Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…


Team Udayavani, Jun 16, 2024, 1:18 PM IST

Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…

ನಾನು ಮತ್ತು ಅಪ್ಪ ಯಾವಾಗಲೂ ನಮಗೆ ಅನ್ನಿಸಿದ್ದನ್ನು, ಮೆಚ್ಚುಗೆ ಮತ್ತು ಕೋಪವನ್ನು ಒಬ್ಬರಿಗೊಬ್ಬರು ಹೇಳಿಕೊಂಡೇ ಇದ್ದವರು. ಆದರೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಬೇಜಾರಾದಾಗ ಅದನ್ನು ಬೇಕಂತಲೇ ಮುಚ್ಚಿಡುತ್ತಿದ್ದೆವು. ಅದು ಅಮ್ಮನಿಗೆ ಮಾತ್ರ ಗೊತ್ತಿರುತ್ತಿತ್ತು.

ನನ್ನ ಅಪ್ಪ ಬಹಳ ಒಳ್ಳೆಯ ಲೇಖನ ಬರೆಯುತ್ತಾರೆಂದೋ, ನನ್ನ ಮಗಳ ಪುಸ್ತಕ ಚೆನ್ನಾಗಿದೆ ಎಂದೋ ನಾವಿಬ್ಬರೂ ಒಬ್ಬರಿಗೊಬ್ಬರು ಹೇಳಿಕೊಂಡಿದ್ದೇವೆ.

ನನ್ನ ಪ್ರಗ್ನೆನ್ಸಿ ಬಹಳ ಕಷ್ಟಕರವಾಗಿತ್ತು. ಪೂರ್ತಿ ಮನೆಯಲ್ಲೇ ಕಳೆಯಬೇಕಾಗಿತ್ತು. ಇಷ್ಟವಾಗಿದ್ದನ್ನು ತಿನ್ನೋದಕ್ಕೆ ಸಾಧ್ಯವಿರಲಿಲ್ಲ. ಆವಾಗಲೆಲ್ಲಾ ಅಪ್ಪನ ನೆನಪಾಗುತ್ತಿತ್ತು. ಅಪ್ಪ ನನ್ನನ್ನೇ ಅಷ್ಟು ಚೆನ್ನಾಗಿ ನೋಡಿಕೊಂಡಿದ್ದರು, ಇನ್ನು ಬರುವ ಮೊಮ್ಮಕ್ಕಳನ್ನು ಇನ್ನೆಷ್ಟು ಖುಷಿಯಾಗಿ ನೋಡಿಕೊಳ್ಳುತ್ತಿದ್ದರು ಎಂದು ಊಹೆ ಮಾಡಿಕೊಂಡೇ ಕಾಲ ಕಳೆಯುತ್ತಿದ್ದೇನೆ.

ಅವರು ಅಪ್ಪನಾಗಿ ಮಾತ್ರ ನನಗೆ ಗೊತ್ತಿದ್ದರು. ಅವರು ತಾತನಾಗಿ ಇದ್ದಿದ್ದರೆ ಇನ್ನೆಷ್ಟು ಖುಷಿಯಾಗಿರುತ್ತಿದ್ದರು ಎಂಬುದನ್ನು ಯೋಚಿಸುತ್ತಿರುತ್ತೇನೆ. ಅವರು ಅದಕ್ಕೆಂದೇ ಅದೆಷ್ಟು ತಯಾರಿ ಮಾಡಿಕೊಳ್ಳುತ್ತಿದ್ದರು, ಎಷ್ಟು ಸಂಭ್ರಮ ಪಟ್ಟುಕೊಳ್ಳುತ್ತಿದ್ದರು ಎಂದೆಲ್ಲಾ ಅಂದುಕೊಳ್ಳುತ್ತಿರುತ್ತೇನೆ.

