Women empowerment: ಕಾಯಿ ಸುಲಿದಂತೆಲ್ಲ ಕಷ್ಟವೂ ಕಳೆಯಿತು!


Team Udayavani, Oct 15, 2023, 12:51 PM IST

tdy-10

ಶ್ರಮ -ಕೌಶಲ್ಯ ಆಧಾರಿತ ತೆಂಗಿನ ಮರವೇರುವ ದುಡಿಮೆಯಲ್ಲಿ ಮಹಿಳೆಯರ ಪಾರುಪತ್ಯದ ಕಥೆಯನ್ನು ನೀವು ಈಗಾಗಲೇ ಕೇಳಿರಬಹುದು. ಕಾಸರಗೋಡು -ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತರಬೇತಿ ಪಡೆದ ನಾಲ್ಕೈದು ಯುವತಿಯರು ಸರಳ ಕೈಯಂತ್ರದ ಮೂಲಕ ತೆಂಗಿನ ಮರವೇರಿ ಕಾಯಿ ಕೀಳುವ ಯಶೋಗಾಥೆ ಈಗಾಗಲೇ ಜನಜನಿತ.

ಹಾಗೆ ನೋಡಿದರೆ ಎಂಬತ್ತು -ನೂರಡಿ ಏರಿ ಕಾಯಿ ಕೀಳುವ ಕೆಲಸ ಭೂಮಿಯ ಮೇಲೆ ನಿಂತು ಅದರ ಸಿಪ್ಪೆ ತೆಗೆಯುವುದಕ್ಕಿಂತ ಕಷ್ಟಕರ. ಈ ಕಾಯಕದಲ್ಲಿ ಕುಶಲಿ ಮಹಿಳೆಯರು ಇಲ್ಲವೇ ಇಲ್ಲ ಎಂಬಷ್ಟು ಕನಿಷ್ಠ. ಅಡಿಕೆ ಸುಲಿಯುವ ಮಹಿಳಾಮಣಿಗಳಾದರೂ ಸಾಕಷ್ಟು ಇದ್ದಾರೆ. ಪುರುಷರಿಗೆ ಸರಿಗಟ್ಟುವಷ್ಟು ಸುಲಿಯುತ್ತಾರೆ.

ಓದಿದ್ದೇ ಒಂದು, ಬದುಕು ಇನ್ನೊಂದು…

ಆದರೆ ಇಲ್ಲೊಬ್ಬರು ದಿನಕ್ಕೆ ಅದರಲ್ಲೂ ಮಧ್ಯಾಹ್ನದವರೆಗೆ ಬರೀ ಅರ್ಧ ದಿನಕ್ಕೆ ಸಾವಿರದ ಇನ್ನೂರರವರೆಗೆ ತೆಂಗಿನಕಾಯಿ ಸುಲಿದು ಕಾಯಿಗೊಂದು ರೂಪಾಯಿ ಮಜೂರಿ ಸಂಪಾದಿಸಿ ಸ್ವಾವಲಂಬಿಯಾಗಿದ್ದಾರೆ.

ಹೆಸರು ಹರಿಣಾಕ್ಷಿ. ವಾಸ ಕೇರಳ- ಕರ್ನಾಟಕದ ಗಡಿ ಪ್ರದೇಶವಾದ ವಾಣಿ ನಗರ. ವಯಸ್ಸು 40. ಕೇರಳದ ಇಡುಕ್ಕಿಯಲ್ಲಿ ಆಯುರ್ವೇದ ಥೆರಪಿ ಓದಿದ ಈಕೆ ಚೆನ್ನೈಯಲ್ಲಿ ಒಂದಷ್ಟು ಸಮಯ ದುಡಿದು, ಮುಂದೆ ಬೆಂಗಳೂರಿಗೆ ಬಂದು ಥೆರಪಿಯದ್ದೇ ಉದ್ಯೋಗ ಪಡೆಯುತ್ತಾರೆ. ಗಂಡ ಹೆಂಡತಿ ಒಂದೇ ಸಂಸ್ಥೆಯಲ್ಲಿ ದುಡಿಯುತ್ತಾರೆ. ತಿಂಗಳಿಗೆ ಹನ್ನೆರಡು ಸಾವಿರ ಪಗಾರ. ಜೊತೆಗೆ ಊಟ, ವಸತಿ ಉಚಿತ.

