Parijatha Flower: ಮನೆಯಂಗಳದ ಅಪ್ಸರೆ ಪಾರಿಜಾತ


Team Udayavani, Oct 24, 2023, 12:00 PM IST

TDY-2

ಪಾರಿಜಾತ ಹೆಸರಲ್ಲೇ ಏನೋ ವಿಶೇಷ ಸೆಳೆತವಿದೆ. ಮೋಹಕತೆಯಿದೆ. ಇದು ಪುಷ್ಪ ಪ್ರಬೇಧದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವ ಹೂವು. ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರ ಮಥನ ನಡೆಸಿದ ಸಂದರ್ಭದಲ್ಲಿ ಕ್ಷೀರ ಸಮುದ್ರದಿಂದ 14 ಅಮೂಲ್ಯ ರತ್ನಗಳಲ್ಲದೆ 5 ಕಲ್ಪವೃಕ್ಷಗಳು ಹುಟ್ಟಿದವೆಂದು ನಂಬಿಕೆಯಿದೆ. ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ನಾರೀಕೇಳ (ತೆಂಗು) ಮತ್ತು ಹರಿಚಂದನ.

ಭಗವಾನ್‌ ಶ್ರೀಕೃಷ್ಣನು ದೇವಲೋಕದಿಂದ ಪಾರಿಜಾತ ಸಸ್ಯವನ್ನು ತಂದು ಸತ್ಯಭಾಮೆಯ ಮನೆಯ ಅಂಗಳದಲ್ಲಿ ನೆಟ್ಟು, ಅದರ ಹೂವುಗಳು ರುಕ್ಮಿಣಿಯ ಮನೆಯ ಅಂಗಳಕ್ಕೆ ಬೀಳುವಂತೆ ಮಾಡುತ್ತಾನೆ. ಈ ಮೂಲಕ ಸತ್ಯಭಾಮೆಯ ಮನದಲ್ಲಿ ಮನೆ ಮಾಡಿದ್ದ ದುರಹಂಕಾರ ನಿರ್ಮೂಲವಾಯಿತು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇನ್ನೊಂದು ಕಥೆಯ ಪ್ರಕಾರ ಸೂರ್ಯದೇವನನ್ನು ಪ್ರೀತಿಸುವ ಪಾರಿಜಾತಕ ಎಂಬ ರಾಜಕುಮಾರಿಯು ಅವನಿಂದ ಉಪೇಕ್ಷೆಗೊಳಗಾಗುತ್ತಾಳೆ. ಇದರಿಂದ ಮನನೊಂದ ರಾಜಕುಮಾರಿ, ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಪಾರಿಜಾತಕಳ ಚಿತಾಭಸ್ಮದಿಂದ ಒಂದು ಸಸ್ಯ ಹುಟ್ಟುತ್ತದೆ. ಅದೇ ಪಾರಿಜಾತ! ಸೂರ್ಯಾಸ್ತದ ನಂತರ ಅರಳುವ ಪಾರಿಜಾತದ ಹೂವು ಸೂರ್ಯೋದಯವಾಗುತ್ತಲೇ ಗಿಡದಿಂದ ಉದುರಿ ಬೀಳುವ ಮೂಲಕ, ತಾನು ಮತ್ತೆಂದೂ ಸೂರ್ಯನನ್ನು ನೋಡಲಾರನೆಂಬ ಪಾರಿಜಾತಳ ಪ್ರತಿಜ್ಞೆಯನ್ನು ಪಾಲಿಸುತ್ತದೆ ಎಂಬುದು ಕಥೆಯ ಸಾರ.

ರಾತ್ರಿ ಅರಳುವ ಹೂ:

