ಪುಟ್ಟ ಕೈಗಳಲ್ಲಿ ಅರಳುವ ಭಿತ್ತಿ ಚಿತ್ರಕಲೆ


Team Udayavani, Sep 10, 2017, 7:05 AM IST

bitti-chitra.jpg

ತಮ್ಮನ ಮನೆಯೊಳಗೆ ಕಾಲಿಟ್ಟ ತಕ್ಷಣ ಕಂಡಿದ್ದು ಅಲ್ಲಿನ ಎಲ್ಲಾ ಗೋಡೆಗಳಲ್ಲೂ ರಾರಾಜಿಸುತ್ತಿದ್ದ  ವಿವಿಧ ಚಿತ್ತಾರಗಳು. ಆ ಬರಹಗಳ ಒಡೆಯ ನಮ್ಮ ಪುಟ್ಟ ಅಳಿಯ ಅದ್ವಿಕ್‌. ತನಗೆ ಎಟಕುವ ಮಟ್ಟದ ಗೋಡೆಯಲ್ಲಿ  ವಿವಿಧ ವೃತ್ತಗಳು, ಗೆರೆಗಳು, ಕೆಲವು ಅಕ್ಷರಗಳು ಇತ್ಯಾದಿ ಮೂಡಿಸಿದ್ದ. ನನ್ನ ಮಗನೂ ತನ್ನ 4-5 ರ ವಯಸ್ಸಿನಲ್ಲಿ ಮನೆಯ ಗೋಡೆಯಲ್ಲಿ ಪೆನ್ಸಿಲ್‌, ಪೆನ್‌, ಕ್ರೇಯಾನ್‌ಗಳಲ್ಲಿ  ಗೀಚುತ್ತಿದ್ದ.

ಮನೆಯ ಗೋಡೆಯ ಮೇಲೆ, ಮೂರು-ನಾಲ್ಕು ಅಡಿ ಎತ್ತರದ ವರೆಗೆ ಅಡ್ಡಾದಿಡ್ಡಿ ಗೆರೆಗಳು, ಬರಹಗಳು, ವೃತ್ತಗಳು ಹೀಗೆ ಅರ್ಥವಾಗದ ಚಿತ್ತಾರಗಳು ರಾರಾಜಿಸುತ್ತಿವೆಯೆಂದಾದರೆ, ಅದು ಆ ಮನೆಯ ಪುಟ್ಟ ಮಕ್ಕಳ ಗೋಡೆಬರಹವೆಂದು ಖಚಿತವಾಗಿ ಹೇಳಬಹುದು. ಮನೆಗೆ ತರಿಸುವ ವೃತ್ತಪತ್ರಿಕೆ, ಬಂದ ಆಮಂತ್ರಣ ಪತ್ರಿಕೆ, ಕೈಗೆ ಸಿಕ್ಕಿದ ಫೋನ್‌ ಬಿಲ್‌, ಅಕ್ಕ/ಆಣ್ಣಂದಿರ ಶಾಲಾಪುಸ್ತಕ, ಗೋಡೆಯಲ್ಲಿರುವ ಕ್ಯಾಲೆಂಡರ್‌ ಹೀಗೆ ಕೈಗೆ ಸಿಕ್ಕಿದ ಕಾಗದದ ಮೇಲೆ ಪೆನ್‌, ಪೆನ್ಸಿಲ್‌ ಅಥವಾ ಕ್ರೇಯಾನ್‌ ಬಣ್ಣದ ಗೆರೆ ಮೂಡಿಸುವುದರಲ್ಲಿ ಮಕ್ಕಳಿಗೆ ಅಪರಿಮಿತ ಸಂತೋಷ. ಕೆಲವು ಮಕ್ಕಳು, ಚಿತ್ರ ಮಾಡಲೆಂದೇ ಡಿಸೈನ್‌ ಪುಸ್ತಕಗಳನ್ನು ತಂದರೂ, ಅದರಲ್ಲಿ ತತ್‌ಕ್ಷಣವೇ ಬಣ್ಣ ಹಚ್ಚಿ ಮುಗಿಸಿ ಪುನಃ ಗೋಡೆಬರಹಕ್ಕೆ ತಯಾರಾಗುತ್ತಾರೆ.

