ಜರ್ಮನಿಯ ಆಗಸದಲ್ಲಿ ಪೂರ್ಣಚಂದ್ರ ದರ್ಶನ


Team Udayavani, Apr 16, 2017, 3:45 AM IST

poornachandra-darshana.jpg

ಈ ಬಾರಿ ನಾನು ಜರ್ಮನಿಯ ವ್ಯೂತ್ಸ್ìಬುರ್ಗ್‌ ನಗರಕ್ಕೆ ಮಾರ್ಚ್‌ ಮೂರನೆಯ ವಾರದಲ್ಲಿ ಬಂದ ದಿನವೇ ಇಲ್ಲಿ ವಸಂತಕಾಲದ ಆಗಮನವಾಗಿತ್ತು. ಹಿಮದ ಮತ್ತು ಚಳಿಯ ಹೊಡೆತ ತಿಂದು ಮುದುರಿಕೊಂಡು ಮಲಗಿದ್ದ ಮರಗಿಡಗಳು ಚಿಗುರಲು ತೊಡಗಿದವು, ಮೊಗ್ಗುಗಳು ಅರಳಿ ಹೂಗಳು ಕಣ್ಣು ಬಿಡುವ ಸಂಭ್ರಮದಲ್ಲಿ ಇದ್ದುವು. “ಸ್ಪ್ರಿಂಗ್‌’ ಎಂದರೆ ಚಿಮ್ಮುವ, ಚಿಗುರುವ, ಅರಳುವ, ಕಿಲಕಿಲ ನಗುವ, ಉÇÉಾಸದ ಸಲ್ಲೀಲೆಯನ್ನು ಹರಡುವ ಕಾಲ. 

