ಕೈತೋಟ ಮತ್ತು ಕಣ್ಣೋಟ


Team Udayavani, Oct 13, 2017, 6:30 AM IST

garden-bowmans.jpg

ಅಂಗಳ ಕಂಡರೆ ತಿಳಿವುದು ಎಲ್ಲ ಹೆಂಗಳೆಯರ ಗುಣಗಡಣಗಳೆಲ್ಲ ಎಂಬ ಬಲ್ಲವರ ಮಾತಿನಂತೆ ಗೃಹಿಣಿಯು ಮನೆಯಂಗಳವನ್ನು ಆಕರ್ಷಣೀಯವಾಗಿಸಲು ಹೂದೋಟ ಸಹಕಾರಿಯಾಗಿದೆ. ಮಲ್ಲಿಗೆ, ಜಾಜಿ, ದಾಸವಾಳ, ಗುಲಾಬಿ, ಕನಕಾಂಬರ, ಚೆಂಡು ಹೂ, ಗುಲಾಬಿ, ಸೇವಂತಿಗೆ ಮುಂತಾದ ಹೂವುಗಳು ಹೆಚ್ಚಿನ ಪರಿಸರಗಳಲ್ಲಿ ಬೆಳೆಯಲು ಯೋಗ್ಯವಾಗಿರುವುದರಿಂದ ನಮ್ಮ ಮನೆಯಂಗಳದಲ್ಲಿ ಅದಕ್ಕೊಂದು ಜಾಗವಿರಲಿ. 

ಸುಲಭವಾಗಿ ನಿರ್ಮಿಸಬಹುದಾದ ಹಸಿರು ಹುಲ್ಲಿನ ಹಾಸನ್ನು ನಿರ್ಮಿಸಿ ಮನಕ್ಕೆ ಮುದ ನೀಡುವ ವಿಭಿನ್ನ ವರ್ಣದ, ವಿವಿಧ ಬಗೆಯ ಪುಷ್ಪಗಳನ್ನು ಮನೆಯ ಮುಂದೆ ನೆಡುವುದರಿಂದ ಸುತ್ತಲ ಪರಿಸರ ಆಹ್ಲಾದಕರವೆನಿಸುತ್ತದೆ. ಕಾಲಕಾಲಕ್ಕೆ ಟ್ರಿಮ್ಮಾಗಿ ಬೇರೆ ಬೇರೆ ಆಕಾರಗಳಲ್ಲಿ ಕತ್ತರಿಸಲ್ಪಡುವ ಆಲಂಕಾರಿಕ ಗಿಡಗಳು ಮನೆಗೆ ಬರೋ ಅತಿಥಿಗಳ, ನೆಂಟರ ಕಣ್ಮನ ಸೆಳೆದು ಮನ ತಣಿಸುತ್ತವೆ. 

ಹೂದೋಟ ನಿರ್ಮಿಸುವುದರಿಂದ ಅನುಪಯುಕ್ತವೆಂದು ಬಿಸಾಡುವ ಗೋಣೀಚೀಲಗಳು, ಒಡೆದುಹೋದ ಮಡಕೆಗಳು, ಪ್ಲಾಸ್ಟಿಕ್‌ ಬಕೆಟ್‌, ವಾಹನಗಳ ಟೈರುಗಳು ಹೂವಿನ ಕುಂಡಗಳಾಗಿ, ಹಸಿಕಸ ಗೊಬ್ಬರವಾಗಿ ಅಲ್ಪ ಜಾಗದಲ್ಲಿ ಉತ್ತಮ ಹೂದೋಟ ಸೃಷ್ಟಿrಸಲು ನೆರವಾಗುತ್ತವೆ. ಮಾರುಕಟ್ಟೆಗಳಲ್ಲಿ ಸಿಗುವ ಚಿಕ್ಕ ಚಿಕ್ಕ ಪ್ಲಾಸ್ಟಿಕ್‌ ಕುಂಡಗಳಲ್ಲಿ ಗೊಂಚಲು ಹೂ ಬಿಡುವ ಬಳ್ಳಿ ಗಿಡಗಳನ್ನು ನೆಟ್ಟು, ಪೋರ್ಟಿಕೋಗಳಲ್ಲಿ ನೇತಾಡಿಸುವುದರಿಂದ ಮನೆಯ ಅಂದ ಇಮ್ಮಡಿಗೊಳ್ಳುತ್ತದೆ. 

