ಸೌಂದರ್ಯ ಸಮರ


Team Udayavani, Sep 26, 2018, 6:00 AM IST

e-1.jpg

ಬಸ್‌ನಲ್ಲಿ ಕುಳಿತಿರುತ್ತೀರಿ. ಪಕ್ಕದಲ್ಲಿ ಕುಳಿತವನ ಕೈ ಬೇಕಂತಲೇ ಉದ್ದವಾಗುತ್ತದೆ. ನಿದ್ದೆಯಲ್ಲಿರುವಂತೆ ನಟಿಸಿ, ಉದ್ದೇಶಪೂರ್ವಕವಾಗಿ ಭುಜ ತಾಗಿಸುತ್ತಾನೆ. ಸಂಜೆ ಆಫೀಸು ಮುಗಿಸಿ ಬರುವಾಗ ಯಾರೋ ಒಬ್ಬ ಹಿಂಬಾಲಿಸಿಕೊಂಡು ಬರುತ್ತಾನೆ. ಇಂಥ ಸಂದರ್ಭಗಳು ಆಗಾಗ ಹೆಣ್ಣನ್ನು ಕಾಡುವುದು ಸಾಮಾನ್ಯ. ಆಗೇನು ಮಾಡಬೇಕು ಗೊತ್ತಾ? ನಿಮ್ಮ ಬಳಿ ಇರುವ ವಸ್ತುಗಳನ್ನೇ ಆಯುಧವನ್ನಾಗಿಸಿ, ಪೋಕರಿಗಳಿಗೆ ಬಿಸಿ ಮುಟ್ಟಿಸಬೇಕು. ದಿನನಿತ್ಯ ಅಲಂಕಾರದ ಭಾಗವಾಗುವ ಹಲವು ವಸ್ತುಗಳು, ಆತ್ಮರಕ್ಷಣೆಯ ಸಾಧನಗಳಾಗಬಲ್ಲವು. 

1. ಡಿಯೋಡ್ರೆಂಟ್‌ ಮತ್ತು ಪರ್ಫ್ಯೂಮ್‌
ಹೆಣ್ಮಕ್ಕಳ ಬ್ಯಾಗ್‌ನಲ್ಲಿ ಕಾಯಂ ಜಾಗ ಗಿಟ್ಟಿಸಿರುವ ಡಿಯೋಡ್ರೆಂಟ್‌ ಕೇವಲ ಸುವಾಸನೆಯನ್ನಷ್ಟೇ ಅಲ್ಲ, ಸುರಕ್ಷೆಯನ್ನೂ ನೀಡಬಲ್ಲದು. ಸರಗಳ್ಳರು, ಪುಂಡುಪೋಕರಿಗಳು ಛೇಡಿಸಲು ಬಂದರೆ ಅವರ ಕಣ್ಣಿಗೆ ಗುರಿಯಿಟ್ಟು ಡಿಯೋಡ್ರೆಂಟ್‌ ಸ್ಪ್ರೆ ಮಾಡಿದರಾಯ್ತು.

2. ಹೈ ಹೀಲ್ಡ್‌ ಶೂಸ್‌
ಹೈ ಹೀಲ್ಡ್‌ ಶೂಸ್‌ಗಳನ್ನು ಸ್ಟೈಲ್‌ಗಾಗಷ್ಟೇ ಅಲ್ಲ, ರಕ್ಷಣಾ ತಂತ್ರವನ್ನಾಗಿಯೂ ಬಳಸಬಹುದು. ಬಸ್‌ನಲ್ಲಿ, ಉದ್ದದ ಕ್ಯೂನಲ್ಲಿ ಪಕ್ಕ ನಿಂತವರ ಚೇಷ್ಟೆ ಮಿತಿಮೀರಿದರೆ ಹೈ ಹೀಲ್ಡ್‌ ಚಪ್ಪಲಿಯಿಂದ ತುಳಿದರೆ ಸಾಕು. ಚಪ್ಪಲಿಯನ್ನು ಕೈಗೆತ್ತಿಕೊಳ್ಳಬೇಕಾಗಿಯೂ ಇಲ್ಲ. 

