ಸ್ಮೈಲ್ ಎಸೆದ ಯಶ್‌! ನಗುವೊಂದು ಆಯುಧ, ನಗುವೊಂದು ಔಷಧ


Team Udayavani, Jan 20, 2017, 3:45 AM IST

Smile-Please_(150).jpg

“ಗಾಂಧಿನಗರಕ್ಕೆ ಬಂದ ಸಂದರ್ಭದಲ್ಲಿ ಬಹುತೇಕ ನಿರ್ಮಾಪಕರ ಹಿಂದೆ ಅಲೆದಾಡಿದ್ದುಂಟು. ಆದರೆ, ಕೆ.ಮಂಜು ಅವರನ್ನು ಭೇಟಿ ಮಾಡಿ ಕಥೆ ಹೇಳಿದ ಎರಡು ದಿನದಲ್ಲೇ ಚಿತ್ರಕ್ಕೆ ಚಾಲನೆ ಸಿಕ್ಕಿತು’

“ನಗು ಎಂಬ ವೆಪನ್‌ ಲೈಫ್ನಲ್ಲಿದ್ದರೆ ಏನು ಬೇಕಾದರೂ ಸಾಧಿಸಬಹುದು. ಜಗತ್ತಿನಲ್ಲಿ ಭಾಷೆ ಗೊತ್ತಿಲ್ಲದಿದ್ದರೂ, ಒಂದು ಸ್ಮೈಲ್ನಿಂದ ಗೆಳೆತನವೇ ಸೃಷ್ಟಿಯಾಗುತ್ತೆ…’ ಹೀಗೆ ಸ್ಮೈಲ್ ಮಾಡುತ್ತಲೇ ಹೇಳುತ್ತಾ ಹೋದರು ನಟ ಯಶ್‌. 
ಸಂದರ್ಭ, “ಸ್ಮೈಲ್ ಪ್ಲೀಸ್‌’ ಆಡಿಯೋ ಸಿಡಿ ಬಿಡುಗಡೆ. ಚಿತ್ರದ ಮೂರು ಹಾಡುಗಳು ಮತ್ತು ಟ್ರೇಲರ್‌ವೊಂದನ್ನು ತೋರಿಸಿದ ಚಿತ್ರತಂಡ, ಯಶ್‌ ಅವರಿಂದ ಆಡಿಯೋ ಸಿಡಿ ಬಿಡುಗಡೆ ಮಾಡಿಸಿತು. ಸಿಡಿ ರಿಲೀಸ್‌ ಮಾಡಿದ ಯಶ್‌, “ಚಿತ್ರದ ಹಾಡು ಮತ್ತು ಟ್ರೇಲರ್‌ ನೋಡಿದಾಗ, ಎಲ್ಲೋ ಒಂದು ಕಡೆ ಪಾಸಿಟಿವ್‌ ವಿಷಯಗಳಿವೆ ಎನಿಸುತ್ತೆ. ಲೈಫ್ ಬಗ್ಗೆ ಸಿನಿಮಾ ಇರಬಹುದೇನೋ. ಚಿಕ್ಕ ಚಿಕ್ಕ ಎಮೋಷನ್ಸ್‌ ಇಲ್ಲಿ ಕಾಣಿಸುತ್ತಿವೆ. ಎಷ್ಟೇ ಕಷ್ಟವಿದ್ದರೂ, ಒಂದು ನಗು ಎಲ್ಲವನ್ನೂ ಮರೆಸುತ್ತೆ. ಇದೊಂದು ಒಳ್ಳೆಯ ಸಿನಿಮಾ ಆಗಿ ಹೊರಬರಲಿ. ಇಲ್ಲಿರುವ ಪ್ರತಿಯೊಬ್ಬರಿಗೂ ಚಿತ್ರ ಯಶಸ್ಸು ಕೊಡಲಿ’ ಅಂತ ಶುಭಹಾರೈಸಿದರು ಯಶ್‌.