ಮಧ್ಯಾಹ್ನಕ್ಕೆ ಮುಕ್ತಾಯ!

ಬೆಂಗಳೂರಲ್ಲಿ ಮಗುವನ್ನು ಒಳ್ಳೆಯ ಸ್ಕೂಲಿಗೆ ಸೇರಿಸಲು 30-40 ಸಾವಿರ ಡೊನೇಶನ್‌ ಕೊಡಲಾಗದೆ ಗಂಡ -ಹೆಂಡತಿ ಊರಿಗೆ ವಾಪಸಾಗಿ ಒಂದು ಚಿಕ್ಕ ಮನೆ ಮಾಡಿ ಮಗುವನ್ನು ಇಲ್ಲೇ ಶಾಲೆಗೆ ಸೇರಿಸಿದ್ದಾರೆ. ಗಂಡ ತಿರುಗಿ ಬೆಂಗಳೂರಿಗೆ ಹೋದರೆ ಹೆಂಡತಿ ಊರಲ್ಲೇ ಇದ್ದು ಎರಡು ಮಕ್ಕಳನ್ನ ಸಾಕಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಬರುತ್ತೇನೆ ಎಂದು ಹೋದ ಯಜಮಾನ ಬರದೇ ಇದ್ದಾಗ ಕುಟುಂಬ ಪೊರೆಯುವ ಪೂರ್ತಿ ಜವಾಬ್ದಾರಿ ಇವರದ್ದೇ ಆಗುತ್ತದೆ. ಬದುಕಿಗಾಗಿ ಹೊಸ ದಾರಿ ಹೊಂಚುವಾಗ ಕಾಣಿಸಿದ್ದೇ ಯಾವ ಮಹಿಳೆಯೂ ಮಾಡದಿರುವ ತೆಂಗಿನಕಾಯಿ ಸುಲಿವ ಕಾಯಕ! ಸುಳಿಭರ್ಚಿ­ಯೊಂದನ್ನು ಖರೀದಿಸಿರುವ ಹರಿಣಾಕ್ಷಿ ಅದನ್ನು ಸ್ಕೂಟಿಯ­ಲ್ಲಿಟ್ಟುಕೊಂಡು ರೈತರಲ್ಲಿಗೆ ತೆರಳಿ ಮಧ್ಯಾಹ್ನದವರೆಗೆ ಮಾತ್ರ ದುಡಿಯುತ್ತಾರೆ. ಅಷ್ಟರಲ್ಲಿ ಅವರ ಆದಾಯ ಸಾವಿರದ ಗಡಿಯನ್ನು ದಾಟುತ್ತದೆ.

