ಕಡಜದ ಕುಟುಕು


Team Udayavani, Jan 12, 2020, 4:03 AM IST

7

ಸಾಂದರ್ಭಿಕ ಚಿತ್ರ

ಮೂಲೆಯ ದಿವಾನ್‌ ಮೇಲೆ ಒಣಗಿದ್ದ ಬಟ್ಟೆಗಳ ರಾಶಿ ಗುಡ್ಡದಂತೆ ಕಂಗೊಳಿಸುತ್ತಿತ್ತು. ಹೀಗೆಯೇ ಬಿಟ್ಟರೆ ಇದು ಎವರೆಸ್ಟ್‌ ಶಿಖರವಾಗಿ ವಿಶ್ವದಾಖಲೆ ಸೃಷ್ಟಿಸುತ್ತದೆ ಎಂದು ಗೊಣಗುತ್ತ, ಎಲ್ಲರ ಮೇಲೆ ರೇಗಾಡುತ್ತ ಬಟ್ಟೆ ಮಡಚಲು ಕುಳಿತೆ ಅಷ್ಟೇ; ಇಂಜಕ್ಷನ್‌ ಅಲ್ಲ, ದೊಡ್ಡ ದಬ್ಬಳ ಚುಚ್ಚಿದಷ್ಟು ನೋವು. ಅದೂ ಹಿಂಭಾಗದಲ್ಲಿ! ಅಸಾಧ್ಯ ನೋವು. ಉರಿಗೆ ಕಣ್ಣಲ್ಲಿ ನೀರು ಬಂತು. ಎಲ್ಲಿ ಏನು ಎಂದು ಅತ್ತಿತ್ತ ನೋಡುವಷ್ಟರಲ್ಲಿ ಮತ್ತೂಮ್ಮೆ ಅದೇ ಜಾಗಕ್ಕೆ ಕುಟುಕು ! ಅದರೊಂದಿಗೇ ಬಟ್ಟೆಯ ರಾಶಿಯ ಮಧ್ಯದಿಂದ ಕಡಜವೊಂದು “ಗುಂಯ್‌’ ಎಂದು ಸದ್ದು ಮಾಡುತ್ತ ಹೊರಬಂದು ಹಾರಾಡತೊಡಗಿತ್ತು.ನನಗೆ ನಡೆದ ಘಟನೆ ಏನೆಂದು ಮನದಟ್ಟಾಗಿತ್ತು.

“ಹಾ’ ಎಂದು ಆರ್ತನಾದ ಮಾಡಿದೆ. ಮನೆಯವರೆಲ್ಲ ಓಡಿ ಬಂದರು. “ಬಟ್ಟೆ ಮಡಚುವ ಕೆಲಸಕ್ಕೆ ಇಷ್ಟು ಅಳು-ಕೂಗಾಟವೆ?’ ಎಂದು ಗಂಡ ಸಮಾಧಾನಿಸಿದ. ನಾನು ನರಳಾಡುತ್ತಲೇ ವಿಷಯ ತಿಳಿಸಿದೆ. ಅರ್ಧ ಕನಿಕರ, ಅರ್ಧ ಹಾಸ್ಯ ಬೆರೆತ ದನಿಯಲ್ಲಿ “ಅಯ್ಯೋ ಪಾಪವೆ! ಕಚ್ಚುವುದು ಕಚ್ಚಿತು, ಎಂಥ ಜಾಗದಲ್ಲಿ’ ಎಂದು ವಿಶ್ಲೇಷಣೆಗೆ ಶುರುವಾಯಿತು! “ಎರಡು ಸಲ ಕಚ್ಚಿದೆ ಬೇರೆ’ ಎಂಬ ಒಗ್ಗರಣೆ!
ಅಷ್ಟರಲ್ಲಿ ಮಕ್ಕಳ ಆಗಮನ. “ಯಾವಾಗಲೂ ಬೈಯುವ ನಿನ್ನ ಮೇಲೆ ಕಡಜಕ್ಕೂ ಬೇಸರವಾಗಿ ಹೀಗೆ ಮಾಡಿದೆ’ ಎಂದು ಅವರು ಅಭಿಪ್ರಾಯಿಸಿದರು.

