Priya Shatamarshan: ಇನ್ಸ್ ಪೆಕ್ಟರ್‌ ಗಿರಿಜಾ ರಿಪೋರ್ಟಿಂಗ್‌ ಸಾರ್‌..


Team Udayavani, Sep 20, 2024, 6:41 PM IST

Priya Shatamarshan spoke about her fame after Bheema movie

“ಈ ಯಶಸ್ಸಿನಿಂದ ಹೊಸ ಜವಾಬ್ದಾರಿ ಬಂದಿದೆ..’ ಹೀಗೆ ನಗುತ್ತಲೇ ಮಾತು ಆರಂಭಿಸಿದರು ಪ್ರಿಯಾ. ಭೀಮಾ ಸಿನಿಮಾದಲ್ಲಿ ನಟ ದುನಿಯಾ ವಿಜಯ್‌ಗೆ ಎಷ್ಟು ಸಿಳ್ಳೆ, ಚಪ್ಪಾಳೆ, ಜೈಕಾರಗಳು ಬಂದಿದ್ದವೋ ಅಷ್ಟೇ ಪ್ರಿಯಾ ನಟನೆಗೂ ಬಂದಿರುವುದು ನಟಿಯೊಬ್ಬಳಿಗೆ ಸಿಕ್ಕ ದೊಡ್ಡ ಪ್ರಶಂಸೆ ಎನ್ನಬಹುದು.

ಯಾವುದೇ ನಟ, ನಟಿಗೆ ಒಮ್ಮೆ ಯಶಸ್ಸು ಸಿಕ್ಕಾಗ ಬಹುಬೇಗ ಜನಪ್ರಿಯರಾಗುತ್ತಾರೆ. ಕೆಲ ಕಾಲ ಎಲ್ಲೆಡೆ ಅವರದ್ದೇ ಮಾತು, ಅವರದ್ದೇ ಹವಾ… ಈ ಯಶಸ್ಸನ್ನೇ ಚೆನ್ನಾಗಿ ನಿಭಾಯಿಸಿದರೇ ಜೀವನ ಸಾಧನೆಯ ಶಿಖರವನ್ನೂ ಕಾಣಬಹುದು. ಸದ್ಯ ಚಂದನವನದಲ್ಲಿ ಹತ್ತಾರು ನಟಿಮಣಿಯರು ಬಂದು ಹೋಗುತ್ತಿದ್ದಾರೆ. ಆದರೆ, ಗಟ್ಟಿಯಾಗಿ ನೆಲೆ ನಿಲ್ಲುತ್ತಿರುವವರು ಅತೀ ಕಡಿಮೆ. ಇದರ ನಡುವೆಯೇ “ನಾನು ಒಬ್ಬಳು ಇದ್ದೇನೆ’ ಎಂದು ನಟನೆ ಮೂಲಕವೇ ನಿರೂಪಿಸಿದವರು ಪ್ರಿಯಾ ಶಟಮರ್ಶನ್‌.

ಭೀಮಾ ಸಿನಿಮಾದ ಇನ್ಸಪೆಕ್ಟರ್‌ ಗಿರಿಜಾ ಪಾತ್ರಧಾರಿ ಈಗಲೂ ಚರ್ಚೆಯಲ್ಲಿರುವ ಪ್ರತಿಭೆ. ತಮ್ಮ ಯಶಸ್ಸಿನ ಕುರಿತು ಮಾತನಾಡುವ ಪ್ರಿಯಾ, “ಭೀಮಾ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ವಿಜಯ್‌ ಅವರ ಜೊತೆ ನಾನು ಬೇರೆ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವಕಾಶ ಸಿಕ್ಕಿದ್ದು ಭೀಮಾ ಚಿತ್ರದ ಇನ್ಸಪೆಕ್ಟರ್‌ ಗಿರಿಜಾ ಪಾತ್ರಕ್ಕೆ. ಮುಂದಿನದೆಲ್ಲ ರೋಚಕ ಅನುಭವ. ಯಶಸ್ಸಿನಿಂದ ಜವಾಬ್ದಾರಿ ಜೊತೆಗೆ ಆತಂಕ, ಒತ್ತಡ ಹೆಚ್ಚಾಗಿದೆ’ ಎನ್ನುತ್ತಾರೆ.

