ಹೆಣ್ಣುಮಕ್ಕಳಿಗಾಗಿ ಚೇತನಾ


Team Udayavani, Aug 9, 2019, 5:00 AM IST

e-13

ಎಷ್ಟೊಂದು ಆಶ್ಚರ್ಯವಲ್ವಾ? ಖಾಲಿಯಾದ ಹೃದಯದಲ್ಲಿ ಬಂದು, ತನುತುಂಬ ಸವಿನೆನಪುಗಳನ್ನೇ ತುಂಬಿಸಿಕೊಂಡು, ಭಾರವಾದ ಹೃದಯವನ್ನು ಹೊತ್ತು ಸಾಗೋದು !

ಎಲ್ಲರಿಗೂ ತಮ್ಮ ಜೀವನದ ಎಲ್ಲಾ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳುವು ದಕ್ಕೆ ಸಾಧ್ಯವಿರುವುದಿಲ್ಲ. ಆದರೆ ಅಂಥ, ಎಂದಿಗೂ ಮರೆಯಲಾಗದ ಒಂದು ವಾರವನ್ನು ಮಂಗಳೂರಿನ ಇನ್ಫೋಸಿಸ್‌ಆವರಣದಲ್ಲಿ ಕಳೆದದ್ದು ಹೌದು. ಚೇತನಾ 2019 (ಕರ್ನಾಟಕ ಸರಕಾರ, ಐಐಆಖ ಇಲಾಖೆಯ ಸಹಯೋಗದೊಂದಿಗೆ) ಅದೊಂದು ಸುಂದರ ಕಾರ್ಯಕ್ರಮ. ಸರ್ಕಾರಿ ಶಾಲೆಯಲ್ಲಿ ಕಲಿತು ಎಸ್‌ಎಸ್‌ಎಲ್‌ಸಿಯಲ್ಲಿ ಸಾಧಿಸಿದ ವಿದ್ಯಾರ್ಥಿನಿಯರ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಸುಂದರ ವೇದಿಕೆ. ತಾಂತ್ರಿಕತೆಯ ಬಳಕೆಯ ಬಗ್ಗೆ ಪ್ರತಿಯೊಬ್ಬ ಹೆಣ್ಣುಮಗುವಿನ ಲ್ಲಿಯೂ ಜಾಗೃತಿ ಮೂಡಿಸುವ ಧ್ಯೇಯದ ಚೇತನಾ 2019 ಪ್ರತಿಯೊಬ್ಬ ಶಿಬಿರಾರ್ಥಿಗೂ ಚೇತನವಾದದ್ದು ಸತ್ಯವೇ ಸರಿ.

“ಉದ್ಯಮಶೀಲತೆಯಿಂದಲೇ ದೇಶದ ಪ್ರಗತಿ’ ಎಂಬ ವಿಷಯವನ್ನು ಮನಮುಟ್ಟುವಂತೆ ವಿವರಿಸಿದ ತರಬೇತುದಾರರ ಪ್ರತಿಯೊಂದು ನುಡಿಯೂ ಇನ್ನೂ ಕಿವಿಯಲ್ಲಿ ಗುನುಗುಟ್ಟುತ್ತಿದೆ.

ತನ್ನ 23-24ರ ಹರೆಯದಲ್ಲೇ ಯುವ ಉದ್ಯಮಿ ಎನಿಸಿಕೊಂಡ ಭಾನುಶ್ರೀ ನಾಟೇಕರ್‌, ತಮ್ಮದೇ ಆದ ಒಂದು ಗುರುತಿಗಾಗಿ, ವ್ಯಕ್ತಿತ್ವಕ್ಕಾಗಿ ಹೋರಾಡಿ ಉತ್ತೀರ್ಣರಾದ ಉದ್ಯಮಿಗಳಾದ ಗಾಯತ್ರೀ ರಾವ್‌, ದಿವ್ಯಾ ಮೇಡಮ್‌ ನಮಗೆಲ್ಲ ಒಂದು ಸ್ಫೂರ್ತಿಯೇ ಸರಿ!