ಅಷ್ಟರಲ್ಲಿ ಭೂಮಿಯೇ ನಡುಗುವಂತೆ ಮನೆ ಸಹಾಯಕಿ ಮಂಜು ಧಾವಿಸಿದಳು. ಆಕೆಯ ಪೂರ್ಣ ಹೆಸರು ಮಂಜುಳಾ. “ಏನಾಯಿತು?’ ಎಂದು ವಿಚಾರಿಸತೊಡಗಿದವಳೇ, ಕಡಜ ಕಚ್ಚಿದ ವಿಷಯವನ್ನು ಅರಿತು ಗಾಬರಿಯಿಂದ ಕಣ್ಣು, ಉಸಿರು, ನಾಲಿಗೆ ಎಲ್ಲ ಪರೀಕ್ಷಿಸಿದಳು. “ಕಡಜವಾದರೂ ಎಲ್ಲಿ ಎತ್ತ ಎಂದು ನೋಡಿ ಕಚ್ಚಬಾರದಿತ್ತೆ?’ ಎಂದು ಕಡಜದ ವರ್ತನೆಯನ್ನು ಭಾಗಶಃ ಸಮರ್ಥಿಸಿದಳು. ಜೊತೆಗೆ, ಅವಳ ಯಾರೋ ಸಂಬಂಧಿಕರು ಈ ಕಡಜ ಕಚ್ಚಿ ಕೆಲಸಮಯದಲ್ಲೇ ನಂಜು ತಲೆಗೇರಿ ಸಾಯುವ ಸ್ಥಿತಿಗೆ ಬಂದಿದ್ದರು- ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಸಾಭಿನಯವಾಗಿ ನೀಡಿದಳು. ಅಲ್ಲಿಯವರೆಗೆ, “ಇರಲಿ ಕಡಜ ತಾನೇ’ ಎಂಬ ಉಡಾಫೆಯಲ್ಲಿದ್ದ ನಮ್ಮ ಮನೆಯ ಸದಸ್ಯರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಯಿತು. ಮಂಜು ತಾನೇ ವೈದ್ಯಳಂತೆ ನನ್ನನ್ನು ಬೋರಲು ಮಲಗಲು ಹೇಳಿದಳು. ಬಳಿಕ, “ಈ ಕಡಜಕ್ಕೆ ತಕ್ಕ ಶಾಸ್ತಿ ಮಾಡ್ತೀನಿ’ ಎಂಬಂತೆ ಒಳಗೆ ನಡೆದಳು. ಮಂಜು ಕೈಯಲ್ಲಿ ಕತ್ತಿ ಹಿಡಿದುಕೊಂಡು ಬಂದಳು. ಅದರ ಅಲಗು ಫ‌ಳ ಫ‌ಳ ಹೊಳೆಯುತ್ತಿತ್ತು. “ಅಷ್ಟು ಪುಟ್ಟ ಕಡಜ ಓಡಿಸಲು ಇಷ್ಟು ದೊಡ್ಡ ಕತ್ತಿಯೇ, ಗುಬ್ಬಿಗೆ ಬ್ರಹ್ಮಾಸ್ತ್ರವೇ’ ಎಂಬ ಅನುಮಾನ ನನ್ನನ್ನು ಕಾಡಿತು.

ಕಡಜವನ್ನು ಸವರಬೇಕಾದ ಅವಳ ಕೈಯ ಕತ್ತಿ ನನ್ನ ಹಿಂಭಾಗವನ್ನು ಬಲವಾಗಿ ತೀಡಿತ್ತು. ನನಗೆ ಗಾಬರಿ! ಇವಳೇನು ನನ್ನನ್ನು ಕತ್ತರಿಸುತ್ತಾಳೆಯೇ ಎಂದು ಬೆಚ್ಚಿದೆ. “ಕಡಿದ ಜಾಗಕ್ಕೆ ಕತ್ತಿ ಹಾಕಿ ಉಜ್ಜಬೇಕಕ್ಕಾ. ಆಗ್ಲೆ ಮುಳ್ಳಿದ್ದರೆ ಹೊರಗೆ ಬರೋದು. ಅದು ಇದ್ರೆ ನೋವು, ಉರಿ-ಊತ ಕಡೆ ಆಗಾದಿಲ್ಲ. ನೀನು ಹಿಂಗೆ ವದರಾಡಿ ಕೊಸರಾಡಿದ್ರೆ ನಂಗೊತ್ತಿಲ್ಲ, ಏನೂ ಆಗಬಹುದು. ನನ್ನ ಕೈ ಮತ್ತು ಕತ್ತಿ ಸರ್ಯಾಗಿ ಕೆಲ್ಸ ಮಾಡ್ತಾವೆ’ ಎಂಬ ವಾರ್ನಿಂಗ್‌ ಕೊಟ್ಟಳು. ನನ್ನ ಹಿಂಭಾಗವು ಕಡಜದ ಕುಟುಕಿನ ಜೊತೆಗೆ ಕತ್ತಿಯ ಏಟಿಗೆ ಈಡಾಗುವ ಸಾಧ್ಯತೆಯನ್ನು ನೆನೆದು ಕಂಗಾಲಾದೆ.

