![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Apr 19, 2017, 3:45 AM IST
ಕಸಗುಡಿಸುವಾಕೆ ಟಾಪ್ ಮಾಡೆಲ್ ಆದ ಕತೆ
ಕಸ ಗುಡಿಸುವ ಆ ಸುಂದರಿಗೆ ಸಾವಿರಕ್ಕೂ ಹೆಚ್ಚು ಮದುವೆ ಪ್ರಪೋಸಲ್ಗಳು, ನೂರಾರು ಮಾಡೆಲಿಂಗ್ ಏಜೆನ್ಸಿಗಳಿಂದ ಆಹ್ವಾನ, ಜಾಹೀರಾತುಗಳಲ್ಲಿ ಅಭಿನಯಿಸುವ ಅವಕಾಶ. ಇವೆಲ್ಲವೂ ಒಂದೇ ರಾತ್ರಿಗೆ ಅವಳ ಮನೆ ಬಾಗಿಲು ಬಡಿದವು!
ಬೀದಿಯಲ್ಲಿ ಕಸ ಗುಡಿಸುವವರ ಫೋಟೊಗಳನ್ನು ಛಾಯಾಗ್ರಾಹಕನೊಬ್ಬ ತೆಗೆದಿದ್ದ. ಅವುಗಳಲ್ಲಿ ಒಂದು ಫೋಟೊ ವಾಟ್ಸಾಪುಗಳಲ್ಲಿ ಸಿಕ್ಕಾಪಟ್ಟೆ ಹರಿದಾಡತೊಡಗಿತು. ಫೋಟೋ ಕಂಡ ಪಡ್ಡೆ ಹುಡುಗರಂತೂ ಹುಚ್ಚೆದ್ದು ಹೋದರು. ಇಷ್ಟಕ್ಕೂ ಅದು ಒಬ್ಬಳು ಬೀದಿ ಕಸ ಗುಡಿಸುವ ಹುಡುಗಿಯ ಫೋಟೋ! ರಾತ್ರೋರಾತ್ರಿ ಪ್ರಚಾರ ಪಡೆಯುವುದಕ್ಕೆ ಕಾರಣ ಇರಬೇಕಲ್ಲ? ಇದೆ. ಆ ಕಸ ಗುಡಿಸುವ ಹುಡುಗಿ ಅದ್ಭುತ ಸುಂದರಿಯಾಗಿದ್ದಳು. ಆಕೆ ಬಾಗುತ್ತಾ, ಬಳುಕುತ್ತಾ ಬ್ರೆಝಿಲ್ನ ರಿಯೋ ಡಿ ಜನೈರೋದ ಬೀದಿಗಳನ್ನು ಶುಚಿಗೊಳಿಸುವಾಗ ತುಳುಕುತ್ತಿದ್ದ ಅವಳ ತುಂಬು ಸೌಂದರ್ಯ ಕಂಡು ಮಂದಿ ಸುಸ್ತಾದರು. ಹೆಂಗಳೆಯರಂತೂ, ಅವಳತ್ತ ಅಸೂಯೆಯ ನೋಟ ಬೀರಿದರು.
ಮೊದ ಮೊದಲು ಆಕೆಯನ್ನು ಪೌರ ಕಾರ್ಮಿಕರ ಸಮವಸ್ತ್ರದಲ್ಲಿ ನೋಡಿದವರು ಈಕೆ ಬೀದಿ ಕಸ ಗುಡಿಸುವಾಕೆ ಆಗಿರಲು ಸಾಧ್ಯವೇ ಇಲ್ಲ ಎಂದುಕೊಂಡರು. ಆದರೆ ಅವರೆಲ್ಲರ ತಲೆ ಮೇಲೆ ಹೊಡೆದಂತೆ ಆಕೆಯ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿ ಸಂದರ್ಶನ ಬಂದಾಗಲೇ ಅಲ್ಲಿನ ಮಂದಿ ನಿಟ್ಟುಸಿರಿಟ್ಟಿದ್ದು. ಅದು ಅಂತಿಂಥ ನಿಟ್ಟುಸಿರಲ್ಲ, ಇದು ಹೇಗೆ ಸಾಧ್ಯ ಎನ್ನುವ ಅಚ್ಚರಿಯ ನಿಟ್ಟುಸಿರು. ಮೈ ಬಿಸಿಯುಕ್ಕಿಸುವ ಇಂಥ ಅನುರೂಪ ಸುಂದರಿ ಬೀದಿ ಗುಡಿಸುತ್ತಿದ್ದಾಳಲ್ಲ ಎನ್ನುವ ಹತಾಶೆಯ ನಿಟ್ಟುಸಿರು!
