ಮಳೆಹನಿ 


Team Udayavani, Jul 16, 2017, 2:50 AM IST

DROP.jpg

ಹೂವಿನ ದಳದ ಮೇಲೆ ಕುಳಿತ ಹನಿ ವ್ಯರ್ಥವಾಗುವುದಿಲ್ಲ. ಒಂದೋ ಅದು ನದಿಗೆ ಬಿದ್ದು ಸಾಗರ ಸೇರುತ್ತದೆ ಅಥವಾ ನೆಲಕ್ಕೆ  ಬಿದ್ದು ಬೀಜ ಮೊಳಕೆಯೊಡೆಯಲು ಪ್ರೇರಣೆಯಾಗುತ್ತದೆ ಅಥವಾ ಆವಿಯಾಗಿ ಮುಗಿಲು ಸೇರಿ ಮತ್ತೆ ಮಳೆಹನಿ ಕನಸು ಕಾಣುತ್ತದೆ.
.
ಮೋಡಕ್ಕೆ ಭಾರ ತಡೆಯಲು ಕಷ್ಟವಾದಾಗ ಮಳೆ ಬೀಳುತ್ತದೆ; ಹೃದಯಕ್ಕೆ ಭಾರ ಆಧರಿಸಲು ಅಶಕ್ಯವಾದರೆ ಕಣ್ಣೀರು ಬರುತ್ತದೆ. ಎರಡನ್ನೂ ತಡೆಯುವುದು ಅಸಾಧ್ಯ.
.
ಬಿಸಿಲಿನ ವೇಳೆಯಲ್ಲಿ ಸುರಿಯುವ ಮಳೆ ಸಂತೋಷದಲ್ಲಿ ಬರುವ‌ ಕಣ್ಣೀರಿನಂತೆ. ಬರಲಿ ಬಿಡಿ !
.
ಕೆಲವರು ಬೇಸರದಿಂದ ಹೇಳುತ್ತಾರೆ, “ಮಳೆ ಬಂದರೆ ನೀರು ಹರಿದು ಎಲ್ಲೆಲ್ಲೂ ಕೆಸರಾಗುತ್ತದೆ’
ಆದರೆ, ಕೆಸರಿನಲ್ಲಿ ಹೂವಿನ ಗಿಡ ಚಿಗುರುವುದನ್ನು , ತಾವರೆ ಹೂವು ಅರಳುವುದನ್ನು ಅವರು ನೋಡಿರುವುದಿಲ್ಲ.
.
ಮಳೆಯ ಸದ್ದಿನಲ್ಲೊಂದು ನಾದವಿರುತ್ತದೆ. ಆ ನಾದವನ್ನು ಆಲಿಸಲಾಗದವರು ಯಾವ ಸಂಗೀತ ಕಛೇರಿಯನ್ನೂ ಆನಂದಿಸಲಾರರು.
.
ಬಿಸಿಲು ಬೀಳುವ ವೇಳೆಯಲ್ಲಿ ಮಳೆಯ ಕುರಿತ ಕವನಗಳನ್ನು ಬರೆಯುವುದು ಒಳ್ಳೆಯದು. ಏಕೆಂದರೆ, ಮಳೆ ಬೀಳುವ ಕಾಲದಲ್ಲಿ ಮಳೆಯೇ ಇದೆಯಲ್ಲ ; ಕವನ ಎಂಥದಕ್ಕೆ !
.
ಆಶಾವಾದಿಯ ಉವಾಚ, “ಮಳೆ ಬರುತ್ತಿದೆ. ಊರಿಡೀ ಛಾವಣಿ ಹೊದಿಸಲು ಸಾಧ್ಯವಿಲ್ಲ, ಆದರೆ, ನನ್ನ ತಲೆಯ ಮೇಲೆ ಕೊಡೆ ಹಿಡಿಯುತ್ತೇನೆ !’
.
ಪ್ರೇಯಸಿಯೊಬ್ಬಳು ಪ್ರಿಯಕರನಿಗೆ ದೂರವಾಣಿಯಲ್ಲಿ ಹೇಳುತ್ತಾಳೆ, “ಇಲ್ಲಿ ಮಳೆ ಬರುತ್ತಿದೆ. ನಿನಗಾಗಿ ಮಳೆಯ ನೀರನ್ನು ತೆಗೆದಿಡಬಲ್ಲೆ. ಆದರೆ, ಮಳೆಯ ಸದ್ದನ್ನು ಸಂಗ್ರಹಿಸಿಡುವುದು ಹೇಗೆ?’
.
ಮಳೆ ಬಂದಾಗ ಬಿರುಗಾಳಿ ಬೀಸುತ್ತದೆ, ಗುಡುಗು ಬರುತ್ತದೆ ಎಂದು ಕೆಲವರು ಹೆದರುತ್ತಾರೆ. ಇನ್ನು ಕೆಲವರು ಮಳೆ ಬಂದಾಗ  ಹೂವು ಅರಳುತ್ತದೆ ಎಂದು ಸಂತೋಷಪಡುತ್ತಾರೆ.

– ಅಪ್ಸರಾ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.