ಈ ಕತ್ತಿ ವರಸೆ ನಡೆಸುವಾಗಲೇ ಮನೆಯವರಿಗೆ, “ಹೊರಗೆ ಕಡಜದ ಗೂಡಿದ್ದರೆ ಹುಡುಕಿ ತೆಗೆಯಿರಿ. ಮಕ್ಕಳು ಆಡುವ ಜಾಗದಲ್ಲಿದ್ದರೆ ಕಷ್ಟ’ ಎಂಬ ಆರ್ಡರ್‌ ಬೇರೆ ನೀಡಿದ್ದಳು. ಅಷ್ಟರಲ್ಲಿ ತಂದೆ, ಮನೆಯ ಸಂಕಷ್ಟವನ್ನೆಲ್ಲ ಮರೆತು ಮಕ್ಕಳಿಗೆ ಪಾಠ ಶುರು ಮಾಡಿದ್ದ: “ಇರುವೆ-ಜೇನುಹುಳಗಳಂತೆ ಸಹಜೀವನ ಇವುಗಳದ್ದು! ಮರದ ಎಲೆ-ತೊಗಟೆ ಮತ್ತು ಎಂಜಲು ಬಳಸಿ ಗೂಡುಕಟ್ಟುತ್ತವೆ. ರೈತರಿಗೆ ಇವುಗಳಿಂದ ಬಹಳ ಸಹಾಯವಾಗುತ್ತದೆ, ಎಷ್ಟು ಆರ್ಟಿಸ್ಟಿಕ್‌ ಆಗಿದೆ ಗೂಡು’ ಅಂತ.

ನಾನು ನೋವಿನಿಂದ ಮುಲುಗುತ್ತಿದ್ದೆ. ಮಂಜು ಎಲ್ಲ ರೀತಿಯ ಉಪಚಾರ ಮಾಡಿ ಕಡೆಗೆ, “ನಿಂಗೆ ಯಾಕೆ ಕಚ್ಚಿದ್ದು ಅಂತ ಬಾಳ ಯೇಚೆ° ಮಾಡಿದೆ. ಆಗ ನೆನಪಾಯ್ತು. ಆ ದಿನ ನೀನು ಜೇನುಹುಳ ಗೂಡು ಕಟ್ಟೈತೆ ಅಂತ ನನ್ನ ಹತ್ರ ಬೈದೆ ನೋಡು! ಅದನ್ನು ಇದು ಕೇಳಸ್ಕೊಂಡೈತೆ. ಮನುಸ್ಯರಾದ್ರೆ ಬೇರೆಯವ್ರಿಗೆ ಬೈದ್ರೆ ಖುಶಿ ಪಡ್ತಾರೆ. ಇವು ಹಂಗಲ್ಲ. ಅದೂ ಇದೂ ಒಂದೇ ಜಾತಿ. ಹಾಗಾಗಿ, ಈ ರೀತಿ ಸೇಡು ತೀರಿಸಿಕೊಂಡೈತೆೆ’ ಎಂದು ಸಮಾಧಾನ ಮಾಡಿ, ನನ್ನನ್ನು ಬಿಡುಗಡೆ ಮಾಡಿದಳು.

ಆಮೇಲೆ ಕಡಜ ಕಚ್ಚಿದ ಜಾಗವನ್ನು ಚೆನ್ನಾಗಿ ಸೋಪು ನೀರಲ್ಲಿ ತೊಳೆದು, ಮೇಲೆ ಐಸ್‌ ಇಟ್ಟು ಮಾತ್ರೆ ನುಂಗಿ¨ªಾಯಿತು. ಆದರೂ ಎರಡು ದಿನಗಳ ಕಾಲ ನೋವು-ಉರಿ ಇತ್ತು. ಎಲ್ಲಕ್ಕಿಂತ ಮಿಗಿಲಾಗಿ ಕೂರಲು ಕೂಡ ಕಷ್ಟವಾಗುತ್ತಿತ್ತು. ಯೋಗಾಸನದ ಕಲಿತದ್ದು ಅನುಕೂಲವೇ ಆಯಿತೆನ್ನಿ.

