![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 9, 2022, 12:57 PM IST
ಇದು ಅಪರೂಪದಲ್ಲಿ ಅಪರೂಪದ ಸಿನಿಮಾ….’ – ನಟ ಜಗ್ಗೇಶ್ ಹೀಗೆ ಹೇಳಿ, ಪಕ್ಕದಲ್ಲಿದ್ದ ಪೋಸ್ಟರ್ ನೋಡಿದರು. ವಿಭಿನ್ನ ಲುಕ್ನ ಅವರ ಪೋಸ್ಟರ್ ಅಲ್ಲಿ ಕಂಗೊಳಿಸುತ್ತಿತ್ತು. ಅಂದಹಾಗೆ, ಜಗ್ಗೇಶ್ ಅಪರೂಪದ ಸಿನಿಮಾ ಎಂದಿದ್ದು, “ತೋತಾಪುರಿ’ಗೆ.
ಈಗಾಗಲೇ “ಬಾಗ್ಲು ತೆಗಿ ಮೇರಿ ಜಾನ್’ ಹಾಡು ಹಾಗೂ ಟ್ರೇಲರ್ ಮೂಲಕ ಚಿತ್ರರಂಗದ, ಸಿನಿ ಪ್ರೇಮಿಗಳ ಗಮನ ಸೆಳೆದಿರುವ “ತೋತಾಪುರಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಸೆ.30ರಂದು ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮುನ್ನ ಚಿತ್ರತಂಡ ಮಾಧ್ಯಮದ ಮುಂದೆ ಬಂದು ಸಿನಿಮಾದ ಬಗೆಗಿನ ಮಾಹಿತಿ ಹಂಚಿಕೊಂಡಿತು.
“ಅದೆಷ್ಟೋ ಸಿನಿಮಾಗಳು ಬರುತ್ತವೆ, ಹೋಗುತ್ತವೆ. ಆದರೆ, ಕೆಲವು ಸಿನಿಮಾಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಅಂತಹ ಸಿನಿಮಾಗಳಲ್ಲಿ “ತೋತಾಪುರಿ’ ಕೂಡಾ ಒಂದು. ಈ ಸಿನಿಮಾದ ಜರ್ನಿ ತುಂಬಾ ಅದ್ಭುತವಾಗಿತ್ತು. ಇದನ್ನು ಸಿನಿಮಾ ಎನ್ನುವುದಕ್ಕಿಂತ ಒಂದು ಸುಂದರ ಕಾದಂಬರಿ ಎನ್ನ ಬಹುದು. ನಿರ್ದೇಶಕ ವಿಜಯ ಪ್ರಸಾದ್ ತುಂಟತನದ ಜೊತೆಗೆ ಒಂದು ಸುಂದರ ಸಂದೇಶ ಕೊಟ್ಟಿದ್ದಾರೆ. ಇಡೀ ದೇಶ ಮೆಚ್ಚುವಂತಹ ಸಂದೇಶವದು’ ಎಂದು ಖುಷಿಯಿಂದ ಹೇಳಿಕೊಂಡರು ಜಗ್ಗೇಶ್.
ಇದೇ ವೇಳೆ ನಿರ್ಮಾಪಕ ಕೆ.ಎ.ಸುರೇಶ್ ಅವರ ಸಿನಿಮಾ ಪ್ರೀತಿ ಹಾಗೂ ತಾಳ್ಮೆಯ ಬಗ್ಗೆಯೂ ಮಾತನಾಡಿದರು. “ನಿರ್ಮಾಪಕ ಸುರೇಶ್ ಸಿನಿಮಾವನ್ನು ತುಂಬಾನೇ ಪ್ರೀತಿಸುವ ವ್ಯಕ್ತಿ. ಜೊತೆಗೆ ಅಷ್ಟೇ ತಾಳ್ಮೆ ಇರುವ ವ್ಯಕ್ತಿ. ಈ ಸಿನಿಮಾ ಅವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಈ ಸಿನಿಮಾಕ್ಕೆ ಏನೇ ತೊಂದರೆ ಆದರೂ ನಾನು ಅವರ ಜೊತೆ ನಿಲ್ಲುತ್ತೇನೆ’ ಎಂದರು.
ನಿರ್ದೇಶಕ ವಿಜಯ ಪ್ರಸಾದ್ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಜೊತೆಗೆ, ಮನುಷ್ಯ-ಮನುಷ್ಯರನ್ನು ಪ್ರೀತಿಸಿದರೆ ಎಲ್ಲವೂ ಚೆನ್ನಾಗಿರುತ್ತದೆ. ಇವತ್ತಿನ ಸಮಾಜಕ್ಕೆ ಇದು ಮುಖ್ಯ ಕೂಡಾ. ಇಂತಹ ಅರಿವು ಮೂಡಿಸುವ ಸಿನಿಮಾ “ತೋತಾಪುರಿ’ ಎಂದರು.
ನಿರ್ಮಾಪಕ ಸುರೇಶ್ ಕೂಡಾ ಇದು ಇಡೀ ದೇಶ ಮೆಚ್ಚುವ ಸಿನಿಮಾವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಳಿದಂತೆ ನಾಯಕಿ ಅದಿತಿ ಪ್ರಭುದೇವ, ಧನಂಜಯ್, ವೀಣಾ ಸುಂದರ್, ಸುಮನ್ ರಂಗನಾಥ್ ಸೇರಿದಂತೆ ಚಿತ್ರದ ಕಲಾವಿದರು “ತೋತಾಪುರಿ’ ಅನುಭವ ಹಂಚಿಕೊಂಡರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.