ಭಾರತದಲ್ಲೇ ಅತಿ ದೊಡ್ಡ “ಐಸ್‌ಕ್ರೀಮ್‌ ಪಾರ್ಲರ್‌’ ಹೊಂದಿರುವ ಐಡಿ ಯಲ್‌ ಐಸ್‌ ಕ್ರೀ ಮ್‌ನ ಮಾಲೀಕರಾದ ಮುಕುಂದ್‌ ಕಾಮತರ ಸಾಹಸಗಾಥೆ, “ಹಾಡೀ ಸರ್‌’ ಎಂದಾಕ್ಷಣ ಹಾಡುವ ಅವರ ಸರಳತೆ, ಬೆಳೆಯುತ್ತಿರುವ ಮೊಳಕೆಗಳೆಲ್ಲದಕ್ಕೂ ಮಾದರಿ. “ಜಾನ್‌ ಗಟರ್‌’ನ ಕಥೆ ಕೇಳಿ ಗುರಿಯೆಂದರೆ ಹೇಗಿರಬೇಕು ಎನ್ನುವುದನ್ನು ಕಲಿತೆವು. “Understand yourself’ ಎಂದು ಹೇಳಿ ನಮ್ಮೊಂದಿಗೆ ನಾವಾದ “ಚಾರ್ಲ್ಸ್‌’ ಒಂದು ಅದ್ಭುತವೇ ಸರಿ! ಹೆಣ್ಣುಮಕ್ಕಳ ಮುಖದಲ್ಲೊಂದು ಆತ್ಮವಿಶ್ವಾಸ ಮೂಡಿಸುವಲ್ಲಿ “ಚೇತನ’ ಖಂಡಿತ ಫ‌ಲಕಾರಿ.

ಅದರಲ್ಲಿಯೂ “ಇಂಡಸ್ಟ್ರಿಯಲ್‌ ಟೂರ್‌’ ನಮಗೊಂದು ಹೊಸ ಪರಿಚಯ. ದೊಡ್ಡದೇನೂ ಎಣಿಸಬೇಡಿ ಸ್ವಾಮೀ, ಅದು ಕಾರ್ಖಾನೆಗಳ ತೋರಿಸುವ, ಪರಿಚಯಿಸುವ ಒಂದು ಸಮಾರಂಭ. ಆ ಬಂದರು, ದೊಡ್ಡ ದೊಡ್ಡ ಹಡಗುಗಳು, ಮೆಶೀನ್‌ಗಳು… ಸಮುದ್ರವನ್ನೇ ಕಾಣದವರ ಕಣ್ಣಲ್ಲೊಂದು ಹೊಳಪಿತ್ತು! ರಾಶಿಬಿದ್ದ Limestones, Iron ore ದೊಡ್ಡ ದೊಡ್ಡ ಮಶೀನ್‌ಗಳು, ಅರ್ಥವಾಗದ್ದನ್ನು ಅರ್ಥೈಸುವ ಜನರು, ತಾರಾನೋಟ ತೋರಿದ ಮಾಯಾಲೋಕ! ಮೋಜಿನ ವಿಜ್ಞಾನ. ಒಟ್ಟಾರೆ ಕುಂದಾಪುರ ಭಾಷೆಯಲ್ಲಿ ಹೇಳುವುದಾದರೆ, “ಎಂಥಾ ಲಾಯ್ಕಿದಿತ್‌ ಗೊತಿತಾ!’

400 ಜನ ವಿದ್ಯಾರ್ಥಿಗಳು, ಹತ್ತಾರು ಜನ ಅಧ್ಯಾಪಕರು, ನಮಗಾಗಿ ಬಂದ ಸಹ್ಯಾದ್ರಿ ಕಾಲೇಜಿನ ಸ್ವಯಂಸೇವಕರು. ಬೆಳಗ್ಗೆ ಐದು ಗಂಟೆಗೆದ್ದು ಕರಾಟೆ ಕಲಿಯುವ ಉತ್ಸಾಹ. ಜೊತೆಗೆ ಮೈ-ಮನಗಳ ಉಲ್ಲಾಸಕ್ಕಾಗಿ ಯೋಗ. ವಿಧವಿಧವಾದ ತಿಂಡಿಗಳೊಂದಿಗೆ ತಟ್ಟೆಯಲ್ಲಿರುವ ಚೂರನ್ನೂ ಉಳಿಸದಂತೆ ಮಾಡುವ ಗಡಿ ಕಾವಲುಗಾರರು. ಆ ಪ್ರಶಾಂತ, ನಿಶ್ಶಬ್ದತೆಯ ಇನ್ಫೋಸಿಸ್‌ ಆವರಣ.

