ಬಾಲಲೀಲೆಯ ಪ್ರಸಂಗವು


Team Udayavani, Aug 3, 2018, 6:00 AM IST

19.jpg

ಬಾಲ್ಯವೆಂದರೆ ಅದೇನು ಚೆಂದ ! ಆಗ ತಿಳಿಯದ ಅದರ ಮಹತ್ವ ಈಗ ತಿಳಿಯುತ್ತಿದೆ. ಆಡಿದ್ದೇ ಆಟ, ಮಾಡಿದ್ದೇ ತರಲೆ ಕೆಲಸಗಳು, ಕಣ್ಣ ಮುಂದೆ ನೆನಪನ್ನು ತರಿಸುತ್ತಲೇ ಇರುತ್ತವೆ. ಆಗ ತಾನೇ ಚಿಕ್ಕ ವಯಸ್ಸು . ಮಳೆಗಾಲದಲ್ಲಿ ಬಿಡದ ಮಳೆ ಅಬ್ಟಾ! ವಾರಗಟ್ಟಲೆ ಸುರಿಯುತ್ತಿತ್ತು. ಜಡಿಮಳೆ ಎಂದು ಸುಮ್ಮನೆ ಕೂರುವುದಿಲ್ಲ. ಮಣ್ಣಿನಲ್ಲಿ ಆಟವಾಡುತ್ತ ಪ್ರಕೃತಿಯ ಸೊಬಗು ಬಹಳ ಖುಷಿಕೊಡುತ್ತಿತ್ತು. ಮಳೆಗಾಲದಲ್ಲಿ ಅಂಗಳದ ಮೇಲೆ ಹಾಸಿಡುವ ತೆಂಗಿನಗರಿಗಳು ಒಂದೆಡೆಯಾದರೆ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಕೆಲವೊಮ್ಮೆ ಬಿದ್ದು ಓಡುವುದೇ ಒಂದು ಸಂಭ್ರಮ. ಛತ್ರಿ ಇದ್ದರೂ ಮಳೆಯಲ್ಲಿ ನೆನೆಯುವುದು, ಅದಕ್ಕಾಗಿ ಅಮ್ಮನಿಂದ  ಒಂದಿಷ್ಟು  ಬೈಗುಳ. ಚಳಿಗೆ ಒಣಗಿಸಿದ ಹಲಸಿನ ಹಪ್ಪಳ, ಹಲಸಿನ ಬೀಜ, ಮಾವಿನ ಹಣ್ಣಿನ ಸಿಪ್ಪೆ, ಗೇರುಬೀಜ ಸುಟ್ಟು ತಿನ್ನುತ್ತಿದ್ದೆವು. ಅದಕ್ಕಾಗಿ ತಂಗಿಯು ಗಲಾಟೆ ಮಾಡಿದಾಗ ಅಮ್ಮ ನಮ್ಮನ್ನು ಹೊಡೆಯಲು ಒಳಗಿನಿಂದ ಸೌಟು ತರುವ ಮುಂಚೆ ಅಲ್ಲಿಂದ ಕಾಲು ಕೀಳುತ್ತಿದ್ದೆವು. ಚಳಿಗಾಲಕ್ಕೆಂದೇ ಅಮ್ಮ ಕೊಟ್ಟಿಗೆಗೆ ಎಂದು ಬೇರೆಯೇ ತಂದಿದ್ದ ತರಗಲೆಯನ್ನೇ ಸ್ವಲ್ಪ ತೆಗೆದುಕೊಂಡು ಬೆಳಗ್ಗೆ ಒಲೆ ಮಾಡಿ ಚಳಿ ಕಾಯಿಸುತ್ತಿದ್ದೆವು. ಅದೇ ರೀತಿ ಜಾತ್ರೆಯ ಸಮಯದಲ್ಲಿ ಆಟಿಕೆ ವಸ್ತು ತೆಗೆದುಕೊಡಲು ಹಠ ಮಾಡುತ್ತಿದ್ದ ಆ ಸಮಯವನ್ನು ನೆನೆಸಿಕೊಂಡರೆ ಈಗಲೂ ನಗೆಯನ್ನು ತರಿಸುತ್ತದೆ.

