ಒಂದು ಸಿನಿಮಾಗೆ ಐದು ಸಿನಿಮಾಗಳ ಸ್ಫೂರ್ತಿ


Team Udayavani, Oct 2, 2017, 12:11 PM IST

A2-A2-A_(116).jpg

ಸಾಮಾನ್ಯವಾಗಿ ಒಂದು ಸಿನಿಮಾಕ್ಕೆ ಯಾವುದಾದರೊಂದು ಭಾಷೆಯ ಸಿನಿಮಾ ಸ್ಫೂರ್ತಿಯಾಗುತ್ತದೆ. ಆ ಸಿನಿಮಾದ ಒನ್‌ಲೈನ್‌ ತೆಗೆದುಕೊಂಡು ಸಿನಿಮಾ ಮಾಡುವವರಿದ್ದಾರೆ. ಆದರೆ, ಒಂದು ಸಿನಿಮಾಕ್ಕೆ ಐದು ಸಿನಿಮಾ ಸ್ಫೂರ್ತಿಯಾಗಿರುವುದನ್ನು, ಆ ಐದು ಸಿನಿಮಾಗಳ ಒನ್‌ಲೈನ್‌ನೊಂದಿಗೆ ಸಿನಿಮಾ ಮಾಡಿರೋದನ್ನು ನೀವು ಕೇಳಿದ್ದೀರಾ? ಕೇಳದಿದ್ದರೆ ಈಗ ಕೇಳಿ. “ಎ2ಎ2ಎ’ ಎಂಬ ಸಿನಿಮಾವೊಂದು ಸೋಮವಾರ ಸೆಟ್ಟೇರಿದೆ. ಈ ಸಿನಿಮಾಕ್ಕೆ ಐದು ಸಿನಿಮಾಗಳು ಸ್ಫೂರ್ತಿ.

ಆ ಐದು ಸಿನಿಮಾಗಳ ಕಥೆಯನ್ನಿಟ್ಟುಕೊಂಡು ನಿರ್ದೇಶಕರು ತಮ್ಮದೇ ಆದ ಕಥೆ ಮಾಡಿದ್ದಾರೆ. ರಾಜ್‌ಕುಮಾರ್‌ ಅವರ “ಕಸ್ತೂರಿ ನಿವಾಸ’, ವಿಷ್ಣುವರ್ಧನ್‌ ಅವರ “ಬಂಧನ’, ಉಪೇಂದ್ರ ಅವರ “ಉಪೇಂದ್ರ’, ಸುದೀಪ್‌ ಅವರ “ಹುಚ್ಚ’, ಶಿವರಾಜಕುಮಾರ್‌ ಅವರ “ಜೋಗಿ’ ಚಿತ್ರಗಳೇ ಈ ಸಿನಿಮಾಕ್ಕೆ ಸ್ಫೂರ್ತಿ. ನಿರ್ದೇಶಕ ಆರ್‌.ಕೆ.ನಾಯಕ್‌ ಈ ಐದು ಸಿನಿಮಾಗಳ ಕಥೆಯನ್ನಿಟ್ಟುಕೊಂಡು ತಮ್ಮದೇ ಆದ ಆರನೇ ಕಥೆ ಮಾಡಿ ಆ ಮೂಲಕ ಸಿನಿಮಾ ಮಾಡುತ್ತಿದ್ದಾರೆ. ಆ ಐದು ಸಿನಿಮಾಗಳ ಪ್ರಮುಖವಾದ ಒಂದಂಶವನ್ನು ತೆಗೆದುಕೊಂಡಿದ್ದಾರಂತೆ. 

