![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 1, 2021, 4:15 PM IST
ಧೃತಿ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಾಣ ಮಾಡುತ್ತಿರುವ “ಪ್ರೇಮಂ ಚಿರಂ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಸದ್ಯ ಹುಬ್ಬಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ, “ನನ್ನ ಒಲುಮೆಯೇ… ನನ್ನ ಒಲುಮೆಯೇ… ನನ್ನ ಪ್ರಾಣದ ಆಪ್ತ ನೀನೇನೆ…’ ಹಾಗು “ಪದವೆಂಬುದು ಪದವಾಗದೆ ಹಸಿರಾಗಿದೆ ಉಸಿರಾಗಿದೆ, ಸೊಗಸಾಗಿದೆ ನವಿರಾಗಿದೆ…’ ಎಂಬ ಗೀತೆಗಳ ಚಿತ್ರೀಕರಣ ನಡೆಸಿತು.
ಇದನ್ನೂ ಓದಿ : ಎಂಆರ್ ಹೋಯ್ತು ಡಿಆರ್ ಬಂತು
ರಜತ್ ಸೂರ್ಯ ಹಾಗೂ ಸಂದೀಪ್ ನೃತ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡಿಗೆ ಪ್ರಶಾಂತ್, ಮಧುಶ್ರೀ ಜೋಡಿಯಾಗಿ ಅಭಿನಯಿಸಿದರು. “ಪ್ರೇಮಂ ಚಿರಂ’ ಚಿತ್ರದಲ್ಲಿ ತೆರೆಮೇಲೆ ಐದು ವಿಭಿನ್ನ ಪ್ರೇಮಕಥೆಗಳನ್ನು ಹೇಳಲಾಗುತ್ತಿದ್ದು, ಚಿತ್ರದಲ್ಲಿ ನೀನಾಸಂಠಾಕೂರ್, ಪ್ರೀತಿ ಚೇಷ್ಠ (ಮುಂಬೈ), ಸಂಗಮೇಶ್, ಸೌಮ್ಯ, ಸೂರ್ಯ, ಪಿಂಕಿ ಕೌರ್, ಪ್ರಶಾಂತ್, ಮಧುಶ್ರೀ, ಅನಿಲ್, ರತ್ನಶ್ರೀ, ದೇವರಾಜ್, ಸುಮ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ಚಿತ್ರಕ್ಕೆ ಶ್ರೀನಿವಾಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.