ನನ್ನ ಮಗಳು ಅಪ್ಪನ ಹಾಗೆ ಕಾಣುತ್ತಾಳೆ, ಅವರ ಹಾಗೆಯೇ ಚಿನಕುರುಳಿಯಂತೆ ಓಡಾಡುತ್ತಿರುತ್ತಾಳೆ. ನನ್ನ ಮಗ ಅವರಂತೆಯೇ ಪುಸ್ತಕ, ಪೇಪರ್‌ ಎಲ್ಲವನ್ನೂ ಕುತೂಹಲದಿಂದ ನೋಡುತ್ತಾನೆ. ಬಂದವರನ್ನು ನಕ್ಕು ಮಾತಾಡಿಸುತ್ತಾನೆ. ಒಂದು ವರ್ಷದಲ್ಲಿ ನಾನಿದನ್ನು ಗಮನಿಸಿದ್ದೇನೆ. ಹೀಗೆ ಮನೆಯಲ್ಲಿ ಇರುವ ಇಷ್ಟೊಂದು ಖುಷಿಯನ್ನು ನೋಡಲು ಅಪ್ಪನೇ ಇಲ್ಲ ಎಂಬುದು ಬಹಳ ಬೇಜಾರಿನ ಸಂಗತಿ.

ಅಪ್ಪ ಇದ್ದು ಇದನ್ನೆಲ್ಲಾ ನೋಡಬೇಕಿತ್ತು. ಅವರು ಮಕ್ಕಳನ್ನ ಕೂರಿಸಿಕೊಂಡು ಕಥೆ ಹೇಳಬೇಕಿತ್ತು, ಆಟ ಆಡಿಸಬೇಕಿತ್ತು. ಅವರು ಬರೆದಿರುವ ಲೇಖನ ತೋರಿಸ ಬೇಕಿತ್ತು. ದಿನಕ್ಕೆ ಹತ್ತು ಬಾರಿ “ತಾತ ತಾತ’ ಎಂದು ಕೂಗುವ ಮಕ್ಕಳ ಜೊತೆ ರೌಂಡ್‌ ಹೋಗಬೇಕಿತ್ತು ಮತ್ತು ಅವರನ್ನು ಮಾತಾಡಿಸಲು ಬರುತ್ತಿದ್ದ ಹತ್ತು ಹಲವು ಓದುಗರಿಗೆ “ನನ್ನ ಮೊಮ್ಮಕ್ಕಳು’ ಎಂದು ಪರಿಚಯಿಸಬೇಕಿತ್ತು. ಇದೆಲ್ಲಾ ಆಗಬೇಕಿತ್ತು, ನೋಡಬೇಕಿತ್ತು, ಇರಬೇಕಿತ್ತು ಎಂಬುದೇ ನನ್ನ ತಲೆಯಲ್ಲಿ ದಿನಾ ಓಡುತ್ತಿರುತ್ತದೆ. ನೀನು ಇನ್ನೂ ಲೇಖನಗಳನ್ನು, ಪುಸ್ತಕಗಳನ್ನು ಬರೆಯಬೇಕಿತ್ತು ಎಂದು ನಾನು ಅಪ್ಪನಿಗೆ ಹೇಳಬೇಕಿತ್ತು. ಅವರ ಇನ್ನಷ್ಟು ಪುಸ್ತಕಗಳು ಬರಬೇಕಿತ್ತು. ಇನ್ನಷ್ಟು ಚರ್ಚೆಗಳಲ್ಲಿ ಭಾಗವಹಿಸಿ ಜನರ ಸೈಂಟಿಫಿಕ್‌ ಟೆಂಪರ್ಮೆಂಟ್‌ ಹೆಚ್ಚಿಸಬೇಕಾಗಿತ್ತು ಎಂದೂ ಅನ್ನಿಸುತ್ತಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಅಪ್ಪಂದಿರ ದಿನ ದಂದು ಖುದ್ದಾಗಿ ಅಪ್ಪನಿಗೆ ಶುಭಾಶಯ ಹೇಳಬೇಕು ಎಂಬ ಆಸೆಗೋಸ್ಕರವಾದರೂ ಅಪ್ಪ ಇರಬೇಕಿತ್ತು ಎಂದು ಬಹಳ ಬಾರಿ ಅನ್ನಿಸಿದ್ದಿದೆ.

ಅಪ್ಪನಿಗೆ ಈ ವರ್ಷ ಹೇಳದೇ ಉಳಿದ ಮಾತು ಇಷ್ಟೇ: ಹ್ಯಾಪಿ ಫಾದರ್ಸ್‌ ಡೇ ಅಪ್ಪಿ, ನೀನು ಇರಬೇಕಿತ್ತು…

-ಮೇಘನಾ ಸುಧೀಂದ್ರ 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.