ಹುಳಿ ಮೊಸರಿಂದ ಹೊಸ ಅಡುಗೆ


Team Udayavani, Jul 10, 2019, 5:00 AM IST

s-7

ಮೊಸರು ಹುಳಿ ಬಂದರೆ ತಿನ್ನಲು ಆಗುವುದಿಲ್ಲ. ಬೇಡ ಅಂತ ಚೆಲ್ಲುವುದಕ್ಕೂ ಮನಸ್ಸಾಗುವುದಿಲ್ಲ. ಹಾಗಾಗಿ ಕೆಲವರು ಹುಳಿ ಮೊಸರಿಗೆ ನೀರು ಅಥವಾ ಹಾಲು ಬೆರೆಸಿ ಉಪಯೋಗಿಸುತ್ತಾರೆ. ಆದರೆ, ಹುಳಿ ಮೊಸರು ಅಷ್ಟಕ್ಕೇ ಸೀಮಿತವಲ್ಲ. ಅದನ್ನು ಬಳಸಿ ಹಲವು ಬಗೆಯ ರುಚಿಕರ ಖಾದ್ಯ ತಯಾರಿಸಬಹುದು. ಕೆಲವು ಸ್ಯಾಂಪಲ್‌ಗ‌ಳ ರೆಸಿಪಿ ಇಲ್ಲಿದೆ…

1. ಅಕ್ಕಿಹಿಟ್ಟಿನ ಹುಳಿ ಮಿಡ್ಡೆ
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು – 1 ಕಪ್‌, ಕಡೆದ ಹುಳಿ ಮೊಸರು-1 ಕಪ್‌, ರುಚಿಗೆ ಉಪ್ಪು, ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ದಪ್ಪತಳದ ಪಾತ್ರೆಯಲ್ಲಿ ಎರಡು ಕಪ್‌ ನೀರನ್ನು ಕಾಯಲು ಇಡಿ. ನೀರು ಕುದಿಯಲು ಶುರುವಾದಾಗ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹಿಂದೆಯೇ ಅಕ್ಕಿಹಿಟ್ಟನ್ನು ಹಾಕಿ ಗಂಟಾಗದಂತೆ ಕೈಯಾಡಿಸಿ. ಹಿಟ್ಟು ಮುಕ್ಕಾಲು ಬೆಂದಾಗ, ಕಡೆದ ಹುಳಿಮೊಸರನ್ನು ಸೇರಿಸಿ, ಚೆನ್ನಾಗಿ ಗೊಟಾಯಿಸಿ. ಸಣ್ಣಉರಿಯಲ್ಲಿ ಐದು ನಿಮಿಷ ಬೇಯಿಸಿ. ಮಿಡ್ಡೆಯ ಸಾಂದ್ರತೆ ತೆಳ್ಳಗೆ ಬೇಕೆಂದರೆ ಇನ್ನೂ ಸ್ವಲ್ಪ ಹುಳಿಮೊಸರನ್ನು ಸೇರಿಸಿ. ನಂತರ ಸಾಸಿವೆ ಸಿಡಿಸಿ ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟು, ತಣಿಯಲು ಬಿಡಿ.

2. ಹುಳಿಮೊಸರಿನ ಸಾರು
ಬೇಕಾಗುವ ಸಾಮಗ್ರಿ: ಕಡೆದ ಹುಳಿ ಮೊಸರು- ಒಂದು ಕಪ್‌, ಸಾರು/ರಸಂ ಪುಡಿ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ಎರಡರಿಂದ ಮೂರು ಲೋಟ ನೀರನ್ನು ಬಿಸಿ ಮಾಡಿ, ನಂತರ ಅದಕ್ಕೆ ಅರಿಶಿನ , ಒಂದು ಚಮಚ ಸಾರು/ರಸಂ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಐದು ನಿಮಿಷ ಕುದಿಸಿ. ಉರಿ ಚಿಕ್ಕದು ಮಾಡಿ, ಹುಳಿ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ,ಉರಿ ಆರಿಸಿ. ಸಾಸಿವೆ ಸಿಡಿಸಿ ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟು, ಮುಚ್ಚಿಟ್ಟು ಬಿಡಿ.
(ಹುಳಿಮೊಸರಿನ ಸಾರನ್ನು ಅನ್ನಕ್ಕೆ ಕಲಸಿಕೊಳ್ಳಲೂಬಹುದು ಅಥವಾ ಹಾಗೇ ಕುಡಿಯಲೂ ರುಚಿಯಾಗಿರುತ್ತದೆ. ಬೇಳೆ ಹಾಕದಿರುವುದರಿಂದ ಹೊಟ್ಟೆಗೆ ಭಾರ ಎನಿಸುವುದಿಲ್ಲ.)

