ಕೊನೆಗೂ ಚೆಕ್‌ಮೇಟ್‌ ಹೇಳಿದೆ!


Team Udayavani, Jul 22, 2020, 3:31 PM IST

ಕೊನೆಗೂ ಚೆಕ್‌ಮೇಟ್‌ ಹೇಳಿದೆ!

ಸಾಂದರ್ಭಿಕ ಚಿತ್ರ

ಲಾಕ್‌ಡೌನ್‌ನ ಈ ಬಿಡುವಿನ ಸಮಯದಲ್ಲಿ ನನಗೆ ಚೆಸ್‌ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು…

ಒಂದು ಲಾಕ್‌ಡೌನ್‌ ಮುಗಿಯಿತು ಅನ್ನುವಷ್ಟರಲ್ಲಿ ದೊಡ್ಡ ದೊಡ್ಡ ನಗರಗಳು ಮತ್ತೂಮ್ಮೆ ಬಂದ್‌ ಆಗಿಬಿಟ್ಟಿವೆ. ಇನ್ನು ಈ ಪರಿಸ್ಥಿತಿ ಎಷ್ಟು ದಿನವೋ ದೇವರೇ ಬಲ್ಲ. ಆದರೆ, ಮೊದಲ ಸಲ ಲಾಕ್‌ಡೌನ್‌ ಆದಾಗ ಇದ್ದ ಗೊಂದಲ, ಗಾಬರಿ ಈಗಿಲ್ಲ. ನಾವೆಲ್ಲಾ ಮನೆಯೊಳಗೇ ಬದುಕಲು ಕಲಿತಿದ್ದೇವೆ. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆದಾಗ ನನಗಂತೂ ಬಹಳ ಕಷ್ಟವಾಗಿತ್ತು. ಬೆಳಗ್ಗೆ ವಾಕಿಂಗ್‌ ಹೋಗೋ ಹಾಗಿಲ್ಲ, ಸಂಜೆ ಗೆಳತಿಯರ ಜೊತೆ ಭಜನೆಗೆ ಸೇರುವ ಹಾಗಿಲ್ಲ ಅಂದ್ರೆ… 24* 7 ಮನೆಯೊಳಗೇ ಕುಳಿತು ಮಾಡೋದೇನು? ಧಾರಾವಾಹಿಗಳಿಲ್ಲ, ನ್ಯೂಸ್‌ ಚಾನೆಲ್‌ ನೋಡೋಕೆ ಇಷ್ಟವಿಲ್ಲ.

ಅಡುಗೆ, ಪುಸ್ತಕ, ಕಸೂತಿಯನ್ನು ಹೊಸದು ಅಂತ ಕಲಿಯೋ ವಯಸ್ಸೂ ನನ್ನದಲ್ಲ. ಆಗ ನೆನಪಾಗಿದ್ದು ಹಳೆಯದೊಂದು ಬಯಕೆ. ಅದುವೇ ಚೆಸ್‌ ಕಲಿಯೋ ಆಸೆ. “ಕಾಲೇಜು ಟೈಮಲ್ಲಿ ನಾನು ಚೆಸ್‌ ಚಾಂಪಿಯನ್‌…’ ಅಂತ ಮೀಸೆ ತಿರುವಿದವರನ್ನು ಮದುವೆಯಾಗಿ ಹದಿನೈದು ವರ್ಷ ಕಳೆದರೂ, ನನಗೆ ಚೆಸ್‌ ಆಡೋಕೆ ಬರುತ್ತಿರಲಿಲ್ಲ. ರಾಜ ಯಾವುದು, ರಾಣಿ ಯಾವುದು ಅಂತಲೂ ಕನ್‌ಫ್ಯೂಸ್‌ ಆಗುತ್ತಿತ್ತು. “ಅದು ಬುದ್ಧಿವಂತರ ಆಟ’ ಅಂತ ಯಜಮಾನರು ಛೇಡಿಸುವುದೂ ನಡೆದಿತ್ತು. ನಾನೂ ಚೆಸ್‌ ಕಲಿತು ಯಜಮಾನರ “ಗರ್ವಭಂಗ’ ಮಾಡುವ ಕನಸು ಕಂಡಿದ್ದೆನೇ ಹೊರತು, ಕಲಿಯುವ ಮನಸ್ಸು ಮಾಡಿರಲಿಲ್ಲ.

ನನಗೆ ಚೆಸ್‌ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು. ದಿನಾ ಬೆಳಗ್ಗೆ, ಸಂಜೆಯ ಬಿಡುವಿನ ವೇಳೆಯಲ್ಲಿ ಚೆಸ್‌ ಆಡಿದ್ದೇ ಆಡಿದ್ದು. ಯಜಮಾನರು ನಿಜವಾಗ್ಲೂ ಚೆಸ್‌ ಚಾಂಪಿಯನ್‌ ಅನ್ಸುತ್ತೆ. ಬಹಳ ಬೇಗ, ಸುಲಭದಲ್ಲಿ ಅರ್ಥವಾಗುವಂತೆ ಕಲಿಸಿದರು. ಮೊನ್ನೆಯ ಆಟದಲ್ಲಿ ಅಂತೂ ಅವರಿಗೆ “ಚೆಕ್‌ ಮೇಟ…’ ಅಂತ ಹೇಳಿ ವರ್ಷಗಳ ಕನಸನ್ನು ನನಸು ಮಾಡಿಕೊಂಡೆ. ಆದ್ರೆ ಯಜಮಾನರು ಮಾತ್ರ, “ನಾನು ಬೇಕಂತಲೇ ಸೋತಿದ್ದು ಕಣೇ…’ ಅಂತಿದ್ದಾರೆ. ಇದ್ದರೂ ಇರಬಹುದು. ಆದರೂ ಆ ಮಾತನ್ನು ನಾನು ನಂಬುವುದಿಲ್ಲ ಬಿಡಿ!

ಗೀತಾ ಶಂಕರ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.