ಆವಳ ಹೆಸರು ರೀಟಾ ಮಟೋಸ್. ಬ್ರೆಝಿಲ್ನ ರಿಯೋ ಡಿ ಜನೈರೋನಲ್ಲಿ ಪೌರ ಕಾರ್ಮಿಕ ವೃತ್ತಿ ಮಾಡುತ್ತಿದ್ದಾಳೆ. ಆ ಒಂದು ಫೋಟೋದಿಂದಾಗಿ ಅವಳ ಬದುಕೇ ಈಗ ಬದಲಾಗಿದೆ. ಸಾವಿರಕ್ಕೂ ಹೆಚ್ಚು ಮದುವೆ ಪ್ರಪೋಸಲ್ಗಳು, ನೂರಾರು ಮಾಡೆಲಿಂಗ್ ಏಜೆನ್ಸಿಗಳಿಂದ ಆಹ್ವಾನ, ಜಾಹೀರಾತುಗಳಲ್ಲಿ ಅಭಿನಯಿಸುವ ಅವಕಾಶ. ಇವೆಲ್ಲವೂ ಒಂದೇ ಸಲಕ್ಕೆ ಅವಳ ಮನೆಯ ಬಾಗಿಲು ಬಡಿದಿವೆ. ಇಂಟರ್ನೆಟ್ ಸೆನ್ಸೇಷನ್ನಿಂದಾಗಿ ಖ್ಯಾತಿ ಪಡೆದ ರೀಟಾ ಆ ಪ್ರಚಾರವನ್ನು ವೃತ್ತಿ ಬದುಕಿಗೆ ಬಳಸಿಕೊಳ್ಳುತ್ತಿದ್ದಾಳೆ.
ಇಷ್ಟೆಲ್ಲಾ ಆಗುತ್ತಿರುವ ಹೊತ್ತಿನಲ್ಲೇ, ಯಾವ ಹೆಣ್ಣಿನಲ್ಲಿಯೂ ಇಲ್ಲದೇ ಇರುವಂಥದ್ದು ನನ್ನ ಬಳಿ ಏನಿದೆ ಅಂತ ಇಷ್ಟು ಪಡ್ಡೆ ಹುಡುಗರು ತನ್ನ ಹಿಂದೆ ಬಿದ್ದಿದ್ದಾರೆ ಎಂದು ಆಕೆ ಬೆರಗಿನಿಂದ ಕೇಳಿದ್ದಾಳೆ! ಮಾಡೆಲಿಂಗ್ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲು ಹೊರಟ ರೀಟಾ ಏನೇ ಸಾಧನೆ ಮಾಡುವುದಿದ್ದರೂ ಬೆಳಗ್ಗೆ ಬೀದಿ ಗುಡಿಸಿದ ನಂತರವೇ ಎನ್ನುತ್ತಾಳೆ. ಹೀಗಾಗಿ ಆಕೆಗೆ ಪೌರ ಕಾರ್ಮಿಕ ವೃತ್ತಿಯನ್ನು ಬಿಡುವುದಿಲ್ಲ. ಈಗಲೂ ಆಕೆಯ ಮೂಲ ವೃತ್ತಿ ಅದುವೇ. ಮಿಕ್ಕವೇನಿದ್ದರೂ ಪಾರ್ಟ್ಟೈಂ!
– ರೋಸ್ ಮೇರಿ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.