400 ಜನ ವಿದ್ಯಾರ್ಥಿಗಳಿಗೂ SAMSUNG TAB ನೀಡಿ, ತಾಂತ್ರಿಕತೆಯ ಉತ್ತಮ ಬಳಕೆಯ ಬಗ್ಗೆ ತರಬೇತಿ ನೀಡಿದ SAMSUNGನ ಸಾಮಾಜಿಕ ಕಳಕಳಿ ನಮಗೊಂದು ಆದರ್ಶ.

ಬೆಳಗ್ಗೆ ಆರು ಗಂಟೆಗೆ ಶುರುವಾಗುತ್ತಿದ್ದ ನಮ್ಮ ಅವಧಿಗಳು ಮುಗಿಯುತ್ತಿದ್ದುದು ರಾತ್ರಿ ಒಂಬತ್ತು ಗಂಟೆಗೆ. ಆದರೆ, ನಮ್ಮ ಪ್ರತಿಯೊಂದು ದಿನವನ್ನೂ ಸಂತಸದ ಹೊನಲಾಗಿಸಿದ್ದು ಕೊನೆಯ ಎರಡು ಗಂಟೆಗಳು. ಅದು ಮೋಜಿನ ಸಮಯ.

ತಮ್ಮ ತಮಾಷೆಯ ಮಾತು, ಸುಮಧುರ ಕಂಠದಿಂದ, ದಿನವೂ ನಮ್ಮೆಲ್ಲರನ್ನೂ ನಗಿಸುತ್ತಿದ್ದ ವಿದ್ಯಾಶಂಕರ್‌ ಸರ್‌, ಪ್ರತಿಷ್ಠಿತ ಕಾಲೇಜುಗಳ ಪ್ರಾಧ್ಯಾಪಕರಾಗಿದ್ದರೂ, ನಮ್ಮೊಂದಿಗೆ ಕುಣಿದು, ಕುಪ್ಪಳಿಸಿದ ಆ ಪ್ರತಿಯೊಬ್ಬರ ಸರಳತೆ, “ಹೆಣ್ಣು ಮಕ್ಕಳೆಲ್ಲ ನನ್ನ ಮಕ್ಕಳು’ ಎಂದು ಹೇಳುವ, ಮನೆಯಲ್ಲಿ ಪ್ರೋತ್ಸಾಹವಿಲ್ಲದ ಶೇ. 95 ಅಂಕ ಗಳಿಸಿದ ಚಿತ್ರದುರ್ಗದ ಚಂದನಾಳ ಓದಿನ ಸಂಪೂರ್ಣ ಖುರ್ಚವೆಚ್ಚವನ್ನು ಭರಿಸಿದ ಸಂಧ್ಯಾ ಅನ್ವೇಕರ್‌ ಮೇಡಮ್‌ನ ಪ್ರೀತಿಯನ್ನು ಮರೆಯಲು ಸಾಧ್ಯವೇ?

If anything we fail is the reflection of our thought..
ಚೇತನದ ಹಿಂದೆ ದುಡಿದ ಪ್ರತಿಯೊಬ್ಬರಿಗೂ ನನ್ನ ನಮನ.
ಮರೆಯಲಾಗದ ಸವಿನೆನಪಿನ ಬುತ್ತಿ ಕಟ್ಟಿಕೊಟ್ಟಿದ್ದೀರಿ.
ದಾರಿಯುದ್ದಕ್ಕೂ ಸವಿಯುತ್ತೇವೆ, ಸಾಧಿಸುತ್ತೇವೆ.
ಚೇತನ ಆಗು ನೀ ಅನಿಕೇತನ.

ಭ್ರಮರಾ ಕೆ. ಉಡುಪ
ದ್ವಿತೀಯ ಪಿಯುಸಿ- ಕಲಾ ವಿಭಾಗ
ಭಂಡಾರ್‌ಕಾರ್ ಪದವಿಪೂರ್ವ ಕಾಲೇಜು, ಕುಂದಾಪುರ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.