Toby; ನಾನು ಸಾವಿತ್ರಿ… ವಿಭಿನ್ನ ಪಾತ್ರದ ಮೇಲೆ ಸಂಯುಕ್ತಾ ನಿರೀಕ್ಷೆ
Team Udayavani, Aug 25, 2023, 8:57 AM IST
ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರವೆಂದರೆ ಅದು “ಟೋಬಿ’. ರಾಜ್ ಬಿ ಶೆಟ್ಟಿ ನಾಯಕರಾಗಿರುವ ಈ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಂಯುಕ್ತಾ ಮಾತನಾಡಿದ್ದಾರೆ. ಅದು ಅವರದೇ ಮಾತುಗಳಲ್ಲಿ…
ಘನತೆ, ಗಾಂಭೀರ್ಯದ ಹಳ್ಳಿ ಹುಡುಗಿ ನಾನು
“ಟೋಬಿ’ ಸಿನಿಮಾದಲ್ಲಿ ನಾನು ಸಾವಿತ್ರ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಸ್ವಾಭಿಮಾನಿಯಾಗಿರುವ, ಘನತೆ ಮತ್ತು ಗಾಂಭೀರ್ಯದಿಂದ ಇರುವಂತ ಪಾತ್ರ ಇದು. ಕರಾವಳಿ ತೀರದ ಪಕ್ಕಾ ಹಳ್ಳಿ ಹುಡುಗಿಯೊಬ್ಬಳು ಹೇಗೆ ಕಾಣಿಸಿಕೊಳ್ಳುತ್ತಾಳ್ಳೋ ನಾನು ಕೂಡ ಸಿನಿಮಾದಲ್ಲಿ ಹಾಗೇ ಕಾಣಿಸಿಕೊಂಡಿದ್ದೇನೆ.
ರಾಜ್ ಕಡೆಯಿಂದ ಆಫರ್
ಒಮ್ಮೆ ನಿರ್ದೇಶಕ ರಾಜ್ ಬಿ. ಶೆಟ್ಟಿ ಫೋನ್ ಮಾಡಿ “ಸ್ಕ್ರಿಪ್ಟ್ ಕಳುಹಿಸುತ್ತೇನೆ ನೋಡಿ ಹೇಳು’ ಎಂದರು. ಅವರು ಕಳುಹಿಸಿದ ಸ್ಕ್ರಿಪ್ಟ್ನ ನಾನು ಕೂಡ ತುಂಬಾ ಕುತೂಹಲ ದಿಂದಲೇ ನೋಡಿದೆ. ಸ್ಕ್ರಿಪ್ಟ್ ನೋಡುತ್ತಿದ್ದಂತೆ, ತುಂಬಾ ಇಷ್ಟವಾಯಿತು. ಈ ಥರದ ಪಾತ್ರವನ್ನು ನಾನು ಯಾವತ್ತೂ ಮಾಡಿರಲಿಲ್ಲ. ಅವರಿಗೂ ಕೂಡ ಈ ಪಾತ್ರಕ್ಕೆ ನಾನು ಒಪ್ಪುತ್ತೇನೆ ಎಂಬ ನಂಬಿಕೆಯಿತ್ತು.
ಹೊಸದನ್ನು ಕಲಿತ ಸಿನಿಮಾ
ನಾನು ಇಲ್ಲಿಯವರೆಗೆ ಮಾಡಿದ ಬೇರೆ ಬೇರೆ ಸಿನಿಮಾಗಳಿಗೆ ಹೋಲಿಸಿದರೆ, “ಟೋಬಿ’ ಸಂಪೂರ್ಣ ವಿಭಿನ್ನವಾದ ಸಿನಿಮಾ. ಇಡೀ ಸ್ಕ್ರಿಪ್ಟ್ನಲ್ಲಿ ರಾಜ್ ತುಂಬ ತೊಡಗಿಸಿಕೊಳ್ಳುತ್ತಿದ್ದರು. ನಮಗೂ ಕಲಿತುಕೊಳ್ಳಲು ಸಾಕಷ್ಟು ಅವಕಾಶವಿತ್ತು. ಹೊಸ ರೀತಿಯಲ್ಲಿ ಕ್ಯಾರೆಕ್ಟರ್ ಪ್ರಸೆಂಟ್ ಮಾಡುವುದರ ಜೊತೆಗೆ, ಕಲಾವಿದರನ್ನು ಪಾತ್ರಕ್ಕೆ ಹೇಗೆ ತೊಡಗಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ತುಂಬ ಜೋಶ್ನಿಂದಲೇ “ಟೋಬಿ’ ಮಾಡಿ ಮುಗಿಸಿದ್ದು ಗೊತ್ತಾಗಲೇ ಇಲ್ಲ.
ಟೋಬಿ ಮೇಲೆ ವಿಶ್ವಾಸವಿದೆ
ಇತ್ತೀಚೆಗಷ್ಟೇ “ಟೋಬಿ’ ಟ್ರೇಲರ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗುತ್ತಿದೆ. ಕೆಲವೇ ದಿನದಲ್ಲಿ ಟ್ರೇಲರ್ 10 ಮಿ. ವೀವ್ಸ್ ಆಗಿರುವುದೇ ಅದಕ್ಕೆ ಸಾಕ್ಷಿ. ಟ್ರೇಲರ್ ನೋಡಿದವರಿಂದ ತುಂಬಾ ಒಳ್ಳೆಯ ಕಾಮೆಂಟ್ಸ್ ಬರುತ್ತಿದೆ. ನನ್ನ ಪಾತ್ರದ ಬಗ್ಗೆಯೂ ಎಲ್ಲರೂ ಕೇಳುತ್ತಿದ್ದಾರೆ. ನಿರೀಕ್ಷೆಯ ಮಾತನಾಡು ತ್ತಿದ್ದಾರೆ. ನನಗೂ “ಟೋಬಿ’ ಮೇಲಿನ ಕಾನ್ಫಿಡೆನ್ಸ್ ಹೆಚ್ಚಾಗುತ್ತಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.