ಸಮಸ್ಯೆ ಇಷ್ಟಕ್ಕೇ ಮುಗಿಯಲಿಲ್ಲ. ನಮ್ಮ ಮಂಜು ಯಾನೆ ಶ್ರೀಮತಿ ಮಂಜುಳಾರವರು ಊರಿನ ತುಂಬ, “ಅಕ್ಕನಿಗೆ ಕಡಜ ಕಡಿದಿದೆ’ ಎಂದು ಸುದ್ದಿ ಹರಡಿದ್ದಳು. ಅದಾದರೂ ಅಡ್ಡಿಯಿರಲಿಲ್ಲ. ಜೊತೆಗೆ ಕರಾರುವಕ್ಕಾಗಿ ಎಲ್ಲಿ ಕಚ್ಚಿದೆ ಎಂದು ಪ್ರಚಾರ ಮಾಡಿದ್ದಳು! ಅಪಪ್ರಚಾರದಲ್ಲಿ ಅವಳು ವಾಟ್ಸಾಪ್‌, ಫೇಸ್‌ಬುಕ್‌ಗಿಂತಲೂ ಮಿಗಿಲು. ಮರುದಿನ ವಾಕಿಂಗ್‌ಗೆ ಹೋದಾಗ‌ ಎಲ್ಲರೂ ಕಾಳಜಿಯಿಂದ ವಿಚಾರಿಸುವವರೇ! ನನಗೇಕೋ ಅವರ ಅನುಕಂಪದ ದೃಷ್ಟಿ ನನ್ನ ಹಿಂಭಾಗದತ್ತಲೇ ಇದೆ ಅನ್ನಿಸಿ ಮುಜುಗರವಾಗಿತ್ತು. ಆ ದಿನ ಸಂಜೆ, ಹಲ್ಲು ಕೀಳಿಸಲು ಮನೆಯ ಹತ್ತಿರದ ಪುಟ್ಟ ಹುಡುಗಿ ತಾಯಿಯೊಂದಿಗೆ ನನ್ನ ಕ್ಲಿನಿಕ್‌ಗೆ ಬಂದಿದ್ದಳು. “ಇಂಜೆಕ್ಷನ್‌ ಕೊಡುವಾಗ ಸಣ್ಣ ಸೊಳ್ಳೆ ಕಚ್ಚಿದ ಹಾಗಾಗುತ್ತೆ’ ಎಂದು ವಾಡಿಕೆಯಂತೆ ತಿಳಿಸಿದೆ. ಕೂಡಲೇ, “ನಿಮ್ಮ ಬಮ್‌ಗೆ ಬಿಗ್‌ ಬೀ ಕಚ್ಚಿ ತುಂಬ ಪೇನ್‌ ಆಯ್ತಲ್ಲ, ಅಷ್ಟಾಗಲ್ಲ ಅಲ್ವಾ!’ ಎನ್ನಬೇಕೆ? “ಇಲ್ಲ’ ಎಂದು ಅವಳಿಗೆ ಸಮಾಧಾನ ಹೇಳಿದೆ. ಒಟ್ಟಿನಲ್ಲಿ ಕಡಜವೂ ಮಂಜುವೂ ಸೇರಿ ನನ್ನ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದ್ದರು.

ಹೊಸವರ್ಷದಲ್ಲಂತೂ ಕಡಜ ಕಚ್ಚಿದರೂ ಅಡ್ಡಿಯಿಲ್ಲ , ಅದನ್ನು ಮಂಜುವಿಗೆ ಹೇಳುವುದೇ ಇಲ್ಲ ಎಂಬ ನಿರ್ಣಯವನ್ನು ತಳೆದಿದ್ದೇನೆ.

ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

18

World Dog Day: ನಾನು, ನನ್ನ ಕಾಳ..!

Krishna Janmashtami Special: ಸಂಭವಾಮಿ ಯುಗೇ ಯುಗೇ…

Krishna Janmashtami Special: ಸಂಭವಾಮಿ ಯುಗೇ ಯುಗೇ…

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.