ಸೂರ್ಯ ಕಿರಣಗಳ ಶಾಖ ತಡೆಯುವ ಶಕ್ತಿ ಇಲ್ಲದೇ ಉದುರಿ ಬೀಳುವ ಈ ಹೂವಿನ ಗುಣದಿಂದಾಗಿ ಈ ಮರಕ್ಕೆ “ಸೊರಗಿದ ಮರ’ವೆಂದೂ ಕರೆಯಲಾಗುತ್ತದೆ. ಪಾರಿಜಾತದಲ್ಲಿ ಎರಡು ಬಗೆಯಿದ್ದು, ಮೊದಲನೆಯದ್ದು ಆರು ಎಸಳುಗಳು ಪ್ರತ್ಯೇಕ ಪ್ರತ್ಯೇಕವಾಗಿದ್ದು ಮುದುರಿಕೊಂಡಿದ್ದರೆ, ಇನ್ನೊಂದು ಅಗಲ ಅಗಲವಾದ ದಳಗಳಿಂದ ಕೂಡಿದ್ದು ಒಂದಕ್ಕೊಂದು ಸೇರಿಕೊಂಡಿರುತ್ತದೆ. ಸುವಾಸನೆಯಿಂದ ಕೂಡಿರುವ ಈ ಹೂವು  ಬಿಳಿಯ ಎಸಳುಗಳು, ಕೇಸರಿ ತೊಟ್ಟು ಮತ್ತು ಸೂಕ್ಷ್ಮ ದಳಗಳನ್ನು ಹೊಂದಿದೆ. ಬೀಜದಿಂದ ಹಾಗೂ ಮಳೆಗಾಲದಲ್ಲಿ ಗೆಲ್ಲುಗಳನ್ನು ಕಡಿದು ನೆಡುವ ಮೂಲಕವೂ ಈ ಗಿಡದ ವಂಶಾಭಿವೃದ್ಧಿ ಮಾಡಬಹುದಾಗಿದೆ.  ಹತ್ತರಿಂದ ಹದಿನೈದು ಅಡಿ ಎತ್ತರದವರೆಗೂ ಬೆಳೆಯಬಲ್ಲ ಈ ಸಸ್ಯಕ್ಕೆ ಆಂಗ್ಲ ಭಾಷೆಯಲ್ಲಿ “ನೈಟ್‌ ಜಾಸ್ಮಿನ್‌’ ಅಥವಾ “ಕೋರಲ್‌ ಜಾಸ್ಮಿನ್‌’ ಎಂಬ ಹೆಸರಿದೆ.

ಔಷಧೀಯ ಗುಣ: 

ಆಯುರ್ವೇದ ಹಾಗೂ ಸುಶ್ರುತ ವೈದ್ಯಶಾಸ್ತ್ರದ ಪ್ರಕಾರ, ಪಾರಿಜಾತ ಸಸ್ಯದಲ್ಲಿ ಔಷಧೀಯ ಗುಣವಿದ್ದು, ಇದರ ತೊಗಟೆಯಿಂದ ತಯಾರಿಸಲಾದ ಕಷಾಯದಿಂದ ಹುಣ್ಣು ಅಥವಾ ಗಾಯವನ್ನು ತೊಳೆದರೆ ಗಾಯ  ಉಪಶಮನವಾಗುವುದು ಎನ್ನಲಾಗುತ್ತದೆ.

ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಗೆ ಈ ಸಸ್ಯದ ಎಲೆಯ ರಸವನ್ನು ಬಳಸುತ್ತಾರೆ. ಪಾರಿಜಾತ ಗಿಡದ ಎಲೆಯಿಂದ ತೆಗೆಯಲಾದ ರಸ ಸೇವಿಸಿದರೆ ಹೊಟ್ಟೆಯ ಜಂತುಹುಳ ಬಾಧೆ ಶಮನವಾಗುವುದು.

ಪಾರಿಜಾತವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೂವನ್ನು ಅರೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದರೆ ಮುಖವು ಕಾಂತಿಯುತವಾಗುತ್ತದೆ ಎಂಬ ಮಾತಿದೆ.

ದೇವಲೋಕದ ಪುಷ್ಪ :

ರಾತ್ರಿ ಹೊತ್ತೇ ಅರಳಿ ಸುಗಂಧ ಪಸರಿಸುವುದರಿಂದ ಇದನ್ನು “ಟ್ರೀ ಆಫ್ ಸ್ಯಾಡೆ°ಸ್‌’ ಎಂದೂ ಕರೆಯಲಾಗುತ್ತದೆ. ಮನೆಯಂಗಳದಲ್ಲಿ ಒಂದು ಪಾರಿಜಾತ ಗಿಡವಿದ್ದರೆ ಸಾಕು; ಸುತ್ತಮುತ್ತಲಿನ ಪ್ರದೇಶವನ್ನು ತಂಪಾಗಿಸುತ್ತದೆ. ಸಂಜೆ ಮತ್ತು ರಾತ್ರಿ ವೇಳೆ ಅರಳಿ ಕಂಪನ್ನು ಪಸರಿಸುವ ಈ ಹೂವನ್ನು ನೋಡಿದವರು, ಇದನ್ನು ದೇವಲೋಕದ ಪುಷ್ಪವೆನ್ನದೇ ಇರಲಾರರು.

ಸಂತೋಷ್‌ ರಾವ್‌. ಪೆರ್ಮುಡ

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ‌ ಸಾಹಿತ್ಯ ರಂಗದ ಸಾರ್ಥಕ ಸೇವೆ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

River: ನದಿಯೇ ಜೀವನ ಸಾಕ್ಷಾತ್ಕಾರ!

River: ನದಿಯೇ ಜೀವನ ಸಾಕ್ಷಾತ್ಕಾರ!

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.