ಉಂಚಳ್ಳಿಯ ಚಳಿ !


Team Udayavani, Jun 29, 2018, 6:00 AM IST

x-10.jpg

ಹೌದು, ಕನಸಲ್ಲೂ ನೆನೆದಿರಲಿಲ್ಲ- ನಾನು ಚಾರಣಿಗಳಾಗಿ ಉಂಚಳ್ಳಿಯ ಆ ಸುಂದರವಾದ ಸೌಂದರ್ಯವನ್ನು ನನ್ನ ಕಣ್ಣಿನಿಂದ ಕಾಣುತ್ತ ಮೈಮರೆತು ಸ್ವರ್ಗ ಸುಖವನ್ನು ಅನುಭವಿಸುತ್ತೇನೆಂದು.

NCCಯ ನೇತೃತ್ವದಲ್ಲಿ ಕೈಗೊಂಡ ಚಾರಣ ಶಿಬಿರದಲ್ಲಿ ಆಯ್ಕೆ ಮಾಡಿದ ಸ್ಥಳವೆಂದರೆ ಉಂಚಳ್ಳಿ ಜಲಪಾತ. ಚಾರಣಕ್ಕೆ ಹೊರಡುವ ಹುಮ್ಮಸ್ಸಿನಿಂದ ರಾತ್ರಿ ನಿದ್ದೆಯೇ ಬರಲಿಲ್ಲ. ಅಂತೂ ಇಂತೂ ಮುಂಜಾನೆ 3. 30 ಆಗೇ ಬಿಟ್ಟಿತ್ತು. ಬಹಳ ಸಂತೋಷದಿಂದ ಎದ್ದು ನಿತ್ಯವಿಧಿಯನ್ನು ಮುಗಿಸಿ, ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣಕ್ಕೆ ತಲುಪಿದೆವು. ರೈಲಿನಲ್ಲಿ ಆರಂಭವಾದ ನಮ್ಮ ಪಯಣ ಕೊನೆಯಾದದ್ದು ಬೆಳಗ್ಗೆ 11. 30ಕ್ಕೆ ಕುಮಟಾದ ರೈಲ್ವೆ ನಿಲ್ದಾಣದಲ್ಲಿ. ನಂತರ ಮಧ್ಯಾಹ್ನದ ಉಟೋಪಚಾರವನ್ನು ಮುಗಿಸಿ ನಮ್ಮ ಚಾರಣದ ಸಮಯವು ಪ್ರಾರಂಭವಾಯಿತು. 

ಹೀಗೆ ಚಾರಣಿಗಳಾಗಿ ಉಂಚಳ್ಳಿಯ ಜಲಪಾತವನ್ನು ನೋಡಲು ಹೋಗುತ್ತಿರುವಾಗ ರಸ್ತೆಯ ಮಧ್ಯೆ ಅನೇಕ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿದೆವು. ನಡೆದು ನಡೆದು ಸಂಜೆಯಾದದ್ದು ಗೊತ್ತೇ ಆಗಲಿಲ್ಲ. ಸಂಜೆ ಸುಮಾರು 5:30ರ ಹೊತ್ತಿಗೆ ಒಂದು ಕಾಡು ತಲುಪಿದೆವು. ಎಲ್ಲಿಲ್ಲದ ಖುಷಿಯೊಂದಿಗೆ ಸ್ವಲ್ಪ ಭಯವೂ ತುಂಬಿತ್ತು. ಜನಸಂಚಾರವಿಲ್ಲದ ನಿರ್ಜನ ಪ್ರದೇಶದ ನೀರವ ವಾತಾವರಣ ಸುತ್ತೆಲ್ಲ ತಾಂಡವವಾಡುತ್ತಿತ್ತು. ಸುತ್ತಲೂ ಕಂಗೊಳಿಸುವ ಬೆಟ್ಟ, ಗುಡ್ಡ ಕಣ್ಣನೋಟಕ್ಕೆ ಜೇನ ಸವಿಯನ್ನು ಪ್ರಕೃತಿ ಉಣಬಡಿಸುತ್ತಿತ್ತು. ನೀಲಾಕಾಶ ಚಿತ್ತಾಕರ್ಷಕವಾಗಿ ಕಂಗೊಳಿಸುತ್ತಿತ್ತು. ಇಂಥ ಚಿತ್ತಾಕರ್ಷಕ ಪ್ರಕೃತಿಯ ಮಡಿಲಲ್ಲಿ ಇದ್ದ ನನಗೆ ಏನೋ ಸಂತೋಷ ಕುಣಿದು ಕುಪ್ಪಳಿಸುವಂತಿತ್ತು. ಹೀಗೆ ಕಾಡುಗಳ ಮಧ್ಯದಲ್ಲಿ ಪಯಣ ಸಾಗುತ್ತಿತ್ತು. ವಿಶ್ರಾಂತಿಗಾಗಿ  ಸ್ಥಳವನ್ನು ಹುಡುಕುತ್ತ ಮುನ್ನಡೆದೆವು. ಕೊನೆಗೂ ಒಂದು ವಿಶಾಲವಾದ ಹಸಿರು ಹುಲ್ಲಿನಿಂದ ಹೆಣೆದ ಚಾಪೆಯಂತೆ ಕಂಗೊಳಿಸುತಿದ್ದ ಸ್ಥಳ ಸಿಕ್ಕಿತು. ಅದರ ತೀರದಲ್ಲೊಂದು ಸರೋವರ. ಅಷ್ಟು ಹೊತ್ತಿಗೆ ಸೂರ್ಯ ತನ್ನ ದೈನಂದಿನ ಕಾರ್ಯವನ್ನು ಮುಗಿಸಿ ಅಸ್ತಂಗತನಾಗಲು ತಯಾರಿ ನಡೆಸಿದ್ದ. ಹೀಗೆ, ನಾವು ವಿಶ್ರಾಂತಿ ಪಡೆದು ಮನೋರಂಜನೆ ಕಾರ್ಯಗಳಲ್ಲಿ ತೊಡಗಿದ್ದೆವು. ನಾನಂತೂ ಪ್ರಕೃತಿಯ  ಸವಿಯನ್ನು  ಕಣ್ಣಿನಿಂದ ಹೀರುತ್ತಿದ್ದೆ. ಆ ಕಾಡುಗಳ ಮಧ್ಯೆ ಸ್ವರ್ಗಸದೃಶವಾದ ಸುಖವನ್ನನುಭವಿಸುತ್ತಿರುವಾಗ ಆಕಾಶದಂಚಿನ ಗಿರಿಗಳ ಮಧ್ಯೆ ಏನೋ ಹೊಳಪು ತೋರುತ್ತಿತ್ತು. ಪ್ರಕೃತಿಯ ಮುದ್ದಾದ ಬಿಂಬವನ್ನು ಅಸಾಮಾನ್ಯವಾಗಿ ಈ ಬೆಳದಿಂಗಳ ಚಂದ್ರನು ತೆರೆದಿಡುತ್ತಿದ್ದ. ಚಳಿರಾಯ ಮಾತ್ರ ಬೆನ್ನು ಹತ್ತಿದ ಬೇತಾಳನಂತೆ ನಮ್ಮನ್ನು ಬೆನ್ನಟ್ಟಿಯೇ ಬಿಟ್ಟಿದ್ದನು. ಹಾಗೂ ಹೀಗೂ ಪೇಚಾಡಿ ಬೆಂಕಿ ಕಾಯಿಸುತ್ತಿರುವಾಗಲೇ  ಮುಂಜಾನೆಯಾಗಿಯೇ ಬಿಟ್ಟಿತು.

