Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!


Team Udayavani, Jul 21, 2024, 11:42 AM IST

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

ನನ್ನ ಜೀವನದ ಮುಖ್ಯ ಗುರುಗಳು ಅಂದ್ರೆ ಅದು ನನ್ನ ತಂದೆ ತಾಯಿ. ತಂದೆ ಚೆಟ್ಟಿಚಾ ಅವರು ಬಸ್‌ ಡ್ರೈವರ್‌ ಆಗಿದ್ರು, ಬೇರೆ ಊರುಗಳಿಗೆಲ್ಲ ಹೋಗ್ತಿದ್ರು. ಹಾಗಾಗಿ ಹೆಚ್ಚು ಸಮಯ ತಾಯಿಯೊಂದಿಗೆ ಕಳೆದೆ. ನನ್ನ ತಾಯಿ ಕಾವೇರಿ ಅವರಿಂದ ಶಿಸ್ತು ಬಹಳ ಕಲಿತೆ. ನನ್ನ ತಾಯಿಯ ತಂದೆ ಸೈನ್ಯದಲ್ಲಿದ್ದರು. ಹಾಗಾಗಿ ನಮ್ಮ ಮನೆಯಲ್ಲಿ ಶಿಸ್ತಿನ ವಾತಾವರಣ. ತಂದೆ-ತಾಯಿಯಿಂದ ಕಲಿತದ್ದು ಬಹಳಷ್ಟಿದೆ. ಸಿನಿಮಾ ರಂಗಕ್ಕೆ ಬಂದಾಗ ನಾನು ಹೆಚ್ಚು ಪ್ರಭಾವಿತಳಾಗಿದ್ದು ಡಾ. ರಾಜಕುಮಾರ್‌ ಹಾಗೂ ಡಾ. ವಿಷ್ಣುವರ್ಧನ್‌ ಅವರಿಂದ. ಸಿನಿಮಾ ಕ್ಷೇತ್ರದಲ್ಲಿ ಅವರೇ ನನ್ನ ಗುರುಗಳು.

ಅಣ್ಣಾವ್ರ ಕಾಳಜಿ… “ಸವ್ಯಸಾಚಿ’ ಚಿತ್ರೀಕರಣ ಸಂದರ್ಭದಲ್ಲಿ ಮೊದಲ ಬಾರಿಗೆ ಡಾ. ರಾಜಕುಮಾರ್‌ ಅವರನ್ನು ಭೇಟಿಯಾಗಿದ್ದೆ. ಅವರನ್ನು ಮಾತನಾಡಿಸಲು ಭಯ ಆಗಿತ್ತು. ಅವರ ವೈಟ್‌ ಆ್ಯಂಡ್‌ ವೈಟ್‌ ಉಡುಗೆ, ಯಾರು ಯಾವ ಚಿತ್ರದಲ್ಲಿ ಬಿಝಿ ಇದಾರೆ ಇದನ್ನೆಲ್ಲ ತಿಳಿದುಕೊಳ್ಳೋದು, ಸೆಟ್‌ಗೆ ಬಂದು ಭೇಟಿಯಾಗೋದು ಇದೆಲ್ಲ ಅವರಿಗೆ ಆಸಕ್ತಿ ಇತ್ತು. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಹಂಸಲೇಖ ಅವರು “ಓಂ” ಚಿತ್ರದ ಹಾಡಿನ ರೆಕಾರ್ಡಿಂಗ್‌ ಮಾಡುತ್ತಿದ್ದರು. ಆಗ ಅಣ್ಣಾವ್ರು ಅಲ್ಲಿಗೆ ಬಂದರು. ಅವರು ಬಂದಾಗ ಎಲ್ಲರೂ ಎದ್ದು ನಿಂತ್ವಿ. ಅವರೊಂದಿಗೆ ಯಾವ ಚಿತ್ರದಲ್ಲೂ ನಾನು ನಟಿಸಿಲ್ಲ. ಆದರೆ, ಅವರ ಹಾವ-ಭಾವ, ನಡೆ-ನುಡಿಯಿಂದ ಕಲಿತದ್ದು ಬಹಳ.