ಆಕಸ್ಮಿಕವಾಗಿ ಕರ್ನಾಟಕದ ವಸಂತಕಾಲದ ವರ್ಣನೆಯನ್ನು ವ್ಯೂತ್ಸ್ìಬುರ್ಗ್‌ನಲ್ಲಿ ವಿವರಿಸುವ ಸಂದರ್ಭ ಒದಗಿಬಂತು. ಈ ಬಾರಿಯ ಕನ್ನಡ ಬೇಸಗೆ ಶಿಬಿರದ ವಿಷಯ, “ಹಳಗನ್ನಡ ಸಾಹಿತ್ಯ’ ಇದರಲ್ಲಿ ಪಂಪಭಾರತ, ಗದಾಯುದ್ಧ, ಕರ್ನಾಟಕ ಕಾದಂಬರಿಗಳ ಜೊತೆಗೆ ಜನ್ನನ ಯಶೋಧರ ಚರಿತ ವನ್ನು ಪಾಠಕ್ಕೆ ಬಳಸಿಕೊಂಡೆ. ಅದರಲ್ಲಿ ನಾನು ಆಯ್ದುಕೊಂಡದ್ದು ವಸಂತಕಾಲದ ಆಗಮನದ ವರ್ಣನೆ ಮತ್ತು ಚಂಡಮಾರಿ ಗುಡಿಯ ಚಿತ್ರಣ. ಅಲ್ಲಿ ಸಿರದ ಗಾಳ, ಉರಿಯ ಉಯ್ನಾಲೆಗಳ ಬಗ್ಗೆ ಹೇಳಿ, ಸಿಸಿರಮನೆ ಪಿಡಿದು ಬಸಂತನ್‌ ಅಡಗಿನಂತೆ ಕುಸುರಿದರಿಯುವ ಚಿತ್ರಣ ಕೊಟ್ಟಾಗ ಯುರೋಪಿಯನ್‌ ಶಿಬಿರಾರ್ಥಿಗಳು ಬೆಕ್ಕಸಬೆರಗಾದರು. ಫ್ರಾನ್ಸ್‌ ನ ಲಿಯೋನ್‌ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಪ್ರೊ. ಕ್ರಿಸ್ಟಿನ್‌ ಚೊಯ್‌ ನಕಿ ಅವರಂತೂ “ವಸಂತ ಇಷ್ಟೂ ಕ್ರೂರಿಯೆ?’ ಎಂದು ಉದ್ಗಾರ ತೆಗೆದರು. ನಾನು ಹೇಳಿದೆ, “ಜನ್ನ ಚಂಡಮಾರಿಯನ್ನೇ ಅಹಿಂಸಾ ದೇವತೆಯನ್ನಾಗಿ ಮಾಡುತ್ತಾನೆ; ಹಿಂಸೆಯ ಬರ್ಬರತೆಯ ದರ್ಶನಕ್ಕಾಗಿ ಮತ್ತು ಅದರಿಂದ ನಿರಶನಕ್ಕಾಗಿ ವಸಂತನನ್ನು ಹಾಗೆ ರೂಪಕವಾಗಿ ಬಳಸಿದ’ ವ್ಯೂತ್ಸ್ìಬುರ್ಗ್‌ನಲ್ಲಿ ಎಪ್ರಿಲ್‌ ಆರಂಭದಿಂದಲೇ ಮೋಡ ಕವಿದ ವಾತಾವರಣ. ಸೂರ್ಯನ ಸುಳಿವಿಲ್ಲ, ಚಂದ್ರನ ಪತ್ತೆ ಇಲ್ಲ. ಶಿಶಿರ ಬಿಟ್ಟುಹೋದ ಅವಶೇಷಗಳ ಹಂಗು ಮತ್ತು ಗುಂಗಿನಲ್ಲಿ ಸೂರ್ಯ-ಚಂದ್ರರಿಗೆ ಒಡ್ಡೋಲಗ ಇಲ್ಲ. ಹೀಗೆ ಹೊತ್ತು ಕಳೆಯುತ್ತ ಇರುವಾಗ ಎಪ್ರಿಲ್‌ 11ರಂದು ಬಂತು ವ್ಯೂತ್ಸ್ìಬುರ್ಗ್‌ನಲ್ಲಿ ಹುಣ್ಣಿಮೆಯ ದಿನ. ಅದೃಷ್ಟವೆಂದರೆ ಈ ದಿನ ಸೂರ್ಯ ರಂಗಸ್ಥಳಕ್ಕೆ ಬಂದಿ¨ªಾನೆ. ಜನರು ಮನೆಮಾರು ಸಹಿತ ತೇರಿಗೆ ನೆರೆವಂತೆ ಬೀದಿಗೆ ಬಂದಿ¨ªಾರೆ. ಇಲ್ಲಿನ ಮುಸ್ಸಂಜೆಯ ಹೊತ್ತು ಸೂರ್ಯ ತನ್ನ ಕೆಲಸ ಮುಗಿಸಿ, ಮನೆಗೆ ಹೋದೊಡನೆಯೇ ಆಶ್ಚರ್ಯವೆಂಬಂತೆ ಹುಣ್ಣಿಮೆಯ ಪೂರ್ಣಚಂದ್ರ ವಿರಾಜಮಾನವಾಗಿ ಮೆರವಣಿಗೆ ಹೊರಟಿ¨ªಾನೆ. ರಾತ್ರಿಯ ಹುಣ್ಣಿಮೆಯ ಪೂರ್ಣಚಂದ್ರನ ದರ್ಶನ ಭಾಗ್ಯ ದೊರೆತ ಸಂಭ್ರಮದಲ್ಲಿ ನಾನು ತೆಗೆದ ಚಿತ್ರಗಳು ಇಲ್ಲಿವೆ. ಇಲ್ಲಿನ ಹಳೆಯ ಸೇತುವೆ ಅಲೆ¤ ಮಾಯಿನ್‌ ಬ್ರೂಕ್‌ ನಿಂದ ತೆಗೆದವು ಕೆಲವು. ಚರ್ಚ್‌ನ ಎರಡು ಜೋಡು ಗೋಪುರಗಳ ನಡುವಿನ ನಂದಾದೀಪದಂತೆ ಕಾಣುವ ಚಂದ್ರನ ಸೊಗಸು ಚಿತ್ರದಲ್ಲಿದೆ. ಇಲ್ಲಿನ ಮಾಯಿನ್‌ ನದಿಯ ನೀರಿನಲ್ಲಿ ಚಂದ್ರನ ಮತ್ತು ದೀಪಗಳ ಬೆಳಕಿನ ಪ್ರತಿಫ‌ಲನ ಸುಂದರವಾಗಿದೆ. 

ಜರ್ಮನ್‌ ಕವಿ, ಕಾದಂಬರಿಕಾರ ಗಯತೆಯ ಒಂದು ಕವನವು ಹುಣ್ಣಿಮೆಯ ರಾತ್ರಿ ಯನ್ನು ಪ್ರೇಮವಾಗಿ ಪರಿಕಲ್ಪಿಸುವಂಥಾದ್ದು. ಅದರ ಕನ್ನಡ ರೂಪಾಂತರವನ್ನು ಮಾಡಿ ಇಲ್ಲಿ ಕೊಟ್ಟಿದ್ದೇನೆ.

– ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

14

Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ‌ ಸಾಹಿತ್ಯ ರಂಗದ ಸಾರ್ಥಕ ಸೇವೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.