Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!


Team Udayavani, Jul 21, 2024, 5:55 PM IST

13

ನನ್ನ ಗುರುಗಳ ಬಗ್ಗೆ ಮಾತಾಡಲಿಕ್ಕೆ ನನಗ ಭಾಳ ಆನಂದ ಆಗ್ತದ. ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಗಾನಯೋಗಿ ಪುಟ್ಟರಾಜ ಗವಾಯಿಗಳು ಇಬ್ಬರೂ ಹುಟ್ಟು ಕುರುಡರು. ಅವರನ್ನ ಕರಕೊಂಡ ಬಂದು ಶಿವಯೋಗಿ ಮಂದಿರದೊಳಗ ಇಟ್ಕೊಂಡು ಸಂಗೀತ ಕಲಿಸಿದ್ದು ಹಾನಗಲ್‌ ಕುಮಾರಸ್ವಾಮಿ ಅವರು. ಅವರೆಂಥಾ ದಿವ್ಯಜ್ಞಾನಿ..!

ಗುರುಗಳು ಜ್ಞಾನಿಗಳಿರ್ತಾರ. ಆದರ, ಸಮಾಜಕ್ಕಾಗಿ ನಿಸ್ವಾರ್ಥ ಸೇವಾ ಮಾಡಿದವರು ಕಡಿಮಿ. ನಮ್ಮ ಗುರುಗಳು ಪುಟ್ಟರಾಜ ಗವಾಯಿಗಳು ತಮಗಾಗಿ ಏನನ್ನೂ ಬಯಸಲಿಲ್ಲ. ಇಂಥ ಗುರುಗಳು ಸಿಕ್ಕಿದ್ದು ಶಿಷ್ಯರಾದ ನಮ್ಮ ಭಾಗ್ಯ.

ತಿಂಗಳಾನುಗಟ್ಟಲೆ ಒಂದ ರಾಗ :

1967ರೊಳಗ ನಾನು ಗದಗಿನ ವೀರೇಶ್ವರ ಪುಣ್ಯಾಶ್ರಮ ಸೇರಿದೆ. 12 ವರ್ಷ ಅಲ್ಲಿ ಸಂಗೀತಾಭ್ಯಾಸ ಮಾಡಿದೆ. ನಾನು ಕಲಿತಿದ್ದು ಗುರುಕುಲ ಪದ್ಧತಿಯೊಳಗ. ಪ್ರತಿದಿನ ನಶಿಕ್ಲೆ ಏಳಬೇಕು. ಶುಭ್ರರಾಗಿ ಅಭ್ಯಾಸಕ್ಕ ಹೋಗಬೇಕು. ನಾವು ಹೋಗೋದ್ರಾಗ ಗುರುಗಳು ತಂಬೂರಿ ಹಿಡಿಕೊಂಡು ಕೂತಿರ್ತಿದ್ರು. ಪ್ರತಿದಿನ ಬೆಳಗ್ಗೆ 4ರಿಂದ 7 ಗಂಟೆ ತನ 3 ತಾಸು ಸಂಗೀತ, ವಾದ್ಯ ಅಭ್ಯಾಸ. ಒಂದ ರಾಗವನ್ನ 3-4 ತಿಂಗಳು ಕಲಸ್ತಿದ್ರು.  ಅದು ಪಕ್ಕಾ ಆಗೋತನ ಮುಂದ ಹೋಗ್ತಿರಲಿಲ್ಲ.

 ನಿನಗ ಈಗ ಸಂಗೀತ ತಿಳಿಲಿಕತ್ತದ :

ನನಗ ಭಾಳ ಸಲ ಭೂಪಾಲಿ, ಶುದ್ಧ ಕಲ್ಯಾಣಿ, ದೇಸಕರ್‌ ಈ ಮೂರು ರಾಗದೊಳಗ ಸ್ವರ ಹಚ್ಚೋದರ ಬಗ್ಗೆ ಭಾಳ ಗೊಂದಲ ಆಗ್ತಿತ್ತು. ಅದಕ್ಕ ಗುರುಗಳ ಕಡೆ ಹೋಗಿ “ಅಜ್ಜಾರ, ನನಗ ಭೂಪಾಲಿ ಹಾಡಲಿಕ್ಕೆ ಯಾಕೊ ವಿಶ್ವಾಸ ಬರಲ್ತು’ ಅಂತ ಅಂದೆ. “ಇಷ್ಟು ವರ್ಷ ಆತು, ಇನ್ನ ಭೂಪ್‌ ಬರಂಗಿಲ್ಲ..? ಈಗ ನಿನಗ ಸಂಗೀತ ತಿಳಿಲಿಕತ್ತದ. ಸಂಗೀತ ಅಂದ್ರ ಹಂಗ. ಅಭ್ಯಾಸ ಮಾಡ್ತಾ ಮಾಡ್ತಾ 60ನೇ ವರ್ಷಕ್ಕ ಸ್ವರ ಹಚ್ಚೋದು ಗೊತ್ತಾಗ್ತದ’ ಅಂತ ಹೇಳಿದ್ರು.

“ನ ಗುರೋರ್‌ ಅಧಿಕಂ’ ಅಂತ ಸಂಸ್ಕೃತದೊಳಗ ಒಂದು ಮಾತು ಅದ. ಇದರರ್ಥ “ಗುರುವಿನ ಮುಂದ ಜಗತ್ತಿನ್ಯಾಗ ಯಾವುದೂ ದೊಡ್ಡದಲ್ಲ’. ಅವರು ನಮಗೆ ಮುಖ್ಯವಾಗಿ ಕಲಿಸಿದ್ದು ಸಂಸ್ಕಾರ. “ಆಚಾರ ಕಲಿರಿ, ಅಂದ್ರ ವಿಚಾರ ಹೊಳಿತದ. ಸದಾ ಒಳ್ಳೆದು ಮಾಡ್ರಿ…’ ಇದನ್ನ ಒತ್ತಿ ಒತ್ತಿ ಹೇಳ್ತಿದ್ರು. ನನ್ನ ಗುರುಗಳಿಂದನ ಇವತ್ತು ನಾನು ಸ್ವಾವಲಂಬಿ ಜೀವನ ಮಾಡಲಿಕತ್ತೇನಿ. ನನ್ನ ತಾಯಿ ನನಗ ಜನ್ಮ ಕೊಟ್ಟಳು, ಗುರು ಪುನರ್ಜನ್ಮ ಕೊಟ್ಟರು. ನನಗ ಅವರ ದೇವರು

-ಪಂ. ಎಂ. ವೆಂಕಟೇಶ್‌ ಕುಮಾರ್‌, ಖ್ಯಾತ ಗಾಯಕರು

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

18

World Dog Day: ನಾನು, ನನ್ನ ಕಾಳ..!

Krishna Janmashtami Special: ಸಂಭವಾಮಿ ಯುಗೇ ಯುಗೇ…

Krishna Janmashtami Special: ಸಂಭವಾಮಿ ಯುಗೇ ಯುಗೇ…

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.