ಎಲ್ಲೆಡೆಯಿಂದ ಮೆಚ್ಚುಗೆ

ಕೆಲವರು ಸಿನಿಮಾದಲ್ಲಿ ಮಾತ್ರ ಮಿಂಚಿ ಕಣ್ಮರೆಯಾಗುತ್ತಾರೆ. ಆದರೆ, ನಟಿ ಪ್ರಿಯಾ ಅವರ ನಟನೆ ಸಿನಿಮಾದಿಂದ ಸೋಶಿ ಯಲ್‌ ಮಿಡಿಯಾವರೆಗೆ ಸಾಕಷ್ಟು ಹವಾ ಸೃಷ್ಟಿಸಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಇವರ ನಟಿಸಿದ ದೃಶ್ಯಗಳೇ ಬಹಳ ವೈರಲ್‌ ಆಗಿದ್ದವು.

“ಭೀಮ ರಿಲೀಸ್‌ ಆಗಿ, ಆ ದಿನ ಮಲಗಿ ಬೆಳಗ್ಗೆ ಏಳುವ ಹೊತ್ತಿಗೆ ನನ್ನ ಇನ್‌ಸ್ಟಾಗ್ರಾಂ ಫಾಲೊವರ್ಸ್‌ ಹೆಚ್ಚಾಗಿದ್ರು. ಇದರಿಂದ ಆಶ್ಚರ್ಯಗೊಂಡೆ. ಈ ರೀತಿ ಮೆಚ್ಚುಗೆಯ ಸುರಿಮಳೆ ಬರುವೆದೆಂದು ಊಹಿಸಿರಲಿಲ್ಲ. ಪರಿಚಯ ಇಲ್ಲದವರೂ ಬಂದು ಆಶೀರ್ವಾದ ಮಾಡ್ತಾರಲ್ಲ ಆಗ ಆನಂದದ ನಿದ್ದೆ ಬರುತ್ತೆ. ನನಗೆ ಅದೊಂದು ಶ್ರೀರಕ್ಷೆ’ ಎಂದರು ಪ್ರಿಯಾ.

ಇದು ಪ್ರಯೋಗ ಶಾಲೆ

ರಂಗಭೂಮಿ ಹಿನ್ನೆಲೆಯ ಪ್ರಿಯಾ ಶಟಮರ್ಶನ್‌ ಕಿರುತೆರೆಯಲ್ಲೂ ಗುರುತಿಸಿಕೊಂಡವರು. ನಟನೆಯಷ್ಟೇ ಅಲ್ಲದೇ ವಸ್ತ್ರ ವಿನ್ಯಾಸ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಭೀಮ ಯಶಸ್ಸಿನಿಂದ ಹಲವು ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬರುತ್ತಿವೆ. ಅದರಲ್ಲೂ ಪೋಲೀಸ್‌ ಪಾತ್ರಗಳಿಗೆ ಪ್ರಿಯಾ ಸದ್ಯ ಬೇಡಿಕೆಯ ನಟಿಯಾಗಿದ್ದಾರೆ. “ಸದ್ಯ ಆರೇಳು ಚಿತ್ರಗಳಿಗೆ ಕರೆ ಬಂದಿವೆ. ಅದರಲ್ಲಿ ಅರ್ಧ ಪೋಲೀಸ್‌ ಪಾತ್ರಗಳಿಗಾಗಿಯೇ… ಸದ್ಯ ನಾನು ನಟಿಸಿರುವ ಚುರ್ಮುರಿ, ಸೈಡವಿಂಗ್‌, ಗಾಂಧಿ ಸ್ಕ್ವೇರ್‌ ಚಿತ್ರಗಳು ಬಿಡುಗಡೆಯಾಗಬೇಕು. ಪೊಲೀಸ್‌ ಪಾತ್ರದಲ್ಲಿ ಮಿಂಚಿದ ಮಾತ್ರಕ್ಕೆ ಅದೇ ಪಾತ್ರಕ್ಕೆ ಅಂಟಿಕೊಂಡಿರಲು ಬಯಸುವುದಿಲ್ಲ. ಸಿನಿಮಾ ಒಂದು ಪ್ರಯೋಗಾಲಯ. ಇಲ್ಲಿ ಕಲಾವಿದರ ಮೇಲೆ ಪಾತ್ರ ಪ್ರಯೋಗ ನಡೆಯುತ್ತಲೇ ಇರಬೇಕು ಎನ್ನುತ್ತಾರೆ.

ನಿತೀಶ ಡಂಬಳ

ಟಾಪ್ ನ್ಯೂಸ್

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.