J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

Flute player J. B. Shruti Sagar

Team Udayavani, Sep 22, 2024, 6:10 AM IST

20

ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಾದ ಚೆನ್ನೈಯ ಜೆ. ಬಿ. ಶೃತಿ ಸಾಗರ್‌ ಅವರು ಭಾರದ್ವಾಜ್‌ ಮತ್ತು ಉಷಾ ದಂಪತಿ ಪುತ್ರ. ಕೊಳಲು ವಾದನದಲ್ಲಿ ಸಾಕಷ್ಟು ಹೆಸರುಗಳಿಸಿರುವ ಇವರು ಇತ್ತೀಚೆಗೆ ಉಡುಪಿಯಲ್ಲಿ ರಂಜನಿ ಮೆಮೋರಿಯಲ್‌ ಟ್ರಸ್ಟ್‌ನ ಸಂಗೀತೋತ್ಸವದಲ್ಲಿ ತಮ್ಮ ಕೊಳಲು ವಾದನ ಪ್ರಸ್ತುತಪಡಿಸಿದ್ದರು. ಈ ಸಂದರ್ಭ ದಲ್ಲಿ “ಉದಯವಾಣಿ’ಗಾಗಿ ನಡೆಸಿದ ಮಾತು ಕತೆಯ ಸಾರಾಂಶ ಇಲ್ಲಿದೆ.

ನಿಮ್ಮ ಕೊಳಲು ವಾದನದ ವೈಶಿಷ್ಟ್ಯಗಳೇನು?

ಸಂಗೀತಾಭಿಮಾನಿಗಳಿಗೆ ವಿಭಿನ್ನ ರಸಾನುಭವ ನೀಡುವ ಆಶಯ ಎಲ್ಲ ಕಲಾವಿದರಲ್ಲೂ ಇರುತ್ತದೆ. ನನ್ನದೇ ಆದ ಸ್ವಂತ ಶೈಲಿಯಲ್ಲಿ ಹೊಸ ಪ್ರಯತ್ನಗಳೊಂದಿಗೆ ವಿಭಿನ್ನ ರಸಾನುಭವ ನೀಡುವುದರತ್ತ ನನ್ನ ಗಮನ. ಆ ನೆಲೆಯಲ್ಲಿ ಸದಾ ಪ್ರಯೋಗ ಹಾಗೂ ಪ್ರಯತ್ನಶೀಲನಾಗಿರುತ್ತೇನೆ. ಶ್ರೋತೃವನ್ನು ರಂಜಿಸುವ ಉದ್ದೇಶದ ಜತೆಗೆ ನನ್ನ ಪ್ರಯತ್ನ, ಹೊಸತನದ ಹುಡುಕಾಟವನ್ನೂ ತಲುಪಿಸಲು ಯೋಚಿಸುತ್ತೇನೆ. ಬಾಲ್ಯದಿಂದಲೇ ಸಂಗೀತದ ಬಗ್ಗೆ ಒಲವಿತ್ತು. ಕೊಳಲು ವಾದನಕ್ಕೆ ಹೆಚ್ಚು ಪ್ರೀತಿ. ಆರಂಭದಲ್ಲಿ ಮೂರು ವರ್ಷ ಕೊಳಲಿನ ಪ್ರಾಥಮಿಕ ಸ್ವರೂಪಗಳನ್ನು ಅಧ್ಯಯನ ಮಾಡಿದೆ. ಅನಂತರ ಗುರು ಡಾ| ಎಚ್‌. ಎಸ್‌. ಸುಂದರ್‌ ಅವರಲ್ಲಿ 20 ವರ್ಷಕ್ಕೂ ಹೆಚ್ಚು ಕಾಲದಿಂದ ಅಭ್ಯಾಸ ಮಾಡುತ್ತಿದ್ದೇನೆ.

ಕರ್ನಾಟಕ ಸಂಗೀತವನ್ನು ಔಪಚಾರಿಕ ಶಿಕ್ಷಣವಾಗಿ ಕಲಿಯುವಲ್ಲಿ ಯುವಜನರಿಗೇಕೆ ನಿರಾಸಕ್ತಿ?

ಈ ಹಿಂದಿನಿಂದಲೂ ಈ ಪದ್ಧತಿ ತೀರಾ ಕಡಿಮೆ ಇದೆ. ಸಂಗೀತವನ್ನು ಕಲಿಯಲು ನಿರ್ದಿಷ್ಟ ಶಾಲೆ, ಕಾಲೇಜು, ಸಂಸ್ಥೆಗಳಿಗೆ ಸೇರುವುದು ಕಡಿಮೆ. ಔಪಚಾರಿಕ ಶಿಕ್ಷಣದ ಜತೆ ಜತೆಗೆ ಖಾಸಗಿಯಾಗಿ ಸಂಗೀತ ಗುರುಗಳಲ್ಲಿ ಕಲಿಯುವವರೇ ಹೆಚ್ಚು. ಈ ಕಲಿಕೆ ಆಸಕ್ತಿಯ ಮಟ್ಟಕ್ಕೆ ಬೆಳೆದು, ಆಸಕ್ತಿ ಪ್ರವೃತ್ತಿಯಂತಾಗಿ ಪೂರ್ಣಕಾಲಿಕವಾಗಿ ಕಲಾವಿದರಾಗಿ ರೂಪುಗೊಂಡವರಿದ್ದಾರೆ. ಆ ಕ್ರಮವೇ ಉಚಿತ ಎನ್ನಿಸಿರಬಹುದು.

