ಕೃಷಿ ಸಂಸ್ಕೃತಿ


Team Udayavani, Apr 22, 2018, 6:00 AM IST

Krishi-Thapanda.jpg

ಬಿಗ್‌ ಬಾಸ್‌’ಗೆ ಹೋಗಿ ಬಂದವರಿಗೆ ಸಿನೆಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ, ಮುಂದೆ ಬಿಝಿಯಾಗುತ್ತಾರೆಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಕೃಷಿ ತಾಪಂಡ ಎಂಬ ನಟಿ “ಬಿಗ್‌ಬಾಸ್‌ ಸೀಸನ್‌-5′ ನಿಂದ ಬಂದು ಮೂರ್‍ನಾಲ್ಕು ತಿಂಗಳು ಕಳೆದರೂ ಆಕೆಯ ಕಡೆಯಿಂದ ಯಾವುದೇ ಹೊಸ ಸಿನೆಮಾದ ಸುದ್ದಿ ಇರಲಿಲ್ಲ. ಈಗ ಕೃಷಿ ಹೊಸ ಸಿನೆಮಾವೊಂದನ್ನು ಒಪ್ಪಿಕೊಂಡಿದ್ದಾರೆ. 

ಅದು ರೂಪಾಯಿ. ಇದು ಸಂಪೂರ್ಣ ಹೊಸಬರ ಸಿನೆಮಾ. ಎಲ್ಲಾ ಓಕೆ, ಇಷ್ಟು ದಿನ ಕೃಷಿಗೆ ಅವಕಾಶ ಬರಲಿಲ್ಲವೇ ಎಂದು ನೀವು ಕೇಳಬಹುದು. ಕೃಷಿ ಹೇಳುವಂತೆ ಅವರಿಗೆ ಸಾಕಷ್ಟು ಅವಕಾಶ ಬಂದಿತ್ತು. ಆದರೆ, ಕಾರಣಾಂತರಗಳಿಂದ ಒಪ್ಪಲಿಲ್ಲವಂತೆ.

“”ಬಿಗ್‌ ಬಾಸ್‌ನಿಂದ ಬಂದ ನಂತರ ನನಗೆ 20ಕ್ಕೂ ಹೆಚ್ಚು ಅವಕಾಶಗಳು ಬಂದುವು. ಆದರೆ, ಕಾರಣಾಂತರಗಳಿಂದ ನಾನೇ ಯಾವುದೇ ಸಿನೆಮಾಗಳನ್ನು ಒಪ್ಪಲಿಲ್ಲ. ಹೊಸಬರ ರೂಪಾಯಿ ಕಥೆ ಕೇಳಿದೆ. ಹೊಸದಾಗಿತ್ತು, ನನ್ನ ಪಾತ್ರ ಕೂಡಾ ವಿಭಿನ್ನವಾಗಿರುವುದರಿಂದ ಒಪ್ಪಿಕೊಂಡೆ” ಎನ್ನುತ್ತಾರೆ. ಇದೇ ವೇಳೆ ಕೃಷಿ ಒಂದು ಮಾತು ಹೇಳಲು ಮರೆಯೋದಿಲ್ಲ. “”ಬಿಗ್‌ಬಾಸ್‌ಗೆ ಹೋಗಿ ಬಂದ ಕೂಡಲೇ ಸಿಕ್ಕಾಪಟ್ಟೆ ಅವಕಾಶ ಸಿಗುತ್ತದೆ, ಸ್ಟಾರ್‌ ಆಗುತ್ತಾರೆಂಬುದನ್ನು ನಾನು ನಂಬೋದಿಲ್ಲ. ಆದರೆ, ಹೊರಜಗತ್ತಿಗೆ ನಿಮ್ಮ ಬಗ್ಗೆ ಗೊತ್ತಾಗಲು, ನಿಮ್ಮ ಟ್ಯಾಲೆಂಟ್‌ ಪ್ರದರ್ಶಿಸಲು ಅದೊಂದು ಒಳ್ಳೆಯ ವೇದಿಕೆಯಂತೂ ಹೌದು. ಈ ಹಿಂದೆ ನಾನು ಹೊರಗಡೆ ಹೋದಾಗ ಕೆಲವೇ ಕೆಲವರು ಗುರುತಿಸುತ್ತಿದ್ದರು. ಆದರೆ, ಈಗ ಸಾವಿರಾರು ಜನ ಗುರುತಿಸುತ್ತಿದ್ದಾರೆ. ಚಿತ್ರರಂಗದ ಮಂದಿಗೂ ಕೃಷಿ ಅಂದರೆ ಯಾರು ಎಂಬುದು ಗೊತ್ತಾಗಿದೆ. ಅದೊಂದು ಒಳ್ಳೆಯ ವೇದಿಕೆ. ಅದನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ” ಎನ್ನುತ್ತಾರೆ. 

ಸದ್ಯ ರೂಪಾಯಿ ಚಿತ್ರದಲ್ಲಿರುವ ಕೃಷಿ, ಈ ಚಿತ್ರದಲ್ಲಿ ಸ್ಟಂಟ್ಸ್‌ ಕೂಡ ಮಾಡುತ್ತಾರಂತೆ. ಅದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ಇದಲ್ಲದೇ, ಕೃಷಿ ನಟಿಸಿರುವ, ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಅಲ್ಪ ವಿರಾಮ ಎಂಬ ಸಿನೆಮಾವೊಂದರಲ್ಲೂ ಕೃಷಿ ನಟಿಸಿದ್ದು, ಐದು ಶೇಡ್‌ನ‌ ಪಾತ್ರ ಸಿಕ್ಕಿದೆಯಂತೆ. ಈ ನಡುವೆಯೇ ಕೃಷಿ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ವೆಬ್‌ ಸಿರೀಸ್‌. ಕೆನಡಾದ ವೆಬ್‌ ಸಿರೀಸ್‌ವೊಂದರಲ್ಲಿ ಕೃಷಿ ನಟಿಸಲಿದ್ದು, ಇಲ್ಲಿ ಅವರು ಸೇನಾನಿ ಯಂತೆ. ಡಿಸೆಂಬರ್‌ನಿಂದ ಚಿತ್ರೀಕರಣ ಆರಂಭ ವಾಗಲಿದ್ದು, ಮೂರು ತಿಂಗಳುಗಳ ಕಾಲ ಕೃಷಿ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

18

World Dog Day: ನಾನು, ನನ್ನ ಕಾಳ..!

Krishna Janmashtami Special: ಸಂಭವಾಮಿ ಯುಗೇ ಯುಗೇ…

Krishna Janmashtami Special: ಸಂಭವಾಮಿ ಯುಗೇ ಯುಗೇ…

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.