3. ಹುಳಿಮೊಸರು-ಹಸಿಕೊಬ್ಬರಿ ಚಟ್ನಿ
ಬೇಕಾಗುವ ಸಾಮಗ್ರಿ: ಗಟ್ಟಿ ಹುಳಿಮೊಸರು- ಅರ್ಧ ಕಪ್‌, ತೆಂಗಿನತುರಿ- ಒಂದು ಕಪ್‌, ಸಣ್ಣಗೆ ಹೆಚ್ಚಿದ ಟೊಮೇಟೊ- 1(ಬೇಕಿದ್ದರೆ ಮಾತ್ರ), ಸಕ್ಕರೆ- 1 ಚಮಚ, ಹಸಿರುಮೆಣಸಿನಕಾಯಿ-6, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಹಸಿಯಾಗಿಯೇ ರುಬ್ಬಿಕೊಳ್ಳಿ. ನಂತರ ಅದಕ್ಕೆ ಇಂಗು, ಸಾಸಿವೆಯ ಒಗ್ಗರಣೆ ಕೊಟ್ಟರೆ ಹುಳಿಮೊಸರಿನ ಚಟ್ನಿ ರೆಡಿ. ಇದನ್ನು ಚಪಾತಿ, ದೋಸೆಗಳಿಗೆ ನೆಂಚಿಕೊಳ್ಳಲು ವ್ಯಂಜನವಾಗಿ ಬಳಸಬಹುದು.

4. ದಿಢೀರ್‌ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿ: ಕಡೆದ ಹುಳಿ ಮೊಸರು- ಒಂದು ಕಪ್‌, ಹುರಿಗಡಲೆ- 2 ಚಮಚ, ತೆಂಗಿನ ತುರಿ- 1/4 ಕಪ್‌, ಕೊತ್ತಂಬರಿ ಸೊಪ್ಪು- ಐದು ಎಸಳು, ಹಸಿ ಶುಂಠಿ- ಸಣ್ಣ ತುಂಡು, ಒಣಮೆಣಸಿನಕಾಯಿ-5, ಚಿಟಿಕೆ ಅರಿಶಿನ, ರುಚಿಗೆ ಉಪ್ಪು. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು, ಹುರಿಗಡಲೆ, ಕೊತ್ತಂಬರಿಸೊಪ್ಪು, ಶುಂಠಿ, ಒಣಮೆಣಸು,ತೆಂಗಿನ ತುರಿ ಹಾಕಿ ರುಬ್ಬಿಕೊಳ್ಳಿ. ನೀರು ಕುದಿಯುವಾಗ ಅರಿಶಿನ, ಉಪ್ಪು ಹಾಗೂ ರುಬ್ಬಿದ ಮಸಾಲೆ ಹಾಕಿ, ಹತ್ತು ನಿಮಿಷ ಕುದಿಸಿ, ಉರಿ ಆರಿಸಿ. ಈ ಮಿಶ್ರಣಕ್ಕೆ ಕಡೆದ ಹುಳಿ ಮೊಸರನ್ನು ಸೇರಿಸಿ ಚೆನ್ನಾಗಿ ಬೆರೆಸಿ, ಒಗ್ಗರಣೆ ಕೊಡಿ. ತಣಿದ ನಂತರ, ರುಚಿರುಚಿಯಾದ ತರಕಾರಿರಹಿತ ಸಾದಾ ಮಜ್ಜಿಗೆಹುಳಿ ಸವಿಯಲು ಸಿದ್ಧ.

– ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.