ಬೇಸಿಗೆಯಲ್ಲಿ ಬಿಡುವಿಲ್ಲದ ದುಡಿಮೆ

ಬೇಸಿಗೆ ತುಂಬಾ ಹರುಣಾಕ್ಷಿಗೆ ಬಿಡುವಿಲ್ಲ. ಖಾಯಂ ತೆಂಗಿನಕಾಯ ಖರೀದಿದಾರರೊಬ್ಬರಲ್ಲಿ ದುಡಿಯುವ ಇವರು,ಅಲ್ಲಿ ರಾಶಿ ರಾಶಿ ಕಾಯಿಯನ್ನು ಸುಲಿದು ಸಿದ್ದಗೊಳಿಸುತ್ತಾರೆ. ಸಿಪ್ಪೆ ಬೇಕೆನ್ನುವರ ಮನೆಗೆ ಹೋಗಿ ಅಲ್ಲೂ ಸುಲಿಯುತ್ತಾರೆ. ಮಳೆಗಾಲದಲ್ಲಿ ದುಡಿಮೆ ಸ್ವಲ್ಪ ಕಡಿಮೆ. ಅದಕ್ಕಾಗಿ ಒಂದು ಹಸು ಕಟ್ಟಿ ಹಾಲು ಮಾರಿ ಆ ಸಮಯದ ಕಷ್ಟವನ್ನು ಸರಿದೂಗಿಸುತ್ತಾರೆ. ವಾಣಿ ನಗರದಿಂದ ಸುಮಾರು 20 -30 ಕಿಲೋ ಮೀಟರ್‌ ಸರಹದ್ದಿನಲ್ಲಿ ಎÇÉೇ ಯಾರೇ ಕರೆದರೂ ಹರಿಣಾಕ್ಷಿ ಹೇಳಿದ ದಿನ ಹಾಜರಿರುತ್ತಾರೆ.

ಮಧ್ಯಾಹ್ನದ ನಂತರ ವಿರಾಮ. ಬಗ್ಗಿಕೊಂಡು ಕೈಯೊತ್ತಿ ದುಡಿಯುವ ಈ ಕಾಯಕದಲ್ಲಿ ಸೊಂಟದ ನೋವು ತುಂಬಾ. ಅದಕ್ಕಾಗಿ ಅರ್ಧ ದಿನದ ದುಡಿತ. ಉಳಿದ ಅವಧಿ ಮಕ್ಕಳ ಆರೈಕೆ, ಹಸುವಿನ ಪೋಷಣೆಯಲ್ಲಿ ವ್ಯಯವಾಗುತ್ತದೆ ಎನ್ನುವ ಹರಿಣಾಕ್ಷಿಯ ಜೀವನದಾರಿ ಬೇರೆಯವರಿಗೂ ಮಾದರಿಯಾಗಲಿ.

ಕಾರ್ಯಾಗಾರ ನಡೆಯಲಿ…:

ದೈಹಿಕ ಕ್ಷಮತೆ ಇರುವ ಗ್ರಾಮೀಣ ಹೆಣ್ಣು ಮಕ್ಕಳಿಗೆ ಇದೊಂದು ವಿಪುಲ ಅವಕಾಶ ಇರುವ ಉದ್ಯೋಗವಾಗಬಹುದು. ಕನಿಷ್ಠ ದಿನಕ್ಕೆ ಒಂದೂವರೆ ಸಾವಿರದಷ್ಟು ತೆಂಗಿನಕಾಯಿ ಸುಲಿದ‌ರೆ ತಿಂಗಳಿಗೆ 30 ಸಾವಿರ ಆದಾಯ ನಿಶ್ಚಿತ. ಇದಕ್ಕಿಂತ ಹೆಚ್ಚು ಆದಾಯ ತರುವ ಬೇರೆ ಉದ್ಯೋಗಗಳು ಹಳ್ಳಿಗಳಲ್ಲಿ ಬಹುಶಃ ಇಲ್ಲ. ಯಾವ ಪದವಿಯ ಅಗತ್ಯವೂ ಇಲ್ಲದ ಕನಿಷ್ಠ ತರಬೇತಿಯಿಂದ ಸಾಧ್ಯವಾಗುವ ಕಾಯಿ ಸುಲಿಯುವ ಈ ಕಾಯಕದ ಕುರಿತು ಗ್ರಾಮ್ಯ ಪರಿಸರದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರಗಳಾಗಬೇಕು. ಹರಿಣಾಕ್ಷಿಯವರ ಮಾದರಿಯಲ್ಲೇ ಉಳಿದವರು ಕಲಿಯಬೇಕು.

ಲೇಖನ:

ಪವಿತ್ರಾ ರೈ ದೇರ್ಲ

ಫೋಟೋ: 

ಶೈಲಜಾ ಶ್ರೀ ಪಡ್ರೆ

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.