“ಎ2ಎ2ಎ’ ಎಂದರೇನು ಎಂದು ನೀವು ಕೇಳಬಹುದು. “ಆದಿ-ಅಂತ್ಯ-ಆರಂಭ’ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ಮಾಡುತ್ತಿದ್ದಾರಂತೆ. ಆದಿಯಿಂದ ಶುರುವಾದ ಪಯಣ ಅಂತ್ಯವಾಗಿ ಮತ್ತೆ ಅಲ್ಲಿಂದ ಆರಂಭವಾಗುತ್ತದೆ ಎಂಬ ಸ್ಟೋರಿ ಲೈನ್‌ನೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ ಆರ್‌.ಕೆ.ನಾಯಕ್‌. ಈ ಹಿಂದೆ “ಪೇಪರ್‌ ದೋಣಿ’ ಎಂಬ ಸಿನಿಮಾ ಮಾಡಿದ್ದ ನಾಯಕ್‌, ಈ ಬಾರಿ ಐದು ಕನ್ನಡ ಸಿನಿಮಾಗಳ ಒನ್‌ಲೈನ್‌ನೊಂದಿಗೆ ಹೊಸ ಬಗೆಯ ಸಿನಿಮಾ ಕಟ್ಟಿಕೊಡಲಿದ್ದಾರಂತೆ.  ಚಿತ್ರಕ್ಕೆ “ಸತ್ಯ ಸುಳ್ಳಿನ ಲವ್‌ಸ್ಟೋರಿ’ ಎಂಬ ಟ್ಯಾಗ್‌ಲೈನ್‌ ಬೇರೆ ಇದೆ.

ಚಿತ್ರದಲ್ಲಿ ವಿಷ್ಣುವರ್ಧನ್‌ ಎನ್ನುವವರು ನಾಯಕರಾಗಿ ನಟಿಸುತ್ತಿದ್ದಾರೆ. ಅಂದಹಾಗೆ, ಇವರ ಮೂಲ ಹೆಸರು ಪ್ರತಾಪ್‌. ಆದರೆ, ಇವರು ವಿಷ್ಣುವರ್ಧನ್‌ ಅವರ ಪಕ್ಕಾ ಅಭಿಮಾನಿಯಾದ ಕಾರಣ ತಮ್ಮ ಹೆಸರನ್ನು ವಿಷ್ಣುವರ್ಧನ್‌ ಎಂದು ಬದಲಿಸಿಕೊಂಡು ಈಗ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಈ ಚಿತ್ರಕ್ಕಾಗಿ ಜನವರಿಯಿಂದಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವುದಾಗಿ ಹೇಳಿದರು. ಇನ್ನು, ಹಿತನ್‌ ಹಾಸನ್‌ ಚಿತ್ರದ ಮತ್ತೂಬ್ಬ ನಾಯಕ. ನಿರ್ದೇಶಕರು ಅವರ ಬಳಿ ಸಂಗೀತ ಮಾಡಿಸಲು ಬಂದಿದ್ದರಂತೆ. ಈಗ ಸಂಗೀತ ನಿರ್ದೇಶನದ ಜೊತೆಗೆ ಒನ್‌ ಆಫ್ ದಿ ಹೀರೋ ಆಗುವ ಅವಕಾಶ ಕೂಡಾ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ರಾಜ್‌ ನಾಯಕಿ. ಇಲ್ಲಿ ಸ್ಟೂಡೆಂಟ್‌ ಆಗಿ ನಟಿಸುತ್ತಿದ್ದಾರಂತೆ. 

ಸಾಮಾನ್ಯವಾಗಿ ಚಿತ್ರದ ಮುಹೂರ್ತದಂದು ದೇವರ ಫೋಟೋ ಇಟ್ಟು ಅದರ ಮುಂದೆ ಫ‌ಸ್ಟ್‌ ಶಾಟ್‌ ತೆಗೆಯೋದು ವಾಡಿಕೆ. ಆದರೆ, “ಎ2ಎ2ಎ’ ತಂಡ, ಕನ್ನಡ ಚಿತ್ರರಂಗಕ್ಕೆ ದುಡಿದು ಇಹಲೋಕ ತ್ಯಜಿಸಿರುವ ಹಿರಿಯ ನಿರ್ದೇಶಕರ, ನಟರ ಫೋಟೋ ಇಟ್ಟು ಅದರ ಮುಂದೆ ಮುಹೂರ್ತ ಮಾಡಿಕೊಂಡಿತು. ಜೊತೆಗೆ ಐದು ಸಿನಿಮಾಗಳ ಪ್ರೇರಣೆಯೊಂದಿಗೆ ಈ ಸಿನಿಮಾ ಆಗುತ್ತಿರುವುದರಿಂದ ಆ ಐದು ಸಿನಿಮಾಗಳ ಹೆಸರು ಬರೆದ ಕ್ಲಾéಪ್‌ ಬೋರ್ಡ್‌ ಜೊತೆಗೆ “ಎ2ಎ2ಎ’ ಕ್ಲಾಪ್‌ ಬೋರ್ಡ್‌ ಕೂಡಾ ಇತ್ತು. 

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.