ಫ್ಯೂಷನ್‌ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಫ್ಯೂಷನ್‌ ಸಂಗೀತದ ಟ್ರೆಂಡ್‌ ಬಗ್ಗೆ ಸದಾ ಚರ್ಚೆ ಇರುತ್ತದೆ. ಹಿಂದೂಸ್ಥಾನಿ, ಕರ್ನಾಟಕ ಶಾಸ್ತೀಯ ಸಂಗೀತ ಶೈಲಿಯನ್ನು ವಿವಿಧ ರೂಪದಲ್ಲಿ ಒಂದೇ ಸಂಯೋಜನೆಯಲ್ಲಿ ಆಸ್ವಾದಿಸುವ ಪ್ರೇಕ್ಷಕರ ವರ್ಗವೂ ಇದೆ. ಎಲ್ಲ ಬಗೆಯ ಸಂಗೀತ ಪ್ರಕಾರಗಳು ವಿವಿಧ ಸಂಯೋಜನೆಯಲ್ಲಿ ಜನರನ್ನು ಮುದಗೊಳಿಸುತ್ತಿವೆ. ಆದೇ ಸಂಗೀತದ ಶಕ್ತಿ ಎನ್ನಬಹುದು. ಈ ಮಾತು ಫ್ಯೂಷನ್‌ ಸಂಗೀತದ ಬಗೆಗೂ ಅನ್ವಯ.

ಭರತನಾಟ್ಯ ಕಾರ್ಯಕ್ರಮಗಳಿಗೂ ನೀವು ಕೊಳಲು ವಾದನ ಮಾಡಿದ್ದೀರಿ, ಹೇಗನ್ನಿಸುತ್ತದೆ?

ಭರತನಾಟ್ಯ ನನಗೆ ಅತ್ಯಂತ ಇಷ್ಟವಾದ ನೃತ್ಯಕಲೆ. ವಿಶೇಷವಾಗಿ ರಾಮಾಯಾಣ, ಮಹಾಭಾರತದಂತಹ ರೂಪಕಗಳಲ್ಲಿ ಕೊಳಲು ವಾದನವನ್ನು ಅತ್ಯಂತ ಕ್ರಿಯಾಶೀಲವಾಗಿ ನುಡಿಸಬೇಕು. ಇಂಥ ಪ್ರಯತ್ನದೊಂದಿಗೆ ಉಳಿದ ಉಪಕರಣಗಳೊಂದಿಗೆ ಸಮಭಾವ ದಲ್ಲಿ ನುಡಿಸಿ ನಿರ್ವಹಿಸಿದ ತೃಪ್ತಿ ನನ್ನದು.

ಸಾಮಾಜಿಕ ಮಾಧ್ಯಮಗಳಿಂದ ಅಂತರವೇಕೆ?

ಸಂಗೀತ ಕಲಾವಿದರು ಸೃಜನಶೀಲ, ಕ್ರಿಯಾಶೀಲವಾಗಿರುವುದರ ಜತೆಗೆ ಹೊಸ ಪ್ರಯೋಗಗಳಿಗೂ ತೊಡಗಿಕೊಳ್ಳಬೇಕು. ಅದಕ್ಕೆ ಏಕಾಗ್ರತೆ ಬಹಳ ಮುಖ್ಯ. ಹಾಗಾಗಿ ಈ ಸಾಮಾಜಿಕ ಮಾಧ್ಯಮಗಳಿಂದ ದೂರ. ಸಂಗೀತ ಸಾಧನೆಗೆ ಮೊದಲ ಆದ್ಯತೆ. ಸಂವಹನಕ್ಕೂ ಸಾಮಾನ್ಯ ಫೋನ್‌ ಸಾಕು. ಏಕಾಗ್ರತೆಗೆ ಅಡ್ಡಿ ಮಾಡುವ ಏನನ್ನೂ ಬಳಸಿದರೂ ಸಾಧನೆಗೆ ತೊಡಕಾಗಬಲ್ಲದು.

ಶಾಸ್ತ್ರೀಯ ಕಲೆಗಳ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣದ ಕೊಡುಗೆ ಏನು?

ಸಾಮಾಜಿಕ ಜಾಲತಾಣದಿಂದ ನಕಾರಾತ್ಮಕ, ಸಕಾರಾತ್ಮಕ ಎರಡೂ ಪರಿಣಾಮಗಳಿವೆ. ಸಕಾರಾತ್ಮಕ ಮಾತ್ರ ಉಲ್ಲೇಖೀಸುವೆ. ಕಲಾವಿದರ ಪ್ರಚಾರಕ್ಕೆ ಉತ್ತಮ ವೇದಿಕೆ. ಹಾಗೆಯೇ ಎಲ್ಲ ಬಗೆಯ ಸಂಗೀತ ಪ್ರಕಾರಗಳು ಹೆಚ್ಚು ಜನರಿಗೆ ತಲುಪಲು ಕೊಡುಗೆ ನೀಡುತ್ತಿವೆ.

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

KUNDAPURA-BOA

Kundapura: ಮುಳುಗುತ್ತಿದ್ದ ಬೋಟ್‌ ರಕ್ಷಣೆ: 6 ಮೀನುಗಾರರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.