ಅಂಕಲ್‌ ನೋಡ್ತಾರೆ !
ಈ ಕಾರಣಕ್ಕೇ ಮಕ್ಕಳನ್ನು ಗದರಿಸುವವರೂ ಇ¨ªಾರೆ. “ರವಿವರ್ಮನ ಕುಂಚದ ಕಲೆ..ಭಲೇ’ ಅಂತ ಹಗುರಾಗಿ ನಕ್ಕು ಪ್ರೋತ್ಸಾಹಿಸುವುದೂ ಇದೆ. ಏನಾದರೂ ಗೀಚಲಿ, ಸುಮ್ಮನೇ ಹಠ ಮಾಡುತ್ತ, ರಚ್ಚೆ ಹಿಡಿದು ಅಳದಿದ್ದರೆ ಸಾಕು… ಮಗು ಸ್ವಲ್ಪ ದೊಡ್ಡದಾದ ಮೇಲೆ ಮನೆಗೆ ಪೈಂಟ್‌ ಹೊಡೆಸಿದರಾಯಿತು ಅಂತ ಮಗುವಿಗೆ ಸ್ವಾತಂತ್ರ್ಯ ಕಲ್ಪಿಸುವವರೂ ಇ¨ªಾರೆ. ಬಾಡಿಗೆ ಮನೆಯಲ್ಲಿ ವಾಸವಿರುವವರು, “ಇಷ್ಟು ಭಾಗದ ಗೋಡೆಯಲ್ಲಿ ಮಾತ್ರ ಚಿತ್ರ ಮಾಡು…ಇಡೀ ಮನೆಯ ಗೋಡೆಯಲ್ಲಿ ಬರೆದರೆ ಓನರ್‌ ಅಂಕಲ್‌ ನೋಡ್ತಾರೆ’ ಅಂತ ಹೆದರಿಸುವುದು ಒಂದು ತಂತ್ರವಾದರೆ, ಗೋಡೆಗೆ ದೊಡ್ಡದಾಗಿ ಕಪ್ಪು ಕಾನವಾಸ್‌ ಬಟ್ಟೆಯನ್ನೋ, ಬೈಂಡ್‌ ಪೇಪರನ್ನೋ ಅಂಟಿಸಿ ಮಗುವಿನ ಗೋಡೆಬರಹಕ್ಕೆ ಪರ್ಯಾಯ ಗೋಡೆ ಸೃಷ್ಟಿಸುವುದು ಇನ್ನೊಂದು ತಂತ್ರ. ಏನೇ ಮಾಡಿದರೂ, ಜಾಣ ಮಕ್ಕಳು ಸಾಮಾನ್ಯವಾಗಿ ತಮ್ಮ ಎರಡನೆಯ ವಯಸ್ಸಿನಿಂದ ಸುಮಾರು ಏಳೆಂಟು ವರ್ಷದ ವರೆಗೆ ತಮಗೆ ಇಷ್ಟಬಂದಂತೆ ಗೋಡೆಯಲ್ಲಿ ಬರೆಯುತ್ತಾರೆ.

ಮಕ್ಕಳಿಗೆ ಗೋಡೆಯಲ್ಲಿ ಬರೆಯಬೇಕೆನಿಸುವ ತುಡಿತಕ್ಕೆ ಮನಶಾಸ್ತ್ರೀಯ ಕಾರಣಗಳಿವೆಯಂತೆ. ಬಳಪ/ಪೆನ್ಸಿಲ್‌ ನಂತಹ ವಸ್ತುಗಳನ್ನು ಬೆರಳುಗಳ ಸಹಾಯದಿಂದ ಹಿಡಿದುಕೊಳ್ಳಲು ಕಲಿತೆನೆಂದು ಮಗುವಿಗೆ ಸಂತಸವಾಗುತ್ತದೆ. ಇದಕ್ಕೆ ಪೂರಕವಾಗಿ ಕೈಗಳ ಸ್ನಾಯು ಮತ್ತು ಮಿದುಳಿನ ಆದೇಶಗಳ ಸಂಯೋಜನೆ ಉಂಟಾದಾಗ ಸಂಭ್ರಮಿಸುತ್ತ, ತನ್ನ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿ ಪಡಿಸಲು ಅಯಾಚಿತವಾಗಿ ಕಾಣಸಿಗುವ ಗೋಡೆಯನ್ನೇ ಕಾನ್ವಾಸ್‌ ಪರದೆಯಂತೆ ಬಳಸುತ್ತದೆ. ಸಹಜವಾಗಿಯೇ ಆ ವಯಸ್ಸಿನಲ್ಲಿ ಗೋಡೆಯಲ್ಲಿ ಬರೆಯಬಾರದೆಂದೂ, ಅದನ್ನು ಅಳಿಸಲು ಆಗಬಹುದಾದ ಖರ್ಚು , ಪರಿಣಾಮಗಳನ್ನೂ ಮಗು ಅರ್ಥ ಮಾಡಿಕೊಳ್ಳುವುದಿಲ್ಲ. ಮಕ್ಕಳ ಕೋಮಲ ಮನಸ್ಸಿಗೆ ಘಾಸಿಯಾಗದಂತೆ ಇದನ್ನು ನಿಭಾಯಿಸಬೇಕಾದದ್ದು ಪಾಲಕರ ಕರ್ತವ್ಯ. 