 ಆ ಕೊರೆಯುವ ಚಳಿಯಲ್ಲಿ ಸೂರ್ಯನ ಮುಂಜಾನೆಯ ಆಗಮನ. ಆಗಂತೂ ನನಗೆ ಸ್ವರ್ಗದಲ್ಲಿರುವಂತೆ ಭಾಸವಾಗುತ್ತಿತ್ತು. ಎಳೆ ಬಿಸಿಲ ಕಾರಣ ಸೂರ್ಯನ ಕಿರಣ ನೀರಲೆಗಳಲ್ಲಿ ಪ್ರತಿಬಿಂಬವಾಗುತ್ತಿತ್ತು. ಅಲೆಗಳು ಬಂಡೆಗಳಿಗೆರಗಿ ಜುಳುಜುಳು ನಿನಾದವನ್ನುಂಟುಮಾಡುತಿತ್ತು. ಇದನ್ನು ವೀಕ್ಷಿಸಿದ ನನ್ನ ಕಣ್ಣುಗಳು ಮಧುರವಾದ ಸೌಂದರ್ಯವನ್ನು ಆಸ್ವಾದಿಸುತ್ತಿತ್ತು. ಹೀಗೆ ಆ ದಿನದ ದೈನಂದಿನ ಕಾರ್ಯ ಮುಗಿಸಿ ಉಂಚಳ್ಳಿ ಜಲಪಾತದ  ಸೌಂದರ್ಯವನ್ನು ವೀಕ್ಷಿಸಲು ಹೊರಟೆವು. ಸವಿಸ್ತಾರವಾದ ಉತ್ತುಂಗದ ಪರ್ವತ ಸರಣಿ ದೂರದಿಂದಲೇ ಕಂಗೊಳಿಸುತ್ತಿತ್ತು. ಪಶ್ಚಿಮ ಘಟ್ಟ ಸಾಲಿನ ನಡುವೆ ಕಂಗೊಳಿಸುವ ದಟ್ಟ ಅರಣ್ಯ. ಆ ಅರಣ್ಯದ ಮಧ್ಯೆ  ಜಲಸುಂದರಿ ಉಂಚಳ್ಳಿ ಯು ಹರಿಯುವ ರೀತಿ ಮೈಮನಗಳನ್ನು ಮುದಗೊಳಿಸಿಮಂತ್ರಮುಗ್ಧªಳನ್ನಾಗಿ ಮಾಡಿತು. ಬೆಳ್ಳಗೆಯ ಹಾಲ್ನೊರೆಯ ಜಲಪಾತ. ಈ ಜಲಪಾತವು ಶಿರಸಿಯ ಶಂಕರ ದೇವರ ಕೆರೆಯಲ್ಲಿ ಹುಟ್ಟಿ ಮಾನಿ ಹಳ್ಳವಾಗಿ ಹರಿದು ಬರುವ ಇದು ಉಂಚಳ್ಳಿಯಲ್ಲಿ ಕಪ್ಪು ಬಣ್ಣದ ಬೃಹತಾಕಾರದ ಬಂಡೆಯ ಮೇಲಿನಿಂದ ಸುಮಾರು 365ಅಡಿ ಎತ್ತರದಿಂದ ಧುಮುಕುತ್ತದಂತೆ. ಹೀಗೆ ಅರಣ್ಯಗಳ ಮಧ್ಯೆ ಅಘನಾಶಿನಿಯಾಗಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ. 

ಚೈತಾಲಿ
ದ್ವಿತೀಯ ಎಂ. ಎ. ಮಂಗಳೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.