ರಾಮ್‌ನ ಅವತಾರ: ಪ್ರೀತಿಗಾಗಿ ದಳಪತಿಯ ಹೋರಾಟ


Team Udayavani, Apr 13, 2018, 7:30 AM IST

23.jpg

“ಈ ಚಿತ್ರ ಹಿಟ್‌ ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಕಮರ್ಷಿಯಲ್‌ ಹೀರೋ ಆಗಿ ಪ್ರೇಮ್‌ ಎರಡು ಚಿತ್ರ ಸೈನ್‌ ಮಾಡ್ತಾರೆ …’ ಹಾಗಂತ ಘೋಷಿಸಿದರು ಪ್ರಶಾಂತ್‌. ಅವರಿಗೆ ತಮ್ಮ “ದಳಪತಿ’ ಚಿತ್ರದ ಬಗ್ಗೆ ಸಖತ್‌ ವಿಶ್ವಾಸ. ಅದಕ್ಕಿಂತ ವಿಶ್ವಾಸ, ಪ್ರೇಮ್‌ ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಇದೆ. ಅದೇ ಕಾರಣಕ್ಕೆ ಅವರು ಈ ಚಿತ್ರದ ನಂತರ ಪ್ರೇಮ್‌ ಕಮರ್ಷಿಯಲ್‌ ಹೀರೋ ಆಗಿ ಗುರುತಿಸಿಕೊಳ್ಳುತ್ತಾರೆ ಎಂಬ ಭವಿಷ್ಯ ನುಡಿಯುತ್ತಾರೆ.

ಅಂದಹಾಗೆ, ಪ್ರೇಮ್‌ ಅಭಿನಯದ “ದಳಪತಿ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ ವಿಷಯವನ್ನು ಹೇಳಲೆಂದೇ ನಿರ್ದೇಶಕ ಪ್ರಶಾಂತ್‌ ರಾಜ್‌ ಒಂದು ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದರು. ಮೊದಲ ಹಲವು ನಿಮಿಷಗಳ ಕಾಲ, ಚಿತ್ರ ತಡವಾಗಿದ್ದೇಕೆ ಎಂಬುದನ್ನು ಸವಿಸ್ತಾರವಾಗಿ ಹೇಳಿದರು. ಕಾರಣಗಳೆಲ್ಲಾ ಮುಗಿದ ನಂತರ ಅವರು, ಚಿತ್ರದ ಕಡೆ ಬಂದರು. “ಇಲ್ಲಿ ಪ್ರೇಮ್‌, ರಾಮ್‌ ಎನ್ನುವ ಪಾತ್ರ ಮಾಡಿದ್ದಾರೆ. ಪ್ರತಿ ಹುಡುಗಿಯೂ, ರಾಮ್‌ನಂತರ ಬಾಯ್‌ಫ್ರೆಂಡ್‌ ಅಥವಾ ಗಂಡ ಇರಬೇಕು ಎಂದು ಬಯಸುವ ಪಾತ್ರ ಅದು. ಅದೇ ತರಹ ಕೃತಿ ಇಲ್ಲಿ ವೈದೇಹಿ ಎಂಬ ಪಾತ್ರ ಮಾಡುತ್ತಿದ್ದು, ಪ್ರತೀ ಹುಡಗನೂ, ಆಕೆಯ ತರಹ ಹೆಂಡತಿ ಸಿಗಲಿ ಎಂದು ಬಯಸುವ ಪಾತ್ರ. ಇಲ್ಲಿ ನಾವೇನೂ ವಿಶೇಷವಾಗಿ ಸಂದೇಶ ಹೇಳುತ್ತಿಲ್ಲ. ಚಿತ್ರ ನೋಡಿದರೆ, ಒಳ್ಳೆಯ ಅನುಭವವಾಗುತ್ತದೆ ಎಂಬುದನ್ನು ಖಂಡಿತಾ ಹೇಳಬಲ್ಲೆ’ ಎನ್ನುತ್ತಾರೆ ಪ್ರಶಾಂತ್‌ ರಾಜ್‌.

ಇಲ್ಲಿ ಪ್ರೇಮ್‌, ಪ್ರೀತಿ ಉಳಿಸಿಕೊಳ್ಳುವ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ “ದಳಪತಿ’ ಎಂಬ ಹೆಸರು ಸೂಕ್ತ ಎಂದು ಮಾತು ಪ್ರಾರಂಭಿಸಿದ ಅವರು, “ಇದುವರೆಗೂ ನಾನು ಮಾಡಿದ ಪಾತ್ರಗಳಿಗಿಂಥ ವಿಭಿನ್ನವಾಗಿದೆ. ಒಟ್ಟಾರೆ ಒಂದೊಳ್ಳೆಯ ತಂಡದಿಂದ ಒಳ್ಳಯ ಚಿತ್ರ ಇದು’ ಎಂದರು ಪ್ರೇಮ್‌. ಹಾಗೆಯೇ ಏಪ್ರಿಲ್‌ 18ರಂದು ತಮ್ಮ ಹುಟ್ಟುಹಬ್ಬ ಇರುವುದರಿಂದ, ತಮ್ಮ ಅಭಿಮಾನಿಗಳಿಗೆ ಒಂದೊಳ್ಳೆಯ ಗಿಫ್ಟ್ ಇದಾಗಲಿದೆ ಎಂದರು ಅವರು.

ಕೃತಿ ಖರಬಂದಗೆ “ಗೂಗ್ಲಿ’ ನಂತರ ಒಂದೊಳ್ಳೆಯ ಪಾತ್ರ ಸಿಕ್ಕಿತಂತೆ. ಇದೊಂದು ಸ್ಟೈಲಿಷ್‌ ಚಿತ್ರ. ಪ್ರೇಮ್‌ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಯಿತು. ಮುಂಚೆ ಅವರಿಗೆ ತುಂಬಾ ಆ್ಯಟಿಟ್ಯೂಡ್‌ ಇದೆ ಎಂದುಕೊಂಡಿದ್ದೆ. ಸೆಟ್‌ಗೆ ಹೋದಮೇಲೆ ಅವರೆಂಥ ಫ್ರೆಂಡ್ಲಿ ಎಂಬುದು ಗೊತ್ತಾಯಿತು. ಇದರಲ್ಲಿ ನನ್ನದು ರೌಡಿ ತರಹದ ಪಾತ್ರ’ ಎಂದು ಹೇಳಿಕೊಂಡರು. ಚಿತ್ರದ ನಿರ್ಮಾಪಕರಾದ ನವೀನ್‌ ಮತ್ತು ಮಂಜುನಾಥ್‌, ಚಿತ್ರದ ಬಗ್ಗೆ ಮತ್ತು ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿದರು. 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

ಇಂದಿನಿಂದ ತೆರೆಯಲ್ಲಿ ಅನ್ನ ಪ್ರಸಾದ

Anna Movie; ಇಂದಿನಿಂದ ತೆರೆಯಲ್ಲಿ ‘ಅನ್ನ’ ಪ್ರಸಾದ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.