ಅಂಗನವಾಡಿಯ ಆ ದಿನದ ನೆನಪಂತೂ ಮರೆಯಲು ಸಾಧ್ಯವೇ ಇಲ್ಲ. ಶಾಲೆಗೆ ಹೋಗಲು ಮನಸ್ಸಿಲ್ಲದೆ  ಪೊದೆಗಳ ನಡುವೆ ಅಡಗಿ ಕುಳಿತದ್ದು , ಅದಕ್ಕಾಗಿ ಅಮ್ಮ ಕೋಲು ಹಿಡಿದು ಗದರಿಸಿ ಕಳುಹಿಸಿದ್ದು,  ನಮ್ಮೂರು ಸಮೀಪದಲ್ಲಿಯೇ ನಾನು ಪ್ರಾಥಮಿಕ ವ್ಯಾಸಂಗ ಮಾಡಿದ್ದು, ಅಲ್ಲದೆ ಆಗಿನ ಮೇಷ್ಟ್ರುಗಳು ಇಂದಿಗೂ ನೆನಪಾಗುತ್ತಾರೆ. ಆಗಿನ ಆಟ ಒಂದೇ ಎರಡೇ. ಅಡಿಕೆ ಹಾಳೆಯಲ್ಲಿ ಕುಳಿತು ಎಳೆಯುವ ಆ ಗೆಳೆಯರ ಗುಂಪಿನ ಮಜಾವೇ ಬೇರೆ. ನಾವು ನಾಲ್ಕು ಮಂದಿ ಗೆಳೆಯರು ಒಟ್ಟಾಗಿ ಶಾಲೆಗೆ ಹೋಗುತ್ತಿದ್ದೆವು. ದಾರಿ ಮಧ್ಯೆ ಲೂಟಿ-ತರಲೆಗಳನ್ನು ಮಾಡುತ್ತ, ಕಾಡಂಚಿನ ಮಧ್ಯದ ದಾರಿ, ಹಕ್ಕಿಗಳ ಕಲರವ, ನವಿಲುಗಳ ನರ್ತನ, ಕಾಡುಕೋಳಿಯ ಆ ಗಾಯನಗಳು ಬಹಳ ಮುದ ನೀಡುತ್ತಿದ್ದವು. ದಾರಿಯಲ್ಲಿ ಮರಳಿನ ಮೇಲೆ ತಮ್ಮ ಹೆಸರುಗಳನ್ನು ಬರೆಯುವುದು, ಕೆಸರಾಟ, ಕ್ಲಾಸ್‌ ಮಧ್ಯೆ ಪಾಠ ಬೋರಾದಾಗ ಬ್ಯಾಗ್‌ನಲ್ಲಿ ತುಂಬಿಸಿದ್ದ ಹಲಸಿನ ಬೀಜ ತಿನ್ನುವುದು, ಕಾಗದದ ದೋಣಿಯಾಟ, ದಾರಿ ಮಧ್ಯೆ ಸಿಗುತ್ತಿದ್ದ ಸಣ್ಣ ಸಣ್ಣ ತೋಡುಗಳಲ್ಲಿ ಬಿಡುವ ಆ ಆಟ, ನೇರಳೆಹಣ್ಣು, ಮಾವಿನ ಹಣ್ಣು ಕೊಯ್ಯಲು ಹೋಗಿ ತೋಟದ ಮಾಲೀಕ ನಮ್ಮನ್ನು ಬೆನ್ನಟ್ಟುವಾಗಿನ ದಿನಗಳು, ಬೇಸಿಗೆ ರಜೆ ಬಂದಾಗ ಅಜ್ಜಿ ಮನೆಗೆ ಹೋಗುವಾಗಿನ ಖುಷಿ, ಅಜ್ಜಿ ಹೇಳುತ್ತಿದ್ದ ಕತೆಗಳು. ಆಗಿನ ಆ ಸಂಭ್ರಮವೇ ನಮಗೊಂಥರ ಹಬ್ಬವಾಗುತ್ತಿತ್ತು. 