1. ಕೈದೋಟ ಬೆಳೆಸುವ ಮನೆಯಾಕೆಯ ಹವ್ಯಾಸ ಆಕೆಯ ಆರಾಮದ ಸಮಯವನ್ನು ಸದುಪಯೋಗ ಮಾಡುತ್ತದೆ.

2. ಗಾಳಿಯಲ್ಲಿ ಹರಡುವ ಸುಗಂಧವನ್ನು ಆಘ್ರಾಣಿಸುತ್ತಿದ್ದಂತೆ ಮನಸ್ಸು ಪ್ರಫ‌ುಲ್ಲಗೊಳ್ಳುತ್ತದೆ.

3. ವಾಸ್ತುಶಾಸ್ತ್ರ  ಹೇಳುವಂತೆ, ಮನೆಯೊಳಗೆ ಹಾಗೂ ಸುತ್ತಮುತ್ತ ಧನಾತ್ಮಕ ಲಹರಿಗಳನ್ನು ಪಸರಿಸುತ್ತದೆ.

4. ಮನೆಯ ಮುಂದೆ ಬೆಳೆಯಲಾಗುವ ತುಳಸಿಯಂತಹ ಔಷಧೀಯ ಸಸ್ಯಗಳು ಆರೋಗ್ಯವರ್ಧಕಗಳಾಗಿವೆ.

5. ನೆಲದ ಮೇಲೆ ಹರಡಿರುವ ಹಸಿರು ಹುಲ್ಲಿನ ಹಾಸು ನೀರನ್ನು ಹಿಡಿದಿಡುವುದಲ್ಲದೆ, ಮಣ್ಣಿನ ಸವಕಳಿಯನ್ನು ತಡೆಯುತ್ತದೆ.

6. ವೈವಿಧ್ಯಮಯ ಬಣ್ಣ ಬಣ್ಣಗಳಿಂದ ಕಂಗೊಳಿಸುವ ಹೂವಿನ ಲೋಕ ವರ್ಣಮಯ ಚಿಟ್ಟೆಗಳನ್ನು ಆಕರ್ಷಿಸುತ್ತದೆ. ಹಣ್ಣುಗಳು ಹಕ್ಕಿಗಳನ್ನು ಸೆಳೆಯುತ್ತದೆ. ಮನೆಯಂಗಳವು ಜೀವಜಗತ್ತಿನ ವೈವಿಧ್ಯಗಳಿಂದ ಸಮೃದ್ಧವಾಗುತ್ತದೆ. 

7. ನಮ್ಮ ಮನದ ಭಾವನೆಗಳ ಜೊತೆ ಹೂಗಳು ನಿಕಟ ಸಂಬಂಧವನ್ನು ಹೊಂದಿದ್ದು, ತಮ್ಮ ಸುವಾಸನೆ ಮತ್ತು ಸೌಂದರ್ಯದ ಮೂಲಕವೇ ನಮ್ಮ ಮನಸ್ಸಿನ ಚಿಂತೆ, ದುಗುಡ, ಹಾಗೂ ಖನ್ನತೆಯನ್ನು ಹೋಗಲಾಡಿಸುತ್ತದೆ.

8. ಟೆರೇಸ್‌ನಲ್ಲಿ ಬೆಳೆಸುವ ಹೂಗಿಡಗಳು ಮುಂಜಾನೆಯ, ಸಂಜೆಯ ಚಹಾ ಸಮಯವನ್ನು ಅರ್ಥಪೂರ್ಣಗೊಳಿಸುತ್ತವೆೆ.

– ಹರಿಣಾಕ್ಷಿ ಕೆ. ಬೆಳ್ತಂಗಡಿ

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.