3. ಪೆಪ್ಪರ್‌ ಸ್ಪ್ರೆ
ಮೊದಲೆಲ್ಲ ಹುಡುಗಿಯರು ಹ್ಯಾಂಡ್‌ಬ್ಯಾಗ್‌ನಲ್ಲಿ ಪೆಪ್ಪರ್‌ ಸ್ಪ್ರೆ ಇಟ್ಟುಕೊಳ್ಳುತ್ತಿದ್ದರು. ಈಗ ಆ ಕಷ್ಟವೂ ಇಲ್ಲ. ಯಾಕಂದ್ರೆ, ಪೆಪ್ಪರ್‌ ಸ್ಪ್ರೆà ಕೀ ಚೈನ್‌ಗಳು ಲಭ್ಯ ಇವೆ. ಗಾಡಿಯ, ರೂಮಿನ ಕೀಯನ್ನು ಪೆಪ್ಪರ್‌ ಸ್ಪ್ರೆà ಕೀ ಚೈನ್‌ಗೆ ತೂಗುಬಿಟ್ಟು, ಧೈರ್ಯದಿಂದಿರಿ. 

4. ಹ್ಯಾಂಡ್‌ ಬ್ಯಾಗ್‌
ಅನಿರೀಕ್ಷಿತ ದಾಳಿಯಿಂದ ರಕ್ಷಿಸಿಕೊಳ್ಳಲು, ಕೈಯಲ್ಲಿ ಇರುವ ಬ್ಯಾಗ್‌, ಪರ್ಸ್‌ ಅನ್ನೂ ಆಯುಧವನ್ನಾಗಿ ಬಳಸಬಹುದು. ಉದ್ದ ಹ್ಯಾಂಡಲ್‌ನ ಬ್ಯಾಗ್‌ನಿಂದ ಎದುರಾಳಿಯನ್ನು ಕಟ್ಟಿ ಹಾಕಬಹುದು, ಕುತ್ತಿಗೆ ಬಿಗಿಯಬಹುದು. 

5. ಸೇಫ್ಟಿ ಪಿನ್‌
ತುಂಬಿದ ಬಸ್‌, ಮೆಟ್ರೋ, ಆಟೋದಲ್ಲಿ ಪ್ರಯಾಣಿಸುವಾಗ ಸೇಫ್ಟಿ ಪಿನ್‌ ಕೂಡ ರಕ್ಷಣೆಯ ತಂತ್ರವಾಗುತ್ತದೆ. ಪರ್ಸ್‌ನಲ್ಲಿ ಯಾವಾಗಲೂ ಒಂದೆರಡು ಸೇಫ್ಟಿ ಪಿನ್‌ ಇಟ್ಟುಕೊಳ್ಳುವುದು ಒಳಿತು. 

6. ಮೆಟಾಲಿಕ್‌ ಜಂಕ್‌ ಜ್ಯುವೆಲ್ಲರಿ
ಈಗ ಚಿನ್ನದ ಆಭರಣಗಳಿಗಿಂತ, ನೋಡಲು ಫ‌ಂಕಿ ಇರುವ ಮೆಟಲ್‌ ಜ್ಯುವೆಲರಿಗಳನ್ನು ಇಷ್ಟಪಡುವವರೇ ಹೆಚ್ಚು. ಕೆಲವು ಮೆಟಲ್‌ ಆಭರಣಗಳು ಎದುರಾಳಿಗೆ ಗಾಯ ಮಾಡುವಷ್ಟು ಹರಿತವಾಗಿರುತ್ತವೆ. ಅಂಥ ಆಭರಣಗಳನ್ನು ಆತ್ಮರಕ್ಷಕವನ್ನಾಗಿ ಉಪಯೋಗಿಸಬಹುದು.

7. ಹೇರ್‌ ಪಿನ್‌
ಕೇಶಾಲಂಕಾರಕ್ಕೆ ಬಳಸುವ ಥರಹೇವಾರಿ ಹೇರ್‌ಪಿನ್‌ಗಳು ಎಷ್ಟು ಆಕರ್ಷಕವೋ, ಅಷ್ಟೇ ಭಯಾನಕವೂ ಹೌದು. ಕೈ, ಕುತ್ತಿಗೆ ಮುಂತಾದ ಮೃದು ಜಾಗಕ್ಕೆ ಚುಚ್ಚಿದರೆ ರಕ್ತ ಸೋರುವಷ್ಟು ಗಾಯವಾಗುತ್ತದೆ. 

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.