ಈ ಹೊತ್ತು ಹೀಗಿದೆ; ನಾಳೆ ಗೊತ್ತಿಲ್ಲ..!


Team Udayavani, Apr 4, 2018, 3:32 PM IST

gotilla.jpg

ಮದುವೆ, ಸಂಸಾರ ಇತ್ಯಾದಿ ವಿಷಯಗಳಲ್ಲಿ ಅನಾಸಕ್ತಳಾಗಿದ್ದ ನನಗೆ ಲೋಕಾಸಕ್ತಿ ಮೂಡಿಸಿದ್ದು ರಾಮ. ಆ ರಾಮನ ಪ್ರಥಮದರ್ಶನ ನನ್ನನ್ನು ಬದಲಿಸಿಬಿಟ್ಟಿತ್ತು! ಲೋಕಮೋಹಕ ಸುಂದರಾಂಗ, ಸಕಲಗುಣಸಂಪನ್ನ, ಲೋಕೋತ್ತರ ಪರಾಕ್ರಮಶಾಲಿ, ಲೋಕಪ್ರಿಯಕರ, ನೀಲಮೇಘಶ್ಯಾಮ ನನ್ನ ಹೃದಯಸಾಮ್ರಾಜ್ಯಕ್ಕೆ ಅಧಿಪತಿಯಾಗುತ್ತಾನೆಂದು ಅಂದುಕೊಂಡಿರಲೇ ಇಲ್ಲ. ಇದರಲ್ಲಿ ಗುರು ವಿಶ್ವಾಮಿತ್ರರ ಪಾತ್ರವನ್ನೂ ಮರೆಯುವಂತಿಲ್ಲ.

ರಾಮನಲ್ಲಿ ಸದಾ ಒಂದು ಅಪೂರ್ವ ತೇಜಸ್ಸು ಮಿನುಗುತ್ತಿತ್ತು. ಅದು ಅಪೂರ್ವ, ಅನಿರ್ವಚನೀಯ. ಅದೇ ಜನಾಕರ್ಷಣೆಯ ಕೇಂದ್ರಬಿಂದು. ನನ್ನ ಮಿತ ತಿಳಿವಳಿಕೆಯ ಅಡಿಯಲ್ಲಿ ಹೇಳುವುದಾದರೆ, ಅದನ್ನು ಮಾತೃಹೃದಯ ಗುರುತಿಸಿತ್ತು. ಗುರು ವಶಿಷ್ಠರು ಕಂಡಿದ್ದರು. ವಿಶ್ವಾಮಿತ್ರರು ಗುರುತಿಸಿದ್ದರು. ನನ್ನವರ ಹಾಗೂ ನನ್ನ ಬಂಟ ಹನುಮ, ಅಜ್ಜಿ ಶಬರಿ, ಅತ್ತ ವಿಭೀಷಣ, ದುಷ್ಟ ರಾವಣನ ಶಿಷ್ಟ ಮಡದಿ ಮಂಡೋದರಿ ತಿಳಿದಿದ್ದರು. ಲೋಕದ ಜನರು ಆ ಶಕ್ತಿಯನ್ನೇ ದುಷ್ಟ ಸಂಹಾರ, ಶಿಷ್ಟ ರಕ್ಷಣೆ, ಧರ್ಮ ಸಂಸ್ಥಾಪನೆಗಾಗಿ ದಿವಿಯಿಂದ ಭುವಿಗಿಳಿದ ಶಕ್ತಿಯೆಂದು ಆರಾಧಿಸುತ್ತಿದ್ದರು.

