ಬೆಚ್ಚನೆಯ ಮನೆಯಿರಲು…

ಏನೇನ್‌ ಮಾಡ್ಬೇಕು ಗೊತ್ತಾ?

Team Udayavani, Nov 20, 2019, 6:01 AM IST

bechneya

ಬೇಸಿಗೆಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ಗೊತ್ತಾ? ಅದು ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟಿನ ಎತ್ತರದ ಕಟ್ಟಡದ ಗೋಡೆಗಳ ನಡುವೆ ವಾಸಿಸುವ ನಮಗೆ, ಹವಮಾನದ ವೈಪರೀತ್ಯವನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಬೇಸಿಗೆಗಾಲದಲ್ಲಿ ಫ್ಯಾನ್‌, ಎ.ಸಿಗಳ ಮೊರೆ ಹೋದರೆ, ಚಳಿಗಾಲದಲ್ಲಿ ರೂಮ್‌ಹೀಟರ್‌ಗಳನ್ನು ಬಳಸುತ್ತೇವೆ. ಹೀಟರ್‌ಗಳನ್ನು ಬಳಸದೆಯೂ ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರಿಸಬಹುದು. ಹೇಗೆ ಗೊತ್ತಾ?

ದಪ್ಪನೆಯ, ಭಾರದ ಪರದೆ ಅಡ್ಡಬಿಡಿ: ಚಳಿಗಾಲದಲ್ಲಿ ಮನೆಯ ಕಿಟಕಿಗಳಿಗೆ ದಪ್ಪನೆಯ, ಭಾರದ ಮತ್ತು ಗಾಢವರ್ಣದ ಬಟ್ಟೆಯ ಪರದೆಗಳನ್ನು ಹಾಕಿ. ಇದು ಸೂರ್ಯನ ಬೆಳಕನ್ನು ಹೀರಿ ಬೆಚ್ಚಗಿರುವುದು ಮಾತ್ರವಲ್ಲದೇ ಹೊರಗಿನ ತಣ್ಣನೆಯ ಗಾಳಿ ಮನೆಯೊಳಗೆ ಬಾರದಂತೆ ತಡೆಯುತ್ತದೆ.

ಗವಾಕ್ಷಿಗಳನ್ನು ತೆರೆದಿಡಿ: ಕಿಟಕಿಯ ಮೇಲ್ಭಾಗದ ಗವಾಕ್ಷಿಗಳನ್ನು ದಿನದ ಹೊತ್ತಿನಲ್ಲಿ ತೆರೆದಿಡುವ ಮೂಲಕ, ಸೂರ್ಯನ ಬೆಳಕು ಮನೆಯೊಳಗೆ ಬರುವಂತೆ ಮಾಡಿ. ಇದು ಮನೆಯೊಳಗಿನ ವಾತಾವರಣವನ್ನು ಬಿಸಿ ಮಾಡಿ, ರಾತ್ರಿಯಿಡೀ ಬೆಚ್ಚಗಿರಿಸಲು ಸಹಕರಿಸುತ್ತದೆ.

ಕಾರ್ಪೆಟ್‌ ಹಾಸಿ: ಮನೆಯ ನೆಲದ ಮೇಲೆ ದಪ್ಪನೆಯ ಮತ್ತು ಭಾರದ ಕಂಬಳಿಯನ್ನು ಹರಡುವ ಮೂಲಕವೂ ಮನೆಯನ್ನು ಬೆಚ್ಚಗಿಡಬಹುದು. ಇದು ನೆಲದ ಮಣ್ಣಿನಿಂದ ಮೇಲಕ್ಕೇರುವ ತಣ್ಣನೆಯ ತಾಪಮಾನವನ್ನು ಮನೆಯೊಳಗೆ ಬಾರದಂತೆ ತಡೆಯುತ್ತದೆ. ಆದರೆ ಈ ದುಬಾರಿ ಕಾರ್ಪೆಟ್‌ ಮೇಲೆ ಹೊರಗಿನ ಪಾದರಕ್ಷೆ ಅಥವಾ ಕೊಳಕು ಪಾದಗಳಿಂದ ತುಳಿಯದಂತೆ ಎಚ್ಚರವಹಿಸಬೇಕು.

ಮೇಣದ ಬತ್ತಿ ಹಚ್ಚಿ: ಸಂಜೆಯಾಗುತ್ತಿದ್ದಂತೆ, ಮನೆಯ ವಿವಿಧ ಕೋಣೆಗಳಲ್ಲಿ ಒಂದೆರಡು ಮೇಣದ ಬತ್ತಿಗಳನ್ನು ಹಚ್ಚಬೇಕು. ಅವುಗಳಲ್ಲಿ ಒಂದೆರಡು ಸುವಾಸನಾ ಭರಿತ ಮೇಣದ ಬತ್ತಿ ಇದ್ದರೆ ಉತ್ತಮ. ಮೇಣದ ಬತ್ತಿ ಅಲ್ಲದೆ ಎಣ್ಣೆಯ ದೀಪವನ್ನೂ ಉಪಯೋಗಿಸಬಹುದು. ಇದು ಮನೆಯನ್ನು ಬೆಚ್ಚಗಿಡುವಲ್ಲಿ ಸಹಕರಿಸುತ್ತದೆ.

ಸೂಕ್ತ ವಿದ್ಯುತ್‌ ದೀಪಗಳನ್ನು ಬೆಳಗಿಸಿ: ಟ್ಯೂಬ್‌ಲೈಟ್‌ ಮತ್ತು ಎಲ್‌ಇಡಿ ಬಲ್ಬ್ಗಳು ಶಾಖರಹಿತ ಅಥವಾ ಕಡಿಮೆ ಶಾಖ ನೀಡುವುದರಿಂದ ಅವುಗಳ ಬದಲಿಗೆ ಸಾಂಪ್ರದಾಯಿಕ ಟಂಗ್ಸ್‌ಟನ್‌ ಲಮೆಂಟ್‌ಬಲ್ಬ್ಗಳನ್ನು ಉಪಯೋಗಿಸಿ. ಇದು ಕೋಣೆಗೆ ಬೆಳಕಿನ ಜೊತೆಗೆ ಶಾಖವನ್ನೂ ನೀಡುತ್ತದೆ. ಈ ಬಲ್ಬ್ಗಳಿರುವಲ್ಲಿ ಸೀಲಿಂಗ್‌ ಫ್ಯಾನ್‌ ಅನ್ನು ನಿಧಾನಗತಿಯಲ್ಲಿ ಚಲಾಯಿಸುವ ಮೂಲಕ ಬೆಚ್ಚನೆಯ ಗಾಳಿ ಇಡೀ ಕೋಣೆಗೆ ಹರಡುವಂತೆ ಮಾಡಬಹುದು.

* ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.