ಓಟ್ಸ್ನಿಂದ ಸೌಂದರ್ಯ
Team Udayavani, Mar 30, 2018, 7:30 AM IST
ಓಟ್ಸ್ ತಿಂದರೆ ಆರೋಗ್ಯ. ಮುಖಕ್ಕೆ ಬಳಿದುಕೊಂಡರೆ ಸೌಂದರ್ಯ. ಇದನ್ನು ಫೇಸ್ ಪ್ಯಾಕ್ನಿಂದ ಫೇಸ್ವಾಶ್ವರೆಗೂ ಅನೇಕ ರೀತಿಯಲ್ಲಿ ಬಳಸಬಹುದು.
ಸ್ಕ್ರಬ್
ಓಟ್ಸ್ ಚರ್ಮಕ್ಕೆ ಮೃದುತ್ವವನ್ನು ನೀಡಿ ಮಲಿನವನ್ನು ತೊಲಗಿಸುತ್ತದೆ. ಒಂದು ಚಮಚ ಓಟ್ಸ್ ಮತ್ತು ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಮಿಶ್ರಣ ಮಾಡಿ ಈ ಮಿಶ್ರಣದಿಂದ ಮುಖಕ್ಕೆಲ್ಲಾ ಹಚ್ಚಿ ಪ್ಯಾಕ್ ಮಾಡಬೇಕು. 30 ನಿಮಿಷದ ನಂತರ ಬಿಸಿನೀರಿನಲ್ಲಿ ಮುಖವನ್ನು ಶುಭ್ರವಾಗಿ ತೊಳೆದುಬಿಡಬೇಕು.
ಫೇಸ್ಪ್ಯಾಕ್
ಓಟ್ಸ್, ಜೇನು, ಆಲಿವ್ ಎಣ್ಣೆ, ಮೊಸರು ಎಲ್ಲವನ್ನೂ ಸಮಪಾಲಿನಲ್ಲಿ ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಶುಭ್ರವಾಗಿ ತೊಳೆಯಿರಿ. ಹೀಗೆ ಆಗಾಗ ಮಾಡುವುದರಿಂದ ಮುಖದ ಮೇಲಿರುವ ಸುಕ್ಕು ನಿವಾರಣೆಯಾಗುತ್ತದೆ. ಚೆನ್ನಾಗಿ ಕಳಿತ ಅರ್ಧ ಬಾಳೆಹಣ್ಣನ್ನು ಮೆತ್ತಗೆ ಮಾಡಿ ಅದಕ್ಕೆ ಎರಡು ಚಮಚ ಓಟ್ಸ್ , ಹಾಲು, ಕ್ರೀಮ್, ಚಿಟಿಕೆ ದಾಲಿcನ್ನಿ , ಚಕ್ಕೆ ಪುಡಿ ಎರಡು ಚಮಚ, ಗೋಧಿಹಿಟ್ಟು ಬೆರೆಸಿ ಪೇಸ್ಟಿನಂತೆ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಬಿಡಿ. ನಂತರ ನೀರಿನಿಂದ ತೊಳೆಯಿರಿ.
ತಾಜಾತನಕ್ಕೆ
ದೇಹವು ತಾಜಾ ಅನಿಸಲು ಅರ್ಧ ಕಪ್ ಓಟ್ಸ್ , ಕಾಲು ಕಪ್ ಹಾಲಿನಪುಡಿ, 2 ಚಮಚ ಜೇನನ್ನು ತೆಳುವಾದ ಬಟ್ಟೆಯಲ್ಲಿ ಸುತ್ತಿ ಸ್ನಾನ ಮಾಡುವ ನೀರಿನಲ್ಲಿ ಇದನ್ನು ಮುಳುಗಿಸಿ ಇಡಿ. ಅರ್ಧ ಗಂಟೆ ಬಿಟ್ಟು ತೆಗೆಯಿರಿ. ಮೂರು ಪದಾರ್ಥಗಳ ಸತ್ವವನ್ನು ಬೆರೆಸಿಕೊಂಡ ನೀರಿನಿಂದ ಸ್ನಾನ ಮಾಡಿ. ದೇಹವು ತಾಜಾ ಆಗಿ ಹಾಯಾಗಿ ಇರುತ್ತದೆ.
ಖಾಲಿ ಓಟ್ಸ್ ಅನ್ನು ನೀರಿನಲ್ಲಿ ಬೇಯಿಸಿ ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಚರ್ಮಕ್ಕೆ ಅತ್ಯುತ್ತಮ. ಓಟ್ಸ್ನ್ನು ಸ್ವಲ್ಪ ಹಾಲಿನಲ್ಲಿ ನೆನೆಸಿ ಮುಖಕ್ಕೆ ಲೇಪಿಸಿ ಮಸಾಜ್ ಮಾಡಿ ಹದಿನೈದು ನಿಮಿಷದ ನಂತರ ಮುಖ ತೊಳೆಯಿರಿ. ಮುಖ ಹೊಳಪೇರುತ್ತದೆ.
ಸುಮ, ಚಿಟ್ಪಾಡಿ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.