“ಸವ್ಯಸಾಚಿ’ ಚಿತ್ರದ ಹಾಡಿನ ಚಿತ್ರೀಕರಣ ನಡೆದಿತ್ತು. ನಾನು ಅಚಾನಕ್ಕಾಗಿ ಕೆಳಗೆ ಬಿದ್ದೆ. ಆಗ ನನ್ನ ತಲೆಗೆ ಪಿನ್‌ ಚುಚ್ಚಿ ಸಣ್ಣಗೆ ರಕ್ತ ಬಂತು. ಕೂಡಲೇ ಅಣ್ಣಾವ್ರು ಎದ್ದು ಬಂದು “ಏನಾಯ್ತು, ಆಸ್ಪತ್ರೆಗೆ ಹೋಗಬೇಕಾ, ಚೆನ್ನಾಗಿದೀಯಾ?’ ಅಂತೆಲ್ಲ ವಿಚಾರಿಸಿದರು. ಎಲ್ಲರಿಗೂ ಇದೇ ರೀತಿ ಕಾಳಜಿ ತೋರಿಸುತ್ತಿದ್ದರು. “ಓಂ’ ಸಿನಿಮಾ ನೋಡಿದ ಅಣ್ಣಾವ್ರು ಹಾಗೂ ಪಾರ್ವತಮ್ಮನವರು, ಆಗ ನನ್ನ ಬಳಿ ಫೋನ್‌ ಇರಲಿಲ್ಲ; ನಮ್ಮ ಮನೆ ಹತ್ತಿರದ ಒಂದು ಅಂಗಡಿಗೆ ಫೋನ್‌ ಮಾಡಿ ನನ್ನ ಜೊತೆ ಮಾತಾಡಿದ್ರು. “ಬಹಳ ಚೆನ್ನಾಗಿ ಮಾಡಿದೀಯಾ’ ಅಂತ ಹೇಳಿದ್ರು. ಅಣ್ಣಾವ್ರು ಈ ಮಾತು ಹೇಳಿದ್ರಲ್ಲ ಅನ್ನೋದೇ ದೊಡ್ಡ ಖುಷಿ ನನಗೆ. ಅಷ್ಟು ಸಾಕಾಗಿತ್ತು, ಅವರ ಹೊಗಳಿಕೆ ನನಗೆ ಅವಾರ್ಡ್‌ ಕೊಟ್ಟಂಗೆ ಆಗಿತ್ತು.

ಸಹೃದಯಿ ವಿಷ್ಣುವರ್ಧನ್‌!:  ಡಾ. ವಿಷ್ಣುವರ್ಧನ್‌ ಅವರಿಂದ ಸಮಯ ಪಾಲನೆ, ಶಿಸ್ತು ಕಲಿತೆ. “ಪರ್ವ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಡೇಟ್‌ ವಿಷಯವಾಗಿ ನನ್ನ ಮತ್ತು ನಿರ್ಮಾಪಕರ ನಡುವೆ ದೊಡ್ಡ ಗಲಾಟೆ ಆಗಿತ್ತು. ಆಗ ವಿಷ್ಣು ಅವರು ಖುದ್ದು ನನ್ನ ಮನೆಗೆ ಬಂದು ನನ್ನನ್ನು ಸಮಾಧಾನ ಮಾಡಿದರು. ಆ ಕಷ್ಟದ ಸಮಯದಲ್ಲಿ ನನಗೆ ಬೆಂಬಲಿಸಿ ಎಂದು ಯಾರಿಗೂ ನಾನು ಕೇಳಿಕೊಂಡಿರಲಿಲ್ಲ. ಆದರೆ, ಒಬ್ಬ ಕಲಾವಿದರ ಬೆಲೆ ಇನ್ನೊಬ್ಬ ಕಲಾವಿದರಿಗೆ ಮಾತ್ರ ಗೊತ್ತಾಗೋದು. ಆ ಸಮಯದಲ್ಲಿ ವಿಷ್ಣು ಅವರು ನನ್ನ ಜೊತೆ ನಿಂತಿದ್ದನ್ನು, ನಾನು ಸಾಯುವವರೆಗೂ ಮರೆಯಲ್ಲ. ಅವರ ಸಹೃದಯ, ಒಳ್ಳೆಯ ಮನಸ್ಸು ಇಷ್ಟ ಆಯ್ತು.

-ಪ್ರೇಮಾ, ನಟಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

18

World Dog Day: ನಾನು, ನನ್ನ ಕಾಳ..!

Krishna Janmashtami Special: ಸಂಭವಾಮಿ ಯುಗೇ ಯುಗೇ…

Krishna Janmashtami Special: ಸಂಭವಾಮಿ ಯುಗೇ ಯುಗೇ…

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.