ನಿರ್ದೇಶಕ ರಘು ಸಮರ್ಥ್ಗೆ “ಸ್ಮೈಲ್ ಪ್ಲೀಸ್‌’ ಮೊದಲ ಚಿತ್ರ. ಹಾಗಾಗಿ, ಅಂದು ಅವರು ಎಲ್ಲರಿಗೂ ಥ್ಯಾಂಕ್ಸ್‌ ಹೇಳುವುದನ್ನು ಮರೆಯಲಿಲ್ಲ. ಈ ಸಿನಿಮಾದ ಹಿಂದೆ ದುಡಿದ ಪ್ರತಿಯೊಬ್ಬರ ಸಹಕಾರವನ್ನು ಗುಣಗಾನ ಮಾಡಿದರು. “ಗಾಂಧಿನಗರಕ್ಕೆ ಬಂದ ಸಂದರ್ಭದಲ್ಲಿ ಬಹುತೇಕ ನಿರ್ಮಾಪಕರ ಹಿಂದೆ ಅಲೆದಾಡಿದ್ದುಂಟು. ಆದರೆ, ಕೆ.ಮಂಜು ಅವರನ್ನು ಭೇಟಿ ಮಾಡಿ ಕಥೆ ಹೇಳಿದ ಎರಡು ದಿನದಲ್ಲೇ ಚಿತ್ರಕ್ಕೆ ಚಾಲನೆ ಸಿಕ್ಕಿತು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ.

ಮನರಂಜನೆ ಇಲ್ಲಿ ಹೈಲೆಟ್‌ ಆಗಿದೆ. ಜಗದೀಶ್‌ ವಾಲಿ ಚಿತ್ರದ ಕಣ್ಣು. ಅನೂಪ್‌ ಸೀಳಿನ್‌ ನನ್ನ ನಿರೀಕ್ಷೆ ಮೀರಿ ಹಾಡುಗಳನ್ನು ಕೊಟ್ಟಿದ್ದಾರೆ. ಇನ್ನು, ಗುರುನಂದನ್‌, ಕಾವ್ಯಾಶೆಟ್ಟಿ, ರಂಗಾಯಣ ರಘು ಎಲ್ಲರೂ ನನ್ನ ಕನಸಿಗೆ ಬಣ್ಣ ತುಂಬಿದ್ದಾರೆ. ಮೊದಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ಬದಿಗೊತ್ತಿ ಸಹಕರಿಸಿ’ ಎಂದರು ರಘು ಸಮರ್ಥ್.

“ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್‌’ ಎಂದು ಮಾತಿಗಿಳಿದ ಗುರುನಂದನ್‌, “ಇಲ್ಲಿ ಮನರಂಜನೆಯೇ ಹೈಲೆಟ್‌. ಮೊದಲ ಸಿನಿಮಾ ನೋಡಿದವರಿಗೆ ಈ ಚಿತ್ರವೂ ಇಷ್ಟವಾಗಲಿದೆ. ಕುಟುಂಬ ಸಮೇತ ಬಂದು ಸಿನಿಮಾ ನೋಡಬೇಕು. ಇದು ಎಲ್ಲಾ ವರ್ಗಕ್ಕೂ ಸೀಮಿತವಾದ ಸಿನಿಮಾ’ ಅಂದರು ಗುರುನಂದನ್‌.

ಕೆ.ಮಂಜು ಇಲ್ಲಿ ಹಾಡೊಂದಕ್ಕೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರಂತೆ. ಅಷ್ಟೇ ಅಲ್ಲ, ಹಾಡಲ್ಲಿ ನಾಯಕ, ನಾಯಕಿ ನಡುವೆ ಲಿಪ್‌ಲಾಕ್‌ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರಂತೆ. ಕಥೆ, ಸಂದರ್ಭಕ್ಕೆ ಪೂರಕವಾಗಿದ್ದರಿಂದ ಲಿಪ್‌ಲಾಕ್‌ ಮಾಡಿಸಲಾಗಿದೆ ಎಂಬುದು ಮಂಜು ಮಾತು.

ಇನ್ನು, ಕಾವ್ಯಾ ಶೆಟ್ಟಿಗೆ ಶೀರ್ಷಿಕೆಯಂತೆಯೇ ಸಿನಿಮಾವೂ ಮೂಡಿಬಂದಿರುವ ಖುಷಿ ಇದೆಯಂತೆ. ಸಿನಿಮಾಗೆ ಬಂದವರು ಆರಂಭದಿಂದ ಅಂತ್ಯದಿಂದ ನಗ್ತಾನೇ ಇರ್ತಾರೆ ಎಂಬ ಗ್ಯಾರಂಟಿ ಕೊಟ್ಟರು ಕಾವ್ಯಾ. ನೇಹಾ ಪಾಟೀಲ್‌, ಅನೂಪ್‌ ಸೀಳಿನ್‌, ರಂಗಾಯಣ ರಘು “ಸ್ಮೈಲ್’ ಕೊಡುತ್ತಲೇ ಸಿನಿಮಾ ಬಗ್ಗೆ ಮಾತಾಡಿ ಸುಮ್ಮನಾದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.