  ಆ ನಿತ್ಯಾನಂದಕರ ತೇಜಸ್ಸಿಗೆ ಗುರು ವಸಿಷ್ಠರು ರಾಮ ಎಂದು ಹೆಸರಿಡಿಸಿದರಂತೆ. ಅದೇ ಜಗತ್ತಿನ ಪ್ರಥಮ ಮಂಗಲನಾಮವಾಯಿತು. ಅದೇ ನಾಮ ಮುಂದೆ ಯುಗಯುಗಗಳವರೆಗೂ ಜಗತ್ತನ್ನು ಮಂಗಳಮಯವಾಗಿರಿಸುತ್ತದೆಂದು ತಾತ ವಾಲ್ಮೀಕಿಗಳು ಮುಂದಾಗಿಯೇ ಕಂಡಿದ್ದರು. ಅಷ್ಟೇ ಅಲ್ಲ, ತಾವು ಕಂಡ ಬೆಳಕನ್ನು ಅಕ್ಷರ ರೂಪದಲ್ಲಿ ಜಗತ್ತಿಗೆ ನೀಡಿದರು. ಸಾಹಿತ್ಯಲೋಕಕ್ಕೆ ಹೊಸಮುನ್ನುಡಿ ಬರೆದರು. ಜಗದ್ವಂದ್ಯರಾದರು. ತಾತ ಆದಿಕವಿ ಎಂಬ ಬಿರುದಿಗೆ ಪಾತ್ರರಾದರು. ಅದಕ್ಕೆ ನನ್ನ ರಾಮನ ನಡೆಯೇ ವಸ್ತುವಾಯಿತು. ಅದಕ್ಕಾಗಿಯೇ ತಾತ ಅದಕ್ಕೆ “ರಾಮಾಯಣ’ (ಶ್ರೀಮದ್ರಾಯಣಮ್‌) ಎಂಬ ಸಾರ್ಥಕ ಹೆಸರು ಕೊಟ್ಟಿದ್ದು. ಕವಿತೆಯೆಂಬ ಕೊಂಬೆ ಏರಿ ರಾಮ ರಾಮ ಎಂಬ ಮಧುರಾಕ್ಷರಗಳನ್ನು ಮಧುರವಾಗಿ ಪ್ರಥಮವಾಗಿ ಹಾಡಿದ “ಧನ್ಯಕವಿ’ ಅವರು. ರಾಮನಿಂದ ತಾತ ಜಗದ್ವಂದ್ಯರಾದರೋ ತಾತನಿಂದ ರಾಮ ಜಗದ್ವಂದ್ಯನಾದನೋ ಹೇಳುವುದು ಕಷ್ಟ.

   ನಾನೇಕೆ ವಾಲ್ಮೀಕಿಗಳನ್ನು ತಾತ ಎಂದು ಕರೆಯುತ್ತಿದ್ದೇನೆಂದು ನಿಮಗೆ ಆಶ್ಚರ್ಯವಾಗಿರಬಹುದು. ಮಾತೃಹೃದಯದ ಅವರು ನನ್ನ ಅತ್ಯಂತ ಕಷ್ಟಕಾಲದಲ್ಲಿ ಎರಡನೇ ತವರಾಗಿ ಒದಗಿ ಬಂದವರು. ನನ್ನ ಜೋಡಿಮಕ್ಕಳಿಗೆ ಅವರು ಅಪ್ಪ, ಅಮ್ಮ, ಗುರುವಾಗಿ ಕಾಪಾಡಿದವರು. ನೆನಪಿನ ಎಳೆಗಳು ಎಲ್ಲಿಂದ ಎಲ್ಲಿಗೋ ಹೋಗುತ್ತವೆ. ಅವಕಾಶವಾದರೆ ಮುಂದೆ ಅವರ ಆಶ್ರಮದಿಂದಲೇ ಮಾತನಾಡುವೆ. ಸದ್ಯ ನನ್ನ ಗಂಡನ ಮನೆಯಿಂದ ಮಾತನಾಡುತ್ತಿದ್ದೇನೆ.

  ಚಿನ್ನದರಮನೆ, ಚಿನ್ನದಂಥ ಗಂಡ, ಚಿನ್ನದಂಥ ಅತ್ತೆಯರು, ಚಿನ್ನದಂಥ ಮಾವ, ಮೈದುನರು, ಓರಗಿತ್ತಿಯರು (ಅಕ್ಕತಂಗಿಯರು) ಮುಂದೆ ಸುಮಾರು ಹನ್ನೆರಡು ವರ್ಷಗಳ ಕಾಲ ಎಲ್ಲೆಲ್ಲೂ ಚಿನ್ನ. ಎಲ್ಲವೂ ಚನ್ನ ಚನ್ನ. ನಾನು ಕನಸು ಕಟ್ಟಿದವಳಲ್ಲ. ಕನಸುಗಳೇ ನನ್ನನ್ನು ಹುಡುಕಿಕೊಂಡು ಬಂದವು. ಸುಖಸಂಪತ್ತುಗಳು ಭ್ರಮೆಯೆಂದುಕೊಂಡಿದ್ದ ನನಗೆ ಅವುಗಳೇ ವಾಸ್ತವವಾಗಿ ಕಾಣತೊಡಗಿವೆ. ಅವು ನನಗೆ ಕಾಣುತ್ತಿವೆಯೋ, ಕಾಡುತ್ತಿವೆಯೋ ಗೊತ್ತಾಗುತ್ತಿಲ್ಲ. ಎಲ್ಲವೂ ಹೂವಿನ ಹಾದಿ. ಈ ಹೊತ್ತು ಹೀಗಿದೆ. ನಾಳೆ ಗೊತ್ತಿಲ್ಲ. 

