ಟಾಯ್ಲೆಟ್‌ ಸನಾ ಕಥಾ ! 


Team Udayavani, Aug 4, 2017, 11:29 AM IST

04-YUVA-7.jpg

ಸನಾ ಖಾನ್‌ಗೆ ಕುದುರೆ ರೇಸ್‌ ಹುಚ್ಚು ಶುರುವಾಗಿದೆಯೇ? ಹೀಗೊಂದು ಪ್ರಶ್ನೆ ಕೆಲದಿನಗಳ ಹಿಂದೆ ಬಾಲಿವುಡ್‌ನ‌ಲ್ಲಿ ಸುಳಿದಾಡುತ್ತಿತ್ತು. ಇದಕ್ಕೆ ಕಾರಣ ಸನಾ ಖಾನ್‌ ಪ್ರತಿದಿನ ತಪ್ಪದೆ ಮುಂಬಯಿಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯುವ ಕುದುರೆ ರೇಸ್‌ಗೆ ಹೋಗುತ್ತಿದ್ದದ್ದು. ಸನಾ ಕುದುರೆ ರೇಸ್‌ಗೆ ಹೋಗುತ್ತಿದ್ದದ್ದು ಮಾತ್ರವಲ್ಲದೆ ಅಲ್ಲಿದ್ದ‌ ಜಾಕಿಗಳು ಮತ್ತು ಕುದುರೆ ಪಾಲಕರ ಜತೆಗೆ ಕುದುರೆಗಳ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದಳು. ಯಾವ ತಳಿಯ ಕುದುರೆ ಉತ್ತಮ, ರೇಸ್‌ ಕುದುರೆಯನ್ನು ಸಾಕುವುದು ಹೇಗೆ ಇತ್ಯಾದಿ ವಿಚಾರಗಳ ಕುರಿತು ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದಳು. ಹೀಗಾಗಿ ಎಲ್ಲರೂ ಸನಾ ಖಾನ್‌ ರೇಸ್‌ ಖಯಾಲಿ ಹತ್ತಿಸಿಕೊಂಡಿದ್ದಾಳೆ ಎಂದೇ ಭಾವಿಸಿದ್ದರು. 

ನಿಜ ಸಂಗತಿ ಏನೆಂದರೆ, ಅಕ್ಷಯ್‌ ಕುಮಾರ್‌ ಹೀರೋ ಆಗಿರುವ ಟಾಯ್ಲೆಟ್‌- ಏಕ್‌ ಪ್ರೇಮ್‌ ಕಥಾದಲ್ಲಿ ಸನಾ ಖಾನ್‌ಗೂ ಒಂದು ಪ್ರಮುಖ ಪಾತ್ರವಿದೆ. ಇದರಲ್ಲಿ ಆಕೆ ಕುದುರೆ ಮಾಲಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಈ ಪಾತ್ರದ ತಯಾರಿಗಾಗಿ ಸನಾ ನಿತ್ಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ಗೆ ಹೋಗಿ ಕುದುರೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಳು. ಹೀಗೆ ಕುದುರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಂತೆಯೇ ಕ್ರಮೇಣ ಅವಳಿಗೆ ಕುದುರೆ ಮೋಹ ಬೆಳೆದಿದೆ. ಈಗ ತಾನೇ ಒಂದು ಕುದುರೆ ಖರೀದಿಸಿ ಸಾಕುವ ನಿರ್ಧಾರ ಮಾಡಿದ್ದಾಳೆ. ಹೀಗಾಗಿ ಕುದುರೆ ಸಾಕುವ ವಿಧಾನಗಳನ್ನು ಕಲಿತುಕೊಳ್ಳುತ್ತಿದ್ದಾಳೆ. ಅಂದ ಹಾಗೆ ಸನಾ ಖಾನ್‌ ಎಂದರೆ ಯಾರು ಎಂಬ ಕುತೂಹಲ ಮೂಡಿರಬಹುದು. ಸಲ್ಮಾನ್‌ ಖಾನ್‌ ನಟಿಸಿದ ಜೈಹೋದಲ್ಲಿ ನಟಿಸಿದ ಬಳಿಕ ತುಸು ಪ್ರಚಾರಕ್ಕೆ ಬಂದಿರುವ ನಟಿಯೇ ಸನಾ ಖಾನ್‌. ಹಾಗೆಂದು ಜೈಹೋ ಅವಳ ಮೊದಲ ಚಿತ್ರವಲ್ಲ. ಒಂದು ಕನ್ನಡ ಚಿತ್ರವೂ ಸೇರಿದಂತೆ ಸುಮಾರು 15 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾಳೆ. ಇನ್ನೂ ಆರು ಚಿತ್ರಗಳು ಶೂಟಿಂಗ್‌ನಲ್ಲಿವೆ. 12 ವರ್ಷದಲ್ಲಿ ಐದು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಅವಳದ್ದು. ಜತೆಗೆ 50ಕ್ಕೂ ಅಧಿಕ ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಬಿಗ್‌ಬಾಸ್‌ ಶೋ ಸ್ಪರ್ಧಿಯೂ ಆಗಿದ್ದಳು. 

ಎಲ್ಲ ಬಾಲಿವುಡ್‌ ನಟಿಯರಂತೆಯೇ ಸನಾ ಖಾನ್‌ ಕೂಡ ಪ್ರಸಿದ್ಧಿಗೆ ಬಂದಿರುವುದು ತಮಿಳು ಮತ್ತು ತೆಲುಗು ಚಿತ್ರಗಳ ಮೂಲಕ. ದಕ್ಷಿಣದತ್ತ ಬರುವ ಮೊದಲು ಅವಳು ಹಿಂದಿಯ ಕಡಿಮೆ ಬಜೆಟ್‌ನ ಬ್ರಿ ಗ್ರೇಡ್‌ ಚಿತ್ರಗಳಿಗೆ ನಾಯಕಿಯಾಗಿದ್ದಳು. ಹಾಗೆಯೇ ಸನಾ ದಕ್ಷಿಣದವಳೂ ಹೌದು. ಅವಳ ತಂದೆ ಕೇರಳ ಕಣ್ಣೂರಿನವರು. ಆದರೆ ಸನಾ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ. ಹೀಗಾಗಿ ದಕ್ಷಿಣದ ಯಾವ ಭಾಷೆಯೂ ಬರುವುದಿಲ್ಲ. ಜೈಹೋ ಬಳಿಕ ಆಕೆ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾಳೆ. ಈಗ ಒಳ್ಳೊಳ್ಳೆಯ ಪಾತ್ರಗಳು ಸಿಗುತ್ತಿವೆಯಂತೆ.

ಟಾಪ್ ನ್ಯೂಸ್

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

1-sadsadas

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.