ಇನ್ನು ಹಬ್ಬಗಳ ಸಮಯದಲ್ಲಿ ಆಡುವ ದಿನಗಳೇ ಬೇರೆ. ದೀಪಾವಳಿ ಬಂದಾಗ ಎಣ್ಣೆ ಸ್ನಾನ, ಗೋಪೂಜೆ, ಇದಕ್ಕಾಗಿ ಹೂವುಗಳನ್ನು ತರಲು ಕಾಡಿಗೆ ಹೋಗುವುದು, ಪಟಾಕಿ ಸಿಡಿಸುವ ಸಂಭ್ರಮ, ಒಂದಿಷ್ಟು ಬಗೆಯ ತಿಂಡಿತಿನಿಸುಗಳು, ಆಹಾ! ಬಾಯಲ್ಲಿ ನೀರೂರಿಸುತ್ತವೆ. ಈಗ ಬಾಲ್ಯ ಕಳೆದಿದೆ. ಆದರೆ, ಉಳಿದಿರುವುದು ಅಂದರೆ ಆ ಬಾಲ್ಯದ ಸಿಹಿನೆನಪು ಮಾತ್ರ. ಈ ನೆನಪುಗಳೇ ಆಗಾಗ ಮರೀಚಿಕೆಯಂತೆ ನೆನಪಿಸಿ ಮನಸ್ಸನ್ನೂ ಮೃದುವಾಗಿ ನೇವರಿಸುತ್ತವೆ. ಓ ಬಾಲ್ಯವೇ, ನೀ ಮತ್ತೇ ಬರುವಂತಿದ್ದರೆ ಎಷ್ಟೋ ಚೆನ್ನ . ಬಾಲ್ಯದ ಸ್ಮತಿಕೋಶ ಬಿಚ್ಚಿಕೊಂಡಂತೆ ಮನಸ್ಸು ಆಹ್ಲಾದಗೊಳ್ಳುತ್ತದೆ. ಬದುಕಿನ ಉತ್ಸಾಹವೂ ಇಮ್ಮಡಿಗೊಳ್ಳುತ್ತದೆ. ಬಾಲ್ಯವೇ ನೀನೆಷ್ಟು ಚೆಂದ ಅಂತ ಅನಿಸುತ್ತದೆ. 

ಆದರೆ, ಪ್ರಸ್ತುತದಲ್ಲಿ ಬಾಲ್ಯ ಎನ್ನುವುದಕ್ಕೆ  ಅರ್ಥವೇ ಇಲ್ಲದಂತಾಗಿದೆ. ಕೂಸು ಹುಟ್ಟುವ ಮುಂಚೆಯೇ ಪ್ರತಿಷ್ಠಿತ ಶಾಲೆಗಳಿಗೆ ಬುಕ್ಕಿಂಗ್‌ ಮಾಡುವ ಈ ಕಾಲದಲ್ಲಿ ಬಾಲ್ಯವನ್ನೇ ನೋಡದ ಮಕ್ಕಳು ಅವೆಷ್ಟೋ ಇದ್ದಾರೆ. ಅದೊಂದು ಬೇಸರದ ಸಂಗತಿ. ಬಾಲ್ಯದಲ್ಲಿ ಸಿಗುವಂಥ ಗೋಲಿ, ಚೆಂಡು, ಬುಗುರಿ, ಮರಕೋತಿ ಆಟಗಳು ಅಲ್ಲದೆ ಎಳವೆಯಲ್ಲಿಯೇ ಸಿಗುವ ಗೆಳೆಯರು, ತರಲೆಗಳು, ಉತ್ತಮ ಪಾಠಗಳು ಎಲ್ಲಿಯೂ ಸಿಗಲಾರವು. ಮಗುವಿನ ಎಲ್ಲ  ಘಟ್ಟದಲ್ಲೂ  ಬಾಲ್ಯಜೀವನ ಅನ್ನೋದು ಬಹಳ ಮಹತ್ವವಾದದ್ದು. ಈ ಬಾಲ್ಯದ ಜೀವನವೇ ಬಹಳಷ್ಟು ಪಾಠವನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. ಅದನ್ನು ಮಿಸ್‌ ಮಾಡದಿರಿ.       

ಮೋಹನ ಕಾನರ್ಪ
ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.