   ನಮ್ಮ ದಾಂಪತ್ಯ ಎಷ್ಟು ಅನ್ಯೊನ್ಯದ್ದು ಗೊತ್ತೇ? ಮುಂದಿನ ಯುಗಯುಗಾಂತರವೂ ಈ ಸೀತಾರಾಮರನ್ನು ಆದರ್ಶದಾಂಪತ್ಯಕ್ಕೆ ಮಾದರಿಯಾಗಿಟ್ಟುಕೊಳ್ಳುತ್ತದೆಂದು ಅಯೋಧ್ಯೆಯ ಸಾಮಾನ್ಯಪ್ರಜೆಯೂ ಭಾವಿಸುವಷ್ಟು! ನನ್ನತ್ತೆ ಕೌಸಲ್ಯಾದೇವಿಯರಂತೂ ನನ್ನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದರು. ನನ್ನವರು ನನ್ನನ್ನು ಅದೆಷ್ಟು ಪ್ರೀತಿಸುತ್ತಿದ್ದರೆಂದರೆ ವರ್ಣಿಸಲು ಶಬ್ದಗಳು ಸೋಲುತ್ತವೆ. ನನ್ನ ಮನಸ್ಸೇ ಅವರ ಮನಸ್ಸು, ಅವರ ಮನಸ್ಸೇ ನನ್ನ ಮನಸ್ಸು. ನನ್ನ ಮನದ ಪಿಸುಮಾತೂ ಅವರಿಗೆ ಕೇಳಿಸುತ್ತಿತ್ತು. ಅವರ ಅಂತರಂಗದ ಮೆಲುದನಿಗೆ ನಾನು ಕಿವಿಯಾಗಿದ್ದೆ.

   ಒಮ್ಮೆ ನನ್ನವರು, ನಗರದ ಏಕತಾನತೆ ಸಾಕಾಗಿದೆ; ದೂರದ ಕಾಡುಮೇಡುಗಳಲ್ಲಿ ಅಲೆದಾಡಿ, ಋಷಿಮುನಿಗಳ ಸಂದರ್ಶನ ಮಾಡಿ ಬರೋಣವೆಂದು ಮನಸ್ಸಿನಲ್ಲಿ ಅಂದುಕೊಂಡರು. ಅದೇ ದಿನ ನಾನು ಅವರಿಗೆ ಹೇಳಿದೆ; “ನಾನೂ ನಿಮ್ಮೊಂದಿಗೆ ಕಾಡಿಗೆ ಬರುತ್ತೇನೆ, ಕರೆದುಕೊಂಡು ಹೋಗಲೇಬೇಕು’ ಅಂದೆ. “ಅರೆ ನಾನೆಲ್ಲಿ ಕಾಡಿಗೆ ಹೋಗುತ್ತೇನೆಂದು ನಿನ್ನಲ್ಲಿ ಹೇಳಿದೆ?’ ಎಂದು ಕೇಳಿದರು. “ನನಗೆಲ್ಲ ಕೇಳಿಸಿಬಿಟ್ಟಿದೆ’ ಅಂದೆ. ಇಬ್ಬರೂ ಜೋರಾಗಿ ನಕ್ಕೆವು.

   ಇಂತಹ ಇನ್ನೆಷ್ಟೋ ಉದಾಹರಣೆಗಳಿವೆ. ಆದರೆ, ಈ ಉದಾಹರಣೆಯನ್ನು ಹೇಳಲು ಕಾರಣವಿದೆ. ಇದೊಂದು ಭವಿಷ್ಯದ ಸೂಚಕವೋ ಎಂಬಂತೆ ನನ್ನ ಮದುವೆಯಾಗಿ ಹನ್ನೆರಡು ವರ್ಷಗಳ ನಂತರ ಪ್ರಾರಂಭವಾಯಿತು ಕಷ್ಟದ ದಿನಗಳು. ಹಾಗೆಂದು ನಾನಾಗಲೀ ನನ್ನವರಾಗಲೀ ಅದನ್ನು ಕಷ್ಟವೆಂದುಕೊಂಡಿರಲಿಲ್ಲ. ಲೋಕದ ಕಣ್ಣಿಗೆ ಹಾಗೆ ಕಾಣುತ್ತಿತ್ತು. ಕಷ್ಟಗಳನ್ನೇ ಸುಖಗಳಾಗಿ ಮಾರ್ಪಡಿಸಿಕೊಳ್ಳುವ ಜೀವನ ಕಲೆ ನಮ್ಮಿಬ್ಬರಿಗೂ ಗೊತ್ತಿತ್ತು. ಹಾಗೆಂದು “ನೀವು ಕಣ್ಣೀರು ಹಾಕಲೇ ಇಲ್ವ?’ ಎಂದು ಕೇಳಬೇಡಿ.
(ಮುಂದುವರಿಯುತ್ತದೆ…)

– ಸಿ.ಎ. ಭಾಸ್ಕರ ಭಟ್ಟ

ಟಾಪ್ ನ್ಯೂಸ್

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.