ಪುಟ್ಟ ಕತೆಗಳು


Team Udayavani, Jul 7, 2019, 5:00 AM IST

m-10

ಪ್ರಶ್ನೆ ಮತ್ತು ಉತ್ತರ !

ನನಗೆ ಆ ಹೂವು ಇಷ್ಟವಾಯಿತು’ ಎಂದ ಶಿಷ್ಯ.
ಗುರುಗಳು ಮರು ಪ್ರಶ್ನೆ ಹಾಕಿದರು. “ಹೂವು ಯಾಕೆ ನಿನಗೆ ಇಷ್ಟವಾಯಿತು?’
“ಹೂವು ತುಂಬ ಸುಂದರವಾಗಿದೆ. ಅದಕ್ಕೆ ಇಷ್ಟವಾಯಿತು’ ಎಂದ ಶಿಷ್ಯ.
ಗುರುಗಳಿಗೆ ಆ ಉತ್ತರದಿಂದ ಸಮಾಧಾನವಾಗಲಿಲ್ಲ. ಮತ್ತೂಬ್ಬ ಶಿಷ್ಯನಲ್ಲಿ ಕೇಳಿದ, “ನಿನಗೆ ಯಾವುದು ಇಷ್ಟ?’
ಆತ ಹೇಳಿದ, “ನನಗೆ ದೇವರು ತುಂಬ ಇಷ್ಟ’
“ಯಾಕೆ ನಿನಗೆ ದೇವರು ಇಷ್ಟ?’
ಅವನ ಉತ್ತರ, “ದೇವರು ಮಹಿಮಾನ್ವಿತ. ಅದಕ್ಕೆ ಇಷ್ಟ’.
ಗುರುಗಳಿಗೆ ಆ ಉತ್ತರದ ಬಗ್ಗೆ ಸಹಮತವಿರಲಿಲ್ಲ. ಮೂರನೆಯವನನ್ನು ಕೇಳಿದರು. ಅವನು ಕೊಂಚ ಮುಜುಗರದಿಂದ ಹೇಳಿದ, “ನನಗೆ ನನ್ನ ಪ್ರೇಯಸಿ ತುಂಬ ಇಷ್ಟ’
ಗುರುಗಳು ಮತ್ತೆ ಪ್ರಶ್ನಿಸಿದರು, “ಯಾಕೆ?’
ಆತ ಇನ್ನಷ್ಟು ಮುಜುಗರಪಟ್ಟುಕೊಂಡು ಹೇಳಿದ, “ಯಾಕೆಂದು ಗೊತ್ತಿಲ್ಲ’
ಗುರುಗಳಿಗೆ ಸಮಾಧಾನವಾದಂತೆ ಕಂಡಿತು. ಅವರು ನಸುನಗುತ್ತ ಹೇಳಿದರು, “ಉತ್ತರ ಹುಡುಕಬೇಡ. ಉತ್ತರ ಹುಡುಕುತ್ತ ಹೋದರೆ ಅದರ ಸ್ವಾರಸ್ಯ ಕೆಡುತ್ತದೆ.’

ಬಣ್ಣದ ಮನೆ !
ರಾಜನ ಆಸ್ಥಾನದಲ್ಲಿ ಇಬ್ಬರು ಕಲಾವಿದರ ನಡುವೆ ಯಾರು ಶ್ರೇಷ್ಠರು ಎಂಬ ಜಿಜ್ಞಾಸೆ ಹುಟ್ಟಿಕೊಂಡಿತು. ಒಬ್ಬ ಗಾಂಧಾರದವನು, ಮತ್ತೂಬ್ಬ ಮಗಧದವನು. “ಬೆಟ್ಟದಾಚೆಗಿನ ಎರಡು ಗಾಜಿನ ಮಹಲುಗಳಿಗೆ ಯಾರು ಅತ್ಯುತ್ತಮವಾಗಿ ಬಣ್ಣ ಬಳಿಯುವರೋ ಅವರು ಶ್ರೇಷ್ಠರು’ ಎಂಬ ಪರೀಕ್ಷೆಯನ್ನು ಅವರ ಮುಂದೆ ಒಡ್ಡಲಾಯಿತು.
ಮಗಧದ ಕಲಾವಿದ ತತ್‌ಕ್ಷಣ ಒಂದು ಬಣ್ಣಗಳ ಡಬ್ಬಿಗಳನ್ನು , ಕುಂಚಗಳನ್ನು , ಬಣ್ಣದ ಬೇಗಡೆ, ಅಲಂಕಾರ ಸಾಮಗ್ರಿಗಳನ್ನು ಹೊತ್ತು ಮಹಲಿನತ್ತ ಸಾಗಿದ. ಗಾಂಧಾರದ ಕಲಾವಿದ ಜೊತೆಗಾರರೊಂದಿಗೆ ಹಾಡು ಹೇಳುತ್ತ, ಹರಟೆ ಕೊಚ್ಚುತ್ತ ನಡುನಡುವೆ ವಿಶ್ರಮಿಸುತ್ತ ಬೆಟ್ಟದ ಮನೆಯತ್ತ ನಡೆದರು.

ಕೆಲದಿನಗಳ ಬಳಿಕ ನೋಡಿದರೆ, ಮಗಧದ ಕಲಾವಿದನ ಮನೆ ವರ್ಣನೆಗೆ ನಿಲುಕದಂತೆ ಬಣ್ಣಗಳಲ್ಲಿ ಸಿಂಗಾರಗೊಂಡಿತ್ತು. ಗೋಡೆ, ಕಿಟಕಿ, ಕಿಟಕಿಯ ಬಾಗಿಲು, ಬಾಗಿಲು ಪಟ್ಟಿ ಎಲ್ಲವೂ ವರ್ಣಮಯ. ರಾಜ “ಭಾಪುರೇ’ ಎಂದ!

ಆದರೆ, ಗಾಂಧಾರದ ಕಲಾವಿದನ ಮನೆಗೆ ಒಂದಿಷ್ಟೂ ಬಣ್ಣ ಬಳಿದಿರಲಿಲ್ಲ. ಗಾಜಿನ ಗೋಡೆಯನ್ನು ಇಂಚು-ಇಂಚು ಶುಭ್ರಗೊಳಿಸಿ ಥಳಥಳ ಹೊಳೆಯುವಂತೆ ಮಾತ್ರ ಮಾಡಲಾಗಿತ್ತು. ಆ ಮನೆಯ ಗೋಡೆಯಲ್ಲಿ ನಿಸರ್ಗದ ಸೂರ್ಯೋದಯ, ಬೆಟ್ಟಸಾಲು ಎಲ್ಲವೂ ಪ್ರತಿಫ‌ಲಿಸುತ್ತಿದ್ದವು.
“”ಅದ್ಭುತವಾಗಿದೆ. ಗಾಂಧಾರದ ಕಲಾವಿದನೇ ಶ್ರೇಷ್ಠ. ಬಣ್ಣ ಬಳಿಯುವುದೊಂದೇ ಕಲೆಯಲ್ಲ. ನಮ್ಮನ್ನು ನಾವು ಪ್ರತಿಫ‌ಲಿಸುವುದೇ ನಿಜವಾದ ಕಲೆ ಎಂಬುದನ್ನು ಈತ ಅರಿತಿದ್ದಾನೆ.” ಎಂದ ರಾಜ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.