ಭೂಮಿ ತೂಕದ ವ್ಯಕ್ತಿತ್ವ


Team Udayavani, Sep 8, 2017, 6:20 AM IST

mahila–08.jpg

ಯಶಸ್ಸು ಎನ್ನುವುದು ಅಮಲಿನಂತೆ. ಒಮ್ಮೆ ತಲೆಗೇರಿದರೆ ಈ ಅಮಲು ತನಗೆ ಬೇಕಾದಂತೆ ಕುಣಿಸುತ್ತದೆ. ಅದರಲ್ಲೂ ಚಿತ್ರರಂಗದಲ್ಲಿ ಯಶಸ್ಸಿನ ಅಮಲು ಏರುವುದೂ ಬೇಗ ಇಳಿಯುವುದೂ ಬೇಗ. ಒಂದೇ ಚಿತ್ರದ ಯಶಸ್ಸಿನಿಂದ ಬೀಗಿ ಬಳಿಕ ಮೂಲೆಗುಂಪಾದ ಅದೆಷ್ಟೋ ಮಂದಿಯನ್ನು ಈ ಮಾಯಾಲೋಕ ಕಂಡಿದೆ. ಅಂತೆಯೇ ಚಿತ್ರ ಸೂಪರ್‌ಹಿಟ್‌ ಆಗಿದ್ದರೂ ಒಂದು ಚೂರೂ ಬದಲಾಗದೆ ತಲೆಯನ್ನು ಭುಜದ ಮೇಲೆ ಇಟ್ಟುಕೊಂಡವರು ಇಲ್ಲಿ ಬಹುಕಾಲ ಬಾಳಿದ್ದಾರೆ. ಈ ವಿಚಾರ ಇಲ್ಲಿ ಪ್ರಸ್ತಾವವಾಗಲು ಕಾರಣ ಭೂಮಿ ಪೆಡ್ನೆಕರ್. ಬೆನ್ನುಬೆನ್ನಿಗೆ ಎರಡು ಹಿಟ್‌ ಚಿತ್ರಗಳನ್ನು ನೀಡಿರುವ ಭೂಮಿಗೆ ಈಗ ನಿಂತ ನೆಲ ಕಾಣುತ್ತಿಲ್ಲ. ಎಲ್ಲರನ್ನು ಅವಳು ಕೀಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎನ್ನುವುದು ಭೂಮಿ ಬಗ್ಗೆ ಕೇಳಿ ಬಂದಿರುವ ಆರೋಪ. ಯಶ್‌ರಾಜ ಫಿಲ್ಮ್ಸ್ನಲ್ಲಿ ಅಸಿಸ್ಟೆಂಟ್‌ ಕಾಸ್ಟಿಂಗ್‌ ಡೈರೆಕ್ಟರ್‌ ಆಗಿದ್ದಾಗ ಭೂಮಿ ಗುಂಡುಗುಂಡಾಗಿ ಭೂಮಿಯಷ್ಟೇ ತೂಕವಾಗಿದ್ದಳು. 

ಈ ಭಾರೀ ದೇಹವೇ ಅವಳಿಗೆ ದಮ್‌ ಲಗಾಕೇ ಐಸಾ ಚಿತ್ರದ ನಾಯಕಿಯಾಗುವ ಅವಕಾಶ ತಂದುಕೊಟ್ಟಿತು. ದಪ್ಪ ಹೆಂಡತಿ ಮತ್ತು ಪೀಚಲು ಗಂಡನ ಕತೆ ಹೊಂದಿದ್ದ ದಮ್‌ ಲಗಾಕೇ ಐಸಾ ಚಿತ್ರ ದೊಡ್ಡ ಮಟ್ಟದ ಹಿಟ್‌ ಎಂದೆನಿಸದಿದ್ದರೂ ಭೂಮಿ ಮಾತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾದಳು. ಮೊದಲೇ ಸಾಕಷ್ಟು ದಪ್ಪಗಿದ್ದ ಭೂಮಿ ಈ ಚಿತ್ರಕ್ಕಾಗಿ ಮತ್ತೆ 12 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಳಂತೆ. ಅನಂತರ ಬರೀ ಒಂದು ವರ್ಷದಲ್ಲಿ  ಎಲ್ಲ ತೂಕ ಇಳಿಸಿಕೊಂಡು ಅಚ್ಚರಿಯುಂಟು ಮಾಡಿದ್ದ ಭೂಮಿ, “ತೂಕ ಕಳೆದುಕೊಳ್ಳುವುದು ಹೇಗೆ?’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡುವಷ್ಟು ಅನುಭವ ಸಂಪಾದಿಸಿಕೊಂಡಿದ್ದಾಳೆ.

ಟ್ರಿಮ್‌ ಆ್ಯಂಡ್‌ ಸ್ಲಿಮ್‌ ಆಗಿ ಬಂದ ಭೂಮಿಗೆ ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಈ ಚಿತ್ರ ಹಿಟ್‌ ಆಗುತ್ತಿದ್ದಂತೆ ಶುಭ ಮಂಗಲ್‌ ಸಾವಧಾನ್‌ ಎನ್ನುವ ಚಿತ್ರ ಬಂತು. ಇದು ಕೂಡ ಹಿಟ್‌ ಆದ ಬಳಿಕ ಭೂಮಿಗೆ ಯಶಸ್ಸಿನ ಅಮಲು ತಲೆಗೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಭೂಮಿ ಇದನ್ನೆಲ್ಲ ನಿರಾಕರಿಸುತ್ತಿದ್ದಾಳೆ. ನನ್ನ ಯಶಸ್ಸು ನೋಡಿ ಹೊಟ್ಟೆಯುರಿಯುತ್ತಿರುವವರು ಹರಡುತ್ತಿರುವ ಸುಳ್ಳು ಸುದ್ದಿಗಳಿವು. ನಾನೂ ಹಿಂದಿನ ಭೂಮಿಯೇ ಆಗಿ ಉಳಿದಿದ್ದೇನೆ. ಈಗಲೂ ಸೆಟ್‌ನ ಹುಡುಗರ ಜತೆಗೆ ಊಟ ಹಂಚಿಕೊಂಡು ತಿನ್ನುವಷ್ಟು ಸರಳತೆ ನನ್ನಲ್ಲಿದೆ. ಆದರೆ ಯಾರಾದರೂ ಜೀವನದಲ್ಲಿ ಮೇಲೇರುತ್ತಿದ್ದರೆ ಸಹಿಸದ ಕೆಲ ಮಂದಿ ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಕೆಟ್ಟ ವದಂತಿ ಹರಡುತ್ತಿದ್ದಾರೆ ಎನ್ನುವುದು ಭೂಮಿಯ ಸಮಜಾಯಿಷಿ. 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.