ತಿದ್ದೇನೆ. ಕಲಾವಿದನಾಗಿ ಎಲ್ಲಾ ರೀತಿಯ ಪಾತ್ರ ನಿರ್ವಹಿಸುವುದು ನನ್ನ ಕರ್ತವ್ಯ. ಆ ಮೂಲಕ ಹೇಗೆ ಬದುಕಬೇಕು, ಬದುಕಬಾರದು ಎಂಬುದನ್ನು ಹೇಳುತ್ತಿರಬೇಕು. ಆಡಿಯನ್ಸ್‌ ಅದರಿಂದ ಏನು ತಗೋತ್ತಾರೆ ಎಂಬುದು ಅವರವರ ಮನಸ್ಥಿತಿಗೆ ಬಿಟ್ಟಿದ್ದು. ನನ್ನ ತಂದೆ ಸ್ಕೂಲ್‌ ಟೀಚರ್‌. ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದವರು. ಅವರೆಲ್ಲರೂ ಮಹಾತ್ಮ ಗಾಂಧಿ ಆಗ್ತಾರೆ ಅಂತ ಹೇಳ್ಳೋಕೆ ಆಗಲ್ಲ. ಎಲ್ಲದರಲ್ಲೂ ಒಳ್ಳೆಯದು, ಕೆಟ್ಟದ್ದು ಅಂಶ ಇರುತ್ತೆ. ಅದನ್ನು ತೆಗೆದು ಮುಂದಿಡಬೇಕಷ್ಟೇ. ಅದು ನಮ್ಮ ಕೆಲಸ. ಜಯರಾಜ್‌ ಬಯೋಪಿಕ್‌ನಲ್ಲಿ ತುಂಬಾ ಕೆಲಸವಿದೆ. ಫಿಜಿಕಲಿ ಎಫ‌ರ್ಟ್‌ ಹಾಕಬೇಕು. ರೆಟ್ರೋ ಶೇಡ್‌ ಕೂಡ ಇರಲಿದೆ. ಪಾತ್ರವಾಗಿ ಜೀವಿಸಲೇಬೇಕು. ಹಾಗಾಗಿ ತಯಾರಿ ಇದ್ದೇ ಇರುತ್ತೆ’ ಎಂದು ವಿವರ ಕೊಡುವ ಧನಂಜಯ್‌, “ಬಡವ ರಾಸ್ಕಲ್‌’ ಮೂಲಕ ನಿರ್ಮಾಣಕ್ಕೂ ಇಳಿದಿದ್ದಾರೆ. ದಿನ ದಿನಕ್ಕೂ ಮೈಲೇಜ್‌ ಹೆಚ್ಚುತ್ತಿದೆ. ಹಾಗಾದರೆ, ಧನಂಜಯ್‌ ಪೇಮೆಂಟ್‌ ಕೂಡ ಹೆಚ್ಚಾಗಿಗರಬೇಕಲ್ಲವೇ? ಇದಕ್ಕೆ ನಗುತ್ತಲೇ ಹೇಳುವ ಅವರು, “ಈ ಮಾತು ಕೇಳ್ಳೋಕೆ ಖುಷಿ ಆಗುತ್ತಿದೆ. ಯಾರು, ಎಷ್ಟು ಚೆನ್ನಾಗಿ ಪ್ರೀತಿಯಿಂದ ಕೊಟ್ಟರೂ ಪಡೆಯುತ್ತೇನೆ. ನನ್ನೊಳಗೆ ಇನ್ನಷ್ಟು ಕನಸುಗಳಿವೆ. ಅದನ್ನು ಇನ್ನೊಮ್ಮೆ ಹೇಳ್ತೀನಿ’ ಎಂದಷ್ಟೇ ಹೇಳಿ ಮಾತು ಮುಗಿಸುತ್ತಾರೆ ಧನಂಜಯ್‌.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.