ಶಿಲಾಯುಗದ ಕಾಲದಲ್ಲಿಯೂ ಮನುಷ್ಯನು ಪ್ರಥಮವಾಗಿ ಚಿತ್ರಗಳನ್ನು ಮೂಡಿಸಿದುದು ಗುಹೆಗಳ ಗೋಡೆಗಳ ಮೇಲೆ. ಇತ್ತೀಚೆಗೆ ಬಿಡುಗಡೆಯಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಲನಚಿತ್ರದಲ್ಲಿ ಮುಖ್ಯ ನಟರೊಬ್ಬರು, ಅಲ್ಜಿಮರ್‌ ಖಾಯಿಲೆಯಿಂದ ಸ್ಮರಣ ಶಕ್ತಿಯನ್ನು ಕಳೆದುಕೊಂಡು ಎಲ್ಲೋ ಅಲೆಯುತ್ತಿದ್ದ ತನ್ನ ತಂದೆಯನ್ನು ಹುಡುಕುವ ಸಂದರ್ಭದಲ್ಲಿ , ಆಕಸ್ಮಿಕವಾಗಿ, ಆ ತಂದೆಯೇ ಕಪಾಟಿನ ಮರೆಯಲ್ಲಿ ಜಾಣತನದಿಂದ ಸಂರಕ್ಷಿಸಿ ಇಟ್ಟಿದ್ದ ತನ್ನ ಬಾಲ್ಯದ ಗೋಡೆಬರಹವನ್ನು ಕಂಡಾಗ, ಭಾವುಕರಾಗುವ ದೃಶ್ಯವಿದೆ. 

ತಮಗೆ ತೋಚಿದ್ದನ್ನು ಅಕ್ಷರ ರೂಪಕ್ಕಿಳಿಸಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು. ಈಗೀಗ ಕೆಲವು  ಬರಹಾಸಕ್ತರು ತಮ್ಮ ನೆನಪುಗಳು, ಅವಿಸ್ಮರಣೀಯ ಘಟನೆಗಳು, ಅಡುಗೆಮನೆಯ ಹೊಸರುಚಿ, ಪ್ರವಾಸಾನುಭವಗಳು, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದನೆ, ಅಂದದ ಚಿತ್ರಗಳು….ಹೀಗೆ ವಿವಿಧ ದಿಕ್ಕುಗಳಲ್ಲಿ ಆಲೋಚನೆಯನ್ನು ಹರಿಯ ಬಿಟ್ಟು, ಅವುಗಳಿಗೆ ಅಕ್ಷರ ರೂಪ ಕೊಟ್ಟು ಫೇಸ್‌ ಬುಕ್‌ ‘ಗೋಡೆ’ಗೆ ತಗಲಿಸುವುದು ಸಾಮಾನ್ಯ. ಈ ವಯಸ್ಸಿನಲ್ಲೂ ನಾವು “ಗೋಡೆಬರಹ’ದ ಪ್ರಿಯರು’ ಎಂಬುದಕ್ಕೆ ಇದೇ ಸಾಕ್ಷಿ !

– ಹೇಮಮಾಲಾ ಬಿ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.